Thursday, December 8, 2011

ಬಿಗ್ ಬಾಸ್ ಅನ್ನೋ ಹಿಂಸೆ..!


"ಬಿಗ್ ಬಾಸ್ ಕೆ ಘರ್ ಮೆ ಹಿಂಸಾ ಕೇಲಿಯೇ ಜಗಾ ನಹೀ ಹೆ"  ನಾನ್ಸೆನ್ಸ್ ಅಂತ ನಕ್ಕುಬಿಟ್ಟೆ.. ಅವತ್ತು ಪೂಜಾ ಮಿಶ್ರಾ ಅನ್ನೋ ಕೋಪಿಷ್ಠೆಯೊಬ್ಬಳನ್ನ ಬಿಗ್ ಬಾಸ್ ಮನೆಯಿಂದ ಹೊರಗಾಕಿದ್ರು.. ಅದೂ ಸಿದ್ಧರ್ಥ ಅನ್ನೋ ಹುಡುಗನನ್ನ ತಳ್ಳಿದ್ಲು ಅನ್ನೋ ಕಾರಣಕ್ಕೆ  ಬಿಗ್ ಬಾಸ್ ಮನೆಯಲ್ಲಿ ಹಿಂಸೆಗೆ ಅವಕಾಶ ಇಲ್ಲ ಅಂದ್ರು..  ಆಗ್ಲೇ ನಾನು ಹಿಂಸೆಯ ಬಗ್ಗೆ ಯೋಚಿಸೋದಕ್ಕೆ ಶುರು ಮಾಡಿದ್ದು.. ಹೆಸರಲ್ಲೇನಿಲ್ಲ ಅನ್ನೋದು ಅರ್ಥವಾಗಿದ್ದು..

 ಬಿಗ್ ಬಾಸ್ ಅಂದ ತಕ್ಷಣ ಏನೋ ಒಂದು ಥರದ ಗೌರವ ಬರತ್ತೆ.. ಬಿಗ್ ಬಾಸ್ ಅಂತ ಯಾರನ್ನ ಕರೀತಾರೆ ಅಂತ ಆ ಕಾರ್ಯಕ್ರಮವನ್ನ ನೋಡೋ ಜನ  ಮೊದಮೊದಲು ಯೋಚಿಸ್ತಾ ಇದ್ರಾದ್ರೂ ಈಗ ಎಲ್ಲರೂ ರೂಪವಿಲ್ಲದ ವ್ಯಕ್ತಿಯನ್ನ ಒಪ್ಪಿಕೊಂಡಿದ್ದಾರೆ.. ಯಾರು ಬಿಗ್ ಬಾಸ್ಗೆ ಒಂದು ವ್ಯಕ್ತಿತ್ವ ಕೊಟ್ಟಿದ್ರೋ ಇಲ್ವೋ, ಆದ್ರೆ ಆಗೊಮ್ಮೆ ಈಗೊಮ್ಮೆ ಅದನ್ನ ನೋಡಿದ್ರೂ ನಾನು ಮಾತ್ರ ಆ ದನಿಗೊಂದು ವ್ಯಕ್ತಿತ್ವ ಕೊಟ್ಟಿದ್ದೆ.. ಮೋಸ್ಟ್ಲಿ ಕಾರ್ಯಕ್ರಮದ ನಿಮರ್ಾತ್ರರು ಬಿಗ್ಬಾಸ್ ಅಂದ್ರೆ ಒಬ್ಬ ಗೌರವಾನ್ವಿತ ವ್ಯಕ್ತಿ ಅಂತ ತೋರಿಸೋ ಪ್ರಯತ್ನ ಮಾಡಿದ್ದಾರೆ.. ಆತನ ಮನೆಯಲ್ಲಿ ಕಾಯ್ದೆ ಕಟ್ಟಳೆಗಳನ್ನ ಇಟ್ಟಿದ್ದಾರೆ.. ಎಲ್ಲವೂ ಜನರನ್ನ ಅಟ್ರಾಕ್ಟ್ ಮಾಡೋದಕ್ಕಾಗಿ.. ಅದು ಪಕ್ಕಾ ಕಮಷರ್ಿಯಲ್ ಓರಿಯೆಂಟೆಡ್ ರಿಯಾಲಿಟಿ ಶೋ ಅನ್ನೋದರಲ್ಲಿ ಎರಡು ಮಾತಿಲ್ಲ.. ಏನೇ ಆಗಿರಲಿ  ಕಾರ್ಯಕ್ರಮಕ್ಕೂ  ಒಂದು ಅದರದೇ ಆದ ಸುಂದರ ವ್ಯಕ್ತಿತ್ವ ಇದ್ರೆ ಅದು ಮನಸಿಗೆ ಹಿತವೆನಿಸತ್ತೆ...ಅದರಲ್ಲೂ ಮನೆ ಅಂತ ಕರೆಯೋವಾಗ ಅದಕ್ಕೆ ರೂಪ ಅಷ್ಟಿದ್ರೆ ಸಾಕಾಗಲ್ಲಾ , ಮನೆಯ ವಾತಾವರಣ ಕೂಡಾ ಇರಬೇಕಲ್ವಾ..?

 ಮಹಾರಾಷ್ಟ್ರದ ಪುಣೆ ಮತ್ತು ಮುಂಬೈ ಮಧ್ಯದ ಕರ್ಜತ್ ಅನ್ನೋ ಕಡೆ ನಿಮರ್ಾಣವಾದ ಬಿಗ್ ಬಾಸ್ನ ಐದನೇ ಕಂತಿನ ಮನೆ ನೊಡೋದಕ್ಕೇನೋ ಸುಂದರವಾಗಿದೆ.. ಅಳವಿಡಿಸಲಾಗಿರೋ ಐವತ್ತೈದು ಕೆಮರಾಗಳು ಹೇಗೆ ವಕರ್್ ಮಾಡುತ್ವೆ ? ಆನ್ಲೈನ್ ಎಡಿಟಿಂಗ್ ನಡೆಯುತ್ತಾ..? ಎಷ್ಟು ಜನ ಕೆಲಸ ಮಾಡ್ತಿದ್ದಾರೆ ? ಹೇಗೆ ಕೆಲಸ ನಡೆಯುತ್ತೆ ? ಅನ್ನೋದೆಲ್ಲಾ ನಿಗೂಢ.. ಅದು ಈ ಕಾರ್ಯಕ್ರಮದ ಬಗ್ಗೆ ಒಂದಿಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದ್ರೆ, ಇನ್ನಿಷ್ಟು ಕುತೂಹಲಕ್ಕೆ ಕಾರಣ ಬೇರೆ ಬೇರೆ ಥರದ ಜನರನ್ನ ಒಂದು ಕಡೆ ಅದೂ ಹೊರಪ್ರಪಂಚದ ಜೊತೆ ಕಾಂಟೆಕ್ಟೇ ಇಲ್ಲದೆ ತೊಂಬತ್ತಾರು ದಿನಗಳ ಕಾಲ ಇಡ್ತಾರಲ್ಲಾ, ಅವರು ಅಲ್ಲಿ ಹೇಗೆ ಬಿಹೇವ್ ಮಾಡಬಹುದು ಅನ್ನೋದು..

  ಒಬ್ಬ ವ್ಯಕ್ತಿಯನ್ನ ದೂರದಿಮದ ನೋಡಿದ್ರೆ, ಸ್ವಲ್ಪ ಹೊತ್ತು ಮಾತಾಡಿದ್ರೆ ಇಲ್ಲಾ ಇಷ್ಟಾನೇ ಪಟ್ಟು ಜೊತೆಯಾದ್ರೂ ಆತ ಏನು ಅನ್ನೋದು ಗೊತ್ತಾಗಲ್ಲ.. ಒಂದೇ ಮನೆಯಲ್ಲಿ ಒಟ್ಟಿಗೆ ಹಲವಾರುದಿನಗಳ ಕಾಲ ವಾಸವಾಗಿದ್ರೆ ಅವರ ನಿಜವಾದ ವ್ಯಕ್ತಿತ್ವ ಹೊರಬರತ್ತೆ ಅಂತಾರೆ.. ಹಾಗಾದ್ರೆ ಬಿಗ್ ಬಾಸ್ ಮನೆಯಲ್ಲಿ ಇರೋರ ನಿಜವಾದ ವ್ಯಕ್ತಿತ್ವ ನಮಗೆ ಕಾಣಿಸತ್ತಾ..? ಅಪ್ಕೋರ್ಸ್ ಹೊರಜಗತ್ತಿನ ಸಂಪಕರ್ಾನೇ ಇಲ್ಲದೆ ಯಾರೋ ಅಪರಿಚಿತರ ಜೊತೆ ಒಂದು ಮನೆಯಲ್ಲಿ ಇರಬೇಕಾಗಿಬಂದಾಗ ಪ್ರಸ್ಟ್ರೇಶನ್ ಆಗಬಹುದು, ಅಡ್ಜೆಸ್ಟ್ ಆಗೋದಕ್ಕೆ ಕಷ್ಟವಾಗಬಹುದು, ಅಂಥಾ ಸ್ಥಿತಿಯ ಔಟ್ಕಮ್ ಹೇಗಿರತ್ತೆ ? ಅನ್ನೋದನ್ನ ತೋರಿಸೋದಕ್ಕೆ ನಿಂತಿದ್ದ ಬಿಗ್ಬಾಸ್ನ ಬೇಸಿಕ್ ಕಾನ್ಸೆಪ್ಟ್ ಚನ್ನಾಗೇ ಇದೆ.. ನಂತ್ರಾ ಪಬ್ಲಿಸಿಟಿಗಾಗಿ ಕಾಂಟ್ರಾವಸರ್ಿ ಕ್ರಿಯೇಟ್ ಮಾಡೋ ಥರದ ಜನರನ್ನ ತರೋದು, ಡಾಲಿಬಿಂದ್ರಾರಂತ ಎಕ್ಟ್ರಾರ್ಡನರಿ ಹೆಂಗಸನ್ನ ಕರ್ಕೊಂಬರೋದು , ಪ್ರಾಯದ ಹುಡುಗ ಹುಡುಗಿಯರನ್ನ ಬಿಟ್ಟು ನಡುವೆ ಒಂದಿಷ್ಟು ರೊಮ್ಯಾನ್ಸ್ ಕಾಣಿಸೋದು.. ಟಾಸ್ಕ್ ಕೊಟ್ಟು ಮಸಾಲಾ ಸೇರಿಸೋದು ಎಲ್ಲವನ್ನೂ ಒಪ್ಕೊಳ್ಳೋಣಾ .. ಊಟದ ಜೊತೆಗೆ ಉಪ್ಪಿನ ಕಾಯಿಯ ಥರ ಸವಿಯೋಣ.. ಆದ್ರೆ ಒಂದು ರಿಯಾಲಿಟಿ ಶೋ ಅದರಲ್ಲೂ ಬಿಗ್ ಬಾಸ್ನಂತ ಕಾರ್ಯಕ್ರಮ ಮನೆ ಅಂದ್ರೆ ಕಾದಾಡೋ ಜಾಗ ಅಂತ ತೋರಿಸಿದ್ರೆ ಅದನ್ನ ನೋಡಿ ಖುಶಿಪಡೋದಕ್ಕಾಗತ್ತಾ? ಹೋಗ್ಲಿ ವೆರೈಟಿ ವೆರೈಟಿ ಬೈಗುಳ ಕಾದಾಟ ಜಗಳದ್ದೇ ಶೋ ಆಗಿದ್ರೆ ಆ ಕಾನ್ಸೆಪ್ಟನ್ನೂ ಎಕ್ಸೆಪ್ಟ್ ಮಾಡ್ಕೋಬಹುದಿತ್ತು..ಆದ್ರೆ ಬಿಗ್ ಬಾಸ್ ಅನ್ನೋದು ಬೈಗುಳದ ಕಾರ್ಯಕ್ರಮ ಅಂತ ಆಗಿದ್ದು ಬೇಸರ ತರಿಸತ್ತೆ..
 ಆರಂಭದಲ್ಲೇ ಬಿಗ್ ಬಾಸ್ ಐದರಲ್ಲಿ  ಕಾದಾಟ ಅನ್ನೋದು ಕಾರ್ಯಕ್ರಮ ಮಾಡಿದವರ ಕಾನ್ಸೆಪ್ಟ್ ಆಗಿತ್ತು ಅನ್ಸತ್ತೆ,, ಯಾಕಂದ್ರೆ ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಅಡಿ ಇಟ್ಟವರು ಒಬ್ಬರಿಗಿಂತ ಒಬ್ಬರು ಸ್ಟ್ರಾಂಗ್ ವ್ಯಕ್ತಿತ್ವದವರು..  ಯು ಟಿವಿ ಬಿಂದಾಸ್ ನಲ್ಲಿ ಬೆಂಕಿ ಅನ್ನಿಸಿಕೊಂಡ ಹುಡುಗಿ ಪೂಜಾ , ಚಾರ್ಲ್ಸ್ ಶೋಬ್ರಾಜ್ನಂಥಾ ಕ್ರಿಮಿನಲ್ನ ಹೆಂಡತಿ ನಿಹಿತಾ, ಡೇರ್ ಡೆವಿಲ್ ಪ್ರೋಥಿಮಾ ಬೇಡಿಯ ಮಗಳು ಪೂಜಾ ಬೇಡಿ, ದಿ ಗ್ರೇಟ್ ವೇಟ್ ಲಿಫ್ಟರ್ ಸೋನಿಕಾ, ಗಂಡನನ್ನ ತನ್ನ ಧರ್ಮಕ್ಕೆ ಕನ್ವಟರ್್ ಮಾಡೋ ತಾಕತ್ತಿದ್ದ ಗುಲಾಬೋ ಸಫೇರಾ, ಹೆಡ್ಲೈನ್ಸ್ ಟುಡೆಯಲ್ಲಿ ಶಾರ್ಪಶೂಟರ್ ಥರಾ ಇಂಟರ್ವ್ಯೂ ತಗೋತಿದ್ದ  ಆ್ಯಂಕರ್ ಮಂದೀಪ್ ಬೇವ್ಲಿ, ರಾಜಾ ಚೌದ್ರಿಯಂತ ಸ್ಟ್ರಾಂಗ್ ಅಟಿಟ್ಯೂಡ್ ಇರೋನ ಗಲರ್್ ಫ್ರೆಂಡ್ ಶೃದ್ಧಾ , ಅಫಗಾನ್ನಿಸ್ತಾನದಂತಾ ದೇಶದಿಂದ ಬ್ಯೂಟಿ ಕನ್ಸರ್ಟಲ್ಲಿ ಬಾಗವಹಿಸಿ ಗೆದ್ದ ವಿದಾ , ಸ್ಟ್ರೇಟ್ಪಾರ್ವರ್ಡ್ ಹೆಂಗಸು ಅಂತಾನೇ ಅನ್ನಿಸಿಕೊಂಡ ಜೂಹಿ ಪಮರ್ಾರ್ ಇವರ ಜೊತೆಗೆ ಹಿಜಡಾಗಳಿಗಾಗಿ ದನಿ ಎತ್ತಿ ಹೋರಾಡ್ತಿರೋ  ಟ್ರಾನ್ಜೆಂಡರ್ ಆಕ್ಟಿವಿಸ್ಟ್ ಲಕ್ಷ್ಮಿನಾರಾಯಣ ತ್ರಿಪಾಟಿ ಮತ್ತು ವಿಲನ್ ರೋಲ್ನಲ್ಲೇ ಹೆಚ್ಚಾಗಿ ಮಿಂಚಿದ್ದ ಶಕ್ತಿಕಪೂರ್ ಇವಿಷ್ಟು ಜನರ ಜೊತೆಗೆ ಒಳಬಂದಿದ್ದ ರಾಗೇಶ್ವರಿ ಮೆಹೆಕ್ ಮತ್ತು ಸೋನಾಲಿ ಸ್ವಲ್ಪ ಸಾಫ್ಟ್ ಇದ್ದಿರಬಹುದು ಅಂತ ಅನ್ನಿಸಿತ್ತು.. ನಂತ್ರ ಮೆಹೆಕ್ ಮತ್ತು ಶೊನಾಲಿ ಕೂಡ ನಾವ್ಯಾರಿಗೂ ಕಡಿಮೆ ಇಲ್ಲ ಅನ್ನೋದನ್ನ ತೋರಿಸಿಬಿಟ್ರು.. ದುರಂತ ಅಂದ್ರೆ ಈ ಬಾರಿ ಬಿಗ್ಬಾಸ್ ಮನೆಯಲ್ಲಿ ಕಚ್ಚಾಡೋರೇ ಇರೋದು ಅನ್ನೋ ಅಘೋಷಿತ ನಿಯಮ ಬಂದುಬಿಟ್ಟಿದೆ.. ಒಳಗಿದ್ದ ಒಳ್ಳೆಯ ಸ್ವಭಾವದ , ತನ್ನ ವ್ಯಕ್ತಿತ್ವವನ್ನೇ ತೋರಿಸೋ , ಪಾಸಿಟೀವ್ ವೈಬ್ರೇಟಿಂಗ್  ಹುಡುಗಿ ರಾಗೇಶ್ವರಿಯನ್ನ ಮೂರನೇ ವಾರದಲ್ಲೇ ಹೊರಹಾಕಿದ್ರು.. ಆಕೆಯ ವ್ಯಕ್ತಿತ್ವವನ್ನ ಯಾರಾದ್ರೂ ಇಷ್ಟಾಪಡದೇ ಇರೋ ಚಾನ್ಸಿದ್ಯಾ ಅಂತ ನನಗನ್ನಿಸ್ತು.! ಆಕೆ ನಿಜಕ್ಕೂ ಸಭ್ಯ ಸಂಭಾವಿತ ಹುಡುಗಿ.. ಆದ್ರೆ ಓಟ್ ಮಾಡೋರಿಗೆ ಜಗಳಾ ಆಡೋರು ಬೇಕು..! ಅದಕ್ಕಿಂತ ಹೆಚ್ಚಾಗಿ ಈ ಬಾರಿ ಬಿಗ್ಬಾಸ್ಗೂ ಬೆಂಕಿ ಹತ್ತಿಸೋರೇ ಬೇಕು.. ಮನೆಯಲ್ಲಿ ಹೊಗೆಯಾಡ್ತಾನೇ ಇರಬೇಕು..ಅದನ್ನೇ ಜನ ನೋಡ್ಬೇಕು.. ಅದೇ ಕಾನ್ಸೆಪ್ಟು.. ಹಂಗಾಗಿನೇ ನಂತ್ರ ಸ್ಪ್ಲಿಟ್ ವಿಲ್ಲಾದ ವಿನ್ನರ್ ಸಿದ್ಧಾರ್ಥನ್ನ ಕರ್ಕೊಂಬಂದ್ರು, ಬ್ಯಾಡ್ ಬಾಯ್ ಅಂತಾನೇ ಕರೆಸಿಕೊಂಡ ಇಸ್ ಜಂಗಲ್ಸೆ ಮುಜೆ ಬಚಾವೋ ಖ್ಯಾತಿಯ ಸಿಟ್ಟಿನ ಹುಡುಗ ಆಕಾಶ್ದೀಪ್ ಸೈಗಲ್ನ ಕರ್ಕೊಂಬಂದ್ರು.. ನಂತ್ರಾ ಬಿಂದಾಸ್ ಹುಡುಗಿ ಸನ್ನಿ ಅಲಿಯಾಸ್ ಕೆರೆನ್ ಮಲ್ಹೋತ್ರಾ ಬಂದ್ಲು.. ಈಗ ಕ್ರಿಕೇಟ್ ಜಗತ್ತಿನ ಕಿರಿಕ್ ಮಾಸ್ಟರ್ ಸೈಮಂಡ್ಸ್ ಕೂಡಾ ಬಂದಾಯ್ತು... ಇವರೆಲ್ಲರೂ ಸೇರ್ಕೊಂಡು ಮಾಡೋದು ಒಂದೇ ಕೆಲಸ ..ಅದು ಕಾದಾಟ.. ! 

 ಮುರು ತಿಂಗಳ ಕಾಲ ಹೊರಪ್ರಪಂಚದಿಂದ ದೂ
ರಾಗಿ ಒಂದು ಮನೆಯಲ್ಲಿರೋದ್ರಿಂದ ಪ್ರಸ್ಟ್ರೇಟ್ ಆಗ್ತಾರೆ, ಅವರು ಅದನ್ನ ಬೇರೆ ಬೇರೆ ಥರದಲ್ಲಿ ಹೊರಹಾಕ್ತಾರೆ ಅಂತ ಅಂದ್ಕೊಳ್ಳೋದ್ರಲ್ಲಿ ಅಥರ್ಾನೇ ಇಲ್ಲ.. ಇಲ್ಲಿ ಭಾವನೆಗಳು ಕೆಲಸ ಮಾಡಲ್ಲ.. ಯಾರೂ ಭಾವುಕರಾಗಲ್ಲ.. ಒಂದ್ವೇಳೆ ಭಾವುಕತೆ ಇದ್ರೆ  ಅವರು ಜಾಸ್ತಿ ದಿನ ಇರೋದೇ ಇಲ್ಲ.. ಇದು ಅಪ್ಪಟ ಗೇಮ್ ,ಅಳಿ ಉಳಿವಿನ ಆಟ.. ಓಟಿನ ಊಟ.. ಬಿಗ್ ಬಾಸ್ನ ಲೆಕ್ಕಾಚಾರದ ಮಾಟ ! ಯಾವಾಗ ಬಿಗ್ಬಾಸ್ ಮನೆಯ ಇಡೀ ವಾತಾವರಣವನ್ನೇ ಅಲ್ಲೋಲ ಕಲ್ಲೋಲ ಮಾಡಿದ ಪೂಜಾ ಓಟರ್ಸ್ ಫೆವರೆಟ್ ಅಂತ ಆಯ್ತೋ ಅವತ್ತಿನಿಂದ ಪ್ರತಿಯೊಬ್ಬರ ದನಿನೂ ದೊಡ್ಡದಾಯ್ತು.. ಮುಟ್ಟಿದರೆ ಮುನಿಯೋದು , ಮಾತೆತ್ತಿದರೆ ಕಾದಾಡೋದು ಶುರುವಾಗ್ಬಿಟ್ತು.. ಜಗಳ ಮಾಡದೇ ಇರೋರೇ ಯಾರೂ ಇಲ್ಲ ಅನ್ನೋ ಮಟ್ಟಕ್ಕೆ ಬಂತು.. ಜೊತೆಗೆ ನಾಮಿನೇಟ್ ಆದವರೇ ಹೆಚ್ಚಾಗಿ ಕಾದಾಡೋದನ್ನ ನೋಡಿದ್ರೆ , ಎಲ್ಲರೂ ರಗಳೆ ರಂಪಾಟಗಳೇ ಉಳಿವಿನ ದಾರಿ ಅಂದ್ಕೊಂಡಹಾಗಿದೆ.. ಅವಷ್ಟನ್ನೇ ಮಾಡ್ತಾರೆ.. ಅದೇ ಗೇಮ್ ಪ್ಲಾನ್.. ಅಲ್ಲಿಗೆ ಬಿಗ್ಬಾಸ್ ಮನೆಯಲ್ಲಿ ನಿಜವಾದ ವ್ಯಕ್ತಿತ್ವ ಹೊರಗೆ ಬರೋ ಚಾನ್ಸೇ ಇಲ್ಲ.. ಎಲ್ಲರೂ ಉಳಿವಿಗಾಗಿ ಜಗಳ ಮಾಡ್ತಾರೆ ಅಷ್ಟೆ !
ಇದೊಂದು ಗೇಮ್ ಶೋದಲ್ಲಿ ಭಾಗವಹಿಸಿದವರ ವ್ಯಕ್ತಿತ್ವದ ಮಾತು ಒತ್ತಟ್ಟಿಗಿರಲಿ, ಬಿಗ್ಬಾಸ್ಗಾದ್ರೂ ವ್ಯಕ್ತಿತ್ವ ಬೇಡ್ವಾ..? ಈಗ ಆ ಮನೆಯಲ್ಲಿ ಒಂದು ರೂಲ್ಸ್ ಇಲ್ಲ .. ರೂಲ್ಸ್ ಪಾಲೋ ಮಾಡೋರು ಯಾರೂ ಇಲ್ಲ.. ತಪ್ಪುಮಾಡಿದವರಿಗೆ ದಂಡಿಸೋರಿಲ್ಲ.. ಬಿಗ್ ಬಾಸ್ ಮನೆಯಲ್ಲಿ ಹಿಂಸೆಗೆ ಅವಕಾಶ ಇಲ್ಲಾ ಅಂತ ಹೇಳೋದೇ ನಿಜ ಆದ್ರೆ ಅಬ್ಯೂಸಿಂಗ್ ಶಬ್ದಗಳನ್ನ ಪ್ರಯೋಗಿಸಿ ಬೈದಾಡೋದು ಕೂಡಾ ಹಿಂಸೆ ಅಪರಾಧ ಅನ್ನೋದು ಬಿಗ್ ಬಾಸ್ಗೆ ಗೊತ್ತಿಲ್ವಾ..? ಪೂಜಾ ಮಿಶ್ರಾ ಸಿದ್ಧಾರ್ಥನ್ನ ದೂಡಿದ್ದು ಹಿಂಸೆ ಅನ್ನೋದಾದ್ರೆ ಶೊನಾಲಿಯ ಎದುರಿಗೆ ಕ್ಲೀನಿಂಗ್ ಸ್ಟಪ್ಅನ್ನ ಒಡೆದು ಚೂರ್ ಚೂರಾಗಿ ಮಾಡಿ ಆ ಚೂರುಗಳು ಸೊನಾಲಿಗೆ ಸಿಡಿದಿದ್ದು ಹಿಂಸೆ ಅಲ್ವಾ ? ಮೆಹೆಕ್ ಮಂದೀಪ್ಳನ್ನ ತಳ್ಳಿದ್ದು ಹಿಂಸೆ ಅಲ್ವಾ ? ಆಗೆಲ್ಲಾ ಯಾರಾದ್ರೂ ಒಬ್ಬರು ನಾವಿರಬೇಕು ಇಲ್ಲಾ ಅವರಿರಬೇಕು ಅಂತ ಪಟ್ಟು ಹಿಡಿದಿದ್ರೆ ಬಿಗ್ಬಾಸ್ ಕ್ರಮ ತಗೋತಾ ಇದ್ನೇನೋ.. ಆದ್ರೆ ಸಿದ್ಧಾರ್ಥ ಮಾತ್ರ ಆ ಇಶ್ಯೂವನ್ನ ದೊಡ್ಡದು ಮಾಡಿದ್ರಿಂದ ಪೂಜಾ ಮಿಶ್ರ ಹೊರಗೆ ಹೋದ್ಲು.. ಅಲ್ಲಿಗೆ ಬಿಗ್ ಬಾಸ್ಗೆ ನ್ಯಾಯ ನೀತಿ ಇಂಪಾಟರ್ೆಂಟ್ ಅಲ್ಲ, ದನಿ ಎತ್ತಿದವರಿಗೆ ನ್ಯಾಯ ಸಿಗತ್ತೆ ಅಷ್ಟೆ ಅಂದಾಂಗಾಯ್ತು.. ಅಂದ್ಹಾಗೆ ಪ್ರತಿನಿತ್ಯ ಬೆಳಗಾದ್ರೆ ಜಗಳ ರಾತ್ರಿಯಾದ್ರೆ ಜಗಳ ಅಂದ್ರೆ ನಿಮ್ಮಮನೆ ಹೇಗಿರತ್ತೆ ..? ನಿಮ್ಮ ಬದುಕು ಏನಾಗತ್ತೆ ? ಅಲ್ಲಿ  ಸ್ಕೈ ನ ಮಾತಿಗಿಂತ ದೊಡ್ಡ ಹಿಂಸೆ ಇದೆಯಾ..? ಈ ರಗಳೆಯನ್ನ ನುರು ಕೋಟಿಜನ ನೋಡ್ಬೇಕಾ..? ಅದಕ್ಕಿಂತ ದೊಡ್ಡ ಹಿಂಸೆ ಇನ್ನೊಂದಿದ್ಯಾ ? ಅಪ್ಕೋರ್ಸ್ ಯಾರೂ ಯಾರಿಗೂ ಈ ಶೊ ನೋಡಿ ಅಂತ ಬಲವಂತ ಮಾಡಲ್ಲ.. ಆದ್ರೆ ರಿಯಾಲಿಟಿಗೆ ಹತ್ತಿರವೇ ಅಲ್ಲದ ಪಕ್ಕಾ ಪ್ಲಾನ್ಡ್ ಶೋಗಳನ್ನ ರಿಯಾಲಿಟಿ ಶೋ ಅಂತ ಯಾಕೆ ಕರೀಬೇಕು ? ಹೀಗೇ ಆದ್ರೆ ಬಿಗ್ ಬಾಸ್ ತನ್ನ ಖ್ಯಾತಿಯನ್ನ ಕಳ್ಕೊಳ್ಳೋದ್ರಲ್ಲಿ ಸಂದೇಹನೇ ಇಲ್ಲ... 

ನಾನು ಇಷ್ಟೆಲ್ಲಾ ಯೋಚಿಸೋದಕ್ಕೆ ಕಾರಣವಾಗಿದ್ದು ಬಿಗ್ಬಾಸೂ ಅಲ್ಲ.. ಅದರಲ್ಲಿರೋ ವ್ಯಕ್ತಿಗಳೂ ಅಲ್ಲ.. ಅದರ ಖ್ಯಾತಿ ಅಪಖ್ಯಾತಿಗಳೂ ಅಲ್ಲ.. ನಾನು ಅಲ್ಲಿರೋ ಯಾರೊಬ್ಬರ ಫ್ಯಾನೂ ಅಲ್ಲ.. ಅಷ್ಟಕ್ಕೂ ಆಗೊಮ್ಮೆ ಈಗೊಮ್ಮೆ ಅದನ್ನ ನೋಡೋದ್ಬಿಟ್ರೆ ಪ್ರತಿದಿನ ನೋಡಿದ್ದೂ ಇಲ್ಲ.. ಆದ್ರೆ ಅದನ್ನ ನೋಡಿದಾಗಲೆಲ್ಲಾ ನನಗೆ ಹಿಂಸೆ ಅನ್ನಿಸಿದೆ.. ಆದ್ರೆ ಬಿಗ್ ಬಾಸ್ಗೆ ಹಿಂಸೆ ಅನ್ನಿಸಿಲ್ವಲ್ಲಾ ! ಹಾಗಾದ್ರೆ  ಕಾದಾಟ ಜಗಳ ಬೈದಾಟಗಳೆಲ್ಲಾ ಹಿಂಸೆ ಅಲ್ವಾ..?

1 comment: