Saturday, December 31, 2011

ಲವ್ ಯು 2012..


ನೆನ್ನೆ ಸುಂದರವಾಗಿತ್ತಾ ? ಉಹು ಯಾಕೋ ಚನ್ನಾಗೇ ಇಲ್ಲ ಅನ್ನಿಸಿತ್ತು .. ಆದ್ರೆ ಯಾಕೆ ? ಅಕ್ಕ ಹೇಳಿದ್ದಳು ನೀನು ರೀಸನ್ ರಾಣಿ ಅಂತ..ಅದು ನಿಜ.. ನನಗೆ ಪ್ರತಿಯೊಂದಕ್ಕೂ ಕಾರಣ ಕಾಣತ್ತೆ.. ನೆನ್ನೆಯ ದಿನ ಚನ್ನಾಗಿಲ್ಲದಿರೋದಕ್ಕೆ ನನಗಿದ್ದ ತಲೆನೋವು ಕಾರಣ.. ಆ ತಲೆನೋವಿಗೆ ಸಾವಿರ ಕಾರಣಗಳಿದ್ವು.. ಎಲ್ಲವನ್ನೂ ಮೆಟ್ಟಿನಿಂತು ಮೋಡ ಬಿಡದೇ ಕಾಡ್ತಾ ಇರೋ ಜಿಟಿ ಜಿಟಿ ಮಳೆ , ಚಳಿ ಎಲ್ಲವೂ ಕಾರಣ ಅಂತ ನಿರ್ಧರಿಸಿಕೊಂಡೆ.. ಯಾಕೋ ಆಪೀಸ್ಗೆ ಹೊಗೋದಕ್ಕೆ ಆಗಲ್ಲ ಅನ್ನೋಷ್ಟು ನಿತ್ರಾಣವಾಗಿದ್ದರಿಂದ ಒಂದು ಕ್ರೋಸಿನ್ ಹಾಕ್ಕೊಂಡೆ.. ಮತ್ತೆ ಅದೇ ತಯಾರಿ.. ಅದೇ ಕಚೇರಿ... ಅದೇ ಜನ ,ಅದೇ ಕೆಲಸ.. ಅದೇ ಮನೆ, ಅದೇ ನಿದ್ದೆ ಹೀಗೆ ಮುಗಿದುಹೋಗತ್ತೆ ವರುಷ.. ನೋವಿನಲ್ಲೇ ಕಣ್ಮುಚ್ಚಿದ್ದೆ..

 ಥಟ್ ಅಂತ ಎಲ್ಲಿಂದಲೋ ಬಂದು ಸೇರಿಕೊಂಡಿದ್ದು ಖುಶಿ ಅನ್ನೋದು ಎಲ್ಲಿದೆ ಅನ್ನೋ ಪ್ರಶ್ನೆ.. ತಕ್ಷಣ ಎದ್ದು ಕೂತೆ.. ನೋವು ಬೇಸರ ಯಾವುದೂ ನೆನಪಿಲ್ಲ.. ಬೆಳಿಗ್ಗೆ ಕಣ್ಬಿಟ್ಟಾಗ ಕಿಟಕಿಯಿಂದ ನನ್ನ ಶುಭ್ರ ನಿದ್ದೆಯನ್ನೇ ಕದ್ದು ಕದ್ದು ನೋಡಿ ಕಣ್ಮಿಟುಕಿಸ್ತಾ ಇದ್ದ ಬೀದಿ ದೀಪ ಕಾಣಿಸಿತ್ತು.. ನೋಡಿ ನಕ್ಕಿದ್ದೆ.. ಯಾಕೆ ಬಂತೋ ನಗು ಗೊತ್ತಿಲ್ಲ.. ಆ ನಗುವಿನಲಿ ಒಲವಿನ ಭಾವ ಬೀರಿ ಬಂದು ತಾಕಿದ್ದು ತಂಗಾಳಿ.. ಅದು ಮಿಲನದ ಸಂಭ್ರಮದಲ್ಲಿ ಸೃಷ್ಟಿಯಾದ ಸೊಬಗು ಅನ್ನೋದು ಗೊತ್ತಾಗೋದಕ್ಕೆ ಜಾಸ್ತಿ ಸಮಯ ಹಿಡಿಯಲಿಲ್ಲ.. ಸೂಕ್ಷ್ಮವಾಗಿ ಗೃಹಿಸಿದರೆ ಆ ಮಿಲನದಲ್ಲಿ ಸಂಭ್ರಮ ಕಾಣಿಸುತ್ತೆ.. ಸ್ಪರ್ಷದಲ್ಲೊಂದು ನವಿರಾದ ಭಾವವಿದೆ.. ಆ ಭಾವಕ್ಕೆ ಜೀವವಿದೆ.. ನೆಮ್ಮದಿ ಇದೆ.. ಸುಖವಿದೆ.. ಸಂತಸವಿದೆ ಜೊತೆಗೆ ತಂಗಾಳಿಯಲ್ಲಿ ಸುವಾಸನೆ ಇದೆ.. ಅದೊಂದು ಸ್ಮೆಲ್ ಎಲ್ಲವನ್ನೂ  ತೆರೆದಿಟ್ಟುಬಿಡತ್ತೆ.. ಅದನ್ನ ಅನುಭವಿಸಿದರೆ ಹಾಸಿಗೆಯಿಂದೆದ್ದು ಹೊರನಡೆಯದೇ ಇರೋದಕ್ಕೆ ಸಾಧ್ಯಾನೇ ಇಲ್ಲ..


ಪೃಕೃತಿ ಅದೆಷ್ಟು ಸುಂದರ ಅಲ್ವಾ ? ಅಲ್ಲಿ ಎಲ್ಲದಕ್ಕೂ ಅರ್ಥವಿದೆ.. ಸಂಬಂಧವಿದೆ ಸಂಸ್ಕಾರವಿದೆ.. ಒಲವಿದೆ ಬಲವಿದೆ ಒಗ್ಗಟ್ಟಿದೆ.. ಅರಿವಿದೆ.. ಅರಿಯದ ಅನುಭೂತಿ ಇದೆ , ಆಕರ್ಷಣೆ ಇದೆ.. ಅಪಾರ ಪ್ರೇಮವಿದೆ.. ಮೌನವಿದೆ.. ಮೋಹವಿದೆ .. ನಗುವಿದೆ.. ನಲಿವಿದೆ.. ಅಬ್ಬಾ ಎಲ್ಲವೂ ಸುಂದರ..

ಯಾರು ಜೀವವೇ... ಯಾರು ಬಂದವರು
ಭಾವನೆಗಳನೇರಿ..
ಒಣಗಿದೆನ್ನೆದೆಗೆ ತಂಪತಂದವರು... ಅಂತ ಹಾಡ್ತಾ ಇದ್ದದ್ದು ಬಿರಿದ ನೆಲಾನಾ ?


ನೀನಿಲ್ಲದೇ ನನಗೇನಿದೆ
ನಿನ್ನಂದ ನನ್ನಲ್ಲಿ ನೆಲೆಯಾಗಿದೆ ಅಂತ ನುಲಿದದ್ದು ನಲಿವ ಜಲಾನಾ ?


ನಿಜಕ್ಕೂ ಮಳೆಗೂ ಮಣ್ಣಿಗೂ ಅದ್ಯಾವ ಜನ್ಮದ ಮೈತ್ರಿ ಇದೆಯೋ ಏನೋ.. ಕರೆವ ರೀತಿಗೆ .. ಬೆರೆವ ಪ್ರೀತಿಗೆ ಸಾಟಿನೇ ಇಲ್ಲ.. ಎದೆಯೊಡ್ಡಿ ನಿಲ್ಲೋ ಭೂಮಿ , ಓಡಿಬಂದು ತಬ್ಬಿಕೊಳ್ಳುವ ಮಳೆಬಿಲ್ಲಿನ ಹನಿ.. ಒಂದಕ್ಕೊಂದು ಅದೆಷ್ಟು ಅದ್ಭುತವಾಗಿ ಬೆರೆತುಹೋಗತ್ತೆ ಅಲ್ವಾ ? ನಿಜವಾದ ಪ್ರೀತಿಗೆ ನೆಲಜಲಕ್ಕಿಂತ ಆದರ್ಷ ಬೇಡವೇನೋ.. ಒಂದಕ್ಕೊಂದು ಬೇರೆ ಮಾಡಲು ಸಾಧ್ಯವೇ ಇಲ್ಲದ ರೀತಿ ಬೆರೆಯುತ್ತೆ.. ಬೆಳೆಯುತ್ತೆ.. ಬದುಕನೀಡತ್ತೆ..ಆದರೆ ಅದಕ್ಕಿರೋ  ಅದರದೇ ಆದ ರೂಪ ಗುಣ ಜೀವ ಭಾವ ಎಲ್ಲವೂ ಹಾಗೇ ಇರತ್ತೆ.. ಅಲ್ಲಿ ಯಾವುದರ ಅಸ್ತಿತ್ವವೂ ಕಳೆದುಹೋಗಲ್ಲ.. ಅದಕ್ಕೇ ಏನೋ ಕವಿ ನೀನು ನೆಲ ನಾನು ಜಲ ಅಂತ ಪ್ರೇಮದ ಕಡಲಲ್ಲಿ ತೇಲಿದ್ದು..

ಆ ಮಧುರ ಪ್ರೇಮದ ದಿವ್ಯ ಆಲಿಂಗನವನ್ನ ಮನಸಾರೆ ಅನುಭವಿಸಿ ಆರಂಭಿಸಿದ ದಿನ ಅದ್ಭುತವಾಗಿರದೇ ಇರತ್ತಾ? ಆ ಖುಶಿಯಲ್ಲೇ ಅಡುಗೆ ಮನೆಯೊಳಗೆ ಅಡಿ ಇಟ್ಟವಳಿಗೆ ಬಿಸಿ ಬಿಸಿ ನೀರುಕುಡಿಯೋ ಮನಸಾಗಿತ್ತು.. ಒಂದು ಉದ್ದನೆಯ ಸ್ಟೀಲ್ ಕಪ್ಪನ್ನ ಒಂದೋಂದೇ ಸಿಪ್ಪಾಗಿ ಅನುಭವಿಸುತ್ತಾ ಕುಡಿದಿದ್ದೆ.. ನಮ್ಮನೆಯ ನೀರಿಗೂ ಒಂದು ಅದ್ಭುತವಾದ ರುಚಿ ಇದೆ ಅನ್ನೋದು ಗೊತ್ತಿರಲೇ ಇಲ್ಲ.. ಅದೇ ಖುಶಿಯಲ್ಲಿ ಮಧ್ಯಾನ್ಹದ ಊಟದ ಡಬ್ಬಿ ರೆಡಿ ಆಯ್ತು..ಅದೂ ಅಷ್ಟೇ ಘಮ ಘಮ ಅಂತಿತ್ತು.. ನಂತ್ರಾ ಬಿಸಿ ಬಿಸಿ ನೀರಲ್ಲಿ ಸುದೀರ್ಘ ಹದಿನೈದು ನಿಮಿಷಗಳ ಕಾಲ ಸ್ನಾನ ಮಾಡೋವಾಗ ಅದೆಷ್ಟು ಖುಶಿಪಟ್ಟೆ ಅನ್ನೋದನ್ನ ಹೇಳೋದಕ್ಕೇ ಸಾಧ್ಯಾ ಇಲ್ಲ.. ಆಹಾ ಛುಮು ಛುಮು ಚಳಿಯಲ್ಲಿ, ಜಿಟಿ ಜಿಟಿ ಮಳೆಯಲಿ ಬಿಸಿನೀರಿನ ಸ್ನಾನ ಕೊಡೋ ಖುಶಿ ಇದೆಯಲ್ಲಾ ಅದನ್ನ ಇನ್ನೇನೂ ಕೊಡಲ್ಲ.. ಆ ಅದ್ಭುತ ಸ್ನಾನದ ನಂತ್ರ ನನ್ನ ಪ್ರೀತಿಯ ಕಪ್ಪು ಮಿಶ್ರಿತ ಕೆಂಪು ಬಣ್ಣದ ಟಾಪನ್ನ ಹಾಕಿಕೊಳ್ಳೋದಕ್ಕೆ ಹೊರಟಿದ್ದೆ.. ಅದಕ್ಕೆ ಐರನ್ ಬೇಡ.. ಹಂಗಾಗಿ ಅದು ಅಂದ್ರೆ ನಂಗಿಷ್ಟ.. ಯಾಕೋ ಅವತ್ತು ಪಾರ್ ಅ ಚೇಂಜ್ ಆ ಟಾಪನ್ನೂ ಪ್ರೆಸ್ ಮಾಡಿದೆ.. ಯಾವತ್ತೂ ಐರನ್ ಬಾಕ್ಸ್ ನೋಡಿರದ ಆ ಬಟ್ಟೆಗೆ ಅದೆಷ್ಟು ಖುಶಿಯಾಗಿತ್ತೋ.. ಅದು ಬೆಚ್ಚಗೆ ನಗನಗ್ತಾ ಇದ್ದಾಗ್ಲೇ ನಾನೂ ಮೈಗೇರಿಸಿಕೊಂಡೆ.. ಈ ಚಳಿಯಲ್ಲಿ ಇಸ್ತ್ರಿ ಹಾಕಿದ ತಕ್ಷಣ ಬಟ್ಟೆಯನ್ನ ಹಾಕಿಕೊಳ್ಳೋ ಸುಖ ಇದೆಯಲ್ಲ, ಅದು ಅನುಭವಿಸಿದವರಿಗೆ ಮಾತ್ರ ಗೊತ್ತು..

ಇಕ್ ಲಡಕಿಕೋ ದೇಖಾತೋ ಏಸಾ ಲಗಾ ಅಂತ ಸಣ್ಣಗೆ ಗುನುಗುತ್ತಾ, ದೋಸೆಯ ಬಂಡಿ ಹಾಕಿ ಎರಡು ಬಿಸಿ ಬಿಸಿ ಬಾಳೆಹಣ್ಣಿನ ಸಿಹಿ ದೋಸೆ ಮಾಡ್ಕೊಂಡು ಬಟ್ಟಲಿಗೆ ಹಾಕಿದ್ದೆ.. ಇನ್ನೂ ಹೊಗೆ ಬರ್ತಾ ಇತ್ತು.. ಅಮ್ಮ ಮನೆಯಿಂದ ಕಳಿಸಿದ ಗಟ್ಟಿ ತುಪ್ಪದ ಜೊತೆ ಅದನ್ನ ತಿಂತಾ ಇದ್ರೆ ಹೊಟ್ಟೆತುಂಬಿದ್ದೇ ಗೊತ್ತಾಗಲ್ಲ.. ನಾಲಿಗೆಯ ಮೇಲೆ ತೇಲೋ ನೀರು ಆರೋದೇ ಇಲ್ಲ.. ಅಂಥ ಸಂಭ್ರಮದಲ್ಲಿ ತಿಂಡಿ ತಿಂದು ರೆಡಿಯಾಗಿ ಆಪೀಸಿಗೆ ಹೊರಟರೆ , ಕಿವಿಗೆ ತುರುಕಿಕೊಂಡ ಇಯರ್ಫೋನ್ನಲ್ಲೂ ಎಂಥೆಂಥಾ ಹಾಡುಗಳು ಅಂತೀರಾ.. ಹಳೆಯ ಹಾಡುಗಳು ಮತ್ತು ಭಾವಗೀತೆ ಅಂದ್ರೆ ಹೆಚ್ಚು ಪ್ರೀತಿ ಆದ್ರೂ , ಹೊಸಹಾಡುಗಳಿಗೂ ಒಮ್ಮೊಮ್ಮೆ ಮೈ ಮರೀತಿನಿ..ಅವತ್ತು ನನ್ನ ಮನಸಿಗೆ ಹಿತ ಅನ್ನಿಸೋ ಅಷ್ಟೂ ಗೀತೆಗಳೂ ಒಟ್ಟಿಗೆ ಬಂದಿದ್ವು.. ಎಷ್ಟು ಖುಶಿಪಟ್ಟಿದ್ದೆ ಗೊತ್ತಾ ?

ಇನ್ನು ಕಚೇರಿಯಲ್ಲಿ, ಅವತ್ತು ನನಗೆ ಬಿಗ್ ರೆಸ್ಟ್..! ಸಾಮಾನ್ಯವಾಗಿ ಕೈ ತುಂಬಾ ಕೆಲಸ ಇಲ್ಲದಿದ್ರೆ ನನಗೆ ಕಿರಿ ಕಿರಿ.. ಚಿಕ್ಕ ಚಿಕ್ಕ ವಿಷಯಕ್ಕೂ ಸಿಟ್ಟು ಬರತ್ತೆ.. ಎಲ್ಲರಿಗೂ ಬೈಯ್ಯೋಣ ಅನ್ಸತ್ತೆ.. ಜಗಳ ಕೂಡ ಮಾಡಿದ್ದಿದೆ.. ಇನ್ನು ಕೈ ತುಂಬಾ ಕೆಲಸಾ ಇರೋವಾಗ ಫೇಸ್ಬುಕ್ಕು ಸುಂದರವಾಗಿ ಕಂಡಷ್ಟು ಖಾಲಿ ಕೂತಾಗ ಕಾಣಿಸಲ್ಲ.. ಚ್ಯಾಟ್ ಮಾಡೋ ಮನಸಾಗಲ್ಲ.. ಆಫೀಸಲ್ಲಿ ಕೂತು ಮನಸಿಗೆ ಅನ್ನಿಸಿದ್ದನ್ನ ಲಹರಿಯಲ್ಲಿ ತೇಲಿಬಿಡೋದಕ್ಕೂ ಸರಿ ಅನ್ನಿಸಲ್ಲ.. ಅಷ್ಟಕ್ಕೂ ನಮ್ಮ ಕಚೇರಿಯಲ್ಲಿ ನನ್ನ ಮನದಾಳದ ಮೋಹನಮುರಳಿ ಓಪನ್ನೇ ಆಗಲ್ಲ.. ಬ್ಲೋಕ್ ಆಗಿರೋ ಸೈಟು ಯು ನೋ.ನಾನೇನು ಬರೀಬಾರದ್ದು ಬರೀತಿನಾ.. ಬಟ್  ಐ ಆಮ್ ಹ್ಯಾಪಿ.. ಬ್ಲಾಗ್ ಬರಕೊಂಡು ಕೂತುಬಿಟ್ಟಿದ್ರೆ ಏನನ್ನೂ ಓದುತ್ತಾ ಇರಲಿಲ್ಲ.. ಈಗ ಗೂಗಲ್ ಅನ್ನೋ ಗಾಳಿಜಗತ್ತಲ್ಲಿ ಇಣುಕಿ ಏನೇನೋ ಪ್ರಶ್ನೆಗಳನ್ನ ಹಾಕಿ ಎಷ್ಟೆಲ್ಲಾ ವಿಷಯಗಳನ್ನ ತಿಳ್ಕೊಂಡೆ ಗೊತ್ತಾ..? ಖುಶಿ ಆಗಿತ್ತು.. ಎಷ್ಟು ಬೇಗ ಟೈಮ್ ಆಗ್ಬಿಡ್ತು.. ಆಫೀಸಲ್ಲಿ ಹೊಸವರ್ಷದ ಸ್ವಾಗತಕ್ಕೆ ಸಂಭ್ರಮದ ತಯಾರಿ ನಡೆದಿತ್ತು.. ಆದ್ರೆ ಅಲ್ಲಿರೋದಕ್ಕೆ ಮನಸಾಗ್ಲಿಲ್ಲ.. ನನ್ನೊಳಗೆ ನಾನಿದ್ದು , ನನ್ನವರೊಂದಿಗೆ ಬೆರೆತು ಅರಿತು , ನಮ್ಮಿಚ್ಛೆಯಂತೆ ಸಂಬ್ರಮಿಸೋದರಲ್ಲೇ ಹೆಚ್ಚು ಖುಶಿ ನನಗೆ..

 ಇಷ್ಟೆಲ್ಲಾ ಖುಶಿಯ ಕ್ಷಣಗಳು ಒಂದೊಂದಾಗಿ ಬಂದು ಹೋಗಿವೆ, ಆದ್ರೂ ಯಾಕೋ ದಿನ ಸರಿ ಇರಲಿಲ್ಲ ಅನ್ನಿಸಿತ್ತಲ್ಲಾ, ಯಾಕೆ ? ಅದು ನನಗೆ ಅರ್ಥವಾಗಿತ್ತು...  ಅಷ್ಟೊತ್ತೂ ನಾನು ಇಡೀ ದಿನ ಅನುಭವಿಸಿದ ಖುಶಿಯ ಕ್ಷಣಗಳನ್ನ ಗಣನೆಗೇ ತಗೊಂಡಿರಲಿಲ್ಲ.. ದುಃಖ ಅನ್ನೋದು ಕಾರಣಾನೇ ಇಲ್ಲದೆ ಆವರಿಸಿಕೊಂಡುಬಿಡತ್ತೆ.. ಆದ್ರೆ ಕಾರಣ ಇದ್ರೂ ಖುಶಿಪಡೋದಕ್ಕೆ ನಮಗೆ ಬರಲ್ಲ.. ಅದನ್ನ ಕಲ್ತ್ಕೋಬೇಕಲ್ವಾ ? ಜ್ಞಾನೋದಯವಾಗಿತ್ತು..!

 ಈ ವರ್ಷ ಖುಶಿಯನ್ನ ಹುಡುಕೋ ರೆಸಲ್ಯೂಶನ್ ಮಾಡಿದ್ದೀನಿ.. ಪ್ರತಿ ದಿನ ನಾನು ಖುಶಿಪಡೋ ಹತ್ತು ಸಂಗತಿಗಳನ್ನಾದ್ರೂ ಕಂಡ್ಕೋತಿನಿ.. ಇಂಥದ್ದೊಂದು ನಿರ್ಧಾರಕ್ಕೆ ನಾನು ಬರೋದಕ್ಕೆ ನನ್ನ ಗೆಳತಿಯಂತಾ ಸೋದರಿಯೇ ಸ್ಪೂರ್ತಿ.. ಅವಳು ಸಮಸ್ಯೆಗಳನ್ನ ಚೂಯಿಂಗಮ್ ಥರಾ ಎಳೆದುಕೊಂಡುಹೊಗೋಳೇ ಅಲ್ಲ.. ಸದಾ ಖುಶಿಯಾಗಿದ್ದು ಖುಶಿಯನ್ನ ಹಂಚೋದನ್ನ ನಾನು ಅವಳಿಂದ ಇಷ್ಟು ವರ್ಷ ಜೊತೆಗಿದ್ರೂ ಕಲಿತಿಲ್ಲ.. ಅವಳ ದಾರಿಯಲ್ಲಿ ನಡೆಯೋದಕ್ಕೆ ಆರಂಭಿಸ್ತಾ ಹೊಸವರ್ಷಕ್ಕೆ ಕಾಲಿಟ್ಟಿದ್ದೀನಿ.. ಐ ಲವ್ ಯು 2012 ಅಂತ ಕಟ್ಟಕಡೆಯ ದಿನ ಗಟ್ಟಿಯಾಗಿ ಹೇಳಬೇಕು ನನಗೆ.. ಅದಕ್ಕೆ ಪ್ರಿಪರೇಶನ್ನಾಗಿ ದಿನಕ್ಕೊಮ್ಮೆ ಅವತ್ತಿನ ದಿನಕ್ಕೆ ನನ್ನ ಪ್ರೀತಿಯನ್ನ ಕನ್ವೇ ಮಾಡ್ತೀನಿ.. ಚನ್ನಾಗಿರತ್ತೆ.. ಇದು ನನ್ನ ಹ(ವ)ರುಷ ಆಗತ್ತೆ ಅಲ್ವಾ ? 

Tuesday, December 27, 2011

ಅವಳು ಕರಗುವ ಸಮಯ..!

ಹಲೋ ಹನಿ
ಹಾ ಹೇಳಿ
ಯಾಕೆ ನಾನ್ ಕಾಲ್ ಮಾಡಬಾರದಿತ್ತಾ ?
ಹಂಗೇನಿಲ್ಲ, ಎಲ್ರೂ ಇದ್ದಾರೆ
ಹೊರಗೆ ಬಾ..

ಹೀಗೆ ಶುರುವಾಗಿತ್ತು ಮಾತು.. ಪ್ರೀತಿಯಲ್ಲಿ ಇದೆಲ್ಲ ಸಹಜ..ಆದ್ರೆ ಅಸಹಜ ಅನ್ನಿಸಿದ್ದೂ ಅದರಲ್ಲಿತ್ತು.. ಎರಡೇ ಎರಡು ಶಬ್ದ ಮುಂದೆ ಕೇಳೋದಕ್ಕೆ ಆಗಲಿಲ್ಲ.. ಅದೆಷ್ಟು ನರಳಿಬಿಟ್ಟಳೋ ಅವಳು.. ಆಕೆಯ ಕಣ್ಣಲ್ಲಿ ಕಂಬನಿ ಇರಲಿಲ್ಲ.. ನನ್ನ ಮನಸು ಒದ್ದೆಯಾಗಿತ್ತು.. ಅವಳ ಮಾತು ಮುಗಿದ ಮೇಲೆ ಒಬ್ಬಳೇ ಅತ್ತಿದ್ದೆ.. ನನ್ನದಲ್ಲದ ಅನುಭವ ನನ್ನನ್ನ ಬೆಚ್ಚಿಬೀಳಿಸಿತ್ತು.. ಹುಡುಗೀರಿಗೆ ಯಾಕೆ ಈ ಶಿಕ್ಷೆ ?

ವೈಟ್ ಶರ್ಟ್  ಬ್ಲೂ ಜೀನ್ಸ್.. ಎತ್ತರಕ್ಕೆ ಸರಿಯಾದ ಮೈಕಟ್ಟು .. ಮುಖದಲ್ಲಿ ಮಂದಹಾಸ.. ಎಷ್ಟು ಚನ್ನಾಗಿ ಕಾಣಿಸ್ತಾ ಇದ್ದಾ ಗೊತ್ತಾ..? ಮಾತೂ ಅಷ್ಟೇ ತೇಲುವ ಮೋಡದ ಹಾಗೆ.. ತಂಗಾಳಿ ಬೀಸಿದ ಹಾಗೆ.. ಮುಂಗುರುಳ ಲಾಸ್ಯದಹಾಗೆ.. ಉಹು ಆಗಲ್ಲ ವರ್ಣಿಸೋದಕ್ಕೆ ಸಾಧ್ಯಾನೇ ಇಲ್ಲ.. ಅದ್ಭುತ ಮಾತುಗಾರ ಅನ್ನೋದಕ್ಕಿಂತ ಹುಡುಗಿಯರ ಹೃದಯವನ್ನ ಇಣುಕಿ ನೋಡಿದಂತಾ ಮಾತು.. ಅವನೇನಾ ಇವನು.. ಫೋನಿನಲ್ಲಿ ಮೆ ಶಾಯರ್ ತೊ ನಹಿ.. ಲೇಕಿನ್ ವೊ ಹಸಿ.. ಅಂತ ಬಂದಾಗಲೇ ಅನ್ನಿಸಿತ್ತು.. ಇವನು ಅವನಲ್ಲ ಅಂತ ಮೂರೇ ಮೂರು ದಿನಗಳ ಹಿಂದೆ ನಿನಗೆ ಮೋಸ ಮಾಡೋದಕ್ಕೆ ನನಗೆ ಇಷ್ಟ ಇಲ್ಲ.. ಐ ಎಮ್ ಇನ ಡಿಪ್ರೇಶನ್ ಅಂತ ಅತ್ತೇಬಿಟ್ಟಿದ್ದ.. ಯಾಕೋ ಕಥೆ ಕೇಳದೇ ಇರೋದಕ್ಕೆ ಆಗಿರಲಿಲ್ಲ.. ಅದೇ ನಾನು ಮಾಡಿದ ದೊಡ್ಡ ತಪ್ಪು..

ನಾನು ಅವಳನ್ನೇ ದಿಟ್ಟಿಸಿದ್ದೆ , ಆ ದನಿಯಲ್ಲಿ ಏರಿಳಿತಗಳಿರಲಿಲ್ಲ.. ಕೊನೇಪಕ್ಷ ಗಂಟಲ ನರಗಳಾದ್ರೂ ಉಬ್ಬಿವೆಯಾ..? ಉಹು ..ಅವಳದು ಸಹಜ ದಾಟಿಯ ಅಸಹಜ ಮಾತು.

ಅವನು ಪ್ರೀತಿಗೆ ಬಿದ್ದಿದ್ದನಂತೆ.. ಅವಳು ಬೆಳದಿಂಗಳಿನಂತಾ ಹುಡುಗಿ.. ಚೆಲುವೆ.. ಚಂಚಲೆ ..ಕೋಮಲೆ.. ಕವಿ ಕಲ್ಪನೆಯ ಕೆತ್ತನೆಯ ಥರಾ ಅನ್ನಿಸಿತ್ತು.. ಪ್ರಾಣಕ್ಕಿಂತಾ ಹೆಚ್ಚಾಗಿ ಪ್ರೀತಿಸಿದ್ದೆ ಅಂದಾ.. ಅಳ್ತಾ ಇದ್ದಾ ಅನ್ನಿಸತ್ತೆ.. ಧ್ವನಿ ಮಾತ್ರ ಗದ್ಘದಿತವಾಗಿತ್ತು.. ಅವಳು ಈಗ ಎಲ್ಲಿದ್ದಾಳೋ ? ಯಾರ ಜೊತೆಗೆ ಜೀವನ ಮಾಡ್ಕೊಂಡಿದ್ದಾಳೋ.. ? ಜಾತಿಯ ಕಾರಣಕ್ಕೆ ನಾವಿಬ್ಬರೂ ಬೇರೆಯಾಗಬೇಕಾಯ್ತು.. ಹಿರಿಯರ ಒತ್ತಾಯದಿಂದ ದೂರಾದ್ವಿ.. ಎಲ್ಲಿದ್ದರೂ ಚನ್ನಾಗಿರಲಿ.. ನೂರುಕಾಲ ಬಾಳಲಿ.. ಆದ್ರೆ ನನಗೆ ಅವಳನ್ನ ಮರೆಯೋದಕ್ಕೇ ಆಗ್ತಿಲ್ಲ.. ಆ ನೋವಿನಿಂದ ನಾನು ಹೊರಬರೋದಕ್ಕೆ ಟೈಮ್ ಬೇಕು.. ಈಗ್ಲೇ ಅಪ್ಪ ಅಮ್ಮ ಮದುವೆಗೆ ಒತ್ತಾಯಿಸ್ತಾ ಇದ್ದಾರೆ.. ಹಾಗಂತ ಈಗ ನಿನ್ನನ್ನ ಮದುವೆ ಮಾಡ್ಕೊಂಡ್ರೆ ತಪ್ಪಾಗತ್ತೆ.. ಮನಸೆಲ್ಲಾ ಅವಳೇ ತುಂಬಿದ್ದಾಳೆ.. ಆದಿನ್ಯಾವತ್ತೂ  ಅವಳು ನನ್ನವಳಾಗಲ್ಲ ಅನ್ನೋ ಸತ್ಯ ಗೊತ್ತಿದೆ.. ನಂತ್ರ ನಾನೂ ಮತ್ತೊಬ್ಬಳನ್ನ ಮದುವೆ ಆಗಲೇ ಬೇಕು.. ಅದು ನೀವೇ ಆಗಬಾರದು ಅಂತಿಲ್ಲ..ಆದ್ರೆ ನಿಮಗೆ ಅಡ್ಜೆಸ್ಟ್ ಆಗೋದಕ್ಕೆ , ನನ್ನ ಹೊಸ ಬದುಕನ್ನ ಒಪ್ಪಿಕೊಳ್ಳೋದಕ್ಕೆ ನನಗೆ ಟೈಮ್ ಬೇಕು.. ಅದನ್ನ ನಿಮ್ಮಿಂದ ಕೊಡೋದಕ್ಕಾಗತ್ತಾ..? ನಾನು ಹಿಂದೆ ಒಬ್ಬಳಿಗೆ ಮನಸು ಕೊಟ್ಟಿದ್ದೆ ಅನ್ನೋ ಸತ್ಯವನ್ನ ಒಪ್ಪಿಕೊಂಡು ನನ್ನನ್ನ ಮದುವೆಯಾಗೋ ಮನಸಿದ್ಯಾ ? ಉಹು ಇರಲ್ಲಾ, ಅಂತಾ ಅಳ್ತಾನೇ ಫೋನ್ ಇಟ್ಟಿದ್ದ..

ಕಣ್ಣೀರ್ ಹಾಕೋ ಹುಡುಗರನ್ನ ನಂಬಬಾರದು ಅಂತಾರಲ್ಲ ಅದು ನಿಜ ಅಂತ ನನಗನ್ನಿಸಿತು.. ಆದ್ರೆ ಅವನ ಹತ್ರಾ ನಾನೂ ಮಾತಾಡಿದ್ದೆ.. ಅವನ ಕಣ್ಣಲ್ಲಿ ಕಣ್ಣಿಟ್ಟು ಪ್ರಶ್ನಿಸಿದ್ದೆ.. ಉಹು ಅರ್ಥವಾಗಿರಲಿಲ್ಲ.. ಮೊದಲಬಾರಿಗೆ ಯಾರನ್ನೋ ಅಳೆಯೋದರಲ್ಲಿ ನಾನು ಸೋತಿದ್ದೆ.. ಅವಳೂ ಸೋತಿದ್ದಳು..

ಅದೊಂದು ಫೋನ್ ಕಾಲ್ ನನ್ನನ್ನ ತುಂಬಾ ಯೋಚಿಸೋ ಥರ ಮಾಡಿಬಿಟ್ಟಿತ್ತು.. ಕೂತಲ್ಲಿ ನಿಂತಲ್ಲಿ ಯೋಚಿಸಿದ್ದೆ, ಅವನಿಗೆ ಏನ್ ಹೇಳಲಿ.. ಒಂದು ಮನಸು ಯಾಕೋ ಮುಂದುವರೆಯೋದು ಬೇಡ ಅಂತ ಹೇಳ್ತಾ ಇತ್ತು.. ಆದ್ರೂ ಮನದ ಮೂಲೆಯಲ್ಲಿ ಎಲ್ಲೋ ಹೃದಯ ಕಲ್ಲಾಗಬಾರದು ಅನ್ನೋ ಧ್ವನಿ.. ಪ್ರೀತಿ ಸಿಗದವರು ಎಷ್ಟು ಜನ ಇಲ್ಲಾ.. ಅವರೆಲ್ಲಾ ಬದುಕನ್ನ ಪ್ರೀತಿಸಿಲ್ವಾ ?  ಹಳೆ ನೀರನ್ನ ಕೊಚ್ಚಿಕೊಂಡು ಹೊಗೋ ಹೊಸ ನೀರಿನ ಥರ ನಾನ್ಯಾಕ್ ಆಗಬಾರದು..? ನನ್ನ ಪ್ರೀತಿಗೆ ಎಲ್ಲವನ್ನೂ ಮರೆಸೋ ಶಕ್ತಿ ಇದೆ ಅನ್ನಿಸಿಬಿಟ್ಟಿತ್ತು..

ಎಲ್ಲಾ ಹುಡುಗಿಯರೂ ತಪ್ಪುಮಾಡೋದೇ ಅಲ್ಲಿ.. ನಾನು ನನ್ನ ಪ್ರೀತಿ ನನ್ನ ನಡುವಳಿಕೆ ನನ್ನ ಶಕ್ತಿಯಿಂದ ನನ್ನದಲ್ಲದ ಮನಸನ್ನ ಹತೋಟಿಗೆ ತಗೊಂಡು ಬತರ್ಿನಿ, ನನ್ನದಾಗಿಸಿಕೊಂಡುಬಿಡ್ತೀನಿ ಅಂದ್ಕೋತಾರೆ.. ಆದ್ರೆ ಅದು ಆಗದ ಕೆಲಸ.. ಅವಳು ಅವಳೇ ನಾನು ನಾನೇ.. ಅರಿಯಲು ತಡವಾದರೆ ನಂತರ ಮುಗಿಯದ ಬೇನೆ.

ಮೆಸೇಜ್ ಮೇಲೆ ಮೆಸೇಜ್ ಮಾಡಿದ್ದೆ.. ಉತ್ತರಗಳೆಲ್ಲ ಚಿಕ್ಕ ಮತ್ತು ಚೊಕ್ಕವಾಗಿದ್ವು.. ಮಗುವಿನ ಮನಸು ಅನ್ನಿಸಿಬಿಟ್ಟಿತ್ತು.. ನಾನು ಅವನನ್ನ ಒಪ್ಪಿಕೊಂಡೆ.. ಆದ್ರೆ ನಿಜ ಹೇಳ್ತೀನಿ, ನಾನು ಅವನನ್ನ ಒಪ್ಪಿಕೊಳ್ಳೋದಕ್ಕೆ ಕಾರಣ ಆತನ ಮಾತು ಮನಸು ನಡುವಳಿಕೆ ಅಷ್ಟೇ ಆಗಿರಲಿಲ್ಲ.. ಆತನ ರೂಪ ಕೆಲಸ ಗೌರವ ಘನತೆ ಎಲ್ಲವೂ ನನ್ನನ್ನ ಕರಗುವಂತೆ ಮಾಡಿದ್ದವು.. ಮದುವೆಗೆ ಒಪ್ಪಿಕೊಂಡಿದ್ದೆ.. ಅಷ್ಟಾಗಿ ವಾರಾಕೂಡ ಕಳೆದಿಲ್ಲ.. ಡಿಪ್ರೇಶನ್ನಿನ ಮಾತುಗಳು ಮೆಸೇಜ್ಗಳು ಬರೋದೂ ಕಡಿಮೆ ಆಗಿರಲಿಲ್ಲ.. ಅವತ್ತು ನಾನು ಅವನನ್ನ ಮೀಟ್ ಮಾಡೋಣ ಅಂದಿದ್ದೆ.. ಎದೆಯ ತುಂಬ ನೋವಿಟ್ಕೊಂಡು ಬತರ್ಾನೆ, ನಾನಾಗ ಅವನ ತಲೆಯನ್ನ ನನ್ನ ಎದೆಯ ಮೇಲಿಟ್ಟು ತಾಯಿಯಂತೆ ಸಮಾಧಾನ ಮಾಡಬೇಕು.. ಮನಸಿನ ಭಾರಗಳನ್ನೆಲ್ಲಾ ಹೊರಹಾಕೋದಕ್ಕೆ ಪ್ರಯತ್ನಿಸಬೇಕು ಅಂದುಕೊಂಡಿದ್ದೆ.. ಆದ್ರೆ ಆಗಿದ್ದೇ ಬೇರೆ.

ಹೆಣ್ಣುಮಕ್ಕಳಿಗೆ ಅದೆಲ್ಲಿಂದ ಬಂದುಬಿಡತ್ತೋ ತಾಯಿಯ ಹೃದಯ.. ಯಾರದೋ ನೋವು ಹತಾಶೆಗಳಿಗೂ ಇವಳ ಹೃದಯ ಮಿಡಿಯತ್ತೆ .. ಅದು ತಪ್ಪಾ ?


ಕಾರಿನಿಂದ ವೈಟ್ ಶರ್ಟ್ ಬ್ಲೂ ಪ್ಯಾಂಟ್ ತೊಟ್ಟಿದ್ದ ಹ್ಯಾಂಡ್ಸಮ್ ಹುಡುಗ ಕೆಳಗಿಳಿದಿದ್ದ..ಆತನ ಮುಖದಲ್ಲಿ ನೋವು ಕಾಣಿಸಲಿಲ್ಲ..ನನಗೆ ಗೊಂದಲ.. ಮಾತಲ್ಲೂ ಹಳೇ ಹುಡುಗಿ ಇಣುಕಲಿಲ್ಲ.. ದುಃಖದ ಗಾಳಿ ಬೀಸಲಿಲ್ಲ.. ಕಟ್ಟಕಡೆಯದಾಗಿ ನಾನು ನಿನ್ನನ್ನ ಚನ್ನಾಗಿ ನೋಡ್ಕೋತೀನಿ ಅಲ್ವಾ ? ಅಂತ ಅಮಾಯಕನಂತೆ ಕೇಳಿದ್ದೇ ಕೇಳಿದ್ದು ಹಳ್ಳಕ್ಕೆ ಬಿದ್ದೆ.. ಮದುವೆಯಾದರೂ ಏಳೋದಕ್ಕೆ ಆಗಲೇ ಇಲ್ಲ..

ಅವನೂ ಅದನ್ನೇ ಹೇಳಿದ್ದ.. ಮದುವೆಯಾದ್ರೂ ಅವಳನ್ನ ಮರೆಯೋದಕ್ಕಾಗಿರಲಿಲ್ಲ.. ಮೊದಲರಾತ್ರಿ ನಾವಿಬ್ಬರೂ ಮಾತಲ್ಲೇ ಮುಗಿಸಿದ್ವಿ.. ನಾನು ಅವಳನ್ನ ತುಂಬಾನೇ ಪ್ರೀತಿಸ್ತಾ ಇದ್ದೆ.. ಆದ್ರೆ ಅವಳಿಗೆ ಅನುಮಾನ.. ಒಂದೇ ಒಂದು ದಿನ ಹಳೆ ಹುಡುಗಿಯ ಹೆಸರು ತೆಗೆಯದೇ ಸಂಸಾರ ಮಾಡಲಿಲ್ಲ.. ಮಂಚದಲ್ಲೂ ಅವಳದೇ ಧ್ಯಾನ.. ಮೌನ.. ಕಳೆದುಹೋಗ್ತಾ ಇತ್ತು ಯವ್ವನ.

ಅವನ ಮಾತುಗಳು ಕಿವಿಯಲ್ಲಿ ಗುಯ್ಗುಡ್ತಾ ಇದ್ವು. ಮೈಯ್ಯೆಲ್ಲಾ ಉರಿ.. ಇಂಥಾ ನೀಚನ ಮಾತಿಗೆ ನಾನು ಅಯ್ಯೋ ಅಂದನಾ ? ತರ್ಕಕ್ಕಿಳಿಯದೇ ನಂಬಿಬಿಟ್ಟಿದ್ದೆ. ಅದು ನನ್ನ ದಡ್ಡತನ

ಅವನಿಗೆ ಊಟ ಬೇಡ , ನಿದ್ದೆ ಬೇಡ.. ಬರೀ ಹಾಸಿಗೆ ಹಾಸಿಗೆ ಹಾಸಿಗೆ.. ಅದು ನನಗೆ ಹೇಸಿಗೆ ಅಂದವಳ ಮುಖದಲ್ಲಿ ಅಸಹ್ಯದ ಭಾವ ಮೂಡಿದ್ದು ಮಾತ್ರ ನನಗೆ ಕಂಡಿತ್ತು.. ಗಂಡಸು ಅವಳನ್ನ ಅಷ್ಟರಮಟ್ಟಿಗೆ ಕಾಡಿಬಿಟ್ಟಿದ್ದ.. ಅವನಂಥ ಮನುಶ್ಯ ಮತ್ತೊಬ್ಬ ಇರೋದಕ್ಕೆ ಸಾಧ್ಯ ಇಲ್ವೇನೋ.. ಯಾವ ಹುಡುಗಿಗೂ ಅಂಥ ಗಂಡ ಸಿಗಬಾರದು ಅಂತ ಅಂದವಳ ಕಣ್ಣಲ್ಲಿ ಸಿಟ್ಟಿತ್ತು.

ಅವನು ಕಾಡಬಾರದ ರೀತಿ ಎಲ್ಲಾ ಕಾಡಿದ್ದ.. ಮೊದಮೊದಲು ಅವಳಿಗೆ ಎಲ್ಲವೂ ಹಳೆಯದನ್ನ ಮರೆಯೋ ತವಕ ಅನ್ನಿಸಿತ್ತು.. ಅವನಿಚ್ಛೆಯಂತೆ ಎಲ್ಲವೂ ನಡೆದವು.. ಅವನಿಲ್ಲದ ಸಮಯದಲ್ಲಿ ಅವಳಿಗೇ ಅರಿವಿಲ್ಲದಂತೆ  ಆಕೆ ಅತ್ತಿದ್ದಳು.. ವಿದ್ಯಾವಂತೆ ಬುದ್ಧಿವಂತೆ ದಿಟ್ಟ ಹೆಣ್ಣುಮಗಳೊಬ್ಬಳಿಗೆ ಮದುವೆ ಬಂಧನವಾಗಿತ್ತು.. ಆಕೆ ನರಳಿ ನರಳಿ ನಡುಗಿಹೋಗಿದ್ದಳು.. ಆಕೆಯ ಆ ನರಳಾಟ ನನಗೆ ಅರ್ಥವಾಗೋದಲ್ಲ.. ಹಾಗಾಗಿ ಅವಳ ಕಥೆ ಕೇಳಿದಾಗ ಕಣ್ಣುತುಂಬಿಬರಲಿಲ್ಲ.. ಆದ್ರೆ ಅವಳು ನನ್ನ ಕೈಲಿಟ್ಟ ಆಡಿಯೋ ಟ್ರಾಕ್ ಅಳುಬರಿಸಿಬಿಟ್ಟಿತ್ತು.. ನಾನರಿಯದ ಅದೆಷ್ಟೋ ಸಂಘತಿಗಳು ಅದರಲ್ಲಿದ್ದವು.. ಅವಳು ಇವನಿಗೆ ಹೆದರೇ ಓಡಿಹೋಗಿರಬೇಕು.. ಅವನೊಬ್ಬ ಸೈಕೋ.. 
 ಅವನ ಇಡೀ ಕಥೆ ಇನ್ಯಾವತ್ತಾದ್ರೂ ಸಮಯ ಕೂಡಿ ಬಂದಾಗ ಹೇಳ್ತೀನಿ..  


Thursday, December 8, 2011

ಬಿಗ್ ಬಾಸ್ ಅನ್ನೋ ಹಿಂಸೆ..!


"ಬಿಗ್ ಬಾಸ್ ಕೆ ಘರ್ ಮೆ ಹಿಂಸಾ ಕೇಲಿಯೇ ಜಗಾ ನಹೀ ಹೆ"  ನಾನ್ಸೆನ್ಸ್ ಅಂತ ನಕ್ಕುಬಿಟ್ಟೆ.. ಅವತ್ತು ಪೂಜಾ ಮಿಶ್ರಾ ಅನ್ನೋ ಕೋಪಿಷ್ಠೆಯೊಬ್ಬಳನ್ನ ಬಿಗ್ ಬಾಸ್ ಮನೆಯಿಂದ ಹೊರಗಾಕಿದ್ರು.. ಅದೂ ಸಿದ್ಧರ್ಥ ಅನ್ನೋ ಹುಡುಗನನ್ನ ತಳ್ಳಿದ್ಲು ಅನ್ನೋ ಕಾರಣಕ್ಕೆ  ಬಿಗ್ ಬಾಸ್ ಮನೆಯಲ್ಲಿ ಹಿಂಸೆಗೆ ಅವಕಾಶ ಇಲ್ಲ ಅಂದ್ರು..  ಆಗ್ಲೇ ನಾನು ಹಿಂಸೆಯ ಬಗ್ಗೆ ಯೋಚಿಸೋದಕ್ಕೆ ಶುರು ಮಾಡಿದ್ದು.. ಹೆಸರಲ್ಲೇನಿಲ್ಲ ಅನ್ನೋದು ಅರ್ಥವಾಗಿದ್ದು..

 ಬಿಗ್ ಬಾಸ್ ಅಂದ ತಕ್ಷಣ ಏನೋ ಒಂದು ಥರದ ಗೌರವ ಬರತ್ತೆ.. ಬಿಗ್ ಬಾಸ್ ಅಂತ ಯಾರನ್ನ ಕರೀತಾರೆ ಅಂತ ಆ ಕಾರ್ಯಕ್ರಮವನ್ನ ನೋಡೋ ಜನ  ಮೊದಮೊದಲು ಯೋಚಿಸ್ತಾ ಇದ್ರಾದ್ರೂ ಈಗ ಎಲ್ಲರೂ ರೂಪವಿಲ್ಲದ ವ್ಯಕ್ತಿಯನ್ನ ಒಪ್ಪಿಕೊಂಡಿದ್ದಾರೆ.. ಯಾರು ಬಿಗ್ ಬಾಸ್ಗೆ ಒಂದು ವ್ಯಕ್ತಿತ್ವ ಕೊಟ್ಟಿದ್ರೋ ಇಲ್ವೋ, ಆದ್ರೆ ಆಗೊಮ್ಮೆ ಈಗೊಮ್ಮೆ ಅದನ್ನ ನೋಡಿದ್ರೂ ನಾನು ಮಾತ್ರ ಆ ದನಿಗೊಂದು ವ್ಯಕ್ತಿತ್ವ ಕೊಟ್ಟಿದ್ದೆ.. ಮೋಸ್ಟ್ಲಿ ಕಾರ್ಯಕ್ರಮದ ನಿಮರ್ಾತ್ರರು ಬಿಗ್ಬಾಸ್ ಅಂದ್ರೆ ಒಬ್ಬ ಗೌರವಾನ್ವಿತ ವ್ಯಕ್ತಿ ಅಂತ ತೋರಿಸೋ ಪ್ರಯತ್ನ ಮಾಡಿದ್ದಾರೆ.. ಆತನ ಮನೆಯಲ್ಲಿ ಕಾಯ್ದೆ ಕಟ್ಟಳೆಗಳನ್ನ ಇಟ್ಟಿದ್ದಾರೆ.. ಎಲ್ಲವೂ ಜನರನ್ನ ಅಟ್ರಾಕ್ಟ್ ಮಾಡೋದಕ್ಕಾಗಿ.. ಅದು ಪಕ್ಕಾ ಕಮಷರ್ಿಯಲ್ ಓರಿಯೆಂಟೆಡ್ ರಿಯಾಲಿಟಿ ಶೋ ಅನ್ನೋದರಲ್ಲಿ ಎರಡು ಮಾತಿಲ್ಲ.. ಏನೇ ಆಗಿರಲಿ  ಕಾರ್ಯಕ್ರಮಕ್ಕೂ  ಒಂದು ಅದರದೇ ಆದ ಸುಂದರ ವ್ಯಕ್ತಿತ್ವ ಇದ್ರೆ ಅದು ಮನಸಿಗೆ ಹಿತವೆನಿಸತ್ತೆ...ಅದರಲ್ಲೂ ಮನೆ ಅಂತ ಕರೆಯೋವಾಗ ಅದಕ್ಕೆ ರೂಪ ಅಷ್ಟಿದ್ರೆ ಸಾಕಾಗಲ್ಲಾ , ಮನೆಯ ವಾತಾವರಣ ಕೂಡಾ ಇರಬೇಕಲ್ವಾ..?

 ಮಹಾರಾಷ್ಟ್ರದ ಪುಣೆ ಮತ್ತು ಮುಂಬೈ ಮಧ್ಯದ ಕರ್ಜತ್ ಅನ್ನೋ ಕಡೆ ನಿಮರ್ಾಣವಾದ ಬಿಗ್ ಬಾಸ್ನ ಐದನೇ ಕಂತಿನ ಮನೆ ನೊಡೋದಕ್ಕೇನೋ ಸುಂದರವಾಗಿದೆ.. ಅಳವಿಡಿಸಲಾಗಿರೋ ಐವತ್ತೈದು ಕೆಮರಾಗಳು ಹೇಗೆ ವಕರ್್ ಮಾಡುತ್ವೆ ? ಆನ್ಲೈನ್ ಎಡಿಟಿಂಗ್ ನಡೆಯುತ್ತಾ..? ಎಷ್ಟು ಜನ ಕೆಲಸ ಮಾಡ್ತಿದ್ದಾರೆ ? ಹೇಗೆ ಕೆಲಸ ನಡೆಯುತ್ತೆ ? ಅನ್ನೋದೆಲ್ಲಾ ನಿಗೂಢ.. ಅದು ಈ ಕಾರ್ಯಕ್ರಮದ ಬಗ್ಗೆ ಒಂದಿಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದ್ರೆ, ಇನ್ನಿಷ್ಟು ಕುತೂಹಲಕ್ಕೆ ಕಾರಣ ಬೇರೆ ಬೇರೆ ಥರದ ಜನರನ್ನ ಒಂದು ಕಡೆ ಅದೂ ಹೊರಪ್ರಪಂಚದ ಜೊತೆ ಕಾಂಟೆಕ್ಟೇ ಇಲ್ಲದೆ ತೊಂಬತ್ತಾರು ದಿನಗಳ ಕಾಲ ಇಡ್ತಾರಲ್ಲಾ, ಅವರು ಅಲ್ಲಿ ಹೇಗೆ ಬಿಹೇವ್ ಮಾಡಬಹುದು ಅನ್ನೋದು..

  ಒಬ್ಬ ವ್ಯಕ್ತಿಯನ್ನ ದೂರದಿಮದ ನೋಡಿದ್ರೆ, ಸ್ವಲ್ಪ ಹೊತ್ತು ಮಾತಾಡಿದ್ರೆ ಇಲ್ಲಾ ಇಷ್ಟಾನೇ ಪಟ್ಟು ಜೊತೆಯಾದ್ರೂ ಆತ ಏನು ಅನ್ನೋದು ಗೊತ್ತಾಗಲ್ಲ.. ಒಂದೇ ಮನೆಯಲ್ಲಿ ಒಟ್ಟಿಗೆ ಹಲವಾರುದಿನಗಳ ಕಾಲ ವಾಸವಾಗಿದ್ರೆ ಅವರ ನಿಜವಾದ ವ್ಯಕ್ತಿತ್ವ ಹೊರಬರತ್ತೆ ಅಂತಾರೆ.. ಹಾಗಾದ್ರೆ ಬಿಗ್ ಬಾಸ್ ಮನೆಯಲ್ಲಿ ಇರೋರ ನಿಜವಾದ ವ್ಯಕ್ತಿತ್ವ ನಮಗೆ ಕಾಣಿಸತ್ತಾ..? ಅಪ್ಕೋರ್ಸ್ ಹೊರಜಗತ್ತಿನ ಸಂಪಕರ್ಾನೇ ಇಲ್ಲದೆ ಯಾರೋ ಅಪರಿಚಿತರ ಜೊತೆ ಒಂದು ಮನೆಯಲ್ಲಿ ಇರಬೇಕಾಗಿಬಂದಾಗ ಪ್ರಸ್ಟ್ರೇಶನ್ ಆಗಬಹುದು, ಅಡ್ಜೆಸ್ಟ್ ಆಗೋದಕ್ಕೆ ಕಷ್ಟವಾಗಬಹುದು, ಅಂಥಾ ಸ್ಥಿತಿಯ ಔಟ್ಕಮ್ ಹೇಗಿರತ್ತೆ ? ಅನ್ನೋದನ್ನ ತೋರಿಸೋದಕ್ಕೆ ನಿಂತಿದ್ದ ಬಿಗ್ಬಾಸ್ನ ಬೇಸಿಕ್ ಕಾನ್ಸೆಪ್ಟ್ ಚನ್ನಾಗೇ ಇದೆ.. ನಂತ್ರಾ ಪಬ್ಲಿಸಿಟಿಗಾಗಿ ಕಾಂಟ್ರಾವಸರ್ಿ ಕ್ರಿಯೇಟ್ ಮಾಡೋ ಥರದ ಜನರನ್ನ ತರೋದು, ಡಾಲಿಬಿಂದ್ರಾರಂತ ಎಕ್ಟ್ರಾರ್ಡನರಿ ಹೆಂಗಸನ್ನ ಕರ್ಕೊಂಬರೋದು , ಪ್ರಾಯದ ಹುಡುಗ ಹುಡುಗಿಯರನ್ನ ಬಿಟ್ಟು ನಡುವೆ ಒಂದಿಷ್ಟು ರೊಮ್ಯಾನ್ಸ್ ಕಾಣಿಸೋದು.. ಟಾಸ್ಕ್ ಕೊಟ್ಟು ಮಸಾಲಾ ಸೇರಿಸೋದು ಎಲ್ಲವನ್ನೂ ಒಪ್ಕೊಳ್ಳೋಣಾ .. ಊಟದ ಜೊತೆಗೆ ಉಪ್ಪಿನ ಕಾಯಿಯ ಥರ ಸವಿಯೋಣ.. ಆದ್ರೆ ಒಂದು ರಿಯಾಲಿಟಿ ಶೋ ಅದರಲ್ಲೂ ಬಿಗ್ ಬಾಸ್ನಂತ ಕಾರ್ಯಕ್ರಮ ಮನೆ ಅಂದ್ರೆ ಕಾದಾಡೋ ಜಾಗ ಅಂತ ತೋರಿಸಿದ್ರೆ ಅದನ್ನ ನೋಡಿ ಖುಶಿಪಡೋದಕ್ಕಾಗತ್ತಾ? ಹೋಗ್ಲಿ ವೆರೈಟಿ ವೆರೈಟಿ ಬೈಗುಳ ಕಾದಾಟ ಜಗಳದ್ದೇ ಶೋ ಆಗಿದ್ರೆ ಆ ಕಾನ್ಸೆಪ್ಟನ್ನೂ ಎಕ್ಸೆಪ್ಟ್ ಮಾಡ್ಕೋಬಹುದಿತ್ತು..ಆದ್ರೆ ಬಿಗ್ ಬಾಸ್ ಅನ್ನೋದು ಬೈಗುಳದ ಕಾರ್ಯಕ್ರಮ ಅಂತ ಆಗಿದ್ದು ಬೇಸರ ತರಿಸತ್ತೆ..
 ಆರಂಭದಲ್ಲೇ ಬಿಗ್ ಬಾಸ್ ಐದರಲ್ಲಿ  ಕಾದಾಟ ಅನ್ನೋದು ಕಾರ್ಯಕ್ರಮ ಮಾಡಿದವರ ಕಾನ್ಸೆಪ್ಟ್ ಆಗಿತ್ತು ಅನ್ಸತ್ತೆ,, ಯಾಕಂದ್ರೆ ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಅಡಿ ಇಟ್ಟವರು ಒಬ್ಬರಿಗಿಂತ ಒಬ್ಬರು ಸ್ಟ್ರಾಂಗ್ ವ್ಯಕ್ತಿತ್ವದವರು..  ಯು ಟಿವಿ ಬಿಂದಾಸ್ ನಲ್ಲಿ ಬೆಂಕಿ ಅನ್ನಿಸಿಕೊಂಡ ಹುಡುಗಿ ಪೂಜಾ , ಚಾರ್ಲ್ಸ್ ಶೋಬ್ರಾಜ್ನಂಥಾ ಕ್ರಿಮಿನಲ್ನ ಹೆಂಡತಿ ನಿಹಿತಾ, ಡೇರ್ ಡೆವಿಲ್ ಪ್ರೋಥಿಮಾ ಬೇಡಿಯ ಮಗಳು ಪೂಜಾ ಬೇಡಿ, ದಿ ಗ್ರೇಟ್ ವೇಟ್ ಲಿಫ್ಟರ್ ಸೋನಿಕಾ, ಗಂಡನನ್ನ ತನ್ನ ಧರ್ಮಕ್ಕೆ ಕನ್ವಟರ್್ ಮಾಡೋ ತಾಕತ್ತಿದ್ದ ಗುಲಾಬೋ ಸಫೇರಾ, ಹೆಡ್ಲೈನ್ಸ್ ಟುಡೆಯಲ್ಲಿ ಶಾರ್ಪಶೂಟರ್ ಥರಾ ಇಂಟರ್ವ್ಯೂ ತಗೋತಿದ್ದ  ಆ್ಯಂಕರ್ ಮಂದೀಪ್ ಬೇವ್ಲಿ, ರಾಜಾ ಚೌದ್ರಿಯಂತ ಸ್ಟ್ರಾಂಗ್ ಅಟಿಟ್ಯೂಡ್ ಇರೋನ ಗಲರ್್ ಫ್ರೆಂಡ್ ಶೃದ್ಧಾ , ಅಫಗಾನ್ನಿಸ್ತಾನದಂತಾ ದೇಶದಿಂದ ಬ್ಯೂಟಿ ಕನ್ಸರ್ಟಲ್ಲಿ ಬಾಗವಹಿಸಿ ಗೆದ್ದ ವಿದಾ , ಸ್ಟ್ರೇಟ್ಪಾರ್ವರ್ಡ್ ಹೆಂಗಸು ಅಂತಾನೇ ಅನ್ನಿಸಿಕೊಂಡ ಜೂಹಿ ಪಮರ್ಾರ್ ಇವರ ಜೊತೆಗೆ ಹಿಜಡಾಗಳಿಗಾಗಿ ದನಿ ಎತ್ತಿ ಹೋರಾಡ್ತಿರೋ  ಟ್ರಾನ್ಜೆಂಡರ್ ಆಕ್ಟಿವಿಸ್ಟ್ ಲಕ್ಷ್ಮಿನಾರಾಯಣ ತ್ರಿಪಾಟಿ ಮತ್ತು ವಿಲನ್ ರೋಲ್ನಲ್ಲೇ ಹೆಚ್ಚಾಗಿ ಮಿಂಚಿದ್ದ ಶಕ್ತಿಕಪೂರ್ ಇವಿಷ್ಟು ಜನರ ಜೊತೆಗೆ ಒಳಬಂದಿದ್ದ ರಾಗೇಶ್ವರಿ ಮೆಹೆಕ್ ಮತ್ತು ಸೋನಾಲಿ ಸ್ವಲ್ಪ ಸಾಫ್ಟ್ ಇದ್ದಿರಬಹುದು ಅಂತ ಅನ್ನಿಸಿತ್ತು.. ನಂತ್ರ ಮೆಹೆಕ್ ಮತ್ತು ಶೊನಾಲಿ ಕೂಡ ನಾವ್ಯಾರಿಗೂ ಕಡಿಮೆ ಇಲ್ಲ ಅನ್ನೋದನ್ನ ತೋರಿಸಿಬಿಟ್ರು.. ದುರಂತ ಅಂದ್ರೆ ಈ ಬಾರಿ ಬಿಗ್ಬಾಸ್ ಮನೆಯಲ್ಲಿ ಕಚ್ಚಾಡೋರೇ ಇರೋದು ಅನ್ನೋ ಅಘೋಷಿತ ನಿಯಮ ಬಂದುಬಿಟ್ಟಿದೆ.. ಒಳಗಿದ್ದ ಒಳ್ಳೆಯ ಸ್ವಭಾವದ , ತನ್ನ ವ್ಯಕ್ತಿತ್ವವನ್ನೇ ತೋರಿಸೋ , ಪಾಸಿಟೀವ್ ವೈಬ್ರೇಟಿಂಗ್  ಹುಡುಗಿ ರಾಗೇಶ್ವರಿಯನ್ನ ಮೂರನೇ ವಾರದಲ್ಲೇ ಹೊರಹಾಕಿದ್ರು.. ಆಕೆಯ ವ್ಯಕ್ತಿತ್ವವನ್ನ ಯಾರಾದ್ರೂ ಇಷ್ಟಾಪಡದೇ ಇರೋ ಚಾನ್ಸಿದ್ಯಾ ಅಂತ ನನಗನ್ನಿಸ್ತು.! ಆಕೆ ನಿಜಕ್ಕೂ ಸಭ್ಯ ಸಂಭಾವಿತ ಹುಡುಗಿ.. ಆದ್ರೆ ಓಟ್ ಮಾಡೋರಿಗೆ ಜಗಳಾ ಆಡೋರು ಬೇಕು..! ಅದಕ್ಕಿಂತ ಹೆಚ್ಚಾಗಿ ಈ ಬಾರಿ ಬಿಗ್ಬಾಸ್ಗೂ ಬೆಂಕಿ ಹತ್ತಿಸೋರೇ ಬೇಕು.. ಮನೆಯಲ್ಲಿ ಹೊಗೆಯಾಡ್ತಾನೇ ಇರಬೇಕು..ಅದನ್ನೇ ಜನ ನೋಡ್ಬೇಕು.. ಅದೇ ಕಾನ್ಸೆಪ್ಟು.. ಹಂಗಾಗಿನೇ ನಂತ್ರ ಸ್ಪ್ಲಿಟ್ ವಿಲ್ಲಾದ ವಿನ್ನರ್ ಸಿದ್ಧಾರ್ಥನ್ನ ಕರ್ಕೊಂಬಂದ್ರು, ಬ್ಯಾಡ್ ಬಾಯ್ ಅಂತಾನೇ ಕರೆಸಿಕೊಂಡ ಇಸ್ ಜಂಗಲ್ಸೆ ಮುಜೆ ಬಚಾವೋ ಖ್ಯಾತಿಯ ಸಿಟ್ಟಿನ ಹುಡುಗ ಆಕಾಶ್ದೀಪ್ ಸೈಗಲ್ನ ಕರ್ಕೊಂಬಂದ್ರು.. ನಂತ್ರಾ ಬಿಂದಾಸ್ ಹುಡುಗಿ ಸನ್ನಿ ಅಲಿಯಾಸ್ ಕೆರೆನ್ ಮಲ್ಹೋತ್ರಾ ಬಂದ್ಲು.. ಈಗ ಕ್ರಿಕೇಟ್ ಜಗತ್ತಿನ ಕಿರಿಕ್ ಮಾಸ್ಟರ್ ಸೈಮಂಡ್ಸ್ ಕೂಡಾ ಬಂದಾಯ್ತು... ಇವರೆಲ್ಲರೂ ಸೇರ್ಕೊಂಡು ಮಾಡೋದು ಒಂದೇ ಕೆಲಸ ..ಅದು ಕಾದಾಟ.. ! 

 ಮುರು ತಿಂಗಳ ಕಾಲ ಹೊರಪ್ರಪಂಚದಿಂದ ದೂ
ರಾಗಿ ಒಂದು ಮನೆಯಲ್ಲಿರೋದ್ರಿಂದ ಪ್ರಸ್ಟ್ರೇಟ್ ಆಗ್ತಾರೆ, ಅವರು ಅದನ್ನ ಬೇರೆ ಬೇರೆ ಥರದಲ್ಲಿ ಹೊರಹಾಕ್ತಾರೆ ಅಂತ ಅಂದ್ಕೊಳ್ಳೋದ್ರಲ್ಲಿ ಅಥರ್ಾನೇ ಇಲ್ಲ.. ಇಲ್ಲಿ ಭಾವನೆಗಳು ಕೆಲಸ ಮಾಡಲ್ಲ.. ಯಾರೂ ಭಾವುಕರಾಗಲ್ಲ.. ಒಂದ್ವೇಳೆ ಭಾವುಕತೆ ಇದ್ರೆ  ಅವರು ಜಾಸ್ತಿ ದಿನ ಇರೋದೇ ಇಲ್ಲ.. ಇದು ಅಪ್ಪಟ ಗೇಮ್ ,ಅಳಿ ಉಳಿವಿನ ಆಟ.. ಓಟಿನ ಊಟ.. ಬಿಗ್ ಬಾಸ್ನ ಲೆಕ್ಕಾಚಾರದ ಮಾಟ ! ಯಾವಾಗ ಬಿಗ್ಬಾಸ್ ಮನೆಯ ಇಡೀ ವಾತಾವರಣವನ್ನೇ ಅಲ್ಲೋಲ ಕಲ್ಲೋಲ ಮಾಡಿದ ಪೂಜಾ ಓಟರ್ಸ್ ಫೆವರೆಟ್ ಅಂತ ಆಯ್ತೋ ಅವತ್ತಿನಿಂದ ಪ್ರತಿಯೊಬ್ಬರ ದನಿನೂ ದೊಡ್ಡದಾಯ್ತು.. ಮುಟ್ಟಿದರೆ ಮುನಿಯೋದು , ಮಾತೆತ್ತಿದರೆ ಕಾದಾಡೋದು ಶುರುವಾಗ್ಬಿಟ್ತು.. ಜಗಳ ಮಾಡದೇ ಇರೋರೇ ಯಾರೂ ಇಲ್ಲ ಅನ್ನೋ ಮಟ್ಟಕ್ಕೆ ಬಂತು.. ಜೊತೆಗೆ ನಾಮಿನೇಟ್ ಆದವರೇ ಹೆಚ್ಚಾಗಿ ಕಾದಾಡೋದನ್ನ ನೋಡಿದ್ರೆ , ಎಲ್ಲರೂ ರಗಳೆ ರಂಪಾಟಗಳೇ ಉಳಿವಿನ ದಾರಿ ಅಂದ್ಕೊಂಡಹಾಗಿದೆ.. ಅವಷ್ಟನ್ನೇ ಮಾಡ್ತಾರೆ.. ಅದೇ ಗೇಮ್ ಪ್ಲಾನ್.. ಅಲ್ಲಿಗೆ ಬಿಗ್ಬಾಸ್ ಮನೆಯಲ್ಲಿ ನಿಜವಾದ ವ್ಯಕ್ತಿತ್ವ ಹೊರಗೆ ಬರೋ ಚಾನ್ಸೇ ಇಲ್ಲ.. ಎಲ್ಲರೂ ಉಳಿವಿಗಾಗಿ ಜಗಳ ಮಾಡ್ತಾರೆ ಅಷ್ಟೆ !
ಇದೊಂದು ಗೇಮ್ ಶೋದಲ್ಲಿ ಭಾಗವಹಿಸಿದವರ ವ್ಯಕ್ತಿತ್ವದ ಮಾತು ಒತ್ತಟ್ಟಿಗಿರಲಿ, ಬಿಗ್ಬಾಸ್ಗಾದ್ರೂ ವ್ಯಕ್ತಿತ್ವ ಬೇಡ್ವಾ..? ಈಗ ಆ ಮನೆಯಲ್ಲಿ ಒಂದು ರೂಲ್ಸ್ ಇಲ್ಲ .. ರೂಲ್ಸ್ ಪಾಲೋ ಮಾಡೋರು ಯಾರೂ ಇಲ್ಲ.. ತಪ್ಪುಮಾಡಿದವರಿಗೆ ದಂಡಿಸೋರಿಲ್ಲ.. ಬಿಗ್ ಬಾಸ್ ಮನೆಯಲ್ಲಿ ಹಿಂಸೆಗೆ ಅವಕಾಶ ಇಲ್ಲಾ ಅಂತ ಹೇಳೋದೇ ನಿಜ ಆದ್ರೆ ಅಬ್ಯೂಸಿಂಗ್ ಶಬ್ದಗಳನ್ನ ಪ್ರಯೋಗಿಸಿ ಬೈದಾಡೋದು ಕೂಡಾ ಹಿಂಸೆ ಅಪರಾಧ ಅನ್ನೋದು ಬಿಗ್ ಬಾಸ್ಗೆ ಗೊತ್ತಿಲ್ವಾ..? ಪೂಜಾ ಮಿಶ್ರಾ ಸಿದ್ಧಾರ್ಥನ್ನ ದೂಡಿದ್ದು ಹಿಂಸೆ ಅನ್ನೋದಾದ್ರೆ ಶೊನಾಲಿಯ ಎದುರಿಗೆ ಕ್ಲೀನಿಂಗ್ ಸ್ಟಪ್ಅನ್ನ ಒಡೆದು ಚೂರ್ ಚೂರಾಗಿ ಮಾಡಿ ಆ ಚೂರುಗಳು ಸೊನಾಲಿಗೆ ಸಿಡಿದಿದ್ದು ಹಿಂಸೆ ಅಲ್ವಾ ? ಮೆಹೆಕ್ ಮಂದೀಪ್ಳನ್ನ ತಳ್ಳಿದ್ದು ಹಿಂಸೆ ಅಲ್ವಾ ? ಆಗೆಲ್ಲಾ ಯಾರಾದ್ರೂ ಒಬ್ಬರು ನಾವಿರಬೇಕು ಇಲ್ಲಾ ಅವರಿರಬೇಕು ಅಂತ ಪಟ್ಟು ಹಿಡಿದಿದ್ರೆ ಬಿಗ್ಬಾಸ್ ಕ್ರಮ ತಗೋತಾ ಇದ್ನೇನೋ.. ಆದ್ರೆ ಸಿದ್ಧಾರ್ಥ ಮಾತ್ರ ಆ ಇಶ್ಯೂವನ್ನ ದೊಡ್ಡದು ಮಾಡಿದ್ರಿಂದ ಪೂಜಾ ಮಿಶ್ರ ಹೊರಗೆ ಹೋದ್ಲು.. ಅಲ್ಲಿಗೆ ಬಿಗ್ ಬಾಸ್ಗೆ ನ್ಯಾಯ ನೀತಿ ಇಂಪಾಟರ್ೆಂಟ್ ಅಲ್ಲ, ದನಿ ಎತ್ತಿದವರಿಗೆ ನ್ಯಾಯ ಸಿಗತ್ತೆ ಅಷ್ಟೆ ಅಂದಾಂಗಾಯ್ತು.. ಅಂದ್ಹಾಗೆ ಪ್ರತಿನಿತ್ಯ ಬೆಳಗಾದ್ರೆ ಜಗಳ ರಾತ್ರಿಯಾದ್ರೆ ಜಗಳ ಅಂದ್ರೆ ನಿಮ್ಮಮನೆ ಹೇಗಿರತ್ತೆ ..? ನಿಮ್ಮ ಬದುಕು ಏನಾಗತ್ತೆ ? ಅಲ್ಲಿ  ಸ್ಕೈ ನ ಮಾತಿಗಿಂತ ದೊಡ್ಡ ಹಿಂಸೆ ಇದೆಯಾ..? ಈ ರಗಳೆಯನ್ನ ನುರು ಕೋಟಿಜನ ನೋಡ್ಬೇಕಾ..? ಅದಕ್ಕಿಂತ ದೊಡ್ಡ ಹಿಂಸೆ ಇನ್ನೊಂದಿದ್ಯಾ ? ಅಪ್ಕೋರ್ಸ್ ಯಾರೂ ಯಾರಿಗೂ ಈ ಶೊ ನೋಡಿ ಅಂತ ಬಲವಂತ ಮಾಡಲ್ಲ.. ಆದ್ರೆ ರಿಯಾಲಿಟಿಗೆ ಹತ್ತಿರವೇ ಅಲ್ಲದ ಪಕ್ಕಾ ಪ್ಲಾನ್ಡ್ ಶೋಗಳನ್ನ ರಿಯಾಲಿಟಿ ಶೋ ಅಂತ ಯಾಕೆ ಕರೀಬೇಕು ? ಹೀಗೇ ಆದ್ರೆ ಬಿಗ್ ಬಾಸ್ ತನ್ನ ಖ್ಯಾತಿಯನ್ನ ಕಳ್ಕೊಳ್ಳೋದ್ರಲ್ಲಿ ಸಂದೇಹನೇ ಇಲ್ಲ... 

ನಾನು ಇಷ್ಟೆಲ್ಲಾ ಯೋಚಿಸೋದಕ್ಕೆ ಕಾರಣವಾಗಿದ್ದು ಬಿಗ್ಬಾಸೂ ಅಲ್ಲ.. ಅದರಲ್ಲಿರೋ ವ್ಯಕ್ತಿಗಳೂ ಅಲ್ಲ.. ಅದರ ಖ್ಯಾತಿ ಅಪಖ್ಯಾತಿಗಳೂ ಅಲ್ಲ.. ನಾನು ಅಲ್ಲಿರೋ ಯಾರೊಬ್ಬರ ಫ್ಯಾನೂ ಅಲ್ಲ.. ಅಷ್ಟಕ್ಕೂ ಆಗೊಮ್ಮೆ ಈಗೊಮ್ಮೆ ಅದನ್ನ ನೋಡೋದ್ಬಿಟ್ರೆ ಪ್ರತಿದಿನ ನೋಡಿದ್ದೂ ಇಲ್ಲ.. ಆದ್ರೆ ಅದನ್ನ ನೋಡಿದಾಗಲೆಲ್ಲಾ ನನಗೆ ಹಿಂಸೆ ಅನ್ನಿಸಿದೆ.. ಆದ್ರೆ ಬಿಗ್ ಬಾಸ್ಗೆ ಹಿಂಸೆ ಅನ್ನಿಸಿಲ್ವಲ್ಲಾ ! ಹಾಗಾದ್ರೆ  ಕಾದಾಟ ಜಗಳ ಬೈದಾಟಗಳೆಲ್ಲಾ ಹಿಂಸೆ ಅಲ್ವಾ..?

Saturday, October 8, 2011

ರೂಪವಲ್ಲ ದಾರಿದೀಪ..!


 ಧ್ಯಾನ ಮೂಲಮ್ ಗುರುರ್ ಮೂರ್ತಿ,
 ಪೂಜಾ ಮೂಲಮ್ ಗುರುಃ ಪಾದಮ್,
 ಮಂತ್ರ ಮೂಲಮ್ ಗುರೂರ್ ವಾಕ್ಯಮ್
 ಮೋಕ್ಷ ಮೂಲಮ್ ಗುರು ಕೃಪಾ..

ನಿಜವಾದ ಗುರು ಅನ್ನೋದು ಒಂದು ರೂಪ ಅಲ್ಲ.. ದಾರಿ ದೀಪ.. ಆದ್ರೆ ಜನರಿಗೆ ಆದ್ಯಾತ್ಮದ ದಾರಿಯನ್ನ ತೋರಿಸೋ ನಿಟ್ಟನಿಲ್ಲಿ ಬದುಕಿನ ಜ್ಞಾನವನ್ನ ನೀಡಿ ದಾರಿದೀಪವಾಗೋ ಗುರುವಿಗೆ  ಕಾಣದ ದೇವರ ಸ್ಥಾನ ಕೊಟ್ರೆ ತಪ್ಪಾ..?

ಈ ಪ್ರಶ್ನೆಯನ್ನ ನಾನು ಸಾಕಷ್ಟು ಜನರತ್ರಾ ಕೇಳಿದೀನಿ.. ತುಂಬಾ ಜನರು ಈಗೆಲ್ಲಾ ಗುರುಗಳು ಅನ್ನೋದು ಡೋಂಗಿ.. ಕಾವಿ ತೊಟ್ಟು ಮಾಡಬಾರದ ಕೆಲಸಾ ಮಾಡಿ ಅದರ ಸ್ಥಾನಕ್ಕೇ ಕಳಂಕ ತರ್ತಿದ್ದಾರೆ ಅಂತ ಹೇಳ್ತಾರೆ.. ಅಂಥವರ ಬಗ್ಗೆ ಒಂದಿಷ್ಟು ಎಕ್ಸಾಂಪಲ್ ಕೊಡಿ ಅಂದ್ರೆ , ಮೊದಲು ಬರೋದು ನಿತ್ಯಾನಂದಸ್ವಾಮಿಯ ಹೆಸರು.. ಅದೊಂದು ಸೀಡಿ.. ಜನಸಾಮಾನ್ಯರ ಕಣ್ಣಲ್ಲಿ ನಿತ್ಯಾನಂದ ಅಪ್ಪಟ ಲಂಪಟ.. ಆದ್ರೆ ಅವರ ಭಕ್ತರ ಕಣ್ಣಲ್ಲಿ ಆತ ಮತ್ತೆ ಅದೇ ದಾರಿದೀಪ.. ರಂಜಿತಾಳ ಸಹಿತವಾಗಿ ಎಲ್ಲರೂ ಮತ್ತೆ ಅವರ ಆಶ್ರಮಕ್ಕೆ ಹೋಗ್ತಾರೆ.. ಅಲ್ಲಿನ ಚಿತ್ರವಿಚಿತ್ರ ಚಟುವಟಿಕೆಗಳಲ್ಲಿ ತೊಡಗಿಕೊಳ್ತಾರೆ..ಅಂಥದ್ದೊಂದು ನಂಬಿಕೆ ಇದ್ಯಲ್ಲಾ ಅದನ್ನ ನೋಡಿದ್ರೆ ನನಗೆ ಶಹಬ್ಬಾಸ್ ಅನ್ಸತ್ತೆ.. ಯಾಕಂದ್ರೆ ದೇವರು ಅನ್ನೋದು ಒಂದು ನಂಬಿಕೆ.. ಆ ನಂಬಿಕೆಯೆಡಗೆ ಪಯಣಿಸೋ ದಾರಿಯನ್ನ ತೋರಿಸೋನು ಕಾವಿ ತೊಡೋ ಗುರು..

  ಇಲ್ಲಿ ನಾನು ಕಾವಿ ತೊಡೋ ಗುರು ಅಂತ ಯಾಕಂದೆ ಅಂದ್ರೆ ಕಾವಿತೊಟ್ಟವನಷ್ಟೇ ಗುರು ಅಲ್ಲಾ.. ಮೊದಲ ತೊದಲು ನುಡಿಯನ್ನ ನುಡಿಯೋದಕ್ಕೆ ಕಾರಣರಾದವರಿಂದ ಹಿಡಿದು  ನಾವು ಏನೇನೆಲ್ಲಾ ಯಾರ್ಯಾರಿಂದ ಕಲೀತೀವೋ ಅವರೆಲ್ಲರೂ ನಮಗೆ ಗುರು.. ಅವರು ಸಧ್ಯ ಬದುಕೋದಕ್ಕೆ ದಾರಿ ತೋರಿಸೋ ಗುರುಗಳು ಕಾವಿತೊಟ್ಟವರು ಬದುಕಿನ ಉದ್ದೇಶವನ್ನ , ಅದರ ಒಳಾರ್ಥವನ್ನ ಅರ್ಥಮಾಡಿಸೋ ಗುರು..

ನಮ್ಮನ್ನ ನಿಯಂತ್ರಿಸೊ ಯಾವುದೋ ಒಂದು ಶಕ್ತಿ ಇದೆ ಅಂತ ನಂಬುವವರೆಲ್ಲಾ, ಅದಕ್ಕೆ ದೇವರು ಅಂತ ಹೆಸರಿಟ್ರೆ ಬೇಡ ಅನ್ನಲ್ವೇನೋ.. ಅದನ್ನ ತೋರಿಸ್ತೀವಿ, ಅದರ ಕಡೆಗೆ ಹೊಗೋ ದಾರಿ ತೋರಿಸ್ತೀವಿ ಅನ್ನೋರು ಸಹಜವಾಗೇ ಉಳಿದೆಲ್ಲಾ ಗುರುಗಳಿಗಿಂತ ಗ್ರೇಟ್ ಅನ್ನಿಸ್ತಾರೆ..ಯಾಕಂದ್ರೆ ಉಳಿದವರು ನಮಗೆ ದೂರದಲ್ಲಿ ಕಾಣೋದರ ಎಡೆಗೆ ಕಳಿಸಬಹುದು.. ಆದ್ರೆ ಇವರು ಕಾಣದ್ದನ್ನಲ್ವಾ ತೋರಿಸೋದು..!

ಅಂದ್ಹಾಗೆ ದೇವರು ಅಂದ್ರೆ ಏನು..? ನಮ್ಮಂತ ಜನಸಾಮಾನ್ಯರ ಭಾವನೆಯಲ್ಲಿ ದೇವರು ಅಂದ್ರೆ ಕಷ್ಟಗಳನ್ನ ನೀಗೋನು. ದುಃಖ ನಿವಾರಕ. ಶಕ್ತಿಯನ್ನ ಕೊಡೋನು.. ಹಾಗಾದ್ರೆ ಅದು ನಮ್ಮೊಳಗೇ ಇದೆ ಅಲ್ವಾ ? ನೆಮ್ಮದಿ ಮತ್ತು ಖುಶಿನೇ ದೇವರಲ್ವಾ..? ಆ ರೀತಿ ಯೋಚಿಸಿದಾಗಲೆಲ್ಲಾ  ದಿ ಸಿಕ್ರೇಟ್ ಬುಕ್ಕು ನನಗೆ ಗುರುಸ್ಥಾನದಲ್ಲಿ ನಿಲ್ಲತ್ತೆ.. ಆದ್ರೆ ಓದೋದಕ್ಕಿಂತ ಕೇಳಿಸಿಕೊಳ್ಳೋದು, ಅನುಭವಿಸೋದು ಹೆಚ್ಚು ಕಾಲ ಮನಸಲ್ಲಿರತ್ತೆ.. ಹಂಗಾಗಿ ನೆಮ್ಮದಿಯಿಂದಿರೋದರ ಸಿಕ್ರೇಟ್ ಕೂಡಾ ಯಾರಾದ್ರೂ ಹೇಳಿದ್ರೆ ಖುಶಿ.. ಅದು ಗುರು ರೂಪ ಅಲ್ವಾ..?

ನಮ್ಮೊಳಗೇ ಇರೋ ನೆಮ್ಮದಿಯನ್ನ ಖುಶಿಯನ್ನ ಜಾಗೃತಗೊಳಿಸಿಕೊಂಡ್ರೆ ಸಾಕು ಅಂತ ಮೊದಲು ಅನ್ಸತ್ತೆ.. ನಂತ್ರಾ ನಮ್ಮೊಳಗೆ ಹುದುಗಿರೋ ಅದೆಷ್ಟೋ ಶಕ್ತಿಗಳನ್ನ ಜಾಗೃತಗೊಳಿಸಬೇಕು ಅನ್ನಿಸಲ್ವಾ..? ಅದಕ್ಕೆಲ್ಲಾ ಕಠೋರ ಪ್ರಯತ್ನ ಬೇಕು.. ಗುರುವಾದವನು ಆ ಹಂತದಲ್ಲಿರೋ ವ್ಯಕ್ತಿ.. ಅವನು ಕಾಠಿಣ್ಯದ ತಪಸ್ಸು ಮಾಡಿ ತನ್ನೊಳಗಿನ ಶಕ್ತಿಯನ್ನ ಜಾಗೃತಗೊಳಿಸಿಕೊಳ್ತಾನೆ.. ಅದಕ್ಕೆ ಯಾವುದೇ ಅಡೆತಡೆಗಳಿರ್ಬಾರ್ದು ಅಂತ ವಯಕ್ತಿಕವಾದ ಸಂಸಾರದಿಂದ ದೂರ ಇರೋದು.. ಇನ್ನು ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಗಳೆಲ್ಲಾ ಸಂತಸವನ್ನ ಗೆಲ್ಲುವಾಗಲೇ ಮರೆಯಾಗಿಬಿಟ್ಟಿರತ್ತೆ..
ಕೆಲವರಿಗೆ ಕಾಮ ಅನ್ನೋದು ಸಹಜ ಅನ್ಸತ್ತೆ.. ಅದರಲ್ಲೇ ಖುಶಿ ಇರೋದು ಅನ್ನಬಹುದು..ಅಪ್ಕೋರ್ಸ್ ಎರಡುಜೀವಗಳು  ಬೆಸೆದು ಪೃಕೃತಿಯಾಗೋದು ಅದ್ಭುತ.. ಆದ್ರೆ ಅದು ಎರಡು ದೇಹಗಳನ್ನಲ್ಲಾ, ಎರಡುಜೀವಗಳನ್ನ ಬೆಸೆಯೋ ಥರ ಇರ್ಬೇಕು.. ಅಷ್ಟು ಅದ್ಭುತವಾದ ಅನುಭವ ಆದ್ರೆ ಅದೂ ಖುಶಿನೇ.. ಅದೂ ದೇವರೆ.. ಆದ್ರೆ ಅದು ಜಸ್ಟ್ ಕಾಮವಲ್ವೇನೋ, ಮನದ ಶೃಂಗಾರವೇನೋ ಅಂತ ನನಗೆ ಅನ್ಸತ್ತೆ..  ಎನಿ ಹೌ , ಎಲ್ಲವನ್ನೂ ಅನುಭವಿಸಬೇಕು.. ಯಾವುದರೆಡೆಗೂ ಕುತೂಹಲ ಆಸೆ ಉಳಿಯಬಾರದು ಅನ್ನೋ ಓಶೋ ಅಭಿಪ್ರಾಯದಲ್ಲೂ ಕೊನೆಗೆ ಸಿಗೋದು ತೃಪ್ತಿನೇ.. ಒಟ್ಟಿನಲ್ಲಿ ತೃಪ್ತಿ ಅನ್ನೋದು ದೇವರು..
ಓಶೋನ ದಾರಿಯಲ್ಲಿ ಹೊಗೋ ಧೈರ್ಯ ಎಲ್ಲರಿಗೂ ಇರಲ್ಲ.. ಅಲ್ಲಿ ಜನ ಸೇರೋದು ಕಷ್ಟ.. ಆದ್ರೆ ಕಾವಿತೊಟ್ಟು ದೇವ ಭಜನೆ ಮಾಡಿದ್ರೆ, ಯಾರಿಗೂ ಈ ದಾರಿಯಲ್ಲಿ ಮುಜುಗರವಿರಲ್ಲ .. ಇದರಲ್ಲೂ ಒಂದು ರೀತಿಯ ನೆಮ್ಮದಿಯ ಭಾವ ಇದೆ.. ಮಂತ್ರಗಳು ಅರ್ಥವೇ ಆಗದಿದ್ರೂ, ಅಂತರಂಗ ಮಿಡಿಯುತ್ತೆ.. ಮನಸು ಮಾತಾಡತ್ತೆ..

ಸಹಸ್ರಾರು ಜನರಿಗೆ ಮಾರ್ಗದರ್ಷಕನಾಗೋ ಗುರುವಿಗೆ ಕಟ್ಟುಪಾಡುಗಳಿರ್ಲೇಬೇಕು.. ಆತ ಸಿಡುಕನಾಗಿದ್ದು ಸಿಟ್ಟು ಒಳ್ಳೆಯದಲ್ಲ ಅಂದ್ರೆ ಸಿಗರೇಟ್ ಪ್ಯಾಕಿನ ಮೇಲೆ ಇಂಜೂರಿಯಸ್ ಟು ಹೆಲ್ತ್ ಅಂತ ಇದ್ಹಾಗೆ ಆಗೋದು.. ಬೇರೆಯವರಿಗೆ ಕಾಮ ಕ್ಷಣಿಕ ಮೋಹ ಕ್ಷಣಿಕ ಅನ್ನೋನು ಮೊದಲು ಅದನ್ನ ತಾನು ಗೆಲ್ಲಬೇಕು.. ಅವನು ಮೋಕ್ಷದೆಡೆಗೆ ಮುಂದಿನ ಹೆಜ್ಜೆ ಇಡದೆ ಹಿಂದಿರುವ ಜನಸಮೋಹಕ್ಕೆ ದಾರಿ ತೋರಲಾರ.. ನಡೆಯೋದಾರಿಯಲ್ಲಿ ನಿಂತು ಎಲ್ಲರಿಗೂ ಬೆಳಕು ತೊರೋದಕ್ಕಾಗಲ್ಲ .. ಮುಂದೆ ಮುಂದೆ ಹೋಗಬೇಕು.. ಜ್ಞಾನದ ಬೆಳಕನ್ನ ಚೆಲ್ಲುತ್ತ ನಡೆದರೆ ಸಾಕು ಜನ ಹಿಂಬಾಲಿಸಿಬರೋದಕ್ಕೆ.. ನನಗೆ ನಾನೊಬ್ಬ ನಡೆದರೆ ಸಾಕು.. ನನಗೆ ಮುಕ್ತಿಪಥದ ಗುರುತಿದೆ.. ನಾನು ಹೋಗ್ತೀನಿ ಅನ್ನೋನು ಗುರು ಆಗಲ್ಲಾ.. ನಾನು ನಡೀತಿರೋ ದಾರಿ ಸುಂದರವಾಗಿದೆ.. ಅದರ ಕೊನೆಯಲ್ಲಿ ಅದ್ಭುತವಾಗಿದ್ದೇನೋ ಇದೆ ಅನ್ನೋದನ್ನ ತಿಳಿಸಿ ದಾರಿ ತೋರುವವನು ಗುರು.. ಒಂದರ್ಥದಲ್ಲಿ ಅವನು ಲೀಡರ್..

ನಮಗೆ ಮೋಕ್ಷ ಅನ್ನೋದೆಲ್ಲಾ ಅರ್ಥವಾಗಲ್ಲ ..  ನಿತ್ಯಬದುಕು ನೆಮ್ಮದಿಯಿಂದ ಇದ್ರೆ ಸಾಕು ಅನ್ನೋ ಜನ ಹೆಚ್ಚು.. ಅಂಥವರಿಗೆಲ್ಲಾ ಗುರು ನಿಂತಲ್ಲೇ ದೀಪ ತೋರಿಸಬಹುದು.. ಅಂಥ ಗುರು ಸಂಸಾರಸ್ಥನಾಗಿದ್ದ ಮಾತ್ರಕ್ಕೆ ಗುರು ಅಂತ ಹೇಳಕಾಗಲ್ಲಾ ಅಂತೇನೂ ಇಲ್ಲ.. ಆದ್ರೆ ವೈರಾಗ್ಯದ ಸಂಕೇತವಾಗಿರೋ ಕಾವಿಯನ್ನ ತೊಟ್ಟಿ ಕಾಮನೆಗಳನ್ನ ಗೆಲ್ಲಲಾಗದಿದ್ರೆ ಅದು ತಪ್ಪಾಗತ್ತೆ..

ನಿತ್ಯಾನಂದ ಸ್ವಾಮಿಗೆ ಗುರುಸ್ಥಾನವನ್ನ ಕೊಡೋದಕ್ಕೆ ಜನ ಹಿನ್ನಡೆಯೋದೂ ಅದಕ್ಕೇ.. ಹಾಗಾದ್ರೆ ಆ ಮನುಷ್ಯ ಕಾವಿಯನ್ನ ತೊಡದೇ ತನ್ನದೇ ಆದ ಸಂಸಾರವನ್ನ ಇಟ್ಕೊಂಡು ಜ್ಞಾನಭೋದನೆ ಮಾಡಿದ್ರೆ, ಆಗ್ತಿತ್ತಲ್ವಾ..? ಅನ್ನೋ ಯೋಚನೆಬರತ್ತೆ.. ಆದ್ರೆ ಕಾವಿಗೆ ಜನರನ್ನ ಒಂದು ಕಡೆಸೇರಿಸೋ ಶಕ್ತಿ ಇದೆ , ಕಾವಿ ತೊಟ್ಟವರು ಮಾತಾಡಿದ್ರೆ ಪ್ರವಚನ ಉಳಿದವರದ್ದು ಭಾಷಣ.. ಭಾಷಣ ಪ್ರವಚನದ ಕಟ್ಟಿನೊಳಗೆ ಬರಬೇಕು ಅಂದ್ರೆ, ಮಾತನಾಡುವವನಿಗೆ ಒಂದಿಷ್ಟು ಕಟ್ಟುಪಾಡುಗಳಿರಲೇಬೇಕು.. ಭಕ್ತಿ ಹುಟ್ಟಬೇಕು.. ಭಾವನೆ ಬೆಸೆಯಬೇಕು..

ನಾನು ದೇವರೆಡೆಗೆ ನಡೆಯೋ ದಾರಿ ತೋರಿಸೋ ಗುರುಗಳನ್ನ ಮೊಟ್ಟ ಮೊದಲು ನೋಡಿದ್ದು ಪ್ರೈಮರಿ ಸ್ಕೂಲಲ್ಲಿ... ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ನಮ್ಮ ಶಾಲೆಗೆ ಬಂದಿದ್ದರು.. ನಿಜ ಹೇಳ್ತೀನಿ , ಶಾಲೆಗೆ ಇನ್ಸ್ಪೆಕ್ಟ್ರ್ ಬಂದಾಗ ಭಯಾ ಆಗತ್ತಲ್ಲಾ ಹಾಗೇ ಆಗಿತ್ತು ಅವರನ್ನ ನೋಡಿದಾಗ.. ಆದ್ರೆ ಅವರು ನಮ್ಮನ್ನ ಪರೀಕ್ಷಿಸಲ್ಲಾ ಅನ್ನೋದೊಂದೇ ಭಾವ ನಿಧಾನವಾಗಿ ಆ ಪರಿಸರವನ್ನ ಸ್ವೀಕರಿಸೋದಕ್ಕೆ ಕಾರಣವಾಯ್ತು.. ಇನ್ನು ಮಾತು ಮಂತ್ರಗಳೆಲ್ಲಾ ಅರ್ಥವಾಗೋ ವಯಸ್ಸಲ್ಲಾ ಅದು.. ಎಲ್ಲರೂ ನಮಸ್ಕರಿಸ್ತಾರೆ.. ನಾನೂ ನಮಸ್ಕರಿಸ್ತೀನಿ.. ಎಲ್ಲರೂ ಹೇಳೋ ಹಾಗೆ ಅವರು ಹಿತವಚನ ಹೇಳಿದ್ರು.. ನಾನು ತಲೆಹಾಕಿದ್ದೆ.. ಅರ್ಥವಾಗಿರ್ಲಿಲ್ಲ.. ದೇವರಿಗೆ ನಮಸ್ಕರಿಸೋವಾಗ ಏನಾದ್ರೂ ಅರ್ಥವಾಗ್ತಾ ಇತ್ತಾ, ಹಾಗೆ..

ನಂತ್ರಾ ವರದಳ್ಳಿಯ ಶ್ರೀಧರರ ಪಾದುಕೆ ನೋಡಿದ್ದೆ.. ನಡೆದಾಡೋ ದೇವರು ಶಿವಕುಮಾರಸ್ವಾಮಿಯ ಬಗ್ಗೆ ಕೇಳಿದ್ದೆ, ಬಾಲಗಂಗಾದರ ನಾಥರು, ಪೇಜಾವರ ಶ್ರೀಗಳು ಇವರ ಬಗ್ಗೆ ಎಲ್ಲಾ ಒಂದೊಂದು ಭಾವ.. ಆದ್ರೆ ಅವರ್ಯಾರರೂ ನನಗೆ ದಾರಿದೀಪವಾಗ್ಲಿಲ್ಲ.. ಮೋಸ್ಟ್ಲಿ ಅವರನ್ನ ನಾನು ಹತ್ತಿರದಿಂದ ನೋಡಿಲ್ಲವಲ್ಲ ಅದಕ್ಕಿರ್ಬೇಕು..

ಈಗ ಸಧ್ಯಕ್ಕೆ ಗುರುಗಳು ಅಂದ್ರೆ ನನಗೆ ನೆನಪಾಗೋದು ರಾಘವೇಶ್ವರ ಸ್ವಾಮಿಗಳು.. ಅವರಿಂದ ಕಲಿಯೋದು ತುಂಬಾ ಇದೆ ಅಂತ ನನಗೆ ಯಾವತ್ತೂ ಅನ್ಸತ್ತೆ.. ರಾಮ ಅಂದ್ರೆ ಹೆಂಡತಿಯನ್ನ ಕಾಡಿಗಟ್ಟಿದ್ದೇ ನೆನಪಾಗೋ ನನಗೂ , ಅವನಲ್ಲಿಯ ಒಳ್ಳೆಯತನ ಕಾಣಿಸತ್ತೆ.. ರಾವಣ ಸೀತೆಯನ್ನ ಹೊತ್ತೊಯ್ದನಾದ್ರೂ ಆಕೆಯ ಇಚ್ಛೆಯ ವಿರುದ್ಧವಾಗಿ ಬಲಾತ್ಕಾರ ಮಾಡ್ಲಿಲ್ವಲ್ಲಾ, ಅವನಲ್ಲೂ ಒಳ್ಳೆಯತನ ಇದೆ ಅನ್ನೋ ನನಗೆ ಕೆಟ್ಟದ್ದು   ಒಳ್ಳೆಯದ್ದನ್ನ ಮರೆಮಾಚಿಬಿಡಬಹುದು ಅನ್ನೋದು ಗೊತ್ತಾಗಿದೆ.. ಅದಕ್ಕಿಂತಾ ಹೆಚ್ಚಾಗಿ ನನಗೆ ರಾಮ ಮತ್ತು ರಾವಣ ಅನ್ನೋದು ವ್ಯಕ್ತಿಯಲ್ಲ ವ್ಯಕ್ತಿತ್ವ, ಒಳ್ಳೆಯದು ಕೆಟ್ಟದ್ದು ಅನ್ನೋದು ಎಲ್ಲರಲ್ಲು ಇರತ್ತೆ,  ಒಳ್ಳೆಯತನ ಜಾಸ್ತಿ ಇದ್ರೆ ರಾಮನಾಗ್ತಾನೆ, ಕೆಟ್ಟದ್ದು ಹೆಚ್ಚಿದ್ರೆ ರಾವಣ ಅನ್ನಿಸಿಕೊಳ್ತಾನೆ ಅನ್ನೋದು ಅರ್ಥವಾಗಿದೆ.. ಅದೆಲ್ಲಾ ವಿಷಯಗಳು ಹಾಗಿರ್ಲಿ.. ರಾಘವೇಶ್ವರರ ಶಾಂತ ಚಿತ್ತ.. ಮುಗುಳ್ನಗು.. ಸಂತಸದ ಭಾವ ಪ್ರೀತಿ... ವಾತ್ಸಲ್ಯ .. ಇವೆಲ್ಲಾ ಎಂಥವನನ್ನಾದ್ರೂ ಖುಶಿಪಡಿಸುತ್ತೆ..

ಮೋಕ್ಷದ ಗುರಿ ಇಲ್ಲದಿದ್ದರೂ ಸರಿಯಾದ ಹಾದಿಯಲ್ಲಿ ಚಿತ್ತವನ್ನಿಡೋದಕ್ಕೆ ಗುರುಬೇಕು... ಗುರುಹಿರಿಯರ ಅನುಭವ ಬೇಕು..

Saturday, September 24, 2011

ಪ್ರೀತಿಗ್ಯಾಕೆ ಇಂಥಾ ಪರೀಕ್ಷೆ..?

ನಿನ್ನ ಪ್ರೇಮದ ಪರಿಯ 
 ನಾನರಿಯೆ ಕನಕಾಂಗಿ
 ನಿನ್ನೊಳಿದೆ ನನ್ನ ಮನಸು
ಅವಳ ಪ್ರೇಮದ ಪರಿ ಅವನಿಗೆ ನಿಜವಾಗಿಯೂ ಅರ್ಥವಾಗಿಲ್ವಾ..? ಅಥವಾ ಅವಳೊಳಗಿನ ಮನಸನ್ನ ಹೊರಗೆ ತರೋದಕ್ಕೇ ಸಾಧ್ಯವಾಗ್ಲಿಲ್ವಾ..? ಒಮ್ಮೆ ಅನ್ನಿಸಿಬಿಟ್ಟಿತ್ತು ಪ್ರೀತಿ ಅಂದ್ರೆ ಅದು.. ಅಲ್ಲಿ ಅದರಹೊರತಾಗಿ ಎಲ್ಲವೂ ಗೌಣ.. ಅದೊಂದು ಜೀವ ಜೊತೆಗಿಲ್ಲದಿದ್ದರೆ ಬೆಳಗಿನಲಿ ಚಂದವಿಲ್ಲ, ನೋಟದಲ್ಲಿ ಅಂದವಿಲ್ಲ .. ತಿಂಡಿ ತೀರ್ಥದಲ್ಲಿ ಧ್ಯಾನವಿಲ್ಲ.. ಕತ್ತಲಲಿ ಕರೆದಂತಾಗತ್ತೆ.. ಮೌನದಲಿ ನೆರಳು ಸರಿದಾಡಿದಂತಾಗತ್ತೆ.. ಅಲ್ಲಿಗೆ ಅದು ಎರಡು ಜೀವವಲ್ಲವೇ ಅಲ್ಲ..



ಅವಳೆಲ್ಲೋ ಹುಟ್ಟಿದವಳು ಇವನೆಲ್ಲೋ ಬೆಳೆದವನು.. ಒಂದು ತಟ್ಟೆಯಲಿ ತಿಂದವರಲ್ಲಾ, ಒಂದೇ ಅಂಗಳದಲಿ ಆಡಿದವರಲ್ಲಾ.. ಇಬ್ಬರ ಕುಟುಂಬದ ರೀತಿ ನೀತಿಗಳೇ ಬೇರೆ.. ಸಂಸ್ಕಾರ ಬೇರೆ. ಸಂಬಂಧಗಳು ಬೇರೆ.. ಕಡೆಗೆ ನಡೆದ ದಾರಿಯೂ ಬೇರೆ.. ಅದ್ಯಾವ ತಿರುವಿನಲ್ಲಿ ಅವನು ಅವಳನ್ನ ನೋಡಿದ್ನೋ ಗೊತ್ತಿಲ್ಲ, ಕಣ್ಣುಗಳು ಕಲೆತಿವೆ.. ಮನಸುಗಳು ಬೆರೆತಿವೆ.. ಕಾಣದ ದೇವರು ಹರಸದಿದ್ದರೆ ಕಂಡಕ್ಷಣದಲ್ಲಿ ಎರಡು ಜೀವಗಳು ಅಂಥದ್ದೊಂದು ಪ್ರೇಮದ ಸೆಲೆಯಲ್ಲಿ ಸಿಲುಕೋದಕ್ಕೆ ಸಾಧ್ಯ ಇದ್ಯಾ..? ಅವರಿಬ್ಬರೂ ಮಾತೇ ಆಡದೆ ಮನಸುಕೊಟ್ಟಿದ್ರು.. ಅಲ್ಲಿ ಜಾತಿಯಿಲ್ಲ.. ಜಾತಕವಿಲ್ಲ ಕಡೆಗೆ ಹೆಸರೂ ಗೊತ್ತಿಲ್ಲ.. ಹೃದಯಬಡಿತ ಅಷ್ಟೇ ಕೇಳಿಸಿದ್ದು.. ಮನದ ಮಿಡಿತವಷ್ಟೇ ಮೊಳಗಿದ್ದು..


ಅವನು ಹಾಸನದವನು ಅವಳು ಅಲ್ಲೇ ಹತ್ತಿರದ ಹಳ್ಳಿಯವಳು.. ಅವಳು ಓದಿದ್ದು ಕಡಿಮೆ , ಇವನು ಡಿಪ್ಲೋಮಾ ಮಾಡೋದಕ್ಕೆ ಹೊರಟಿದ್ದ.. ಓದು ಮುಗಿಸಿ ಬರೋವರೆಗೂ ಅವನ ಮನಸಲ್ಲಿದ್ದವಳು ಅವಳೊಬ್ಬಳೇ.. ಧೈವೇಚ್ಛೆ ನೋಡಿ, ಆ ಮನೆಯಲ್ಲಿದ್ದ ಹುಡುಗಿಗೆ ಯಾವತ್ತೋ ಮದುವೆ ಆಗ್ಬಿಡ್ತಿತ್ತು, ಆದ್ರೆ ಗುರುಬಲ ಬಂದಿದ್ದು ಅವನು ಬಂದಮೇಲೆ.. ಆಗ ಇಬ್ಬರೂ ಮತ್ತೆ ಸಿಕ್ಕಿದ್ದಾರೆ.. ಪ್ರೀತಿಯ ಸಂದೇಶ ಮಾತಲ್ಲಿ ಹೊರಬಂದಿದ್ದು ಆಗ.. ಇಬ್ಬರಿಗೂ ಇಷ್ಟ.. ಆದ್ರೆ ಕಷ್ಟ.. ಯಾಕಂದ್ರೆ ಜಾತಿ ಬೇರೆ.. ಮನೆಯಲ್ಲಿ ಇವರಿಬ್ಬರ ಸಂಬಂಧವನ್ನ ಜೋಡಿಸೋ ಚಾನ್ಸೇ ಇಲ್ಲ.. ಹರಸಿದರೆ ಅದೇ ಹೆಚ್ಚು.. ಆದ್ರೂ ಪ್ರೀತಿ ಕುರುಡು ನೋಡಿ ಪರಸ್ಪರ ಅದೆಂಥಾ ಟೈಮಲ್ಲೂ ಜೊತೆ ಯಾಗೋ ಶಪಥ ಮಾಡೇ ಬಿಟ್ರು.. ನಂತ್ರಾ ಎಲ್ಲರ ವಿರೋಧದಲ್ಲೂ ಮದುವೆ ಫಿಕ್ಸ್ ಆಯ್ತು.. ಕಡೆಗೆ ಹೆತ್ತವರು ಭಾರವಾದ ಹೃದಯದಲ್ಲೇ ಆಶಿರ್ವಾದ ಮಾಡಿದ್ರು.. ಆದ್ರೆ ಮದುವೆ ಊರ ಅಂಗಳದ ಚಪ್ಪರದಲ್ಲಿ ಅದ್ಧೂರಿಯಾಗಂತೂ ನಡೆದಿಲ್ಲ.. ಧರ್ಮಸ್ಥಳದ ಮಂಜುನಾಥ ಈ ಮದುವೆಗೆ ಸಾಕ್ಷಿಯಾದ.. ಹರಸಿ ಹೃದಯದಲ್ಲಿ ನೆಲೆನಿಂತ ಹರನಾದ.. !


 ಆ ಭಗವಂತನ ಆಶೀರ್ವಾದದೊಂದಿದೆ ಬದುಕನಾರಂಭಿಸಿದ ಆ ಜೋಡಿ ನೆಲೆ ಕಂಡುಕೊಂಡಿದ್ದು ಬೆಂಗಳೂರಿನಲ್ಲಿ.. ಡಿಪ್ಲೊಮಾ ಮಾಡ್ಕೊಂಡಿದ್ದ ಹುಡುಗನಿಗೊಂದು ಕೆಲಸಾ ಸಿಕ್ತು.. ಬರೋ ಕಾಸು ಇವರಿಬ್ಬರ ಬದುಕಿಗೆ ಸಾಕಾಗಿತ್ತು..ಅಷ್ಟಕ್ಕೂ ಹೊತ್ತು ಅನ್ನವಿಲ್ಲದೆ ಬರಿ ತುತ್ತು ತಿಂದು ಬದುಕಿದ ದಿನಗಳನ್ನೂ ಕಂಡ ಜೀವ ಅದು.. ಬಡತನ ದುಃಖವಾಗಿರ್ಲಿಲ್ಲ.. ಬದುಕಿನ ಕತ್ತಲಲ್ಲಿ ಬಾಂಧವ್ಯದ ಹಣತೆಹಚ್ಚಿ , ತಂಗಾಳಿಯ ಹೊದಿಕೆಯಲ್ಲಿ , ಶೃಂಗಾರದ ಕಾವ್ಯ ಬರೆದು ಬೆಚ್ಚಗಾದ ಜೀವಗಳಿಗೆ ಕಷ್ಟ ಕಣ್ಣೀರಾಗ್ಲಿಲ್ಲ.. ದಿನಗಳು ಹಾಗೇ ಕಳೆದಿದ್ವು.. ಅವಳ ಕಣ್ಣಾಲೆಯಲಿ ಮೂಡಿದ ಚಿತ್ತಾರಕ್ಕೆ ಇವನು ಬಣ್ಣ ತುಂಬ್ತಿದ್ದ, ಇವನ ತುಟಿಯಂಚಿನ ಮಾತಿಗೆ ಇವಳು ಶಬ್ದವಾಗ್ತಾ ಇದ್ಲು.. ನಡುವೆ ಮತ್ತೊಂದು ಸಂಭ್ರಮ ..


ಆಕೆ ಹೆರಿಗೆ ಕೋಣೆಯಲ್ಲಿ ಅಮ್ಮಾ ಅಂತ ನರಳಾಡ್ತಾ ಇದ್ರೆ ಇವನು ಒದ್ದಾಡ್ತಾ ಇದ್ದ.. ಆಕೆಯ ಬೇನೆ ಅವನ ನೋವಾಗಿತ್ತು.. ಕಟ್ಟಿದ್ದ ಕೈ ಮುಷ್ಠಿ ಸಡಿಲಾಗೋ ಹೊತ್ತಿಗೆ ಕಂದನ ಕೂಗು.. ಮನೋಜ ಹುಟ್ಟಿದ್ದ.. ಆ ಮಗುವನ್ನ ಎತ್ತಿ ಮುದ್ದಾಡೋ ಮೊದಲು  ಬೊಗಸೆಯಲ್ಲಿ ಅವಳ ಮುಖವನ್ನಿಟ್ಟು ಹಣೆಗೊಂದು ಹೂಮುತ್ತನಿಟ್ಟವನ ಕಣ್ಣಲ್ಲಿ ಧನ್ಯತೆಯ ಭಾವವಿತ್ತು..! ಆಕೆ ಮೆಲ್ಲಗೆ ಹೊರಳಿದಾಗ ಇವನ ಕೈಯ್ಯಲ್ಲಿ ಮಗು.. ಅವನ ಕೈಯ್ಯಲ್ಲಿ ಬೆಚ್ಚಗೆ ಮಲಗಿದ್ದ ಕಂದನ್ನ ಕಂಡಾಗ ಆಕೆಯ ಕಣ್ಣಲ್ಲಿ ಸಂತಸದ ಕಂಬನಿ.. ಹೀಗೆ ಶುರುವಾಗಿತ್ತು ಪ್ರೇಮಿಗಳ ಬದುಕಿನ ಮತ್ತೊಂದು ಯಾನ..!


ಮಗುವಿನ ಆಟ ನೋಟ ತುಂಟಾಟದಲ್ಲಿ ಮೂರು ವರ್ಷಕಳೆದಿದ್ದೇ ಗೊತ್ತಾಗಿಲ್ಲ.. ಆ ನಂತ್ರ ಶುರುವಾಗೋದು ದೊಡ್ಡ ದೊಡ್ಡ ಜವಾಬ್ದಾರಿಗಳ ಸಾಲು.. ಅವನ ಸಂಬಳದಲ್ಲಿ ಎಲ್ಲವೂ ಸರಾಗವಾಗಿ ಮುಗಿಯಲ್ಲ ಅಂತ ಅನ್ನಿಸಿ ಆಕೆ ಮೊಟ್ಟಮೊದಲಬಾರಿ ಹೊರಗೆ ದುಡಿಯೋ ಯೋಚನೆ ಮಾಡಿದ್ಲು.. ಅವನೂ ಅದಕ್ಕೆ ಒಪ್ಪಿದ್ದ.. ದುಡಿಮೆ ಪ್ರೀತಿಗೆ ಕಡಿವಾಣಹಾಕಲಿಲ್ಲ.. ಜೀವನದ ಜವಾಬ್ದಾರಿ ಸಂಬಂಧದ ಸಮಯವನ್ನ ಸಾಯಿಸಲಿಲ್ಲ.. ಬೆಳದಿಂಗಳಲ್ಲಿ ಇಬ್ಬರೂ ಕೈ ಜೋಡಿಸಿ ಕುಳಿತಿದ್ರೆ ಕಣ್ಣಲ್ಲಿ ನಕ್ಷತ್ರ ಕಾಣ್ತಾ ಇತ್ತು.. ನಡೆಯಲ್ಲಿ ಆನಂದ ಇರ್ತಿತ್ತು.. ನಗು ನಗು.. ಅದೊಂದು ಸುಂದರ ಸಂಬಂಧಕ್ಕೆ ಸಾವಿರ ವರ್ಷ ಆಯಸ್ಸಿದ್ರೂ ಇಷ್ಟೇ ಮಧುರವಾಗಿರ್ತಿತ್ತೇನೋ.. ಕಾಣದ ಕಣ್ಣುಗಳೂ ಕಥೆ ಹೇಳ್ತಿದ್ವೇನೋ.. ನಡುಗೋ ಕೈಗಳು ಹಿತವೆನಿಸುವವರೆಗೂ ಜೊತೆಯಾಗುವಂತ ಪ್ರೀತಿ ಅವರದ್ದು.. ಅಂಥ ಪ್ರಿತಿಗೆ ಆಯಸ್ಸಿಲ್ಲ..!


ಅವಳಿಗೆ ಅದೇನು ಕಾಯಿಲೆ ಇತ್ತು ಅನ್ನೋದು ನನಗೂ ಗೊತ್ತಾಗ್ಲಿಲ್ಲ.. ಒಟ್ಟಲ್ಲಿ ಗಂಟಲಲ್ಲಿ ಎದ್ದ ಚಿಕ್ಕದೊಂದು ಗಂಟು ಬದುಕಿನ ನಂಟನ್ನೇ ಕಡಿದುಬಿಡೋ ಮಟ್ಟಕ್ಕೆ ಹೋಯ್ತು.. ಆ ಗಂಟಿಗೆ ಅಂಟಿಕೊಂಡು ಬಂದ ಗಂಟಲ ನೋವು ಮನೆಮದ್ದಿಗೆ ವಾಸಿಯಾಯ್ತು..ಆದ್ರೆ ಗಂಟು ಹೋಗ್ಲಿಲ್ಲಾ.. ಮತ್ತೆ ಅದು ಕಾಡಿದಾಗ ಮದ್ದು , ಬಾಡಿದಾಗ ಮೌನ.. ಅವಳು ಆ ಕಷ್ಟವನ್ನ ಇವನಿಗೆ ಹೇಳಲೇ ಇಲ್ಲ.. ಆದ್ರೆ ಇವನಿಗೆ ಆಕೆ ಕೆಲವಷ್ಟನ್ನ ಹೇಳಬೇಕಾಗಿರ್ಲಿಲ್ಲ.. ಹೆಂಡತಿಯನ್ನ ಆಸ್ಪತ್ರೆಗೆ ಕರ್ಕೊಂಡ್ಹೋಗಿದ್ದ.. ಅವರು ಆ ದಂಪತಿಯ ಬದುಕಿಗೆ ಬಹುದೊಡ್ಡ ಶಾಕ್ ಕೊಟ್ಟಿದ್ರು.. ಅದು ಗಂಟಲ್ಲಾ ಗಡ್ಡೆ.. ತಕ್ಷಣ ಆಪರೇಶನ್ ಆಗ್ಬೇಕು..
ಆಪರೇಶನ್ ಆಗ್ತಿತ್ತು ದುಡ್ಡೊಂದಿದ್ರೆ.. ಆದ್ರೆ ಇವರತ್ರಾ ಇರೋ ಚಿಕ್ಕಸೇವಿಂಗಲ್ಲಿ ಕೆಲಸಾ ಆಗಲ್ಲಾ.. ಆಗ್ಲೇ ಹೆತ್ತವರಿಗೆ ಸಂಬಂಧಿಗಳಿಗೆ ವಿಶಯ ತಿಳಿಸಿ ಸಹಾಯ ಕೇಳಿದ್ರೆ ಆ ರುಣವನ್ನ ಕೈಲಾದ ಮಟ್ಟಿಗೆ ತೀರಿಸೋದಕ್ಕೆ ಅವಳು ಬದುಕಿರ್ತಾ ಇದ್ಲು..ಆದ್ರೆ ಆಕೆಗೆ ಸ್ವಾಭಿಮಾನ,, ಯಾರ ಹತ್ರಾನೋ ಕೈಚಾಚೋದಕ್ಕೆ ಅವಳೊಪ್ಪಲಿಲ್ಲ.. ಅವನು ಎಲ್ಲಕಡೆ ಹಣಾ ಹೊಂದಿಸೋ ಪ್ರಯತ್ನದಲ್ಲುಳಿದ.. ಆ ಟೈಮಲ್ಲೇ ಇವಳ ಗಂಟಲಿನ ಗಡ್ಡೆ ಕಣ್ಣಿನ ದೃಷ್ಟಿಯನ್ನೂ ಕಿತ್ಕೊಂಡಿತ್ತು.. ಆದ್ರೂ ಆಪರೇಶನ್ನಿನ ಹಣ ಸೇರಿರ್ಲಿಲ್ಲ.. ಹಗಲೂ ರಾತ್ರಿ ಕಷ್ಟ ಪಡೋ ಗಂಡನ್ನ ನೋಡಿ ಆಕೆ ಅಂತಿಮ ನಿರ್ಧಾರಕ್ಕೆ ಬಂದಿದ್ಲು.. ತನ್ನ ಆಪರೇಶನ್ನಿಗೆ ಕರ್ಚುಮಾಡೋ ಹಣವನ್ನ   ಉಳಿಸಿದ್ರೆ ಮಗುವಿನ ಭವಿಶ್ಯಕ್ಕಾಗತ್ತೆ ಅಂತ ಯೋಚಿಸಿದ್ಲು.. ತನ್ನವನ ಪರದಾಟಕ್ಕೆ ತೆರೆ ಎಳೆದುಬಿಡ್ತೀನಿ ಅಂದ್ಕೊಂಡು ಅವತ್ತೊಂದು ದಿನ ಸಾವನ್ನ ಕೈಬೀಸಿ ಕರೆದುಬಿಟ್ಲು..


ಮನೆಗೆ ಬಂದವನಿಗೆ  ಭರಿಸಲಾಗದ ಆಘಾತ.. ಪ್ರಾಣಕ್ಕಿಂತ ಹೆಚ್ಚಾಗಿ ಪ್ರಿತಿಸ್ತಾ ಇದ್ದವಳ ಹೆಣದ ಮುಂದೆ ಕೂತು  ಕೊಡಗಟ್ಟಲೆ ಕಣ್ಣೀರಾಕಿದ್ರೂ ದುಃಖ ಹೋಗ್ಲಿಲ್ಲ.. ಪಕ್ಕದಲ್ಲಿದ್ ಮಗನ ನೋಟ್ ಬುಕ್ ತಗೊಂಡು ಬರೆದಿದ್ದು ಒಂದೇ ವಾಕ್ಯ.. ನೀನು ಮೊದಲು ಹೋಗ್ಬಿಟ್ಯಾ..? ನಾನೂ ಬರ್ತೀನಿ.. ಅಂತ ಅಲ್ಲಿಂದ ಎದ್ದವನಿಗೆ ಸ್ಕೂಲಿಗೆ ಹೋಗಿದ್ದ ಮಗ ನೆನಪಾಗ್ಲಿಲ್ಲ.. ಹೆಂಡತಿಯ ಜತೆಗೆ ಅವನಿಗಿದ್ದ ಮನಸಿನ ಸಂಬಂಧವನ್ನ ಮಗನ ಮೇಲಿನ ಪ್ರೀತಿ ಗೆದ್ದಿರ್ಲೇ ಇಲ್ಲ.. ಅವಳಿಗಿಂತ ಜಾಸ್ತಿ ಅವನ ಬದುಕಲ್ಲಿ ಮತ್ತೇನೋ ಇದೆ ಅಂತ ಅನ್ನಿಸಲೇ ಇಲ್ಲ.. ಅವಳ ನೆನಪಲ್ಲೇ ಕತ್ತಿನ ಕುಣಿಕೆಯನ್ನ ಬಿಚ್ಚಿ ಹಾಸಿಗೆಯ ಮೇಲೆ ಮಡದಿಯನ್ನ ಮಲಗಿಸಿದವನು ಅದೇ ಹಗ್ಗದಲ್ಲಿ ಮತ್ತೊಂದು ಕುಣಿಕೆ ಹಾಕಿಬಿಟ್ಟ.. ಅದರೊಳಗೆ ತಲೆ ಇಟ್ಟವನಿಗೆ ಮತ್ತೆ ಅವಳನ್ನ ಸೇರುವ ತವಕವೊಂದೇ ಇತ್ತು.. ಪ್ರೇಮಿಗಳು ಸಾವಿನ ನಂತರದ ಗೊತ್ತಿಲ್ಲದ ಬದುಕಲ್ಲಿ ಮತ್ತೆ ಒಂದಾಗಲು ಹೊರಟುಬಿಟ್ಟಿದ್ವು.. ಇಬ್ಬರು ಬದುಕಿದ್ದು ಒಂದೇ ಬದುಕನ್ನ ಇನ್ನು ಸಾವು ಬೇರೆ ಬೇರೆ ಬರೋದಕ್ಕೆ ಸಾಧ್ಯ ಇದ್ಯಾ..?  ಆ ಹೆಣವನ್ನ ನೋಡಿ ಅತ್ತವಳು ನಾನು.. ಅವರ ಪ್ರೀತಿ ಅದರ ಅಸಹಾಯಕ ರೀತಿ ನನ್ನನ್ನ ಕಾಡಿಬಿಟ್ತು..
ಈ ಪವಿತ್ರ ಪ್ರೇಮದ ಕುಡಿ ಬಾಡದಿರ್ಲಿ.. ಮನೋಜ ಮನೋಜ್ಞವಾಗಿ ಬೆಳೆಯಲಿ.

Saturday, September 10, 2011

ಲೈಫ್ ಇಷ್ಟೇನಾ..?


                     ಮೊನ್ನೆ ನಾವು  ಮಾತಾಡೋವಾಗ ಎಕ್ಸ್ಪೈರೀ ಡೇಟ್ ಬಗ್ಗೆ ಹೇಳ್ತಾ ಇದ್ರು.. ಯಾಕೋ ಅದು ನನ್ನ ಕಿವಿಯಲ್ಲಿ ಗುಯ್ಗುಡ್ತಾನೇ ಇತ್ತು.. ಮಾತು ಮುಗಿಸಿ ಎದ್ದ ಮೇಲೆ ನನ್ನ ತಲೆ ಎಲ್ಲಿಂದ ಎಲ್ಲಿಗೋ ಓಡ್ತಾ ಇತ್ತು.. ಎಲ್ಲದಕ್ಕೂ ಒಂದು ಎಕ್ಸ್ಪೈರಿ ಡೇಟ್ ಇದ್ದೇ ಇರತ್ತಾ.?ಕೇಳಿದ್ದೆ. ಯೆಸ್ ನಾನಂತೂ ಏನ್ ತಗೊಂಡ್ರೂ ಮೊದ್ಲು ನೋಡೋದು ಎಕ್ಸ್ಪೈರಿ ಡೇಟನ್ನಾ ಅಂತ ಯಾರೋ ಅಂದ್ರು.. ಇನ್ನೊಬ್ಬರು ಗುಡ್ ಹೆಬಿಟ್ ಅಂತ ಬೆನ್ನುಚಪ್ಪರಿಸಿದ್ರು.. ನನಗೆ ಮಾತ್ರ ಉತ್ತರ ಸಿಗಲಿಲ್ಲ..

ಹೊಟ್ಟೆಗೆ ಹಾಕೋ ತಿಂಡಿ ತಿನಿಸುಗಳ ಎಕ್ಸಪೈರಿ ಡೇಟ್ ನೋಡ್ತೀವೋ ಇಲ್ವೋ ಮೈಗೆ ಹಚ್ಚೋ ಲೋಶನ್ನಿಂದ ಹಿಡಿದು ಕೂದಲ ಬಣ್ಣದ ತನಕ ಎಲ್ಲದರ ಅವಧಿ ಯಾವತ್ತು ಮುಗಿಯತ್ತೆ ಅನ್ನೋದನ್ನ ಎಲ್ಲರೂ ನೋಡ್ಕೊಂಡೇ ನೋಡ್ಕೋತಾರೆ.. ನಮಗೆಲ್ಲಾ ಚಂದ ಇಂಪಾರ್ಟೆಂಟು.. ಹೊರಗಿನಿಂದ ಬಳ್ಕೊಳ್ಳೋ ಬಣ್ಣ ಇಂಪಾರ್ಟೆಂಟು.. ನಾವು..? ನಮ್ಮ ಬದುಕು..? ನಮ್ಮ ಎಕ್ಸ್ಪೈರಿ ಡೇಟ್ ಬಗ್ಗೆ ನಾವ್ಯಾವತ್ತಾದ್ರೂ ಯೋಚಿಸಿದೀವಾ?  ಅಪ್ಕೋರ್ಸ್ ತಮಗೆ ವಯಸ್ಸಾಗ್ತಿದೆ.. ಜಾಸ್ತಿ ಅಂದ್ರೆ ಇನ್ನಿಷ್ಟು ವರ್ಷ ನಾವ್ ಕೆಲಸಾ ಮಾಡ್ಬಹುದು.. ಅಂತೆಲ್ಲಾ ಕೆಲವರು ಯೋಚಿಸಿರ್ತಾರೆ.. ಹೀಗೆ ಮುಂದಾಲೋಚನೆ ಇರೋರು ಬ್ಯಾಂಕ್ಗಳನ್ನ ಬೆಳೆಸ್ತಾರೆ.. ಒಂದಿಷ್ಟು ಸೇವಿಂಗ್ ಅಂತೂ ಆಗೇ ಆಗತ್ತೆ ಬಿಡಿ.. ಆದ್ರೆ ನಮ್ಮ ಎಕ್ಸ್ಪೈರಿ ಡೇಟ್ಗಳನ್ನ ನಿರ್ಧರಿಸೋದ್ಹೇಗೆ..?

ರಾತ್ರಿ ನಿದ್ದೆನೇ ಬರ್ತಿಲ್ಲಾ.. ಯಾಕೋ ಊಟಾನೂ ಅಷ್ಟಾಗಿ ಸೇರಲ್ಲ.. ಕಣ್ಣು ಮಂಜಾಗ್ತಿದೆ.. ಓಡಾಡೋದಕ್ಕೂ ಮೈಲಿ ಶಕ್ತಿನೇ ಇಲ್ಲಾ ..ಇನ್ನು ನಾನು ಜಾಸ್ತಿ ದಿನ ಇರ್ಲಿಕ್ಕಿಲ್ಲಾ ಅಂತ ಹಾಸಿಗೆ ಹಿಡಿದ ಅಜ್ಜಿಗೆ ಅನ್ನಿಸತ್ತೆ.. ಆದ್ರೆ ಆಕೆ ವರ್ಷಗಳಿಂದ ಅದೇ ಸ್ಥಿತಿಯಲ್ಲಿ ಮಲಗಿರ್ತಾಳೆ.. ಅದನ್ನ ಎಕ್ಸ್ಪೈರಿ ಡೇಟ್ ಮುಗಿದ್ಮೇಲೂ ಯೂಸಲ್ಲಿರೋದಕ್ಕೆ ಹೋಲಿಸಬಹು ಅಲ್ವಾ..? ಇನ್ನೊಬ್ಬರಿಗೆ ಡಿಪೆಂಡ್ ಆಗದೆ ಬದುಕಿದ ಕೊನೆಯ ದಿನವನ್ನ ಮನುಷ್ಯರ ಶೆಲ್ಪ್ ಲೈಫ್ ಅನ್ನೋಣಾ.. ಹಾಗಾದ್ರೆ ಭಾವನೆಗಳು ? ಸಂಬಂಧ..? ಅದಕ್ಕೆಲ್ಲಾ ಇಷ್ಟು ಲೈಫ್ ಅಂತಾ ಇಲ್ವಾ...? ಇದೆಯಪ್ಪಾ ನಮ್ಮಿಬ್ಬರ ಪ್ರೀತಿ ಎಕ್ಸ್ಪೈರ್ ಆಗ್ಲಿಲ್ವಾ? ಅಂತ ಕೈ ಕೊಟ್ಟ ಹುಡುಗಿ ನಗ್ ನಗ್ತಾ ಹೇಳ್ತಾಳೆ.. ಹುಡುಗ ಇನ್ನೂ ಎಕ್ಸ್ಪೈರ್ ಆದ ಪ್ರೀತಿಯ ಟಾನಿಕ್ಕನ್ನ ತಗೋತಾ ಗಡ್ಡ ಬೆಳೆಸಿಕೊಂಡಿರ್ತಾನೆ..


ಪ್ರೇಮಿಗಳಲ್ಲಿ ಪ್ರೀತಿ ನಾನಾ ಕಾರಣಕ್ಕೆ ಎಕ್ಸ್ಪೈರ್ ಆಗ್ಬಹುದು.. ಮನೆಯಲ್ಲಿ ಒಪ್ಪಿಗೆ ಇಲ್ಲದೆ ಇರ್ಬಹುದು.. ಅಥವಾ ಅವರದು ಟೈಮ್ ಪಾಸ್ ರಿಲೇಶನ್ನೇ ಆಗಿರ್ಬಹುದು.. ಇಲ್ಲಾ ಹುಡುಗನ ಜೇಬು ಕಾಲಿಯಾದ್ರೆ ಹುಡುಗಿಗೆ ಇವನ ಜೊತೆಗೆ ನನ್ನ ಸಂತಸ ಇಲ್ಲಾ ಅನ್ನಿಸಬಹುದು.. ಅವಳನ್ನ ಉಂಡೆದ್ದಮೇಲೆ ಇವನಿಗೆ ಅವಳು ಸಾಕು ಅನ್ನಿಸಿಬಿಡಬಹುದು.. ಆದ್ರೆ ಇದ್ಯಾವುದರ ಅಡೆತಡೆ ಇಲ್ಲದೆ ಸಾಯದೇ ಬದುಕೋ ಪ್ರೀತಿ ಮದುವೆ ಅನ್ನೋ ಬಾಂಧವ್ಯದೊಳಗೆ ಬಡವಾಗಿಬಿಡೋ ಎಷ್ಟು ಉದಾಹರಣೆಗಳಿಲ್ಲಾ..

ಹದಿಹರಯದಲ್ಲಿ ಹೆತ್ತವರನ್ನ ಬಿಟ್ಟು ಓಡಿಬಂದು ಮದುವೆಯಾಗೋ ಹುಡುಗಿಗೆ ಲೈಫು ಇಷ್ಟೇನೇ ಅಂತ ಅನ್ನಿಸೋದಕ್ಕೆ ಜಾಸ್ತಿ ದಿನ ಬೇಡಾ.. ಇನ್ನು ಹತ್ತಾರು ವರ್ಷ ಜೊತೆಗೆ ಸಂಸಾರಮಾಡಿದವರಿಗೂ ಒಂದು ಹಂತಕ್ಕೆ ಈ ಜೀವನ ಸಾಕು ಅನ್ನಿಸಿದ್ದಿದೆ.. ಯಾಕ್ ಹೀಗಾಗತ್ತೆ..? ದಾಂಪತ್ಯದಲ್ಲಿ ಎಕ್ಸ್ಪೈರಿ ಡೇಟು ಯಾವಾಗ ಹತ್ತಿರವಾಗತ್ತೆ..?
ನನಗನ್ನಿಸಿದ ಹಾಗೆ ಗಂಡಸರಿಗೆ ಸಂಸಾರ ಸಾಕು ಅನ್ನಿಸೋದು ಜವಾಬ್ದಾರಿಗಳು ಭಾರವಾದಾಗ.. ಸಂಬಂಧ ಬಂಧನವಾದಾಗ.. ಗಂಡನಿಗೆ ಮಾಡಬೇಕು ಅನ್ನಿಸಿದ್ದನ್ನೆಲ್ಲಾ ಮಡದಿಯಾದವಳು ಮಾಡೋದಕ್ಕೆ ಬಿಟ್ಟುಬಿಟ್ರೆ ಅವರಿಗೆ ಸಂಸಾರ ಕಷ್ಟ ಅನ್ನಿಸಲ್ಲಾ.. ಗಯ್ಸ್ ನೀಡ್ ಫ್ರೀಡಮ್..! ಆದ್ರೆ ಹೆಂಗಸು..? ಅವಳಿಗೆ ಗಂಡ ಕೊಡೋ ಫ್ರೀಡಮ್ಗಿಂತ ಪ್ರೀತಿಯ ಅಪ್ಪುಗೆ ಇಷ್ಟ.. ಅವನು ಅವಳಿಗಾಗಿ ಮೀಸಲಿಡೋ ಟೈಮ್ ಇಷ್ಟ.. ಅವನು ಕಾಡೋದು ಇಷ್ಟ.. ಬೇಡೋದು ಇಷ್ಟ.. ನಗಿಸೋದೂ ಇಷ್ಟ.. ಜೊತೆಗೆ ನಲಿಯೋದೂ ಇಷ್ಟ.. ಗಂಜಿನೇ ಆದ್ರು ಅದು ಅವನ ಪ್ರೀತಿಯಲಿ ಜೊತೆಯಾದ್ರೆ ಮೃಷ್ಟಾನ್ನ.. ಒಟ್ಟಲ್ಲಿ ಅವಳು ಸದಾ ಅವನ ಸಾಮಿಪ್ಯವನ್ನ ಬಯಸ್ತಾಳೆ.. ಭಾವುಕ ಜಗತ್ತನ್ನ ಬೆಳೆಸ್ತಾಳೆ.. ಅವಳು ಕಟ್ಟೋ ಭಾವನೆಯ ಗಾಳಿಗೋಪುರವನ್ನ ಇವನು ಅವಸರದಲ್ಲಿ ಒಡೆದುಬಿಡ್ತಾನೆ.. ಅವಳ ಕಣ್ಣು ಒದ್ದೆಯಾಗತ್ತೆ.. ಅದು ಇವನಿಗೆ ಕಾಣಿಸೋದೇ ಇಲ್ಲಾ.. ಕಂಡರೂ ಕಣ್ಣರೆಪ್ಪೆಯ ಮೇಲೆ ಒಂದು ಹೂ ಮುತ್ತು.. ಅಲ್ಲಿಗೆ ಅವಳು ಒಲಿಯ ಬೇಕು.. ನೋವನ್ನ ಮರೆಯಬೇಕು.. ಅದು ಎಷ್ಟು ಹೆಂಗಸರಿಂದ ಆಗತ್ತೋ ಅಷ್ಟು ಜನರ ಫ್ಯಾಮಿಲಿಗೆ  ಎಕ್ಸಪೈರೇಶನ್ ಡೇಟ್ ತುಂಬಾ ಲೇಟಾಗಿ ಬರಬಹುದು..

ಇವತ್ತು ಹುಡುಗಿ ಕೂಡಾ ಗಂಡಸಿಗೆ ಸಮನಾಗಿ ದುಡೀತಾಳೆ.. ಅವನ ಥರಾನೇ ವರ್ಕೋಹಾಲಿಕ್ ಇರ್ತಾಳೆ ಅಂದ್ಕೊಳ್ಳಿ, ಅಲ್ಲಿಗೆ ಸಮಸ್ಯೆ ಬರಲ್ವಾ..? ಗಂಡಿಗೆ ಬಯಸಿದಾಗ ಬಯಸಿದ್ದು ಬೇಕು.. ಅವನು ಒಂದಿನ ಬೇಗ ಆಫೀಸಿನಿಂದ ಬಂದ್ರೆ ಕಾಫಿ ಕೊಡೋದಕ್ಕೆ ಹೆಂಡತಿ ಇರ್ಬೇಕಿತ್ತು ಅನ್ಸತ್ತೆ.. ಹೋಗ್ಲಿ ಅದಕ್ಕೆ ಕಾಂಪ್ರಮೈಸ್ ಆಗ್ಬಿಡೋಣಾ.. ಹೆಂಡತಿಯ ದುಡಿಮೆ ಆಕೆಯ ಸ್ಥಾನ ಮಾನಗಳೆಲ್ಲಾ ಒಂದು ಹಂತಕ್ಕೆ ಹುಡುಗನಿಗೆ ಹೆಮ್ಮೆ ಅನ್ನಿಸಬಹುದು..ಆದ್ರೆ ಅದು ಅವನನ್ನ ಮೀರಿ ನಿಂತರೆ ಅಸಮಾಧಾನ.. ಇನ್ನು ಗಂಡಾ ಹೆಂಡತಿ ಇಬ್ಬರೂ ದುಡಿಯೋ ಫ್ಯಾಮಿಲಿಗಳಲ್ಲಿ ಮನೆಕೆಲಸಕ್ಕೆ ಕೆಲಸದವರಿದ್ದರೆ ಸರಿ, ಇಲ್ಲಾ ಅಂದ್ರೆ ಮನೆಯಲ್ಲಿ ಅತ್ತೆ ಮಾವಾ ಇದ್ರೂ ಗಂಡಾ ಹೆಂಡತಿಗೆ ಕೆಲಸದ ವಿಷಯದಲ್ಲಿ ಜಗಳ ಗ್ಯಾರಂಟಿ..

ಜಗಳಾ ಅನ್ನೋದು ಯಾರ್ ಫ್ಯಾಮಿಲಿಲಿ ಇರಲ್ಲಾ ಹೇಳಿ.. ಹಗಲೆಲ್ಲಾ ಹೊಡೆದಾಡಿದ್ರೂ ರಾತ್ರಿ ರಮಿಸಿ ಭ್ರಮಿಸಿ ಒಂದಾಗಿಬಿಟ್ರೆ ಮುಗಿದೋಗತ್ತೆ..ಆದ್ರೆ ಅದು ಮಂಚ ಕೈ ಬೀಸಿ ಕರೆಯೋವರೆಗೂ ಸರಿ.. ಒಂದು ಹಂತಕ್ಕೆ ಅವರಿಗೆ ಸಾಕು ಅನ್ನಿಸಿಬಿಟ್ರೆ.. ಗಂಡಸಿಗೆ ಅವಶ್ಯಕಥೆ ಇಲ್ಲದೆ ರಮಿಸೋದಕ್ಕೆ ಬರತ್ತಾ..? ಅವಳಿಗೆ ಸಂತಸದ ಭ್ರಮೆಯಲ್ಲಿ ಬದುಕೋದಕ್ಕೆ ಬರತ್ತಾ..? ಆಗ ಸಂಬಂಧ ಹಳಸಲಾಗತ್ತೆ.. ಯಾವತ್ತು ಗಂಡಾ ಹೆಂಡತಿ ಮಕ್ಕಳಿಗಾಗಿ ಹಿರಿಯರಿಗಾಗಿ ಮತ್ಯಾರಿಗೋ ಆಗಿ ಅಥವಾ ಅನಿವಾರ್ಯ ಅಂತ ಜೊತೆಗಿದೀವಿ ಅಂದ್ಕೋತಾರೋ ಅಲ್ಲಿಗೆ ಆ ಸಂಸಾರದ ಶೆಲ್ಪ್ ಲೈಪ್ ಮುಗೀತು ಅಂತಾನೇ..

ಬದುಕಿಗೆ ಎಕ್ಸ್ಪೈರಿ ಡೇಟಿದೆ.. ಸಂಭಂಧಕ್ಕಿದೆ.. ಆದ್ರೆ ಭಾವನೆಗಳಿಗೆ ಇಲ್ಲಾ ಅಲ್ವಾ..? ಅದು ಸಾಯೋ ಸ್ಥಿತಿಯಲ್ಲೂ ಬದುಕಿಬಿಡಬಹುದು.. ಬದಲಾಗ್ಬಹುದು.. ಇನ್ನಷ್ಟು ಮತ್ತಷ್ಟು ಸುಂದರವಾಗೋದಕ್ಕೆ ಯಾವ ಮಿತಿನೂ ಇಲ್ಲ.. ಇನ್ನು  ಎಕ್ಸ್ಪೈರಿ ಡೇಟ್ ಬಗ್ಗೆ ಯೋಚಿಸಲೇ ಬೇಕಾದ ಇನ್ನೊಂದು ಸಂಗತಿ ನಮ್ಮ ದಿನನಿತ್ಯದ ಬದುಕಲ್ಲಿದೆ.. ಅದು ನಮಗೆ ಅನ್ನ ಕೊಡೊ ಕೆಲಸಾ.. ಅದರಲ್ಲಿ ಒಂದಿಷ್ಟು ತೃಪ್ತಿ ಸಾಧನೆಯ ಖುಶಿ ಇರಬೇಕಲ್ವಾ..? ಅದು ದಿನ ದಿನ ಸಿಗಬೇಕು.. ಅದಕ್ಕೆ ನಾವೂ ಕ್ರಿಯೇಟೀವ್ ಆಗ್ಬೇಕು.. ಕೆಲಸದಲ್ಲಿ ಹೊಸತನ ಕಾಣ್ಬೇಕು..  ಯಾವ ಕೆಲಸಾನೂ ಬೇಸರಪಟ್ಟಿಕೊಳ್ಳೋಷ್ಟು ಕೆಟ್ಟದ್ದಾಗೋದಕ್ಕೆ ಯಾವತ್ತಿಗೂ ಚಾನ್ಸಿಲ್ಲಾ..ಅದು ಮೊನೋಟನಸ್ ಆದಾಗ ಬೇಸರ ಮೊಳಕೆಯೊಡೆಯತ್ತೆ.. ಸುತ್ತಲಿನ ಪರಿಸರ ಇಷ್ಟವಾಗಿದಿದ್ದಾಗ್ಲೂ ಕೆಲಸಾ ತೃಪ್ತಿಕೊಡಲ್ಲಾ.. ಕೆಲಸದಲ್ಲಿ ತೃಪ್ತಿ ಇಲ್ಲಾ ಅಂದ್ರೆ ಅದರ ಲೈಫ್ ಮುಗಿದಹಾಗೆ.. ಆದ್ರೆ ಕೆಲಸಾ ಅನ್ನೋದು   ಯಾವತ್ತು ಬೇಕಾದ್ರೂ ಬದಲಾಗ್ಬಹುದು.. ರೂಪರೇಶೆಯನ್ನ ಬದಲಿಸಬಹುದು.. ಬದಲಾವಣೆ ಕೂಡಾ ನಮ್ಮ ಕೈಲಿದೆ.. ಹಂಗಾಗಿ ದುಡಿಮೆಯ ಎಕ್ಷಪೈರಿ ಡೇಟನ್ನ ನಾವು ಡಿಸೈಡ್ ಮಾಡ್ಬಹುದು..
ಒಟ್ಟಾರೆ ಲೈಫು ಇಷ್ಟೇನೇ ಅನ್ನಿಸಿದಾಗ ನಮ್ಮ ಎಕ್ಸ್ಪೈರಿ ಡೇಟ್ ಆಗಿದೆ ಅಂತಾ ಅರ್ಥ.. ನಂತರದ ಬದುಕು ಎಕ್ಸ್ಪೈರಿ ಆದ ಮೆಡಿಸಿನ್ ಥರಾ ಪವರ್ಕಳ್ಕೋಬಹುದು, ಯಾವ ಇಫೆಕ್ಟೂ ಇಲ್ಲದೆ ಇರಬಹುದು ಇಲ್ಲಾ ಸೈಡ್ ಇಫೆಕ್ಟು ಬದುಕನ್ನೇ ಬಲಿತಗೋಬಹುದು..
ಎಕ್ಸ್ಪೈರಿ ಡೇಟ್ ಬಗ್ಗೆ ಇಷ್ಟೆಲ್ಲಾ ಯೋಚಿಸಿದ್ಮೇಲೆ ಡಿಸೈಡ್ ಮಾಡಿದೀನಿ.. ನನ್ನ ಬದುಕಿನ ಪ್ರತಿಯೊಂದು ಎಕ್ಸ್ಪೈರಿ ಡೇಟ್ ಕೂಡಾ ನನ್ನ ನಿರ್ಧಾರದ ಮೇಲಿರ್ಬೇಕು ಅಂತ.. ನನಗೆ ಲೈಫು ಇಷ್ಟೇ ಅಂತ ಅನ್ನಿಸದಿದ್ರೆ ಸಾಕಪ್ಪಾ..! 

Wednesday, April 20, 2011

ಜಪಾನ್ ನಿನಗಿದೋ ಸಲಾಮ್..!



                                   ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಐವರು ಬೈಕ್ ಕಳ್ಳರನ್ನ ಹಿಡ್ಕೊಂಬಂದ್ರು.. ಅವರೆಲ್ಲಾ ಫಿಲ್ಮೀ ದುನಿಯಾದವರು.. ಅಲ್ಲಿ ಬದುಕೋದಕ್ಕೆ ಸಾಕಾಗೋಷ್ಟು ಸಂಪಾಧನೆ ಇಲ್ಲಾ ಅಂತ ಕಳ್ಳತನಕ್ಕಿಳಿದ್ರಂತೆ.. ಕದಿಯೋದು ಅವರ ಪಾರ್ಟ್ ಟೈಮ್ ಕೆಲಸ.. ಕದ್ದಿರೋ ವೇಗ ಸಂಖ್ಯೆಗಳನ್ನೆಲ್ಲಾ ನೋಡ್ಬಿಟ್ರೆ ಗಾಂಧಿನಗರಾನೇ ಪಾಟರ್್ ಟೈಮ್ ಅಡ್ಡೆ ಏನೋ ಅನ್ಸತ್ತೆ.. ಇವರ ಬಗ್ಗೆ ಕೇಳಿದಾಗ  ನನಗೆ ಥಟ್ ಅಂತ ನೆನಪಾಗಿದ್ದು ಜಪಾನ್..!

 ಮಾಚರ್್ ಹನ್ನೊಂದರ ಬೆಳಿಗ್ಗೆ ಸುನಾಮಿ ಎಬ್ಬಿಸಿದ ಅಬ್ಬರವನ್ನ ಟಿವಿಗಳಲ್ಲಿ ನೋಡಿದಾಗ ನಿಜಕ್ಕೂ ನಡುಕ ಹುಟ್ಟಿತ್ತು.. ನಾನು,ನನ್ನ ತಲೆಯ ಮೇಲೆ ಮತ್ತೆ ನಾನು ನಮ್ಮ ಮನೆಯ ಮಾಡು ಪಕ್ಕದಲ್ಲೇ ಇರೋ ಮರ ಉಹು ಯಾವುದಕ್ಕೂ ಆ ಅಲೆಯ ಎತ್ತರ ಇದೆ ಅಂತ ಅನ್ನಿಸಲೇ ಇಲ್ಲಾ.. ಕಥೆಯಲ್ಲಿ ಬರೋ ರಾಕ್ಷಸನಿಗೂ ಕತೆಗಾರನಿಂದ ಅಂಥದ್ದೊಂದು ಧೈತ್ಯ ರೂಪ ಕೊಡೋದಕ್ಕೆ ಸಾಧ್ಯವಾಗ್ಲಿಲ್ಲಾ.. ಇನ್ನು ಸಮುದ್ರವನ್ನೇ ಕಡೆದಾಗ್ಲೂ ನೀರು ಸರಿದು ಸೃಷ್ಟಿಸಿದ ಅವಘಡಗಳ ಬಗ್ಗೆ ಉಲ್ಲೇಖವೇ ಇಲ್ಲಾ.. ಅಂದ್ರೆ ಸುನಾಮಿ ಅನ್ನೋದು ಇತಿಹಾಸ ಕಾರರ ಕಲ್ಪನೆಗೆ ನಿಲುಕಿದ್ದಲ್ಲಾ..! ನಮ್ಮ ಕಣ್ಣಮುಂದಿದೆ.. ಮುಂದೆ ಇತಿಹಾಸವಾಗತ್ತೆ.. ಆ ದುರಂತ ಇತಿಹಾಸದಲ್ಲೂ ಅದೆಷ್ಟು ವಿಧಗಳಾಗತ್ವೋ .. ವಿಭಿನ್ನತೆಗಳಿರತ್ವೋ.. ಉಳಿದೆಲ್ಲಾ ದೇಶಗಳಿಗಿಂತ ಜಪಾನ್ ಮಾತ್ರ ಬೇರೆಯದೇ ಇತಿಹಾಸ ನಿಮರ್ಿಸತ್ತೆ ಅನ್ನೋದ್ರಲ್ಲಿ ಬೇರೆ ಮಾತೇ ಇಲ್ಲಾ..

 ಸುನಾಮಿಯನ್ನ ನಾವೂ ನೋಡಿದ್ದೇವೇ ಅವರೂ ನೋಡಿದ್ದಾರೆ.. ಆದ್ರೆ ಪ್ರತಿಯೊಬ್ಬರೂ ನೋಡಿದ ರೀತಿನೇ ಬೇರೆ.. ಸಾವುನೋವುಗಳನ್ನ ತಗೊಂಡ ಥರಾನೇ ಬೇರೆ.. ಅಪ್ಕೋರ್ಸ್ ನಾವೇ ಬೇರೆ ಜಪಾನ್ ಅನ್ನೋ ಪುಟ್ಟ ದೇಶದಲ್ಲಿ ಮತ್ತೆ ಮತ್ತೆ ಸತ್ತರೂ ಜೀವಂತವಾಗುವ ಬದುಕಿನ ಶಕ್ತಿಯೇ ಬೇರೆ..!

ಮನೆ ಸಂಸಾರ ಸಂಪಾದನೆ ಕಡೆಗೆ ಕೆಲಸಾ ಇವಿಷ್ಟು ಕಳೆದೋದ್ರೆ ಸರ್ವಸ್ವಾನೂ ಹೋಯ್ತು ಅಂತೀವಿ.. ಅದಷ್ಟೂ ಕಳಕೋಬೇಕು ಅಂತಿಲ್ಲಾ ಅದರಲ್ಲಿ ಯಾವುದೋ ಒಂದು ಹೋದ್ರೂ ಸರ್ವಸ್ವಾನೇ ಹೋದ ಥರಾ ಅನ್ಸತ್ತೆ .. ಕಣ್ಣೀರು.. ಅದರಲ್ಲೂ ಹೆಣ್ಣುಮಕ್ಕಳಿಗೆ ಕಳಕೊಳ್ಳೋದಕ್ಕೆ ಶೀಲ ಅನ್ನೋ ಇನ್ನೊಂದು ಬುಲ್ಶಿಟ್..! ಒಟ್ಟಲ್ಲಿ ಬರೋ ಸಣ್ಣ ಪುಟ್ಟ ದುಃಖಗಳೂ ನಮಗೆ ದೊಡ್ಡದಾಗಿ ಕಾಣಿಸತ್ವೆ.. ನಾವು ಬದುಕಿದ್ದೇವೆ ಅಂದ್ರೆ ನಮ್ಮ ಪಯಣ ಮುಗಿದಿಲ್ಲಾ ಅನ್ನೋದೇ ಮರೆತುಹೋಗತ್ತೆ.. ಆದ್ರೆ ನಾನೇ ಇಲ್ಲಿರೋವಾಗ ನನ್ನ ಹೊರತಾಗಿ ಎಲ್ಲವನ್ನೂ ಅದ್ಹೇಗೆ ಸರ್ವಸ್ವ ಅನ್ನೋದಕ್ಕಾಗತ್ತೆ..? ಇಂಥದ್ದೊಂದು ಪ್ರಶ್ನೆ ನನಗೆ ಎದ್ದಿದ್ದು ಒಬ್ಬ ಜಪಾನಿಗನ ಈ ಮಾತಿಂದ " ಭೂಕಂಪ ಬೂಮಿಯನ್ನ ಅಲ್ಲಾಡಿಸಬಹುದು ಬದುಕೋ ಉತ್ಸಾಹವನ್ನಲ್ಲಾ.. ಸುನಾಮಿ ಸುತ್ತಲೂ ಇರುವುದನ್ನ ಕೊಚ್ಚಿಕೊಂಡು ಹೋಗಿರಬಹುದು ಆದ್ರೆ ಬದುಕೋ ಛಲವನ್ನಲ್ಲಾ.. ನಮ್ಮ ಊರನ್ನ ನಾವು ಮತ್ತೆ ಕಟ್ಟಿಕೊಳ್ಳೋಣಾ" ಅವನ ಹಾಗೆ, ಕಳೆದುಕೊಂಡ ದುಃಖಕ್ಕಿಂತ ಯಾರ್ಯಾರೋ ನಮ್ಮವರಾಗಿ ಎಲ್ಲರೂ ಒಂದಾಗಿ ಕಟ್ಟುವ ಖುಶಿ ದೊಡ್ಡದು ಅಂತ ನಮಗ್ಯಾಕೆ ಅನ್ನಿಸಲ್ಲಾ..?

ಸುನಾಮಿ ಅರೆಬರೆ ನೆಲಸಮ ಮಾಡಿದ ಜಪಾನಿನ ಉರೊಂದರಲ್ಲಿ,ಅಳಿದು ಉಳಿದ ಅಂಗಡಿಯ ಮುಂಗಟ್ಟಿನ ಮೇಲೆ ಯಾರೋ ಬಂದು ನಮ್ಮ ಊರನ್ನ ಮತ್ತೆ ಕಟ್ತಾರೆ ಅಂತ ಕಾಯೋದಕ್ಕಿಂತ ನಾವೇ ಅದನ್ನ ಮತ್ತೆ ನಿರ್ಮಿಸೋಣ.. ಇನ್ನಷ್ಟು ಚಂದವಾಗಿ.. ಆ ಸುನಾಮಿಯಂತ ಸುನಾಮಿನೇ ನಾಚುವ ಹಾಗೆ ಅಂತ ಬರೆದಿದ್ನಂತೆ..  ದುಃಖ ಉಮ್ಮಳಿಸಿದಾಗ ಭಗವದ್ಗೀತೆಯನ್ನ ಹಿಡಿದು ಅದರ ಯಾವ ಸಾಲುಗಳನ್ನೂ ಸರಿಯಾಗಿ ಅಥರ್ೈಸಿಕೊಳ್ಳದೆ ಮತ್ತೆ ಹುಟ್ಟಿಬರೋ ಕೃಷ್ಣನಿಗಾಗಿ ಕಾಯ್ತೀವಲ್ಲಾ ನಾವು...! ನಮ್ಮನ್ನ ಆ ಜಪಾನಿಗರಿಗೆ ಹೋಲಿಸಿಕೊಳ್ಳೋದಕ್ಕಾದ್ರೂ ಆಗತ್ತಾ..?

ಆ ಪುಟ್ಟ ದೇಶಕ್ಕೆ ಅದೆಷ್ಟು ಶಕ್ತಿ ಇದೆಯೋ ಏನೋ ನೋಡಿ.. ಮೊದಲು ಭೂಕಂಪ ನಂತರ ಸುನಾಮಿ ಆನಂತರ ಹಿಮಪಾತ ಅಷ್ಟಾದ್ಮೇಲೆ ನ್ಯೂಕ್ಲಿಯರ್ ರಿಯಾಕ್ಟರ್ಗಳ ಸ್ಫೋಟ್.. ಒಂದರ ನಂತ್ರಾ ಒಂದು ಸುಲಭವಾಗಿ ಭರಿಸಲಾಗದ ದುರಂತಗಳೆ.. ಆದ್ರೂ ಜಪಾನ್ ಭರಿಸತ್ತೆ.. ಹಾಗಂತ ಇಕನಾಮಿಕಲಿ ಜಪಾನ್ ತೀರಾನೇ ಬಲಿಷ್ಠವಾಗಿಯೇನೂ ಉಳಿದಿಲ್ಲಾ.. ರಾಜಕೀಯದ ರಗಳೆಗಳು ಅಲ್ಲೂ ಇವೆ.. ಅಧಿಕಾರಿಗಳ ಕೈಗೆ ಭ್ರಷ್ಠಾಚಾರದ ಕೊಳೆ ಅಂಟಿದೆ.. ಅದೆಲ್ಲದರ ನಡುವೆನೂ ಜಪಾನಿಗ ಸೋತಿಲ್ಲಾ.. ದೇಶದ ಮೇಲಿನ ಪ್ರೀತಿ ಕಡಿಮೆ ಆಗಿಲ್ಲಾ.. ಒಬ್ಬನೇ ಒಬ್ಬ ನಾನ್ಯಾಕಾದ್ರೂ ಈ ದೇಶದಲ್ಲಿ ಹುಟ್ಟಿದ್ನಪ್ಪಾ ಅಂತ ಕೊರಗಿದವನು ಕಾಣಿಸ್ಲಿಲ್ಲಾ..! ನಮ್ಮಲ್ಲಿ ಯಾಕಾದ್ರೂ ಹುಡುಗಿಯಾಗಿ ಹುಟ್ಟಿದ್ನಪ್ಪಾ ಅನ್ನೋದ್ರಿಂದ ನೋವು ಶುರುವಾಗ್ಬಿಡತ್ತೆ.. ಯಾಕ್ ಹೀಗೆ..?

ನಾವು ಹೋರಾಡಿ ಸ್ವಾತಂತ್ರ್ಯಗಳಿಸಿಕೊಂಡು ಸ್ವಲ್ಪ ಹೆಚ್ಚು ಕಡಿಮೆ ಜಪಾನಿನ ಮೆಲೆ ಅಣುಬಾಂಬ್ ದಾಳಿಯಾದಷ್ಟೇ ವರ್ಷಗಳಾಗಿವೆ.... ನಾವು ಬ್ರಿಟೀಶರು ಕೊಳ್ಳೆ ಹೊಡೆದ ನಂತರ ಅಳಿದುಳಿದ ಸಂಪತ್ತುಗಳಲ್ಲಿ ಸುಂದರ ದೇಶವನ್ನ ಕಟ್ಟಬೇಕಿದೆ ಅಂತ ನೋವಿನಲ್ಲಿ ಮಾತಾಡಿದ್ವಿ.. ಬೂದಿಯಾದ ಜಪಾನು.. ಉಸಿರೇ ಇಲ್ಲದ ಅರೆಜೀವಗಳನ್ನ ಇಟ್ಕೊಂಡು , ಬಸಿರಿನಲ್ಲೂ ಬರಸಿಡಿಲನ್ನ ಹೊತ್ಕೊಂಡು ಸಮಸ್ತ ವಿಶ್ವವೂ ಬೆರಗಾಗೋ ಥರಾ ಮೈ ಕೊಡವಿ ಎದ್ದದ್ದು ನಮಗ್ಯಾಕೆ ಕಾಣಿಸಲಿಲ್ಲಾ..?

ಬದಲಾವಣೆ ಅನ್ನೋದು ದಿಡೀರ್ ಅಂತ ಆಗ್ಬಿಡಲ್ಲಾ.. ಅದಕ್ಕೆ ಟೈಮ್ ಬೇಕು..? ಎಷ್ಟು ಬೇಕು ತಿಂಗಳು.. ಉಹು .. ವರ್ಷ.. ಉಹು ಹತ್ತು ವರ್ಷ...! ಅದೆಷ್ಟು ಪಂಚವಾಷರ್ಿಕ ಯೋಜನೆಗಳು ನಮ್ಮಲ್ಲಿ ಯೋಜನೆಯಾಗೇ ಉಳಿದಿಲ್ಲಾ ಹೇಳಿ.. ? ಜಪಾನಿನ ಬಹುಭಾಗವನ್ನ ಸುನಾಮಿ ನುಂಗ್ಹಾಕಿ ತಿಂಗಳು ಕಳೆದಿಲ್ಲಾ ಆಗ್ಲೇ ಕಣ್ಣಲ್ಲಿ ಆಶ್ಚರ್ಯದ ಬೆಳಕು ಮೂಡುವಷ್ಟು ಬದಲಾವಣೆ ಆಗಿದೆ.. ಇದೇನಾ ಷಾ0ಡಾಯ್..? ಇದೇನಾ ಷಿಯಾಗಾಮ್..? ಅಂಥ ಗುರುತಿಸಲಾಗದ ಬದಲಾವಣೆಗಳು ಆ ವೇಗದಲ್ಲಿ ಯಾವತ್ತಾದ್ರೂ ನಮ್ಮಲ್ಲಾಗಿವೆಯಾ..?

ಆಗಲ್ಲಾರಿ ಜಪಾನಿಗೆ, ಜಪಾನಿಗರಿಗೆ ನಮ್ಮನ್ನ ನಾವು ಹೋಲಿಸಿಕೊಳ್ಳೋದಕ್ಕೇ ಆಗಲ್ಲಾ.. ಅಲ್ಲಿ ಆದಷ್ಟು ದುರಂತಗಳು ಎಲ್ಲೂ ಆಗಿಲ್ವೇನೋ.. ಆದ್ರೆ ಎಲ್ಲವೂ ಪ್ರಕೃತಿ ಸೃಷ್ಟಿಸಿದ್ದು ಪರರು ಸೃಷ್ಟಿಸಿದ್ದು.. ಇಷ್ಟು ದೊಡ್ಡ ಸುನಾಮಿಯಾಗಿ ಚೆಲ್ಲಾಪಿಲ್ಲಿಯಾಗಿಸಿಹೋದಾಗ್ಲೂ ಸಿಕ್ಕಿದ್ದನ್ನ ಬರಗಿದ ಜನರಿಲ್ಲಾ.. ಕದ್ದ ಒ0ದೇ ಒಂದು ಕೇಸಿಲ್ಲಾ.. ಇನ್ನು ಅತ್ಯಾಚಾರ ಕೊಲೆಗಳೆಲ್ಲಾ ಒತ್ತಟ್ಟಿಗಿರ್ಲಿ.. ನಿರಾಶ್ರಿತ ಶಿಭಿರಗಳಲ್ಲಿ ಹೊಟ್ಟೆಗೆ ಹಿಟ್ಟಿಲ್ಲದೆ ಕೂತ ಜನಾ ಕೂಡಾ ಬದುಕಿಗಲ್ಲಾ ಕಡೆಗೆ ಯಾರಿಂದಲೂ ಸಹಿಸಲಾಗದ ಹಸಿವಿಗೂ ಹೆದರಲಿಲ್ಲಾ.. ಅಲ್ಲಿ ಊಟದ ಪೊಟ್ಟಣಕ್ಕೆ ನೂಕು ನುಗ್ಗಲಾಗಲಿಲ್ಲಾ.. ಆದ್ರೆ ನಮ್ಮ ದೇಶದಲ್ಲಿ ಇದನ್ನ ಉಹಿಸೋದಕ್ಕಾದ್ರೂ ಆಗತ್ತಾ..? ದುಡಿವ ಸಂಪಾದನೆ ಬದುಕೋದಕ್ಕೆ ಸಾಕಾಗಲ್ಲಾ ಅಂತ ಕಳ್ಳತನಕ್ಕಿಳಿಯೋರು,  ಐಶಾರಾಮಿಯಾಗಿ ಬದುಕಬೇಕು ಅಂತ ಮರ್ಡರ್ ಮಾಡೋರು, ಹಿಡಿ ಜಾಗಕ್ಕಾಗಿ ಹುಟ್ಟಿನೊಂದಿಗೆ ಬಂದ ಸಂಬಂಧವನ್ನೇ ಮರೆಯೋ ಜನರೇ ಹೆಚ್ಚಿರೋ ನಮ್ಮ ದೇಶಕ್ಕೆ ಜಪಾನ್ ಹೋಲಿಕೆ ಆಗತ್ತಾ..?

ದೊಡ್ಡ ಗೊಂದಲ ಎದ್ದಿದೆ.. ಯಾಕೆ ನಾವು ಹಾಗಿಲ್ಲಾ..? ನಮ್ಮಲ್ಲೇಕೆ ಜಪಾನಿಗರಂತಾ ಸ್ವಾಭಿಮಾನವಿಲ್ಲಾ..? ಬದುಕುವ ಶಕ್ತಿ ಇಲ್ಲಾ..?  ದೇಶಭಕ್ತಿ ಇಲ್ಲಾ ? ಛಲವಿಲ್ಲಾ ? ಬಲವಿಲ್ಲಾ..? ಕಿಚ್ಚಿಲ್ಲಾ..? ಕನಸಿಲ್ಲಾ..? ಮನಸಿಲ್ಲಾ..? ನಾವು ಅವರಂತಾಗಲು ಸಾಧ್ಯವೇ ಇಲ್ವಾ..? ಸಮಸ್ಯೆ ಎಲ್ಲಿದೆ..? ಹುಟ್ಟಿದ ನೆಲದಲ್ಲಿದ್ಯಾ..? ಬೆಳೆದ ಪರಿಸರದಲ್ಲಿದ್ಯಾ..? ಉಸಿರಾಡೋ ಗಾಳಿಯಲ್ಲಿದ್ಯಾ..? ತಿನ್ನೋ ಅನ್ನದಲ್ಲಿದ್ಯಾ ? ಕಲಿವ ಪಾಠದಲ್ಲಿದ್ಯಾ ? ಎಲ್ಲೂ ಇಲ್ಲಾ ನಮ್ಮಲ್ಲಿದೆ.. ನಮ್ಮ ಯೋಚನಾ ಶಕ್ತಿಯಲ್ಲಿದೆ ಅಂತ ಅಂದುಬಿಡಬಹುದು.. ಹಾಗಾದ್ರೆ ನಮ್ಮ ಯೋಚನೆಗಳಲ್ಲೂ ಯಾಕಿಂತ ಅಧಃಪತನ..? ನಮ್ಮಲ್ಲಿರೋ ಸಮಸ್ಯೆಗೆ ಕಾರಣ ಹುಡುಕಬೆಕಾ..? ನಾವು ಬದಲಾಗುವ ದಾರಿ ಕಂಡುಕೊಳ್ಳಬೇಕಾ..? ಒಂದಕ್ಕೊಂದು ನಾಣ್ಯದ ಎರಡುಮುಖಗಳು.. ಒಟ್ಟಲ್ಲಿ ಬದಲಾವಣೆ ಬೇಕೇ ಬೇಕು.. ಜಪಾನ್ ಆದರ್ಶವಾದರೆ ಸಾಕು..!
 

Friday, April 8, 2011

ಹಜಾರೆ ಆಜಾರೆ..!!

ಸಾಗಬಹುದು, ಒಂದಲ್ಲಾ ಎರಡಲ್ಲಾ ಮೈಯ್ಯಲ್ಲಿರೋ ಬಲವೆಲ್ಲಾ ನೀರಾಗೋ ವರೆಗೂ ನಡೀಬಹುದು.. ಆದ್ರೆ ದಾರಿ ಬೇಕು.. ದಾರಿದೀಪ ಬೇಕು..ಮನಸನ್ನ ಕನಸನ್ನ ಕಡೆಗೆ ನಮ್ಮನ್ನ ನಡೆಸೋ ಶಕ್ತಿ ಬೇಕು.. ಅವರನ್ನೇ ಅಲ್ವಾ ಲೀಡರ್ ಅನ್ನೋದು.. ಅವನೇ ಅಲ್ವಾ ನಿಜವಾದ ನಾಯಕ.. ಅವರೇ ಅಲ್ವಾ ಅಣ್ಣಾ ಹಜಾರೆ..

ಈಗ ಜನ್ಲೋಕ್ಪಾಲ್ ಆಂದೋಲನಾನೇ ತಗೋಳಿ.. ಭ್ರಷ್ಟರ ನಿರ್ಮೂಲನೆಗೆ ಅಣ್ಣಾ ಹಜಾರೆಯವರು ಶುರು ಮಾಡಿದ ಹೋರಾಟಾನೇ ತಗೋಳಿ..ನಮ್ಮ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡ್ತಾ ಇದೆ ಅಂತ ಯಾರಿಗೆ ಗೊತ್ತಿಲ್ಲಾ..? ಅದೆಷ್ಟು ಜನಾ ಅದರಿಂದ ಸಫರ್ ಆಗಿಲ್ಲಾ..! ಬ್ಯುರೋಕ್ರಸಿ ಅನ್ನೋದು ಬೇರೆ ದೇಶಗಳಲ್ಲೆಲ್ಲಾ ಬಗಲಲ್ಲಿರಬಹುದು, ಹೆಗಲಲ್ಲಿರಬಹುದು, ಆದ್ರೆ ನಮ್ಮಲ್ಲಿ ಬುಡದಲ್ಲಿದೆ.. ಉಸಿರಾಡೋ ಗಾಳಿಯಲ್ಲಿದೆ.. ಕುಡಿಯೋ ನೀರಲ್ಲಿದೆ.. ಇಡೀ ಜಗತ್ತಿನ ಕಪ್ಪು ಹಣ ಸೇರಿಸಿದರೆ ನಮ್ಮ ದೇಶದಲ್ಲಿರೋಷ್ಟು ಆಗತ್ತಂತೆ.. ಅಂದ್ರೆ ಹೇಗಿದೆ ಲೆಕ್ಕಾ ಹಾಕಿ..!

 ಇವತ್ತು ನೂರಕ್ಕೆ ಹದಿನೈದು ಜನ ಲಂಚ ಕೊಟ್ಟು ಕೆಲಸಕ್ಕೆ ಸೇರ್ಕೋತಿದಾರೆ.. ಅವರಂತೂ ಸಂಬಳಕ್ಕೆ ನಿಷ್ಠರಾಗಿರೋ ಚಾನ್ಸು ತುಂಬಾ ಕಡಿಮೆ..  ಅವರ ಜೊತೆಗೆ ಹಣಾ ತಗೊಳೋದೇ ಹವ್ಯಾಸವಾಗಿಸಿಕೊಂಡವರು, ಕೊಳ್ಳೆ ಹೊಡೆಯೋದನ್ನೇ ಕೆಲಸವಾಗಿಸಿಕೊಂಡವರು, ಸಾಲದ ಸಂಬಳಕ್ಕೆ ಗಿಂಬಳಾ ಸೇರಿಸಿ ಸಂಸಾರ ನಡೆಸೋರು.. ಎಷ್ಟು ಬೇಕು..? ಭ್ರಷ್ಟರ ದೊಡ್ಡ ದಂಡೇ ಇದೆ.. ಇವರ ನಡುವೆ ನಿಯತ್ತು ಅಂದ್ರೆ ಮನೆಲಿರೋ ನಾಯಿನೂ ನಗತ್ತೆ.. ಇದು ನಮ್ಮ ಪರಿಸ್ಥಿತಿ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ..

ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಹಂತದಲ್ಲಿ ಭ್ರಷ್ಟಾಚಾರ ಕಾಣಿಸಿದೆ.. ಅನುಭವವಾಗಿದೆ.. ಅಬ್ಬಬ್ಬಾ ಅನ್ಸಿ ಬರ್ಜರಿ ಬಾಯ್ ಮಾಡಿದ್ದೂ ಇದೆ.. ಮನೆಯವರೆಲ್ಲಾ ಕೂತು ಹರಟೋವಾಗ, ಸ್ನೇಹಿತರ ಜೊತೆ ಟೈಮ್ ಪಾಸ್ ಮಾಡೋವಾಗ ಕಡೆಗೆ ಚಾನಲ್ಗಳ ಪ್ಯಾನಲ್ ಡಿಸ್ಕಶನ್ನಲ್ಲಿ ಕೂತು ಅಬ್ಬರವಿಟ್ಟಿದ್ದೂ ಇದೆ.. ಆದ್ರೆ ನನ್ನನ್ನೂ ಸೇರಿ ಒಬ್ಬೇ ಒಬ್ಬ ಅದರ ನಿರ್ಮೂಲನೆಯ ಪಣ ತೊಟ್ಟು ಹೋರಾಟಕ್ಕೆ ನಿಲ್ಲೋ ಮನಸು ಮಾಡಿದ್ವಾ..? ಇಲ್ಲಾ..! ಕಳ್ಳರ ಸಂತೆಯಲ್ಲಿ ನಿಂತು ಒಬ್ಬ ಕೂಗಿದ್ರೆ ಯಾರಿಗೆ ಕೇಳಬೇಕು..? ಇನ್ನಷ್ಟು ಮತ್ತಷ್ಟು ದನಿಗಳು ಕೂಡಿಕೊಳ್ಳತ್ವೆ ಅನ್ನೋ ಭರವಸೆ ಆದ್ರೂ ಉಂಟೇ..? ಊಹು, ಇದೆಲ್ಲಾ ನಮ್ಮಿಂದಾಗದ ಮಾತು.. ಭ್ರಷ್ಟಾಚಾರ ಅನ್ನೋದು ನಮ್ಮದೇಶದಲ್ಲಿ ಬಡಿದೊಡೆಯೋದಕ್ಕಾಗದ ಪಿಡುಗು ಅಂತ ನಿರ್ದರಿಸಿದವರೇ ಜಾಸ್ತಿ..

ಆದ್ರೆ ಅಣ್ಣಾಜಿ.. ಅವರೊಬ್ಬರು ಹಾಗ್ ಅಂದ್ಕೊಳ್ಳಿಲ್ಲಾ.. ಭ್ರಷ್ಟಾಚಾರ ನಿರ್ಮೂಲನೆಗೆ ಅದೆಂಥಾ ಹೋರಾಟ ಮಾಡಿಬಿಟ್ರು ಅಲ್ವಾ..? ನ್ಯಾಯಮೂತರ್ಿ ಸಂತೋಶ್ ಹೆಗಡೆ ಪ್ರಶಾಂತ್ ಭೂಷಣ್ ಇವರೆಲ್ಲಾ ಸೇರಿ ಹಾಕಿದ ಡ್ರಾಪ್ಟನ್ನ ಪಾಸ್ ಮಾಡಿಸ್ಲೇಬೇಕು ಅಂತ ಬೇತಾಳನಂತೆ ಬೆನ್ನತ್ತಿಬಿಟ್ರು . ಅದರ ಫಲಾನೇ ಉಪವಾಸ ಸತ್ಯಾಗ್ರಹ..


ಅವರು ಬನ್ನಿ ಹೋರಾಡೋಣ ಅಂತ ಜನರನ್ನ ಕರೀಲಿಲ್ಲಾ..  ಇದು ನನಗೊಬ್ಬನಿಗೇ ಬೇಕಾಗಿರೋದಲ್ಲಾ, ನನ್ನೊಬ್ಬನಿಂದ ಆಗೋದೂ ಅಲ್ಲಾ ಅಂತೆಲ್ಲಾ ಯೋಚಿಸಲೂ ಇಲ್ಲಾ.. ಜಂತರ್ ಮಂತರ್ನಲ್ಲಿ ಕುಳಿತುಬಿಟ್ರು.. ಜೀವಾ ಹೋದರೂ ಸರಿ ಭ್ರಷ್ಟರಿಗೆ ಮೂಗುದಾರ ಹಾಕೋ ವ್ಯವಸ್ಥೆ ಆಗಲೇಬೇಕು ಅಂತ ನಿರ್ದರಿಸಿಬಿಟ್ರು.. ಅಷ್ಟೆ, ಒಳಗೊಳಗೇ ಕುದಿಯುತ್ತಿದ್ದ ಅದೆಷ್ಟು ಜನ ಎದ್ದು ನಿಂತ್ರು ನೋಡಿ.. ಒಬ್ಬ ಅಣ್ಣನ ಬೆನ್ನಿಗೆ ಕೋಟ್ಯಾಂತರ ಜನ..!

ಒ0ದು ಎರಡು ಮೂರು ನಾಲ್ಕು ದಿನಗಳು ಉರುಳ್ತಾನೇ ಇವೆ.. .. ಬೆಂಬಲಿಸೋ ಜನರೂ  ಹೆಚ್ಚಾದ್ರು.. ಆದ್ರೆ ಒಕ್ಕೂರಲದ ಕೂಗನ್ನೂ ಕೇಳಿಸಿಕೊಳ್ಳೋದಕ್ಕೆ ಸಿದ್ಧರಿಲ್ಲದ ಹುಂಬರಂತೆ ಖುರ್ಚಿಯನ್ನ ಗಟ್ಟಿಯಾಗಿ ಹಿಡಿದಪ್ಪಿ ಕುಳಿತವರು, ನಾವು ಆರಿಸಿ ಕಳಿಸಿದ ನಾಯಕರು.. ಇಂಥವರಿಗೆಲ್ಲಾ ನಮ್ಮ ನೇತಾರರು ಅನ್ನೋದಕ್ಕೆ ಅಸಹ್ಯವಾಗತ್ತೆ.. ನಮ್ಮದು ಪ್ರಜಾ ಪ್ರಭುತ್ವ  ವ್ಯವಸ್ಥೆ ಅನ್ನೋ ಸಂವಿಧಾನದ ವಾಕ್ಯದ ಬಗ್ಗೆ ಜಿಗುಪ್ಸೆ ಬರತ್ತೆ..! ಈ ಜನನಾಯಕರಿಗೆ ಜನರ ಪಾಲನೆಗೊಂದು ಸರಿಯಾದ ಮಸೂದೆಯನ್ನ ತರೋದಕ್ಕಾಗಲ್ಲಾ ಅನ್ನೋದಾದ್ರೆ , ಇವರ್ಯಾಕೆ ಬೇಕು..? ಓಟು ಹಾಕಿ ಗೆಲಿಸಿದವರನ್ನ ಬೂಟು ಕಾಲಲ್ಲಿ ಒದೆಯೋ ಹಾಳು ಸಂಸ್ಕ್ರುತಿ ಯಾಕಿರಬೇಕು...?

"ಇರಬಾರದು.. ನಿಮ್ಮ ಹೋರಾಟ ಸರಿಯಾಗಿದೆ.. ಭ್ರಷ್ಟರನ್ನ ಬಗ್ಗು ಬಡಿಯೋದಕ್ಕೆ ಒಂದು ಸರಿಯಾದ ಸಮಿತಿ ಆಗಲೇಬೇಕು.. ಕಾನೂನು ಬರಲೇಬೇಕು.. ನಾವು ಅಣ್ಣಾಜಿಗೆ ಸಪೋರ್ಟ್ ಮಾಡ್ತೀವಿ ಅಂತ ನಮ್ಮ ಮುಖ್ಯಮಂತ್ರಿಗಳು ಹೇಳಿದ್ದು ತಮಾಷೆ..! ಎಷ್ಟಂದ್ರೂ ಹಿರಿಯ ರಾಜಕಾರಣಿ ನೋಡಿ.. ಅವರ ಕಣ್ಣಿಗೆ ಕೋಟ್ಯಾಂತರ ಓಟುಗಳು ಕಾಣಿಸುತ್ವೆ..ಜನಸಾಮಾನ್ಯರ ಮನಸು ಕಾಣಿಸತ್ತೆ.. ಮುಂದೆ ಬರೋ ಇಲೆಕ್ಷನ್ನಿಗೊಂದಿಷ್ಟು ತಯಾರಿ ಆಗಲೇಬೇಕಲ್ವಾ..?

ಬರೀ ಓಟಿನ ರಾಜಕೀಯ ಮಾಡೋ ಈ ಜನನಾಯಕರ ಕೈಗೆ ಆಡಳಿತದ ಚುಕ್ಕಾಣಿಯನ್ನೇನೋ ಕೊಟ್ಟಾಗಿದೆ.. ಆದ್ರೆ ನಮ್ಮೆಲ್ಲರ ಬದುಕನ್ನ ಕೊಟ್ಟಿಲ್ವಲ್ಲಾ ,ದನಿಯನ್ನ ಕೊಟ್ಟಿಲ್ವಲ್ಲಾ.. ನಾವು ನಮಗೆ ಸ್ವಂತ.. ನಮ್ಮ ದೇಶ ನಮಗೆಲ್ಲರಿಗೂ ಅಂತ... ಕೋಟಿ ಕೋಟಿ ಲೂಟಿಯಾಗೋದನ್ನ ತಡೆಯೋದಕ್ಕೆ ಆಗತ್ತೋ ಇಲ್ವೋ.. ಕಳೆದುಕೊಂಡಿರೋದು ಮರಳಿ ಸಿಗತ್ತೋ ಇಲ್ವೋ..ಆದ್ರೆ ಇನ್ಮುಂದೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕೋ ಪ್ರಯತ್ನ ಆದ್ರೂ ನಡೀಬೇಕು.. ಜನಜಾಗೃತಿ ಮೂಡಿಸಿದ ಪ್ರತಿಯೊಬ್ಬರಿಗೂ ಅದರಲ್ಲೂ ವಿಷೇಶವಾಗಿ  ಹಜಾರೆ ಅಣ್ಣನವರಿಗೆ ಹಜಾರು ನಮಸ್ಕಾರ..  ಇದು ಮನೆ ಮನೆಯಲ್ಲೂ ಅಣ್ಣಾ ಹಜಾರೆ ಹುಟ್ಟಬೇಕಾದ ಸಮಯ.. ಬನ್ನಿ ಕೈ ಜೋಡಿಸಿ ..ಸಾಗರೋಪಾದಿಯಾಗಿ ಸೇರೋಣಾ... ಭ್ರಷ್ಟರ ಬೆನ್ನತ್ತೋಣಾ..!

Sunday, April 3, 2011

ಆದಿ ಅಂತ್ಯದ ನಡುವೆ..!




ಸುಂದರ ಮುಂಜಾವು
ಸಣ್ಣಗೆ ಚಳಿ
ಸರಿದಾಡಿದ ತಿಳಿ ಗಾಳಿ
ಮೂಡಣದಲಿ ರಂಗವಲ್ಲಿ
ಬಣ್ಣದೋಕುಳಿ ಚೆಲ್ಲಿ
ಬಂದಿದೆ ಅಂದದಲಿ
 ಚಂದವಿದೆ ಶ್ರೀಖರದಲ್ಲಿ

ಅಡಿಗಡಿಗೂ ಅರಿವಿರಲಿ
ನಡೆಯಲ್ಲಿ ನಲಿವಿರಲಿ
ನುಡಿಯ ನಗಾರಿಯಲಿ ನೈಜವಿರಲಿ
ಜೀವಜಾತೆಗೆ ನಮಿಸಿ
ಭಾವ ದೀವಿಗೆ ಇರಿಸಿ
ಕರಮುಗಿದು ಕರೆವ ಮನ ನಮಗಿರಲಿ

ಬೇವಿನೆಲೆಯನು ಜಗಿದು
ಜೀವೆಸೆಲೆಯನು ಬಗೆದು
ಬಂದಾಗ ಬದುಕಿನಲಿ
ಸಿಹಿಯ ಅಲೆಯು
ಹಸಿರ ಹಾಸಿಗೆ
ಮುಗಿವ ಬೇಸಿಗೆ
ಬದುಕ ಹಾದಿಯಲಿ ಬೆಸುಗೆ

ಚಿಮ್ಮಿದೆ ಜೀವ ಜಲ
ಬಂದಿದೆ ಭೀಮ ಬಲ
ಹೊತ್ತುಮುಳುಗುವ ಮುನ್ನ
ಹತ್ತಿ ಉರಯವುದೆನ್ನ
ಚಿತ್ತ ಚಾಂಚಲ್ಯದ ಚಂದ್ರಬಿಂಬ
ಕತ್ತೆತ್ತಿದರೆ ಕಲೆಯು
ಉತ್ತು ಬಿತ್ತಿದ ಛಲವು
ಚಿತ್ತಾರದಲಿ ಮೂಡಿದೆ ಬದುಕಿನಲೆಯು..

ಖರದಲಿದೆ ಗಡಸು
ಕಡಲಲಿದೆ ಮುನಿಸು
ಒಡಲಾಳದಲಿ ಕಡೆವ ಭಿರುಸು
ಮಾಡುವುದು ಮುಗಿದಿಲ್ಲ
ಆಡುವುದು ಅಡಗಿಲ್ಲ
ಕಣ್ಣಾಲೆಗಳಲಿ ಕನಸು ಬತ್ತದಿರಲಿ

ಬಂದಂತೆ ಬರಲಿ
ಆದಿ ಅಂತ್ಯವು ಇರಲಿ
ಉಶೆ ಸರಿದು ನಿಶೆ ಜಾರಿ
ಅಂದಗಾರನ ಕೊರಳೊಳಗೆ ಕುಣಿದಾಡಿ
ಕೆಂದಾವರೆಯ ಕರದಲಿ
ಅರಳಲಿ ಹರುಷ
ಮರಳಿ ಮರಳಿ ಬರಲಿ ವರುಷ

 

Friday, April 1, 2011

ಕ್ರಿಕೆಟ್ ಮೇನಿಯ..!





ಚಿಕ್ಕದೊಂದು ಗಾಲಿ ಚೇರು.. ಅದರಲ್ಲಿ ಬೆಚ್ಚಗೆ ಕೂತು ಬಾಯಲ್ಲಿಟ್ಟ ನಿಪ್ಪಲ್ಲನ್ನ ಮತ್ತೆ ಮತ್ತೆ ಚಪ್ಪರಿಸೋ ಎಳಸು ಕಂದ.. ಆ ಪುಟ್ಟ ಕೈಲಿ ಅಮ್ಮನ ಕೈ ಬೆರಳಿಡ್ಕೋಬಹುದು ಅಷ್ಟೆ.. ಆಗ್ಲೇ ಮಗುವಿನ ಸುತ್ತಮುತ್ತ ಬ್ಯಾಟು ಬಾಲು ಇಟ್ಟಾಗಿದೆ.. ಕ್ರೇಜಿ ಪೀಪಲ್ ಅಂದ್ಕೊಂಡು ಕಚೇರಿಯ ಒಳಗೆ ಬಂದೆ..

ನಮ್ಮ ಆಫೀಸಲ್ಲಿ ಅವತ್ತು  ಬರೀ ಬ್ಲ್ಯೂ ಬ್ಲ್ಯೂ ಬ್ಲ್ಯೂ..  ಬ್ಲಡ್ ಬ್ಲ್ಯೂ..! ಕ್ರಿಕೇಟ್ ಹಬ್ಬ.. ಮೇಕಪ್ ಮ್ಯಾನ್ ಕೈಲಿ ಕೇಸರಿ ಬಿಳಿ ಹಸಿರು ಜೊತೆಗೆ ನೀಲಿ ಬಣ್ಣದ ಬ್ರೆಶ್.. ಮೇಕಪ್ ರೂಮಲ್ಲಿ ಜಾಗಾಸಾಕಾಗಿಲ್ಲಾ .. ಕಾನ್ಫರೆನ್ಸ್ ರೂಮಲ್ಲಿ ದೊಡ್ಡ ಸಾಲು.. ಒಬ್ರು ಗಲ್ಲಾ ಮುಂದ್ಮಾಡ್ತಾರೆ, ಇನ್ನೊಬ್ಬರು ಹಣೆ.. ಕಡೆಗೆ ಇಡೀ ಮುಖಾ ಕೊಟ್ಟು ಕೂತವ್ರೂ ಇದ್ದಾರೆ.. ಎಲ್ಲರ ಮುಖದ ಮೇಲೂ ಚಿತ್ರ ವಿಚಿತ್ರ..! ಹ್ಯಾಟು ಬೂಟು ಬಿಟ್ಟು, ಬ್ಯಾಟು ಬಾಲು , ಕಡೆಗೆ ವಲ್ಡ್ ಕಪ್ಪೂ ಮುಖದ ಮೇಲೆ ರಾರಾಜಿಸಿಬಿಟ್ತು.. ಒಟ್ಟಲ್ಲಿ ರಂಗೇರಿದ ವಾತಾವರಣ.. ರಂಗ್ ಭರಾ ದಿಲ್..! ನನಗೊಂದಿಷ್ಟು ಮಾಡಲೇಬೇಕಾದ ಕೆಲಸಾ ಇರ್ಲಿಲ್ಲಾ ಅಂದ್ರೆ ನಾನೂ ಅವರೊಟ್ಟಿಗೆ ಇರ್ತಿದ್ನೇನೋ.. ಬಟ್ ಐ ವಾಸ್ ಹೆಲ್ಪ್ಲೆಸ್..! ಆ ಜೋಶ್ನ ಗದ್ದಲ ಗಡಿ ದಾಟೋ ಮೊದ್ಲು ನನಗೆ ಕೆಲಸಾ ಮುಗಿಸ್ಕೋಬೇಕಿತ್ತು.. ಹಂಗಾಗಿ ಸುತ್ತ ಹತ್ತು ಟಿ ವಿ ಗಳಲ್ಲಿ ಒಂದೇ ಸಮನೆ ಬ್ಯಾಟು ಬೀಸಿ , ಬ್ಯಾಂಡ್ ಬಜಾಯಿಸ್ತಾ ಇದ್ರೂ ಅತ್ತ ಗಮನ ಕೊಡ್ಲಿಲ್ಲಾ.. ಆದ್ರೆ ಮಾತು..! ಅದು ಬೇಡಾ ಅಂದ್ರೂ ಸೀದಾ ತೆಲೆಗೇ ಹೋಗತ್ತೆ.. ಇಂಡಿಯಾ ಪಾಕಿಸ್ತಾನ್ ಮ್ಯಾಚು ಅಂದ್ರೆ ಯಾವ ಯುದ್ಧಕ್ಕಿಂತ ಕಡಿಮೆ ಇಲ್ಲಾ..! ಇಟ್ಸ್ ಅ ರಿಯಲ್ ವಾರ್ ಅಂತ ಯಾರೋ ಒಬ್ಬ ಮೈಕ್ ಹಿಡ್ಕೊಂಡು ಮಾತಾಡ್ತಾ ಇದ್ದಾ.. ನನ್ನ ಯೋಚನೆ ಬೇಡಾ ಅಂದ್ರೂ ಅತ್ತ ಹೋಗೇ ಬಿಟ್ತು..? ಈಸ್ ದೆಟ್ ವಾರ್ ? ನನಗೇ ನಾನೇ ಕೇಳ್ಕೊಂಡೆ..




ಯೆಸ್ ಇಟ್ ಈಸ್..! ಶತ್ರು ರಾಷ್ಟ್ರಗಳ ನಡುವೆ ಅದೇನಾದ್ರೂ ವಾರೆ.. ಆದ್ರೆ ಯಾರಿಗಾದ್ರೂ ಯುದ್ಧವನ್ನ ಎಂಜಾಯ ಮಾಡೋದಕ್ಕಾಗತ್ತಾ..? ಸಿಕ್ಸು ಫೋರ್ಗಳಿಗೆ ಕೇಕೆ ಹಾಕ್ತೀವಿ.. ಎದುರಾಳಿಯ ವಿಕೇಟ್ ತೆಗೆದಾಗ ಕುಣಿದು ಕುಪ್ಪಳಿಸ್ತೀವಿ.. ಒಂದೊಂದು ಬಾಲಿಗೂ ಎಕ್ಸ್ಪ್ರೆಶನ್ನು, ಸರಿದಾಡೋ ಇಂಪ್ರೆಶನ್ನು.. ಜಸ್ಟ್ ಇಮ್ಯಾಜಿನ್ ಅ ರಿಯಲ್ ವಾರ್..! ಪಾಪಿ ಪಾಕಿಗಳು ಗಡಿಯಲ್ಲಿ ನುಸುಳಿ ಬಂದಾಗ ಬದುಕೋ ಆಸೆ ಬಿಟ್ಟು ಬಡಿದಾಡಿದ್ರಲ್ಲಾ ನಮ್ಮ ಕುಲಬಾಂಧವರು.. ಭಾರತ ಮಾತೆಯ ಧೀರ ಪುತ್ರರು ಅವರಿಗೂ ಕ್ರಿಕೇಟ್ ಪ್ಲೇಯರ್ಸ್ಗೂ ಹೋಲ್ಸೋದಕ್ಕಾಗತ್ತಾ..? ಎರಡೂ ಸೇರಿದರೆ ಹುಡುಗಾಟ ಆದೀತು..! ಆದ್ರೂ ಆಟದಲ್ಲಿ ಮತ್ತು ಕಾಟದಲ್ಲಿ ಸಿಮಿಲಾರಿಟಿ ಇದ್ದೇ ಇದೆ..  ಬಾಲು ಎಸೆಯೋವಾಗ ಸ್ಟೇಡಿಯಮ್  ತುಂಬಾ ಜನಾ.. ಜೋಶು ಗಲಾಟೆ.. ಬಾಂಬು ಎಸೆಯೋವಾಗ ದೇಶದ ತುಂಬಾ ಜನ.. ಭಯಾ.. ಆಗ್ಲೂ ಗಲಾಟೆ..

ಮಾಡು ಇಲ್ಲವೇ ಮಡಿ.. ನಿಜಕ್ಕೂ ಆಟಕ್ಕೆ ಮತ್ತು ಯುದ್ಧಕ್ಕೆ ಅದೆಷ್ಟು ಸಂಬಂಧ ಇದೆ ಅಲ್ವಾ..? ಎರಡೂ ಕಡೆಗೂ ವಿಕೇಟ್ ಹೋದ್ರೆ ಪಾಠ..! ಗೆದ್ದುಬಂದ್ರೆ ಬಂಪರ್ ಊಟ..! ಆದ್ರೆ ಆಟದಲ್ಲಿ ಮಾತ್ರ ಸಂತಸಕೂಟ ಮಾಡ್ಬಹುದು.. ಯುದ್ಧದಲ್ಲಿ ಗೆದ್ರೂ ಸೋತ್ಹಾಗೆ.. ಸತ್ತವರ ಸಮಾಧಿಯ ಮೇಲೆ ಸುಖ ನಿದ್ದೆಮಾಡೋ ಮನಸಾದ್ರೂ ಹೇಗೆ ಬರತ್ತೆ ? ಸಿಹಿ ತಿನ್ನೂ ಸ್ಥಿತಿ ಆದ್ರೂ ಎಲ್ಲಿ ಉಳಿಯತ್ತೆ ? ಇಲ್ಲಿ ಸೋಲು ಅನ್ನೋದು ಸಾವಿನ ಮನೆ.. ಗೆಲುವು ಅನ್ನೋದು ಸೂತಕದ ಚಿನ್ಹೆ ..

ಏನೇ ಅಂದ್ರೂ ಗೇಮ್ಲ್ಲಿ ವಾರ್ ಇದೆ.. ಕ್ರಿಕೇಟ್ ಅಂತಲ್ಲಾ, ಇಂಡಿಯಾ ಪಾಕಿಸ್ತಾನ ಮ್ಯಾಚ್ ಅಂತಾನೂ ಅಲ್ಲಾ..  ಯಾವ ಆಟತಗೊಂಡ್ರೂ ಪರಸ್ಪರ ಬಡಿದಾಡಲೇಬೇಕು.. ಸೋಲಿನ ವಿರುದ್ಧ ಸೆಣಸಾಡೋದೇ ಆಟ.. ಆ ಕಾದಾಟದಲ್ಲಿ ಮಜಾ ಇದೆ.. ಹದವಾದ ಹುರುಪಿದೆ.. ಗೆಲ್ಲಲೇಬೇಕು ಅನ್ನೋ ಛಲ ಇದೆ.. ಅಪ್ಕೋರ್ಸ್ ಸೋಲಿನ ಭಯ.. ನೋವು ಇದ್ದೇ ಇದೆ..!


ಅಂದ್ಹಾಗೆ ಕ್ರಿಕೇಟ್ ಅಂದ್ರೆ ಇಷ್ಟು ಕ್ರೇಜ್ ಯಾಕೆ..? ಎಲ್ಲಾ ಆಟಗಳೂ ಆಟಗಳೇ ಅಲ್ವಾ..? ನನಗಂತೂ ಇವತ್ತಿಗೂ ಕಬಡ್ಡಿ ವಾಲಿ ಬಾಲ್ ಕೊಖೋಗಳನ್ನೆಲ್ಲಾ ನೋಡಿದಷ್ಟೇ ಖುಶಿ ಕ್ರಿಕೇಟ್ ನೋಡೋವಾಗ್ಲೂ ಆಗತ್ತೆ.. ಇನ್ನು ಆಡೋದ್ರಲ್ಲಿ ಕ್ರಿಕೇಟ್ಗಿಂತ ಚಿನ್ನಿ ದಾಂಡು ಕೂಡಾ ಹೆಚ್ಚಿನ ಖುಶಿ ಕೊಡತ್ತೇನೋ ಅನ್ಸತ್ತೆ.. ನಂಗೆ ಅನ್ಸೋ ಹಾಗೆ ಮತ್ಯಾರಿಗೂ ಅನ್ಸಲ್ವಾ..? ನನ್ನ ಸ್ನೇಹಿತರೆಲ್ಲಾ ನಮ್ಮ ಮಕ್ಕಳನ್ನ ಕ್ರಿಕೇಟ್ ಪ್ಲೇಯರ್ ಮಾಡ್ತೀವಿ.. ಚೆಸ್ ಆಡಿಸ್ತೀವಿ ಅಂತ ಹೇಳಿದ್ದನ್ನ ಕೇಳಿದಿನೇ ಹೊರ್ತು ನನ್ನ ಮಗಾ ಅಥವಾ ಮಗಳು ವಾಲಿಬಾಲ್ ಆಡ್ಬೇಕು ಅಂತ ಒಬ್ಬೇ  ಒಬ್ಬ ಉಲೀಲಿಲ್ಲಾ.. ಯಾಕ್ ಹಾಗ್ ಹೇಳ್ತಾರೆ.? ಇವರಿಗೆಲ್ಲಾ ಮಕ್ಕಳು ಆಡೋದನ್ನ ನೋಡಿ ಖುಶಿಯಾಗಲ್ಲಾ.. ಅದರಲ್ಲಿರೋ ಸಂಪಾಧನೆಯನ್ನ, ಫ್ಯಾನ್ ಪಾಲೋವಿಂಗನ್ನ ನೋಡಿ ಆಸೆಹುಟ್ಟತ್ತೆ ಅಷ್ಟೆ..


ಈ ಕ್ರಿಕೇಟ್ಗಿರೋ ಮಾನ್ಯತೆ ಎಲ್ಲಾ ಆಟಗಳಿಗೂ ಯಾಕಿಲ್ಲಾ..? ಅನ್ನೋ ಪ್ರಶ್ನೆ ನಾಲ್ಕು ಜನಾ ಇರೋ ಕಡೆ ಹಾಕಿದೆ.. ಟೆಸ್ಟ್ ಮ್ಯಾಚಿಂದದ ಹಿಡಿದು ಟಿ ಟ್ವೆಂಟಿ ತನಕ ಬಾಲ್ ಟು ಬಾಲ್ ನೊಡೋ ಅಪ್ಪಟ ಸೋಂಬೇರಿಗಳು ಕ್ರಿಕೇಟ್ಗಿಂತ ಸುಂದರವಾದ ಆಟಾನೇ ಇಲ್ಲಾ ಅಂದ್ಬಿಟ್ರು.. ಇನ್ಕೆಲ ಹುಡುಗೀರು ಸಿನ್ಸಿಯರ್ ಆಗಿ ಕ್ರಿಕೇಟ್ ಪ್ಲೇಯರ್ಸ್ಷ್ಟು ಹ್ಯಾಂಡ್ಸಮ್ ಆಗಿರೋರು ಬೇರೆ ಆಟದಲ್ಲಿ ಸಿಗಲ್ಲಾ ಅಂದ್ರು.. ಇನ್ನೊಂದಿಷ್ಟು ಬುದ್ಧಿವಂತರು ಕ್ರಿಕೇಟ್ಗೆ ಇಂಟರ್ನ್ಯಾಶನಲ್ ಲೇವಲ್ ಅಸೋಸಿಯೇಶನ್ ಇದೆ.. ಕ್ಲಬ್ಬಿದೆ.. ಇಷ್ಟಾಪಡೋರು ವಿಶ್ವದಾದ್ಯಂತ ಇದ್ದಾರೆ ಅಂತ ಅಂದ್ರು.. ಅದು ನಿಜಾನೆ..!

ನಮ್ಮ ಹಳ್ಳಿಯ ಕುಂಟೆಬಿಲ್ಲೆ ಚಿನ್ನಿದಾಂಡಿಗೂ  ಕ್ರಿಕೇಟ್ಗೂ ಹೋಲಿಸೋದಕ್ಕಾಗತ್ತಾ.. ಅಪ್ಕೋರ್ಸ್ ಅದರಷ್ಟು ಪಬ್ಲಿಸಿಟಿ ಇದಕ್ಕೆ ಕೊಟ್ಟು , ದೊಡ್ಡವರೆಲ್ಲಾ ಗ್ರೇಟ್ ಪ್ಲೇ ಅಂದಿದ್ರೆ ಹೋಲಿಸಬಹುದಿತ್ತಪ್ಪಾ.. ಆದ್ರೆ ಹಣ್ಣು ಉದುರಿದಷ್ಟು ಸುಲಭವಾಗಿ ಗಿಡಾ ಹುಟ್ಟಿ ಮರಾ ಆಗಿ ಕಾಯ್ ಬಿಡಲ್ವಲ್ಲಾ ..! ನಾವೇ ಹುಟ್ಸಿ ಬೆಳೆಸೋದಕ್ಕೆ ಸಾಕಷ್ಟು ಪೇಶನ್ಸ್ ಬೇಕು.. ಇಲ್ಲಾ ಯಾರಿಗೋ ಹುಟ್ಟಿ ಬೆಳೆದಿದ್ದನ್ನ ನಾವು ಪ್ರೀತಿಸಬೇಕು.. ನಮ್ಮದನ್ನ ದೇಶ ವಿದೇಶಗಳಿಗೆ ಕೊಂಡೊಯ್ಯೋದಕ್ಕಿಂತ ದೇಶ ವಿದೇಶದಲ್ಲಿರೋದನ್ನ ಪಾಲೋವ್ ಮಾಡಿ ನಮ್ಮದಾಗಿಸಿಕೊಂಡುಬಿಟ್ರೆ ಪಬ್ಲಿಸಿಟಿ ಸಮಸ್ಯೆನೇ ಇಲ್ಲಾ.. ಲಾಭಕ್ಕೂ ಕೊರತೆ ಇಲ್ಲಾ.. ಕ್ರಿಕೇಟ್ ಹಾಕಿಯನ್ನ ಮೀರಿ ಬೆಳೆದಿದ್ದು ಇದಕ್ಕೇ ಅಲ್ವಾ..? ಅವರ್ಯಾರೋ ಆಡಿ ತೋರಿಸಿದ್ದು ಈಗ ನಮ್ಮೆಲ್ಲರ ಮನಸನ್ನ ಆಳೋ ಆಟ.. ನಮ್ಮ ಆಟ.. ಒಂದು ಖುಶಿ ಅಂದ್ರೆ ನಮಗೆ ಎಂಥವರನ್ನೂ ಹಿಮ್ಮೆಟ್ಟೋ ನೈಪುಣ್ಯತೆ ಬಂದಿರೋದು..!

ಇವತ್ತು ಕ್ರಿಕೇಟ್ ಮೇನಿಯಾ ಅನ್ನೋದು ಅದ್ಯಾವ ಮಟ್ಟದಲ್ಲಿದೆ ಅಂದ್ರೆ, ಊಟಾ ನಿದ್ದೆ ಬಿಟ್ಟು ಟಿಕೇಟ್ಗಾಗಿ ಕ್ಯೂ ನಿಲ್ತಾರೆ.. ಅದ್ಯಾರೋ ಆಡಿಲ್ಲಾ ಅಂದ್ರೆ ನಾವು ಪ್ರಾಣ ಬಿಡ್ತೀವಿ ಅಂತಾರೆ..ಅವರೆಲ್ಲರಿಗಿಂತ ಮಜವಾಗಿರೋದು ಕಣ್ಣುಮಂಜಾದ ಅಜ್ಜಂದಿರೂ ಟಿ ವಿಯ ಮುಂದೆ ಕುಂತು ಮ್ಯಾಚ್ ನೊಡೋದು.. ಕ್ಯಾಚ್ ಅಂತ ಬೊಚ್ಚು ಬಾಯಿ ಬಿಚ್ಚಿ ಕೂಗೋದು.. ಮೊನ್ನೆ ಜಯನಗರದ  ಟಿ ವಿ ಶೋ ರೂಮ್ ಒಂದರ ಮುಂದೆ ಲೆಕ್ಕಾತಪ್ಪಿ ಜನಾ ಸೇರಿದ್ರು.. ಅವರ ನಡುವೆ ಒಬ್ಬ ಅಜ್ಜಿ ನಿಂತಿದ್ಲು.. ಈ ಹಿಂದೆ ಹತ್ತಿರದ ಸಿಗ್ನಲ್ಲಲ್ಲಿ ಭಿಕ್ಷೆ ಬೇಡ್ತಾ ಇದ್ದವಳು ಅವಳೇ ಅನ್ಸತ್ತೆ.. ಆಕೆ ಅವತ್ತು ಯಾರತ್ರಾನೂ ಊಟಾ ಮಾಡಿಲ್ಲಾ ಅಂತ ನೋವಲ್ಲಿ ಹೇಳ್ತಾ ಇರ್ಲಿಲ್ಲಾ, ಕೈ ಒಡ್ಡಿ ಬೇಡ್ಕೋತಾ ಇರ್ಲಿಲ್ಲಾ.. ಆಕೆಗೆ ಹಸಿವಿನ ಪರಿವೂ ಇದ್ದಂತಿರ್ಲಿಲ್ಲಾ.. ಬಾಲಿನ ವೇಗದ ಎದೆಬಡಿತಕ್ಕೆ ತಕ್ಕಂತಾ ಸುಪ್ಪರ್ ಎಕ್ಸ್ಪ್ರೆಶನ್ನು.. ಜಸ್ಟ್ ಆಯ್ ಕಾಂಟ್ ಬಿಲೀವ್.. ನನ್ನ ಕಣ್ಣನ್ನ ನನಗೇ ನಂಬೋದಕ್ಕಾಗ್ಲಿಲ್ಲಾ.. ಇವರ ಖುಶಿಗೆ ಮೆರಗು ಕೊಡೋ ಕಿರೀಟವನ್ನ ಬ್ಲೂ ಬಾಯ್ಸ್ ತಗೊಂಬರ್ತಾರೆ ಅಲ್ವಾ..?
 

Thursday, March 24, 2011

ಭರವಸೆಯ ಬೆಳಕು..!


http://withlove-ajit.blogspot.com/2011/03/blog-post_15.html

ಇದನ್ನ ನೋಡಿ ಕರುಳು ಚುರ್ರಂದಿದ್ದಷ್ಟೇ ಅಲ್ಲಾ ಒಮ್ಮೆ ಮಾತೇ ನಿಂತಂತಾಯ್ತು..
ಮೌನವಾಗ್ಹೋದೆ.. ಸಾಯಿನಾಥ್ ಅವರು ತೋರಿಸಿದ ಆ ಹುಡುಗನ ಚಿತ್ರ ನನ್ನ ಮನಸಲ್ಲಿ ಸ್ಟಿಲ್ ಆಗ್ಹೋಗಿತ್ತು. ಆ ಕಣ್ಣುಗಳಲ್ಲಿ ಏನಿತ್ತು..? ಭಯ..? ಆತಂಕ..? ನೋವು..? ಅಥವಾ ವಯಸ್ಸಿಗೆ ಮೀರಿದ ಪ್ರಬುದ್ಧತೆ..? ಬದುಕಿನ ಅನಿವಾರ್ಯತೆ..? ಉಹು ನನಗೆ ಅರ್ಥವಾಗ್ಲಿಲ್ಲಾ.. ಒಂದಂತೂ ಹೇಳಬಲ್ಲೆ ಆ ಕಣ್ಣುಗಳಿಗೆ ಜೀವ ಇತ್ತು.. ಅವುಗಳು ಅದೇನನ್ನೋ ಹುಡುಕ್ತಾ ಇದ್ವು.. ಅದು ಭರವಸೆನಾ..?ಬದುಕಿಗೊಂದು ಭರವಸೆನಾ..?





ಮನೆಯಲ್ಲಿ ಮಸಣದ ಚಾಯೆ .. ಅವನ ಅಪ್ಪಾ ಆತ್ಮಹತ್ಯೆ ಮಾಡಿಕೊಂಡು ಮೂರೋ ಮತ್ತೊಂದೋ ದಿನ ಆಗಿದೆ.. ಹತ್ತಿಯ ಹುಳಕ್ಕೆ ಹೊಡೆಯೋ ಕೀಟನಾಶಕದಲ್ಲಿ ಹಟ್ಟಿಯೊಳಗಿನ ಬಡತನ ಅನ್ನೋ ಕ್ರಿಮಿಯನ್ನ ಬಡೀಬಹುದು, ಬೆಳ್ಳಿಯ ಕಿರಣದಂತಾ ಎಳೆಯಲ್ಲಿ ಬದುಕುಕಟ್ಟಿಕೊಳ್ಳಬಹುದು ಅಂದ್ಕೊಂಡು ಚಿಕ್ಕಂದಿನಿಂದ ದುಡಿದಿದ್ದ.. ಆತನ ದುಡಿಮೆಗೆ ದೇವರು ಕಣ್ಣುಬಿಡ್ಲಿಲ್ವಾ..? ದಣಿವಿಗೊಂದು ದಯೆ ಇರಲಿಲ್ವಾ..? ಯಾವ ಲೆಕ್ಕದಲ್ಲೂ ಅಗ್ಗವಾಗದ ಉಳ್ಳವರ ಅಲಂಕಾರಕ್ಕೆ ಅಹಂಕಾರಕ್ಕೆ ಇವನೆಲ್ಲಿ ಕಾಣಿಸಬೇಕು..! ಕೊಡುವವರ ಕೈ ಸಣ್ಣದಾಯ್ತು...ಕೊಂಡವನ ಉದರ ಉಬ್ಬಿಕೊಂಡ್ತು.. ಅಟ್ಟದ ಮೇಲೆ ಒಣನಗಿಬಿದ್ದ ಅಂಟವಾಳಕಾಯಿಯಂತಾದ ಬೆವರು ಬಸಿದ ರೈತ... ಉಸಿರಿದೆ ಹಸಿರಿಲ್ಲಾ.. ವಿದರ್ಭದ ರೈತನ ಕಣ್ಣಲ್ಲಿ ಬತ್ತಿಹೋದ ಬದುಕಿನ ಹೊರತಾಗಿ ಮತ್ತೇನೂ ಇರಲಿಲ್ಲಾ.. ಭರವಸೆಗಳು ಸತ್ತಮೇಲೂ ಬದುಕಿನಗಾಡಿ ಎಳೆದ ದೇಹ ಮಣ್ಣಾಗೋದಕ್ಕೆ ಹೊರಟುಬಿಟ್ತು.. ಅವನೊಂದಿಗೆ ಆಕೆಗಿದ್ದ ಅಲ್ಪ ಖುಶಿಯೂ ಹೋಯ್ತು..

ಅಮ್ಮಾ ಅಮ್ಮಾ.. ಕರೆದರೆ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಅವಳಿಲ್ವಾ..? ಅತವಾ ಕೇಳುವ ಮನಸಿಲ್ವಾ..? ಧೈರ್ಯವಿಲ್ವಾ..? ಹುಟ್ಟಿಸಿದ ದೇವರು ಹುಲ್ಲುಮೇಯಿಸಲಾಗದೆ ಹೆಣವಾಗಲಿಲ್ವಾ..? ಈಗ ಮಗ ಹಸಿವು ಅಂದ್ರೆ ಏನ್ ಮಾಡ್ತಾಳೆ..? ದುಡಿದು ತಿನ್ನು ಅನ್ನಬಹುದಿತ್ತು..ಆದ್ರೆ ದುಡಿಮೆ ಅನ್ನವಾಗುವುದಲ್ಲಾ ಅನ್ನೋದು ಅವಳಿಗಿಂತ ಚನ್ನಾಗಿ ಮತ್ಯಾರಿಗೆ ಅರ್ಥವಾಗ್ಬೇಕು..? ಸುಟ್ಟ ರೊಟ್ಟಿಯ ಕನವರಿಕೆಯಲ್ಲೇ ಕನಸಿನ ಲೋಕಕ್ಕೆ ಕರೆದೊಯ್ದುಬಿಡೋದಕ್ಕೆ ಅವನು ಚಿಕ್ಕವನಲ್ಲಾ.. ಬೆಳೆದಿದ್ದಾನೆ.. ಬುಜದೆತ್ತರಕ್ಕೆ.. ಅವಳಷ್ಟು, ಅವರಪ್ಪನಷ್ಟು..

ಅದು ನನೆಪು.. ಉಳಿದವರಿಗೆ ಅಳಿದವರ ನೆನಪು.. ಅವನಿಗೆ ಈ ಬಟ್ಟೆ ಇಷ್ಟ , ತಿಂಡಿ ಇಷ್ಟ.. ಪುಸ್ತಕ ಇಷ್ಟಾ.. ಕಣ್ಣೀರಾಕ್ತಾ ಕಳೆದುಹೋದವರ ನೆನಪುಗಳನ್ನ ಜೋಪಾನಮಾಡೋ ಜನಗಳ ನಡುವೆ ಆತ್ಮಹತ್ಯೆ ಮಾಡಿಕೊಂಡ ಅಪ್ಪನ ಅಂಗಿಯನ್ನ ತೊಟ್ಟು ದಿಕ್ಕುತೋಚದೆ ಕೂತ ಮಗ.. ಅವನೀಗ ಆ ಮನೆಗೆ ಅಪ್ಪನಾಗಬೇಕು..ಆತನ ಜವಾಬ್ದಾರಿಗಳನ್ನ ಹೊರಬೇಕು.. ಅವನಾದ್ರೂ ಏನ್ ಮಾಡ್ತಾನೆ.. ಅಪ್ಪಾ ಕುಡಿದ ಕೀಟನಾಶಕದಲ್ಲಿ ಸ್ವಲ್ಪ ಮಿಕ್ಕಿದೆಯಲ್ಲಾ ಅದನ್ನೇ ತಗೊಂಡು ಅಷ್ಟು ದೂರದಲ್ಲಿರೋ ಹೊಲದ ಕಡೆ ಹೋಗ್ತಾನಾ..? ಹತ್ತಿಯ ಗಿಡಗಳನ್ನ ಹೊತ್ತೊತ್ತಿಗೆ ಜೋಪಾನಾ ಮಾಡ್ತಾನಾ..? ಮತ್ತೆ ಮೆತ್ತನೆಯ ಕನಸು ಕಾಣ್ತಾನಾ..? ಅಪ್ಪನ ಕನಸುಗಳನ್ನ ಕನಸುಗಣ್ಣುಗಳಲ್ಲಿ ನೋಡ್ತಾ ಇದ್ದ ಅಮ್ಮನಿಗೆ ಈಗ ಆ ಕನಸುಗಳುಳಿದಿವೆಯಾ..? ಉಹು.. ಆಕೆಗೆ ಕನಸಲ್ಲಾ ಬದುಕೋ ಮನಸೂ ಉಳಿದಿಲ್ಲಾ.. ಜೀವಂತ ಶವವಾಗಿದ್ದಾಳೆ.. ಆದ್ರೂ ಜೀವ ಇದೆ ನೋಡಿ..ಹಂಗಾಗಿ ನೋವು ಮುಗಿದಿಲ್ಲಾ..ಆದ್ರೆ ಆಕೆಯ ದುಃಖ ದುಮ್ಮಿಕ್ಕುವ ಕಡಲಾಗುವುದಲ್ಲಾ.. ಅವಳು ಕಲ್ಲಾಗಿದ್ದಾಳೆ.. ಒಂಟಿಕಲ್ಲು.. ಯಾಕಂದ್ರೆ ಆಕೆ ವಿದರ್ಭದ ರೈತ..!

ಮನೆಯ ಮುಂದೆ ಬಂದು ನಿಂತ ಕಾರು..ಅದರಿಂದಿಳಿದ ಬುದ್ದಿವಂತರಂತೆ ಕಾಣೋ ಜನಾ.. ಅವರ ಕಣ್ಣಲ್ಲಿರೋ ಕರುಣೆ.. ಎಲ್ಲವೂ  ಆ ಹುಡುಗನ ಕಣ್ಣಲ್ಲಿ ಆಸೆಯ ಅಲೆಗಳೇಳುವಂತೆ ಮಾಡಬಹುದು.. ಆದ್ರೆ ಆ ತಾಯಿ..!ಆಕೆಗೆ ಗೊತ್ತು.. ಅವಳು ಇಂಥಾ ಸಾವುಗಳನ್ನ ಅದೆಷ್ಟು ನೋಡಿದ್ಲೋ.. ಪಕ್ಕದ ಕೇರಿಯಲ್ಲಿ ಬೀದಿಯಲ್ಲಿ ಮನೆಯಲ್ಲಿ ಬಂದ ಆ ಕೆಟ್ಟ ಗಳುಗೆ ತನ್ನ ಮನೆಗೂ ಒಂದಲ್ಲಾ ಒಂದು ದಿನ ಬರತ್ತೆ ಅನ್ನೋದು ಆಕೆಗೆ ಯಾವತ್ತೋ ಗೊತ್ತಿತ್ತು..ಅವತ್ತೇ ಅವಳು ಅರ್ಧ ಸತ್ತುಹೋಗಿದ್ಲು ಅನ್ಸತ್ತೆ.. ಈಗ ಬದುಕಿ ಸತ್ತವಳಂತಿದ್ದಾಳೆ.. ಬದುಕಿಗೆ ಹೆದರಿ ಸಾವಿನೆಡೆಗೆ ಮುಖಾ ಮಾಡಬಾರದು ಅನ್ನೋ ನಿರ್ಧಾರ ಮಾಡಿ ಇವತ್ತಲ್ಲಾ ನಾಳೆ ಮೇಲೇಳ್ತಾಳೆ.. ಆದ್ರೆ ಎದ್ಮೇಲೆ ಮಗನ ಕೈ ಹಿಡಿದು ಕರೆದೊಯ್ಯೋದೆಲ್ಲಿಗೆ..? ಮಾಡೋದೇನು..? ಬದುಕೋದ್ಹೇಗೆ..? ಬಡತನದ ಬೆನ್ನಿಗೆ ಬಿದ್ದ ಸಾಲದ ಭಾರವನ್ನ ಇಳಿಸೋದ್ಹೇಗೆ..? ಅದಕ್ಕೇ ಯಾವುದೋ ಪರಿಹಾರ ಸಿಗಬಹುದು, ತಮ್ಮ ಕಷ್ಟ ಕಳೀಬಹುದು , ಮನೆತನಕ ಬಂದವರು ಒಂದಿಷ್ಟು ಮರ್ಸಿ ತೋರಿಸದೇ ಇರ್ತಾರಾ..? ಇನ್ನು ಬಂದವರು ಸರಕಾರದವರಾಗಿದ್ರೆ, ಸವಲತ್ತುಗಳನ್ನ ಕೊಡದೇ ಇರ್ತಾರಾ..? ಫೋಟೋ ತಗೋತಿದ್ದಾರೆ.. ಏನೋ ಒಳ್ಳೆಯದಾಗ್ತಿದೆ ಅನ್ನೋ ಭರವಸೆ ಇಣುಕಿದಂತಿತ್ತು ಅವನ ಕಣ್ಣಲ್ಲಿ.. ಅದು ಇವತ್ತಿಗೂ ಹಾಗೇ ಇದೆಯಾ..?

ವಿದರ್ಭದ ರೈತನ ಕಣ್ಣಲ್ಲಿ ಭರವಸೆ ಇದ್ಯೋ ಇಲ್ವೋ.. ಆದ್ರೆ ನಮ್ಮಣ್ಣನ ಕಣ್ಣಲ್ಲಿ ಮಾತ್ರ ಇವತ್ತಿಗೂ ಆಸೆ ಉಳಕೊಂಡಿದೆ.. ಸರಕಾರ ಏನಾದ್ರೂ ಮಾಡಬಹುದು ಅಂತಾನೆ.. ಆಗ್ಲೇ ಅವರಪ್ಪ ಇದೇ ರೀತಿ ತನ್ನದೇ ತೋಟದಲ್ಲಿ  ಹೆಣವಾಗಿ ಮಲಗಿ ತಿಂಗಳುಗಳು ಕಳೆದಿವೆ.. ನಮ್ಮೂರಲ್ಲಿ ರೈತರ ಆತ್ಮಹತ್ಯಾ ಪ್ರಕರಣಗಳು ತೀರಾ ವಿಧರ್ಭದಷ್ಟಿಲ್ವಲ್ಲಾ..! ಹಂಗಾಗಿ ಸತ್ತ ರೈತರ ಬಗ್ಗೆ ಸಂತಾಪ ಸೂಚಿಸೋದಕ್ಕೂ ಸರಕಾರಕ್ಕೆ ಪುರುಸೊತ್ತಿರಲ್ಲಾ ಅನ್ನೋದು ಅವನಿಗೆ ಗೊತ್ತಿಲ್ಲಾ.. ರೈತರ ಹೆಸರೇಳಿಕೊಂಡು ಪ್ರಮಾಣವಚನ ಸ್ವೀಕರಿಸಿದ ರೈತಪರ ಮುಖ್ಯಮಂತ್ರಿಯ ಮೇಲಿನ ನಂಬಿಕೆ ಇನ್ನೂ ಹೋಗಿಲ್ಲಾ..

ಮೊನ್ನೆಯ ಬಜೆಟ್ಟಲ್ಲಿ ರೈತರಿಗೆ ಒಂದು ಪರ್ಸಂಟ್ ಬಡ್ಡಿದರದಲ್ಲಿ ಮುರು ಲಕ್ಷದವರೆಗೆ ಸಾಲಾ ಕೊಡೋದಾಗಿ ಯಡಿಯೂರಪ್ಪನವರು ಹೇಳಿದ್ರು.. ಅದೇನೋ ಸುವರ್ಣ ಭೂಮಿ ಭೂ ಚೇತನಾ ಹೀಗೆ ಅದೇನೇನೋ ಯೋಜನೆಗಳ ಬಗ್ಗೆ ಜನಾ ಖುಶಿಯಲ್ಲಿ ಮಾತಾಡ್ತಾರೆ.. ಆದ್ರೆ ಇಲ್ಲೀವರಗೆಗೆ ಸರಕಾರದ ಆ ಯೋಜನೆಗಳು ಬಡರೈತನ ತನಕ ಬಂದಿವೆಯಾ..? ಕೊಡ್ತೀವಿ ಅಂದ್ರೆ ಸಾಕು ನಮ್ಮ ಜನಕ್ಕೆ ಖುಶಿಪಡೋದಕ್ಕೆ.. ಅದು ಚನ್ನಾಗಿ ಅರ್ಥಮಾಡ್ಕೊಂಡಿರೋದ್ರಿಂದಾನೇ ಇವತ್ತಿಗೂ ಸುಳ್ಳು ಭರವಸೆಯ ರಾಜಕಾರಣ ಜೀವಂತವಾಗಿರೋದು..

ಎಲ್ಲಾ ಕ್ಷೇತ್ರದಲ್ಲು ಡೆವಲಪ್ಮೆಂಟ್ ಅಂತ ಇರತ್ತೆ.. ಸಾವಿರಾರು ಕೋಟಿ ಸುರಿಯೋದೂ ಇದ್ದೇ ಇದೆ.. ಅದೇ ರೀತಿ ಡೆವಲಪ್ಮೆಂಟ್ ಆಗಿರೋದು ಕಾಣಿಸತ್ತೆ.. ಆದ್ರೆ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಿಸಿದೆಯಾ..? ರೈಲ್ವೆಯಿಂದ ಇಷ್ಟು ಲಾಸ್ ಆಯ್ತು ಇಷ್ಟು ಲಾಭ ಆಯ್ತು ಅಂತಾ ಹೇಳ್ತಾರೆ.. ಆದ್ರೆ ಭೂಮಿಯಿಂದ ಅದರ ಉತ್ಪಾದನೆಗಳಿಂದ ಏನಾಗ್ತಿದೆ.. ಭೂಮಿ ಅನ್ನೋದು ನಮಗೆ ಊಟಕ್ಕುಂಟು ಆಟಕ್ಕುಂಟು ಕಡೆಗೆ ಲೆಕ್ಕಕ್ಕೂ ಉಂಟು.. ಆದ್ರೆ ಅದನ್ನೇ ನಂಬಿಕೊಂಡು ಬದುಕ್ತಾ ಇರೋ ಸಣ್ಣ ಹಿಡುವಳಿ ದಾರರ ಜೀವನಕ್ಕೆ ಮಾತ್ರ ಇಲ್ಲಾ..

ಮೊನ್ನೆ ನಮ್ಮ ಕ್ಯಾಬ್ ಡ್ರೈವರ್ ಒಬ್ರು ಹೇಗಾದ್ರೂ ಮಾಡಿ ಸ್ವಲ್ಪ ಸಾಲಾ ಸಿಗೋ ಥರಾ ಮಾಡ್ಬೇಕಿತ್ತು ಮೇಡಮ್, ಈ ಸಾರಿ ಆದ್ರೂ ಬೆಳೆ ಹಾಕ್ಬೇಕು ಅಂದ್ರು.. ನಾನೂ ,ಯೆಡಿಯೂರಪ್ಪಾ ಒಂದು ಪರ್ಸಂಟ್ ಬಡ್ಡೀದರದಲ್ಲಿ ಬೆಳೆ ಸಾಲ ಕೊಡ್ತಾರಂತೆ ತಗೊಳ್ರಿ ಅಂದೆ.. ಅವನೂ ಅವತ್ತೇ ಬ್ಯಾಂಕಿನ ತನಕ ಹೋಗಿಬಂದ.. ಬಂದವನು ಒಂದೇ ಸಮನೆ ಈ ಸರಕಾರ ಬಡವರಿಗಾಗೋದಲ್ಲಾ, ಹೊಟ್ಟೆ ತುಂಬಿದವರಿಗೇ ಇನ್ನಷ್ಟು ತುಂಬೋದಕ್ಕೆ ಸಹಾಯ ಮಾಡ್ತಾರೆ..ಅಲ್ಲಾ ಅವರಿಗ್ಯಾಕ್ ಬೇಕಾಗತ್ತೆ ಸಾಲ.. ಅವರು ದುಡಿದಿರೋದ್ರಲ್ಲೇ ಉಳಿಸ್ಕೊಂಡು ಮತ್ತೇನೋ ಮಾಡಲ್ವಾ? ಅಂತ ಒಂದೇ ಸಮನೆ ರೇಗ್ತಾ ಇದ್ದಾ.. ಕೇಳಿದ್ರೆ ನಮಗಿರೋ ಒಂದುವರೆಕರೆ ಭೂಮಿಗೆ ಸಾಲಾ ಸಿಗಲ್ವಂತೆ ಅದಕ್ಕೆ ಐದೆಕರೆ ಜಾಗ ಇರ್ಬೇಕಂತೆ ಅಂದಾ..  ಇದು ನಮ್ಮ ಕಥೆ..!

 ನಮಗೆ ಇರೋದಕ್ಕೆ ಮನೆ ಇಲ್ಲಾ , ನಮ್ದೂ ಅಂತ ಹಿಡಿ ಮಣ್ಣೂ ಇಲ್ಲಾ ಅಂದ್ರೆ ಹೆಂಗೋ ಜೀವ ಹಿಡ್ಕೊಂಡಿದ್ಬಿಡ್ಬಹುದು.. ಯಾಕಂದ್ರೆ ಸರಕಾರ ಬಿ ಪಿ ಎಲ್ ಕಾರ್ಡ್ ಕೊಡತ್ತೆ.. ಸಂಸಾರ ನಡೆಸೋದಕ್ಕೆ ಬೇಕಾಗಿದ್ದೆಲ್ಲವನ್ನೂ ಕಡಿಮೆ ದರದಲ್ಲಿ ಕೊಡತ್ತೆ.. ಹೇಗೋ ಹೊಟ್ಟೆಪಾಡಾಗತ್ತೆ...! ಇನ್ನು ಜಾತಿಯ ಮೀಸಲಾತಿಯೊಳಗೆ ಬಂದುಬಿಟ್ರಂತೂ ಸರಕಾರಾನೇ ಅವರನ್ನ ನೋಡ್ಕೊಂಬಿಡತ್ತೆ.. ಆದ್ರೆ ಬಡ ಮಧ್ಯಮ ವರ್ಗದವರಿಗೆ ಆಗೋರು ಮಾತ್ರ ಯಾರೂ ಇಲ್ಲಾ.. ದುರಂತ ಅಂದ್ರೆ ರೈತಾಪಿ ಜೀವನ ನಡೆಸ್ತಾ ಇರೋರಲ್ಲಿ ಹೆಚ್ಚುಪಾಲು ಜನ ಇಂಥಾ ಎಲ್ಲೂ ಸಲ್ಲದ ಮಧ್ಯಮರು.. ಕಳೆದ ಹದಿಮೂರು ವರುಷಗಳಲ್ಲಿ ಇಂಥಾ ಎರಡೂವರೆ ಲಕ್ಷ ಅಸಹಾಯಕ ರೈತರು ಜೀವ ತೆತ್ತಿದ್ದಾರೆ ಅಂದ್ರೆ ಆಘಾತವಾಗತ್ತೆ..!

ರೈತರ ಕಷ್ಟಾ ಕೇಳಿ, ನಿಜವಾಗಿ ಸಹಾಯ ಮಾಡೋ ಒಬ್ಬೇ ಒಬ್ಬ ಇಲ್ಲದಿದ್ರೂ ತೀರಾ ವಿದರ್ಭದ ಮಟ್ಟದಲ್ಲಿ ನಮ್ಮ ಜನಾ ಬೇಸತ್ತಿಲ್ಲಾ.. ದಿನಕ್ಕೆ ಐದು ಆರು ರೈತರು ಸಾಯೋ ದುಸ್ಥಿತಿ ಕನ್ನಡ ಮಣ್ಣಿನ ಮಕ್ಕಳಿಗೆ ಬಂದಿಲ್ಲಾ.. ಹಂಗಂತ ರೈತರ ಆತ್ಮಹತ್ಯಾ ಪ್ರಕರಣಗಳು ನಮ್ಮಲ್ಲೂ ಕಡಿಮೆ ಇಲ್ಲಾ.. ನಾವು ದೇಶದಲ್ಲಿ ಮೂರನೇ ಸ್ಥಾನದಲ್ಲಿದೀವಿ.. ಪರಿಸ್ಥಿತಿ ಹೀಗೇ ಇದ್ರೆ ಮೊದಲ ಸ್ಥಾನಕ್ಕೂ ಬರಬಹುದು..

ಈಗ್ಲಾದ್ರೂ ಬಾಯಲ್ಲಿ  ಮಣ್ಣಿನ ಮಕ್ಕಳು ಅಂತ ಹೇಳಿಕೊಳ್ಳುವುದನ್ನ ಬಿಟ್ಟು ನಿಜಕ್ಕೂ ಮಣ್ಣಿನ ಮಕ್ಕಳಾಗ್ಬೇಕು .. ಜನ್ಮದಾತೆಯಾದ ಭೂಮಿಗೆ ಜೀವ ತುಂಬಿ , ಅದರ ನರ ನಾಡಿಯನ್ನ ಮೀಟುವ ಬೆಳೆ ಯಾವುದು , ಯಾವ ಮಣ್ಣಿಗೆ ಯಾವ ಬೆಳೆ ಸೂಕ್ತ..? ಅದನ್ನ ಹೇಗೆ ಬೆಳೀಬೇಕು..? ಯಾವ ರೀತಿ ಮಾರುಕಟ್ಟೆಮಾಡಬೇಕು. ಅನ್ನೋ ಬಗ್ಗೆ ಅರಿವು ಮೂಡಿಸೋ ಕೆಲಸಾ ಮೊದಲಾಗ್ಬೇಕು .. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗೋ ಥರಾ ಆಗ್ಬೇಕು..  ಅಂದ್ಹಾಗೆ ನಮ್ಮ ನೆಲದ್ಲಲಿ ಸಾಲದ ಹಣವನ್ನೇ ನಂಬಿ ಭೂಮಿಗೆ ಬೀಜ ಬಿತ್ತೋ ಬಡ ರೈತರ ಸಂಖ್ಯೆ ದೊಡ್ಡದಿದೆ.. ಅವರೆಲ್ಲರನ್ನೂ ಗಮನದಲ್ಲಿಟ್ಕೊಂಡು ಒಂದು ಸುಂದರ ಯೋಜನೆಯನ್ನ ಸಿದ್ಧಪಡಿಸೋ ಕೆಲಸಾ ರೈತರಿಗಾಗಿ ಮಿಡಿತಾ ಇರೋ ಮನಸುಗಳಿಂದ ಆಗ್ಬೇಕು..
 

Thursday, March 10, 2011

ಪ್ರೀತಿಸಲೇ ಬೇಕು..!

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ....
ನಾನು ಅದನ್ನ ಪ್ರೀತಿ ಅಂತೀನಿ.. ಬದುಕಿನೆಡೆಗಿನ ಪ್ರೀತಿ.. ಬದುಕಬೇಕು ಅನ್ನೋ ತುಡಿತ.. ಮನದಮೂಲೆಯಲ್ಲೆಲ್ಲೋ ಭರವಸೆ.. ಮುಗಿಯದ ಆಸೆ.. ಆ ಭಗವಂತ ಆಕೆಯ ಬದುಕಿಗೆ ಅದ್ಯಾವ ಅರ್ಥ್ಥಕೊಟ್ನೋ ಅದು ಅವನಿಗೇ ಗೊತ್ತು.. ಎಷ್ಟು ಚಿಕ್ಕವಯಸ್ಸಲ್ಲಿ ಹುಡುಗಿಯನ್ನ ಎಲ್ಲಿಂದ ಎಲ್ಲಿಗೋ ಕರ್ಕೊಂಡ್ಹೋಗ್ಬಿಟ್ಟ.. ಏನೂ ಇಲ್ಲದಂತೆ ಮಾಡಿಬಿಟ್ಟ.. ಎಲ್ಲವೂ ಮುಗಿದಮೇಲೂ ಬದುಕೊಂದನ್ನ ಬಾಕಿ ಉಳಿಸಿಬಿಟ್ಟಾ.. ಅದು ಕಾಣದ ಶಕ್ತಿಯ ಇಂಟೆನ್ಷನ್ನು.. ಹಾಗಾಗಿನೇ ಸುಪ್ರಿಮ್ ಕೋರ್ಟ್ ಕೂಡಾ ಸಾಯಿಸಿ ಅನ್ನಲಿಲ್ಲಾ.. ಆಕೆ ಬದುಕಿದ್ದಾಳೆ.. ಅವಳಿಗೆ ಸುತ್ತಲೂ ಏನಾಗ್ತಿದೆ ಅನ್ನೋದು ಗೊತ್ತಾಗತ್ತಾ..? ಗೊತ್ತಿಲ್ಲಾ.. ಅವಳ ಮನಸಲ್ಲಿ ತಲೆಯಲ್ಲಿ ಕಡೆಗೆ ಕಣ್ಣಲ್ಲಿ ಏನಿದೆ ಅನ್ನೋದೂ ಯಾರಿಗೂ ತಿಳಿದಿಲ್ಲಾ.. ಈ ಜಗತ್ತಿನಿಂದ ಅವಳು ದೂರ ದೂರ. ಆದ್ರೂ ಈ ಪಂಚಭೂತಗಳ ಋಣ ಮುಗಿದಿಲ್ಲಾ.. ಕೆ  ಇ ಎಲ್ ಆಸ್ಪತ್ರೆ ,ಅಲ್ಲಿರೋ ದಾದಿಯರು, ಮತ್ತು ವೈಧ್ಯರ ಜೊತೆಗಿನ ಸಂಬಂಧ ಕಡೆದುಹೋಗಿಲ್ಲಾ.. ಮುಂಬೈನ್ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯ ನಾಲ್ಕನೇ ನಂಬರ್ ವಾರ್ಡಿನ ಮೂಲೆಯಲ್ಲಿರೋ ಕಬ್ಬಿಣದ ಮಂಚದ ಮೇಲೆ ಕಣ್ಣುಗಳನ್ನಷ್ಟೇ ಪಿಳಕಿಸ್ತಾ ಮಲಗಿದ ಆ ಅಕೃತಿಯ ಹೆಸರು ಅರುಣಾ ಶಾನ್ಬಾಗ್...

ಹೊನ್ನಾವರದಂತ ಹಸಿರು ರಾಶಿಯ ನಡುವೆ ಹುಟ್ಟಿ ಬೆಳೆದ ಶಾನುಬೋಗರ ಮನೆಯ ಹೂವಿನಂತ ಹುಡುಗಿ ನರಸಿಂಹ ಸ್ವಾಮಿ ಹಾಡಿನ ಹಾಗೆ ಬಲು ಜಾಣೆ ಗಂಭೀರೆ... ಆದ್ರೆ ಹದಿನಾರಕ್ಕೇ ಹೆಂಡತಿಯಾಗಿ ಮಕ್ಕಳನ್ನ ಹೇರೋದಕ್ಕೆ ರೆಡಿಯಾಗ್ಲಿಲ್ಲಾ ಅಷ್ಟೆ.. ಆಕೆ ಕನಸುಗಳು ಮೊದಲು ಹುಟ್ಟಿದ್ವೋ ಆಕೆ ಫಸ್ಟ್ ಹಟ್ಟಿದ್ಲೋ ಅನ್ನೋ ಅನುಮಾನ ಬರೋ ಥರಾ ಇದ್ಲು.. ಬಡವರ ಮನೆಯಲ್ಲಿ ಹುಟ್ಟಿದ ಬೆಳದಿಂಗಳಿನಂತಾ ಹುಡುಗಿ ಮೊದಲು ಕಂಡಿದ್ದು ಮನೆಕಟ್ಟೋ ಕನಸನ್ನ.. ಅಲ್ಲಿ ಬಡಮಕ್ಕಳನ್ನ ಸಾಕ್ತೀನಿ.. ಕೈಲಾಗದವರಿಗೆ ಬದುಕಾಗ್ತೀನಿ ಅಂತಿದ್ದವಳು ಅದೇ ನಿಟ್ಟಿನಲ್ಲಿ ನರ್ಸ್ ಆದ್ಲು.. ಕಾಯಿಲೆಯಿಂದ ಬಳಲ್ತಾ ಇರೋರಲ್ಲಿ ದೇರನ್ನ ಕಂಡು ಸೇವೆ ಮಾಡೋದಕ್ಕೆ ಸಿದ್ಧಳಿದ್ದವಳನ್ನ ಮುಂಬೈನ್ ಕೆ ಇ ಎಲ್ ಆಸ್ಪತ್ರೆ ಕೈ ಬೀಸಿ ಕರೀತು.. ಅಷ್ಟೊತ್ತಿಗಾಗ್ಲೇ ಆಕೆಯ ಹೃದಯದಲ್ಲಿ ಪ್ರೇಮದ ಅರುಣರಾಗವನ್ನ ಡಾಕ್ಟರ್ ಸಂದೀಪ್ ಸರ್ ದೇಸಾಯಿಯವರು ಹಾಡಿದ್ರು.. ಇಬ್ಬರೂ ಸೇರಿ ಅದೆಷ್ಟು ಕನಸುಗಳನ್ನ ಕಂಡಿದ್ರೋ .. ಎಷ್ಟು ವಿಚಾರಗಳನ್ನ ಶೇರ್ ಮಾಡ್ಕೊಂಡಿದ್ರೋ,,ಎಂತೆಂತಾ ಬಯಕೆಗಳನ್ನ ಹಂಚಿಕೊಂಡಿದ್ರೋ..ಎಲ್ಲವನ್ನೂ ಸಾಕಾರಗೊಳಿಸೋ ಕಾಲ ಹತ್ತಿರ ಬಂದಿತ್ತು.. ಇಬ್ಬರೂ ವಿವಾಹಬಂದನದಲ್ಲಿ ಕಾಲಿಡೋದಕ್ಕೆ ಮುಹೂರ್ತ ನೋಡ್ತಾ ಇದ್ದಾಗ್ಲೇ ಅರುಣಾ ಬದುಕಿನಲ್ಲಿ ಭರಸಿಡಿಲು ಬಡಿದಿದ್ದು..

ಅದು ಸಾವಿರದ ಒಂಬೈನೂರಾ ಎಪ್ಪತ್ಮೂರರ ನವೆಂಬರ್ ತಿಂಗಳಿನ ಕಡೆಯ ವಾರ.. ಮುಂಬೈನ್ ಶಾಲೆಯೊಂದರ ಮಕ್ಕಳು ಫುಡ್ ಪಾಯಿಸನ್ ಆಗಿ ಕೆ ಎ ಎಲ್ ಆಸ್ಪತ್ರೆ ಸೇರಿದ್ರು..ಅವರಿಗೆ ಚಿಕಿತ್ಸೆ ನೀಡಿ  ಕಣ್ರೆಪ್ಪೆಯಂತೆ ಜೋಪಾನಾ ಮಾಡಿಕೊಂಡಿದ್ದ ಅರುಣಾ , ತನ್ನ ಡ್ಯೂಟಿ ಮುಗಿಸಿ ಸ್ವಲ್ಪ ಫ್ರೆಶ್ ಆಗಿ ಮನೆಗೆ ವಾಪಸ್ಸು ಹೊಗೋಣಾ ಅಂತ ಡ್ರೆಸ್ಸಿಂಗ್ ರೂಮ್ ಕಡೆ ಹೋಗಿದ್ದಾಳೆ.. ಅಲ್ಲೇ ಕಾದಿದ್ದ ಆಕೆಯ ಕರಾಳ ಬದುಕಿಗೆ ಮುನ್ನುಡಿ ಬರೆಯೋ ಕಿರಾತಕ.. ಆತನ ಹೆಸರು ಸೋಹನ್ಲಾಲ್ ಭರ್ತಾ ವಾಲ್ಮಿಕಿ.. ಆಸ್ಪತ್ರೆಯ ಕಸಾಗುಡುಸುಕೊಂಡಿದ್ದವನು ಆದ್ಯಾವಾಗ ಗುಂಗರು ಗೂದಲಿಲಾಚೆಯ ಬಟ್ಟಲು ಮುಖವನ್ನ ಆಸೆಗಣ್ಣಿನಿಂದ ನೋಡಿದ್ನೋ ಗೊತ್ತಿಲ್ಲಾ, ಅವತ್ತು ಅನುಭವಿಸಲೇಬೇಕು ಅಂತ ನಿಂತುಬಿಟ್ಟ.. ಕೋಣೆಯೊಳಗೆ ಕಾಲಿಟ್ಟ ಹುಡುಗಿಯ ಕತ್ತಿಗೆ ತಣ್ಣೆಯದ್ದೇನೋ ತಾಗಿದಂತಾಗಿದ್ದೇ ಕೊನೆ,  ಕಡೆಗೆ ಆ ಸರಪಳಿಯ ಬಿಗಿತಕ್ಕೆ ಧನಿಯೇ ಹೊರಡ್ಲಿಲ್ಲಾ.. ಕಣ್ಣುಗಳು ಮಂಜಾದ್ವು.. ಮುಂದೆ ಅದೇನ್ ನಡೀತೋ ಹೇಳೋ ಸ್ಥಿತಿಯಲ್ಲಿ ಅವಳು ಉಳೀಲಿಲ್ಲಾ... ಮರುದಿನ ಬೆಳಗಿನ ಹೊತ್ತಿಗೆ ಜೀವಂತ ಶವದಂತೆ ಬಿದ್ದವಳನ್ನ ನೋಡಿದವರು ಹು ರೇಪ್ಡ್ ಹರ್ ಅಂತ ಕೂಗಿದ್ರು...!

ಮೇಲ್ನೋಟಕ್ಕೆ ಆಕೆಯ ಮೇಲೆ ಅತ್ಯಾಚಾರ ನಡೆದ ಎಲ್ಲಾ ಕುರುಹುಗಳೂ ಇದ್ವು..ಆದ್ರೆ ಅದು ಸಾಬೀತಾಗ್ಲಿಲ್ಲಾ.. ಆ ಪ್ರಕರಣದಲ್ಲಿ ಅರೆಸ್ಟಾದ ಸೋಹನ್ಲಾಲ್ ಮೇಲೆ ಕಳ್ಳತನ ಮತ್ತು ಕೊಲೆಯತ್ನದ ಆರೋಪ ಹಾಕಿ ಏಳು ವರ್ಷಗಳ ಶಿಕ್ಷೆ ವಿಧಿಸಲಾಯ್ತು.. ಆದ್ರೆ ಅರುಣಾ ? ಆಕೆ ಏನ್ ತಪ್ಪುಮಾಡಿದ್ಲು..? ಅವಳು ಇವತ್ತಿಗೂ ಕಾನೂನು ಯಾವ ಖೈದಿಗಳಿಗೂ ಕೊಡದಷ್ಟು ಕಠಿಣ ಶಿಕ್ಷೆಯನ್ನ ಅನುಭವಿಸ್ತಾ ಇದ್ದಾಳೆ.. ಇಲ್ಲಿಗೆ ಮೂವತ್ತೇಳು ವರುಷಗಳು ಕಳೆದಿವೆ.. ಅರುಣಾ ತನ್ನ ಕತ್ತಲು ಕಂಗಳಲ್ಲಿ ಸೂರನ್ನೇ ದಿಟ್ಟಿಸ್ತಾ ಮಲಗಿದ್ದಾಳೆ.. ಇವತ್ತಿಗೂ ಆಕೆಯ ಕಣ್ಣುಗಳಲ್ಲಿ ಕಾಣದ ನಗುವಿದೆ.. ಅರಿಯಲಾಗದ ಬಾವವಿದೆ.. ಆಕೆ ಮತ್ತೆ ಕನಸು ಕಾಣ್ತಾ ಇದ್ದಾಳಾ..? ಹೇಳಿಕೊಳ್ಳೋದಕ್ಕೆ ಬಾಯಿಲ್ಲಾ.. ಕೈಯ್ಯೂ ಇಲ್ಲಾ.. ಹೇಳದೆನೇ ಎಲ್ಲವನ್ನೂ ಅರ್ಥೈಸಿಕೊಳ್ಳುವಂತ ಮನಸೂ ಜೊತೆಗಿಲ್ಲಾ.. ಆಕೆಯನ್ನ ಪ್ರೀತಿಸಿದ್ದ ಸಂದೀಪ್ ಸರ್ದೇಸಾಯಿ ಇವತ್ತು ಅವಳೊಂದಿಗಿಲ್ಲಾ.. ಆದ್ರೆ ಆತ ಕ್ರೂರಿಯಲ್ಲಾ...
ಅವತ್ತು ಜೀವಂತ ಶವವಾಗಿ ಮಲಗಿದವಳನ್ನ ಆಸ್ಪತ್ರೆಯ ಸಿಬ್ಬಂದಿಗಳ ಜೊತೆಗೆ ನಿಂತು ಮರುಜನ್ಮ ಕೊಡೋದಕ್ಕೆ ಪ್ರಯತ್ನಿಸಿ ಹಗಲೂ ರಾತ್ರಿ ಒಂದು ಮಾಡಿದವನು ಪ್ರೇಮಿ ಸಂದೀಪ್.. ಆತ ಮಾಡದ ಪ್ರಯತ್ನಗಳಿಲ್ಲಾ.. ವೈಧ್ಯಕೀಯ ಜಗತ್ತು ಕೈ ಎತ್ತಿದಮೇಲೆ ಮಾತಲ್ಲೇ ಮನಸು ಮೀಟಿ ಹೊಸ ಬದುಕು ಕಟ್ಟೋ ಕಟ್ಟಕಡೆಯ ಪ್ರಯತ್ನ ಮಾಡಿದ್ದಾ.. ಅದೆಷ್ಟೋ ತಿಂಗಳುಗಳ ಕಾಲ  ಮಗುವಿನಂತೆ ಮಲಗಿದ ಅರುಣಾಳಪಾಲಿಗೆ ಎಲ್ಲವೂ ಆಗಿದ್ದಾ.. ತನ್ನ ಸಾಮಿಪ್ಯವೇ ಅವಳನ್ನ ಮೊದಲಿನಂತೆ ಮಾಡತ್ತೆ ಅನ್ನೋ ಭರವಸೆಯಲ್ಲಿ  ಆಕೆಯ ತಲೆಯನ್ನ ತನ್ನ ತೊಡೆಯ ಮೇಲಿಟ್ಕೊಂಡು ಮನಸಿನ ಮಾತಾಡಿದ್ದ.. ಹಳೆಯ ನೆನಪುಗಳಿಗೆ ಬಣ್ಣಬಳಿದಿದ್ದಾ.. ಹೊಸ ಕನಸುಗಳನ್ನ ಕಟ್ಟಿಕೊಟ್ಟಿದ್ದ.. ಉಹು, ಅರುಣಾಗಾಗಿ ಏನೇ ಮಾಡಿದ್ರೂ ನೀರಿನಲ್ಲಿ ಮಾಡದ ಹೋಮದ ಥರಾ.. ಅದು ಪೂತರ್ಿ ಮನದಟ್ಟಾದ್ಮೇಲೆ ಸಂದೀಪ ತನ್ನ ಮೊದಲ ಪ್ರೇಮವನ್ನ ದೇವರ ಕೈಗಿಟ್ಟು ದಾರಿ ತೋರಿಸು ಅಂತ ಅಲ್ಲಿಂದ ಹೊರನಡೆದ.. ಹೋಗೋ ಮೊದ್ಲು ಅವನಿಟ್ಟ ಹೂ ಮುತ್ತಿಗೆ ನತದೃಷ್ಟೆ ಅರುಣಾ ಹೃದಯ ಮೀಟಿತ್ತು..ಆಸ್ಪತ್ರೆಯ ಸಿಬ್ಬಂದಿಗಳು ಆಕೆಯ ಕಂಗಳಲ್ಲಿ ಕಿರುನಗೆಮೂಡಿದ್ದನ್ನ ನೋಡಿದ್ರು.. ಅವತ್ತಿನಿಂದ ಅರುಣಾ ಖುಶಿಯಾದಾಗ ನಗ್ತಾಳೆ..!

ಸಂಪೂರ್ಣ ಸತ್ತುಹೋದಂತಿದ್ದವಳ ದೇಹದ ಮೂಲೆಯಲ್ಲೆಲ್ಲೋ ಆ ಪ್ರೇಮಿ ಮಾಡಿದ ಕಟ್ಟ ಕಡೆಯ ಪ್ರಯತ್ನಕ್ಕೆ ಮಿ0ಚಿನ ಸಂಚಾರವಾಯ್ತು.. ಆದ್ರೆ ಮಳೆಬರ್ಲಿಲ್ಲಾ.. ಬೆಳೆಬೆಳೆಯೋ ಹಾಗಿಲ್ಲಾ.. ಅದು ಬರೀ ಮರೆಯಾಗೋ ಮಿಂಚು.. ಆ ಸರಿದುಹೋಗೋ ಬೆಳಕಲ್ಲಿ ಆಕೆಗೆ ಆ ದೂರ್ಥ ಹುಡುಗ ಕಾಣಿಸ್ತಾನೇನೋ..ಅವಳ ಬದುಕಿನ ಕೆಟ್ಟ ಕ್ಷಣ ನೆನಪಾಗತ್ತೇನೋ .. ಒಟ್ಟಲ್ಲಿ ಅರುಣಾಗೆ ಹುಡುಗರ ನೆರಳು ಸೋಕಿದ್ರೂ ಆಗಲ್ಲಾ.. ಆಕೆಯ ವರ್ತನೆ ಒಮ್ಮೆಲೇ ಭಯಾನಕವಾಗತ್ತೆ.. ಹಾಗಾಗಿ ಆಕೆಯನ್ನ ನೋಡ್ಕೊಳ್ಳೋದಕ್ಕೆ ದಾದಿಯರನ್ನೇ ನೇಮಿಸಲಾಗಿದೆ..

ನಡುವೆ ಅರುಣಾ ಊಟ ತಿಂಡಿಯನ್ನ ಗುರುತಿಸೋಷ್ಟಾಗಿದ್ಲು..ಆಕೆ ಸಿ ಫುಡ್ ಸ್ಮೆಲ್ಲಿಗೆ ಹೂನಗೆ ಬೀರಿದ್ದನ್ನ ಪರೀಕ್ಷಿಸಿದ ವೈದ್ಯರು ಗ್ರಹಿಸಿದ್ರು..ಅವತ್ತಿನಿಂದ ಆಕೆಗೆ ವಾರಕ್ಕೆರಡು ದಿನ ಅವಳಿಷ್ಟದ ಫಿಶ್ ಫ್ರೈ ಕೊಡಲಾಗಿತ್ತು..ಆದ್ರೆ ಅದು ಕೂಡಾ ಈಗಿಲ್ಲಾ.. ಈಗ ಅರುಣಾ ದ್ರವಾಹಾರದ ಹೊರತಾಗಿ ಮತ್ತೇನನ್ನೂ ಸೇವಿಸೋ ಸ್ಥಿತಿಯಲ್ಲಿಲ್ಲಾ.. ಅವಳು ಈಗ ಅಕ್ಷರಶಃ ಶವ.. ಆದ್ರೆ ಜೀವ ಇದೆ.. ಆಕೆಯ ಪಾಲಿಗೆ ಸಂಬಂಧಿಗಳಿಲ್ಲಾ..ಸಂಬಂಧಗಳಿಲ್ಲಾ.. ಆದ್ರೆ ಸಾವು ಅನ್ನೋದು ದೂರ ದೂರದ ವರೆಗೂ ಕಾಣ್ತಾ ಇಲ್ಲಾ.. ಆಕೆಯ ಈ ದುಸ್ಥಿಯನ್ನ ಹತ್ತಿರದಿಂದ ನೋಡಿ ಮರುಗಿದ ಪತ್ರಕತರ್ೆ ಪಿಂಕಿ ವಿರಾನಿ ಅರುಣಾಳ ಕರುನಾ ಜನಕ ಕಥೆಯನ್ನ ಪುಸ್ತಕ ಮಾಡಿ ಜನರ ಮುಂದಿಟ್ಲು.. ತಾನು ಆಕೆಗೆ ಮಾಡಬಹುದಾದ ಸಹಾಯ ಅಂದ್ರೆ ದಯಾಮರಣ ಕೊಡಿಸೋದು ಅಂತ ನಿರ್ಧರಿಸಿ ಕೋರ್ಟಿನ ಮೊರೆಹೋದ್ಲು..
ನಮ್ಮ ನ್ಯಾಯಾಲಯ ದಯಾಮರಣಕ್ಕೆ ಒಪ್ಪಿಗೆ ನೀಡ್ಲಿಲ್ಲಾ. ನನಗೆ ಗೊತ್ತಿರೋ ಹಾಗೆ ಬೆಲ್ಜಿಯಮ್ ನೆದರ್ಲಾಂಡ್ ಮತ್ತು ಯು ಎಸ್ನಲ್ಲೂ ದಯಾಮರಣವನ್ನ ಕಾನೂನು  ಒಪ್ಪತ್ತೆ..! ಆದ್ರೆ ನಮ್ಮ ದೇಶದಲ್ಲಿ ಇನ್ನೂ ತನಕ ಅದಕ್ಕೆ ಒಪ್ಪಿಗೆ ಸಿಕ್ಕಿಲ್ಲಾ.. ಒಂದ್ವೇಳೆ ಒಪ್ಪಿಗೆ ಸಿಕ್ರೆ ಅದು ಮಿಸ್ ಯೂಸ್ ಆಗಬಹುದು ಅನ್ನೋ ಕಾರಣ ಕೊಡಲಾಗತ್ತೆ.. ಅದು ನಿಜಾನೆ.. ಆದ್ರೆ ಹುಟ್ಟು ಸಾವು ಮತ್ತು ಬದುಕು ಯಾವುದೂ ನಮ್ಮ ಕೈಲಿಲ್ಲಾ, ಯಾವುದೋ ಕಾಣದ ಶಕ್ತಿಯ ಸಾರಥ್ಯದಲ್ಲಿ ಎಲ್ಲವೂ ನಿರ್ಧಾರವಾಗತ್ತೆ, ಪ್ರತಿಯೊಬ್ಬರ ಬದುಕಿಗೂ ಒಂದು ಗುರಿ ಇದೆ ದಾರಿ ಇದೆ ಅದನ್ನ ಸವೆಸಿ ದಡಸೇರೋದ್ರಲ್ಲಿ ಉನ್ನತಿ ಇದೆ  ಅನ್ನೋದನ್ನ ನಂಬೋದೇ ಆದ್ರೆ ದಯಾಮರಣ ಅನ್ನೋದು ಬೇಡದ ಕಾನ್ಸೆಪ್ಟು...
ನನಗೆ ಅರುಣಾ ಶನ್ಬಾಗ್ ಮೂವತ್ತೇಳು ವರುಷಗಳಿಂದ ಮಲಗಿದಲ್ಲಿ ಮಲಗಿದಹಾಗೆ ಇದ್ದಾಳೆ ಅನ್ನೋದನ್ನ ಮೊಟ್ಟಮೊದಲ ಬಾರಿ ಕೇಳಿದಾಗ ನೆನಪಾಗಿದ್ದು ನನ್ನ ಅಜ್ಜಿ.. ಆಕೆ ಕೂಡಾ ಆಲ್ಮೋಸ್ಟ್ ಯಾರಿಗೂ ಬೇಡವಾದ ಬದುಕನ್ನ ಬದುಕೋದಕ್ಕೆ ಶುರು ಮಾಡಿ ಇಪ್ಪತ್ತೈದು ವರುಷಗಳಿಗೂ ಜಾಸ್ತಿ ಆಗಿದೆ.. ನಾವೆಲ್ಲಾ ಅವಳು ಸರಿಯಾಗಿದ್ದ ದಿನಗಳನ್ನ ಕಂಡೇ ಇಲ್ಲಾ.. ಆಕೆ ಯವ್ವನದ ದಿನಗಳಲ್ಲಿ ದುಡಿದ ಹಾಗೆ ಯಾವ ಹೆಂಗಸರೂ ದಿಡಯೋದಕ್ಕಾಗಲ್ಲಾ ಅಂತ ಅಮ್ಮಾ ಆಗಾಗ ಹೇಳ್ತಾ ಇರ್ತಾರೆ.. ಆ ದುಡಿತಾನೇ ಅಜ್ಜಿಯ ಪಾಲಿಗೆ ಮಾರಕವಾಗಿದ್ದು.. ಮನೆ ಕಟ್ಟೋವಾಗ ಮೈ ಮೇಲೆ ದೊಡ್ಡದೊಂದು ಮರದ ದಿಮ್ಮಿ ಬಿದ್ದಿದ್ದೇ ನೆಪ.. ಆಕೆ ನಡೆಯೋದಕ್ಕೆ ಹರಸಾಹಸಪಡ್ತಾಳೆ.. ಮಲಗಿದ್ದಲ್ಲೇ ನರಳ್ತಾಳೆ.. ನೋವು ಸಹಿಸದಾದಾಗ ಸಾವಾದ್ರೂ ಬರಬಾರದಾ ಅಂತ ಕನವರಿಸ್ತಾಳೆ.. ಹಾಗಂತ ಆಕೆಗೆ ಸಾವಿನ ಭಯಾ ಹೋಗಿಲ್ಲಾ.. ಬದುಕೋ ಆಸೆ ಬತ್ತಿಲ್ಲಾ.. ಮಲಗಿದ್ದಲ್ಲೇ ಮೊಮ್ಮಕ್ಕಳ ಮದುವೆಯ ಕನಸು ಕಾಣೋ ನಮ್ಮಜ್ಜಿಗೆ ಅರುಣಾಳನ್ನ ಹೋಲಿಸೋದಕ್ಕೆ ಆಗಲ್ಲಾ.. ಆಕೆಗೆ ಆಸ್ಪತ್ರೆಯ ಹೊರತಾಗಿ ಏನೂ ಇಲ್ಲಾ.. ಯಾರೂ ಇಲ್ಲಾ.. ಆದ್ರೂ ಅವಳಿಗೆ ಸಾಯೋ ಕಾಲ ಬಂದಿಲ್ಲಾ.. ಎಲ್ಲದಕ್ಕೂ ಟೈಮ್ ಬರಬೇಕು.. ಅಲ್ಲೀ ತನಕ ಬೇಡವಾಗಿದ್ದನ್ನೂ ಪ್ರೀತಿಸಲೇಬೇಕು ಅಂತ ಅನ್ನಿಸಿದ್ದು ಬ್ರಾನ್ ವಯ್ಸ್ ರವರ ಮೆನಿ ಲೈವ್ಸ್ ಮೆನಿ ಮಾಸ್ಟರ್ಸ್ ಪುಸ್ತಕವನ್ನ  ಓದಿದಮೇಲೆ...

Friday, March 4, 2011

ಸಮ್ ಬಂಧ..!



ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು ನಮ್ಮಿಬ್ಬರನು ಹೀಗೆ ಬಂದಿಸಿಹುದೋ... ಎಷ್ಟು ಸುಂದರವಾದ ಸಾಲುಗಳು ಅಲ್ವಾ..? ಅದಕ್ಕೆ ಅಷ್ಟೇ ಚಂದದ ರಾಗ.. ಕಂಠ... ಕೆಲವು ಹಾಡುಗಳನ್ನ ಕೇಳಿದ್ರೆ ಕೇಳ್ತಾನೇ ಇರ್ಬೇಕು ಅನ್ಸತ್ತೆ.. ಮನಸು ಎಲ್ಲೆಲ್ಲಿಂದ ಎಲ್ಲಿಗೋ ತೇಲ್ ಹೋಗ್ಬಿಡತ್ತೆ.. ನಾನೂ ಅಷ್ಟೇ ಆ ಹಾಡ್ ಕೇಳ್ತಾ ಕೇಳ್ತಾ ಕಳದ್ಹೋದೆ.. ನನ್ನ ತಲೆಯಲ್ಲಿ ಅವಳಿದ್ಲು... ಕಡಲಿನಂತವಳು...ಒಡಲಿನಂತವಳು.. ಅವಳಂತವಳು ಅವಳು ಮಾತ್ರ.. ಆಕೆಯಷ್ಟು ಒಳ್ಳೆಯವಳು ಮತ್ತೊಬ್ಬರಿರೋ ಚಾನ್ಸೇ ಇಲ್ವೇನೋ ಅಂತ ನನಗನ್ಸತ್ತೆ.. ಯಾಕಂದ್ರೆ ನಾನು ಅವಳಂತ ಮತ್ತೊಂದು ಮನಸನ್ನ ನೋಡಿಲ್ಲಾ.. ಅದೆಷ್ಟೇ ಬಯಸಿದ್ರೂ ಅವಳಂತಾಗೋದಕ್ಕೆ ನನ್ನಿಂದಾಗಲ್ಲಾ..   ಶಿ ಈಸ್ ಸಿಂಪ್ಲಿ ಸುಪರ್ಬ್ .. ಅವಳ ಜೊತೆ ನನ್ನದು ಜನ್ಮ ಜನ್ಮದ ಅನುಬಂಧ.. ಮುಗಿಯದ ಸಂಬಂಧ.. ಯಾವತ್ತಿಗೂ ಬೇಸರವಾಗದ ಬಂಧ...
ಪ್ರತಿಯೊಬ್ಬರ ಬದುಕಲ್ಲೂ ಯಾರೋ ಒಬ್ಬರು ಹೀಗೆ ಜನ್ಮಜನ್ಮದ ಮೈತ್ರಿಯಂತವರಿದ್ರೆ ಬದುಕು ನಿಜಕ್ಕೂ ಸುಂದರವಾಗಿರತ್ತೆ. ಆದ್ರೆ ಎಲ್ರೂ ನನ್ನಷ್ಟು ಅದೃಷ್ಟವಂತರಿರಲ್ಲಾ..! ಪ್ರತಿಯೊಬ್ಬರೂ ಬೆಳ್ಳಿಯ ಸ್ಪೂನನ್ನ ಬಾಯಲ್ಲಿಟ್ಕೊಂಡು ಹುಟ್ಟೋದಕ್ಕಾಗಲ್ಲಾ.. ಆದ್ರೆ ಬದುಕಿನ ಯಾನದಲ್ಲಿ ಬಯಸಿದ್ದು ಬಯಸಿದಾಗ ಸಿಗೋ ಸೌಭಾಗ್ಯ ಕೆಲವರಿಗಿರತ್ತೆ.. ಇನ್ಕೆಲವರಿಗೆ ಸಿಕ್ಕಿದ್ದೆಲ್ಲಾ ಭಾಗ್ಯ ಅನ್ನೋ ಥರದ ಮಧುರ ಮನಸಿರತ್ತೆ.. ಅಷ್ಟೊಂದು ಹ್ಯಾಪಿ ಹೃದಯ ನಂದಲ್ಲಪ್ಪಾ.... ಎಲ್ಲವನ್ನೂ ಇಷ್ಟಾಪಡಲ್ಲಾ..ಎಲ್ಲರನ್ನೂ ಹತ್ತಿರಬಿಟ್ಕೊಳ್ಳೋದೂ ಇಲ್ಲಾ.. ಒಮ್ಮೆ  ಸನಿಹ ಬಂದವರು ಕಡೆತನಕ ಜೊತೆಗೆ ನಿಲ್ಲಬೇಕು ಅಂತ ಬಯಸೋದೂ ಇಲ್ಲಾ.. ಜೊತೆಗಿದ್ದಿದ್ದಕ್ಕೆ ಅಂತಾ ಪರಿ ಥ್ಯಾಂಕ್ಪುಲ್ ಆಗಿರೋದಕ್ಕೂ ನನಗೆ ಬರಲ್ಲಾ..ಅಷ್ಟಕ್ಕೂ ತೀರಾ ಜ್ನಮ ಜನ್ಮದ ಮೈತ್ರಿ ಅನ್ನೋ ಮಟ್ಟದ ಸಂಬಂಧ ಎಲ್ಲರ ಜೊತೆಗೂ ಬೆಸೆಯೋವಂಥದ್ದಲ್ಲಾ ಅಲ್ವಾ..?
 ಈ ಮೈತ್ರಿ ಅನ್ನೋದು ಎಷ್ಟು ವಿಚಿತ್ರ ಅಲ್ವಾ..? ಚಿಕ್ಕವರಿರೋವಾಗ ಜೊತೆಗೆ ಆಡೋ ಜನರಜೊತೆಗೆ ಒಂದು ರೀತಿಯ ಮೈತ್ರಿ.. ಸ್ವಲ್ಪ ಹೈಸ್ಕೂಲ್ ಮಟ್ಟಕ್ಕೆ ಬಂದಾಗ ಶುರುವಾಗೋ ಸ್ನೇಹಸೇತುವಿನಲ್ಲೊಂದು ಮೈತ್ರಿ.. ಗುರು ಶಿಶ್ಯರಲ್ಲೂ ಅರಿಯದ ಮೈತ್ರಿ.. ಟೀನೇಜಿನಲ್ಲಿ ತರಾವರಿ ಮೈತ್ರಿ.. ಅದರಲ್ಲಿಷ್ಟು ಪವಿತ್ರ ಮೈತ್ರಿ ಮೈ ಮರೆತರೆ ಅಪವಿತ್ರ ಮೈತ್ರಿ.. ಎಲ್ಲದಕ್ಕೂ ಮಿಗಿಲಾಗಿ ಬದುಕಿನುದ್ದಕ್ಕೂ ಜೊತೆಯಾಗೋದು ಜನುಮ ಜನುಮದ ಮೈತ್ರಿ... ಅಂಥದ್ದೊಂದು ಬಾವ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಎಲ್ಲೋ ಸೇರಿ ಬದುಕಿನುದ್ದಕ್ಕೂ ಜೊತೆಯಾಗಿ ನಡೆಯೋ ಸಂಕಲ್ಪ ಮಾಡಿದ  ಗಂಡಾ ಹೆಂಡಿರ ನಡುವೆ ಸದಾ ಜೀವಂತವಾಗಿದ್ರೆ ಅವರಷ್ಟು ಸುಖಿ ಇನ್ನೊಬ್ಬರಿಲ್ಲಾ..
ಮದುವೆ ಅನ್ನೋದು ಸ್ವರ್ಗದಲ್ಲೇ ನಿರ್ಧಾರವಾಗಿರತ್ತೆ..ಅದು ಜನ್ಮ ಜನ್ಮದ ಸಂಬಂಧ ಅಂತ ಹಿರಿಯರು ಹೇಳ್ತಾರೆ.. ಅದರಲ್ಲಿ ನಿಜಾ ಇದ್ಯಾ? ಸೈನ್ಸು ಒಪ್ಕೊಳ್ಳೋದ್ ಹಾಗಿರ್ಲಿ ಜ್ಯೋತಿಶ್ಯಾಸ್ತ್ರಾ ಆದ್ರೂ ಅದಕ್ಕೆ ಒತ್ತುಕೊಡತ್ತಾ..? ಆ ಯೋಚನೆ ನಂಗೆ ಸಾಕಷ್ಟು ಬಾರಿ ಬಂದಿದೆ.. ಕೆಲವರತ್ರಾ ಕೇಳಿದೀನಿ ಕೂಡಾ.. ಆದ್ರೆ ನಾನು ಕೇಳಲ್ಪಟ್ಟ ಪ್ರಕಾರ ಜನ್ಮಗಳಿವೆ ಆದ್ರೆ ಪ್ರತಿಯೊಂದು ಜನ್ಮಕ್ಕೂ ಜೊತೆಗಾರ ಅಥವಾ ಜೊತೆಗಾತಿ ಒಬ್ರೇ ಇರ್ತಾರೆ ಅನ್ನೋ ನಂಬಿಕೆ ಮಾತ್ರ ಇಲ್ಲಾ.. ಒಂದ್ವೇಳೆ ಯಾವುದೋ ಜೋಡಿ ಅಷ್ಟು ತೀವ್ರವಾಗಿ ಪ್ರೀತಿಸಿ, ಜನ್ಮಜನ್ಮಕ್ಕೂ ಜೊತೆಯಾಗ್ತೀವಿ ಅಂತ ಬಲವಾಗಿ ನಂಬಿದ್ರೆ ಜೊತೆಗೇ ಇರ್ತಾರೇನೋ.. ಅಂಥವರು ಇದ್ದಾರಾ ? ಅನ್ನೋದನ್ನ ಪುನರ್ಜನ್ಮ ಕಾರ್ಯಕ್ರಮ ಮಾಡ್ತಾರಲ್ಲಾ ಅವರನ್ನ ಕೇಳ್ಬೇಕು.. !
ಮೇಲ್ನೋಟಕ್ಕಂತೂ ಈ ಮದುವೆ , ಗಂಡಾ ಹೆಂಡತಿಯ ಸಂಬಂಧ ಇದೆಲ್ಲಾ ಅರ್ಥ ಕಳ್ಕೊಂಬಿಟ್ಟಿದೆ.. ಎರಡು ದೇಹ ಒಂದು ಜೀವ ಅನ್ನೋ ಥರಾ ಬದುಕೋ ದಂಪತಿ ಇವತ್ತಿಗೆ ಸಿಗೋದೇ ಇಲ್ಲಾ.. ಆದ್ರೂ ಜೊತೆಗಿರ್ತಾರೆ.. ವಿಚ್ಛೇಧನ ಪ್ರಕರಣಗಳು ಇರೋದ್ರಲ್ಲಿ ನಮ್ಮ ನಡುವೆ ಸ್ವಲ್ಪ ಕಡಿಮೆನೇ ಇದೆ.. ಹಂಗಂತ ಜೊತೆಗೆ ನಡೆಯೋರಲ್ಲಿ ಹಿತ ಇದೆಯಾ..? ಆ ಸಂಬ0ಧಗಳಲ್ಲಿ ಸವಿ ಇದೆಯಾ..? ಉಹು.. ಇವತ್ತು ಹುಡುಕ್ಕೊಂಡ್ಹೋದ್ರೂ ಆದರ್ಷ ಅನ್ನಿಸೋ ಥರದ ದಂಪತಿ ಸಿಗೋದು ತುಂಬಾನೇ ಕಷ್ಟ.. ಎಲ್ಲೋ ನೂರಕ್ಕೊಂದು ಜೋಡಿ ಮೇಡ್ ಪಾರ್ ಈಚ್ ಅದರ್ ಅನ್ನಿಸಿದ್ರೆ ಹೆಚ್ಚು...

ಅಂದ್ಹಾಗೆ ಬೇರೆಯವರಿಗೆ ಅವರಂತಿರ್ಬೇಕು ಅನ್ಸೋದ್ ಬೇರೆ.. ಅವರಿಗೆ ಅವರ ಬದುಕಿನ ಬಗ್ಗೆ ಖುಶಿ ಇರೋದ್ಬೇರೆ.. ಒಂದಿಷ್ಟು ಜನ ಮಾತಲ್ಲೇ ಮರಳುಮಾಡ್ತಾರೆ, ಆದ್ರೆ ಮನಸಲ್ಲೇ ಮಂಡಿಗೆ ತಿಂತಾರೆ..ತೋರಿಕೆಯ ಬದುಕು ಶಾಶ್ವತ ಅಲ್ಲಾ.. ಒಂದಲ್ಲಾ ಒಂದು ದಿನ ಮುಖವಾಡ ಕಳಚಿ ಬೀಳತ್ತೆ.. ಬಿದ್ದಾಗ ಏಳೋದಕ್ಕಾಗಲ್ಲಾ.. ಎದ್ದರೂ ಬದುಕೋದಕ್ಕಾಗಲ್ಲಾ.. ಆದಷ್ಟು ನಮ್ಮ ಬದುಕು ನಮಗಾದ್ರೂ ಪಾರದರ್ಷಕವಾಗಿರ್ಬೇಕು.. ಪಾರಮಾಷರ್ಿಕವಾಗಿರ್ಬೇಕು.. ಮೈತ್ರಿ ಮುಂದಿನ ಮಾತು.. ಇನ್ನು ಜನ್ಮದ್ದಂತೂ ದುರ ದೂರ.. ಜರಿಯ ನೊರೆಗೆ ಹರಿವ ತೊರೆಗೆ ಬಾವ ಜೀವ ಬಂಧ.. ಬದುಕ ಪುಟದಿ ಮನದ ತಟದಿ ಬಯಕೆ ಬೆಳಕ ಗಂಧ.. ನನಗೆ ನೀನೇ ಚಂದ.. ನಿನ್ನೊಲುಮೆಯೇ ಅಂದ.. ಅದು ಬಂಧವಲ್ಲ ಸಂ ಬಂಧ.. ಅನುಬಂಧ..

Wednesday, March 2, 2011

ಶಿವ ಶಿವಾ ಶಿವರಾತ್ರಿ...!





ಮಾರಾಯ್ತಿ ನಾಳೆ ಶಿವರಾತ್ರಿ.. ಬೆಳಗಾಗೋದೇ ಬೇಡಾ ಅನ್ನಿಸ್ತಾ ಇದೆ.. ನಮ್ಮತ್ತೆ ಬೆಳಬೆಳಿಗ್ಗೆ ಲಿಂಗಾ ಹಿಡ್ಕೊಂಡು ಅದೇನೇನೋ ಪೂಜೆ ಮಾಡ್ಕೊಂಬಂದ್ಬಿಡ್ತಾರೆ.. ಇವತ್ತೊಂದಿನ ಆದ್ರೂ ಹಾಕ್ಕೋ ಅಂತ ಪೀಡಿಸ್ತಾರೆ.. ನಂಗೆ ಅದು ನಿಜಕ್ಕೂ ಇಷ್ಟಾ ಇಲ್ಲಾ.. ಮೈ ಮೇಲಿದ್ರೆ ಏನೋ ಅಲವರಿಕೆ.. ಕೂತ್ರೆ ನಿಂತ್ರೆ ಎಲ್ಲಿ ಹೊರಬರತ್ತೋ .. ಯಾರು ನೋಡ್ತಾರೋ ಅನ್ಸತ್ತೆ.. ರಗಳೆನಪ್ಪಾ ಅಂತ ಒಂದೇ ಸಮನೆ ಪುಕಾರ್ ಹೇಳ್ತಾನೇ ಇದ್ಲು ನನ್ನ ಗೆಳತಿ ..ಆಕೆಗೆ ಅದೇನ್ ಹೇಳ್ಬೇಕೋ ಗೊತ್ತಾಗ್ಲಿಲ್ಲಾ.. ಆದ್ರೂ ಒಂದಿನ ಅಲ್ವಾ..? ವರ್ಷಪೂತರ್ಿ ಹಾಕ್ಕೊ ಅನ್ನಲ್ವಲ್ಲಾ , ಅವರ ನಂಬಿಕೆಗೆ ಆಸೆಗೆ ಯಾಕ್ ತಣ್ಣೀರೆರಚ್ತೀಯಾ, ಸುಮ್ನೆ ಹಾಕ್ಕೊಂಬಿಡು..ಒಂದಿನ ಅಡ್ಜೆಸ್ಟ್ ಆಗೋದು ಕಷ್ಟಾ ಅಲ್ಲಾ , ಇವತ್ತು ನೀನು ಒಪ್ಕೊಂಡ್ರೆ ನಿಮ್ಮತ್ತೆನೂ ಖುಶೀಯಾಗಿರ್ತಾರೆ..ಮನೆಯ ವಾತಾವರಣ ಚನ್ನಾಗಿರತ್ತೆ ಸುಮ್ನೆ ರಗಳೆ ಮಾಡದೆ ಹಾಕ್ಕೊಂಬಿಡೋದಪ್ಪಾ ಅಂದೆ.. ಹೌದಮ್ಮಾ ನಾನೂ ಹಂಗ್ ಅಂದ್ಕೊಂಡೇ  ಕಳೆದ ವರುಷ ಹಾಕ್ಕೊಂಡಿದ್ದೆ.. ಕಡೆಗೆ ಎಂತಾ ಪರದಾಟ ಅಂತೀನಿ.. ಒಪ್ಕೊಂಡಿದ್ದೇ ಒಳ್ಳೆ ಮುಹೂರ್ತ ಅಂತ ತೊಡಿಸಿದವರು ತೆಗೆಯೋದಕ್ಕೆ ದಿನಾ ವೇಳೆ ಎಲ್ಲಾ ನೋಡಿದ್ದೇ ಕೆಲಸಾ.. ತಿಂಗ್ಳಾನ್ಗಟ್ಲೆ ತೆಗೆಯೋದಕ್ಕೆ ಬಿಡ್ಲಿಲ್ಲಾ.. ನಾನಂತೂ ಈ ಸಾರಿ ಹಾಕ್ಕೋಬಾರ್ದು ಅಂತ ನಿರ್ಧಾರ ಮಾಡ್ಬಿಟ್ಟಿದೀನಿ.. ಅದೇನ್ ರಂಪಾ ರಾದ್ಧಾಂತ ಮಾಡ್ತಾರೆ ನೋಡ್ತೀನಿ ಅಂದ್ಲು.. ಆಕೆಯ ಹಠಕ್ಕೆ ನಾನೂ ಸುಮ್ನಾದೆ..

  ಸಂಪ್ರದಾಯಸ್ಥ ಬ್ರಾಹ್ಮಣರ ಮನೆಯ ಹುಡುಗಿ ಅವಳು.. ಕಾಲೇಜಿಗೆ ಹೋಗ್ತಾ ಇದ್ದಾಗ್ಲೇ ಹುಡುಗಿಗೆ ಮದುವೆ ಮಾಡೋ ಯೋಚನೆ ಮಾಡಿದ್ರು ಅವರಪ್ಪಾ.. ಒಂದೆರಡು ವರಾನೂ ಕೇಳ್ಕೊಂಬಂದಿತ್ತು..ಅವ್ರಯಾರೂ ತನ್ನ ಮಗಳಿಗಲ್ಲಾ ಅಂತ ಅನ್ನಿಸಿ ಮದುವೆನೇ ಮುಂದೂಡಿದ್ರು.. ತನ್ನ ಮಹಾಲಕ್ಷ್ಮಿಯಂತಾ ಮಗಳನ್ನ ವರಿಸಬೇಕು ಅಂದ್ರೆ ಮನೆಯಲ್ಲಿ ಭರಪೂರ್ ಆಸ್ತಿ ಇರ್ಬೇಕು, ಹುಡುಗ ಚನ್ನಾಗಿ ಓದಿರ್ಬೇಕು.. ಒಳ್ಳೆ ಕೆಲಸದಲ್ಲಿರ್ಬೇಕು..ಅದೂ ಇದೂ ಚಟಕ್ಕೆ ಬಿದ್ದಿರ್ಬಾರ್ದು.. ಅಬ್ಬಬ್ಬಾ ಅವರು ಹೇಳೋದನ್ನ ಕೇಳಸ್ಕೋತಾ ಇದ್ರೆ ಯುವರಾಣಿಯ ಸ್ವಯಮ್ವರದ ಥರಾ ಅನ್ನಿಸ್ತಾ ಇತ್ತು.. ಇವಳಿಗೆ ಅದೆಂತಾ ರಾಜಕುಮಾರ ಸಿಗ್ತಾನಪ್ಪಾ ಅಂತ ಎಲ್ರೂ ಅಂದ್ಕೋತಿದ್ವಿ.. ಆಕೆ ಮಾತ್ರ ನಕ್ಕು ಸುಮ್ಮನಾಗ್ತಿದ್ಲು.. ಆಕೆಯ ಮನಸಲ್ಲಿ ಏನಿದೆ ಅಂತ ಅವತ್ತು ನಾವ್ಯಾರೂ ಕೇಳಿರ್ಲಿಲ್ಲಾ..



ನಂತ್ರಾ ಡಿಗ್ರಿ ಮುಗ್ಸಿ ಅಪ್ಪನ ಮುದ್ದಿನ ಮಗಳು ಕೆಲಸಾ ಮಾಡ್ತೀನಿ ಅಂತ ಬೆಂಗಳೂರಿಗೆ ಬಂದ್ಲು.. ಇಲ್ಲಿ ಅವಳ ಮನಸಿಗೊಪ್ಪೋ ಕೆಲಸಾನೂ ಸಿಕ್ತು.. ಅದರ ಜೊತೆಗೆ ಆ ಕಂಪನಿಯಲ್ಲೇ ಕೊನೆತನಕ ಜೊತೆಗಿರ್ತೀನಿ ಅನ್ನೋ ಹುಡುಗಾನೂ ಸಿಕ್ಕಿಬಿಡೋದಾ... ಅಲ್ಲಿಂದ ಶುರುವಾಗಿದ್ದು ಸಮಸ್ಯೆ..!



ಅಪ್ಪಾ ಊರಲ್ಲಿ ಮಗಳ ಮದುವೆಯ ಬಗ್ಗೆ ಕನಸು ಕಂಡಿದ್ದೇ ಕಂಡಿದ್ದು... ಇತ್ತ ಈ ಹುಡುಗಿ ನನ್ನ ಜೀವನ ನನ್ನ ಆಯ್ಕೆ ಅಂತ ನಿರ್ಧರಿಸಿಬಿಟ್ಟಿದ್ಲು.. ಅದೇನೇ ಆದ್ರೂ ಅಪ್ಪಾ ನನ್ನನ್ನ ಒಪ್ಕೋತಾರೆ.. ನನ್ನ ಆಯ್ಕೆಯನ್ನ ಧಿಕ್ಕರಿಸಲ್ಲಾ.. ಮುದ್ದಿನ ಮಗಳನ್ನ ದೂರ ಮಾಡಲ್ಲಾ ಅನ್ನೋ ವಿಶ್ವಾಸಾ ಇವಳದ್ದು.. ಈ ಮಕ್ಕಳು, ಅಂದ್ರೆ ನಾವು ಎಷ್ಟು ಸೆಲ್ಫಿಶ್ಗಳು ಅಲ್ವಾ.. ? ಅಪ್ಪಾ ಅಮ್ಮನ ಬಗ್ಗೆ , ಅವರ ಯೋಚನೆಗಳ ಬಗ್ಗೆ ಕನಸುಗಳ ಬಗ್ಗೆ ಕಡೆಗೆ ಅವರು ನಮಗಾಗಿ ಬದುಕಿದ ದಿನಗಳ ಬಗ್ಗೆನೂ ಯೋಚಿಸಲ್ಲಾ ನಾವು... ನಮಗೆ ಕಾಣಿಸೋದು ಬರೀ ನಮ್ಮ ಬದುಕು.. ಅದನ್ನೂ ಸರಿಯಾಗಿ ನೊಡೋದಕ್ಕೆ ಎಲ್ಲರಿಗೂ ಬರಲ್ಲಾ.. ತುಂಬಾ ಪ್ರಜ್ಞಾವಂತಳು ಅಂತ ಅಂದ್ಕೊಂಡಿದ್ದ ಈ ನನ್ನ ಗೆಳತಿ ಕತೆನೂ ಅಷ್ಟೆ.. ಆಕೆ ಬಾವಿಯೊಳಗಿನ ಕಪ್ಪೆ ಆಗ್ಬಾರ್ದು , ಹೊರಪ್ರಪಂಚ ನೋಡ್ಬೇಕು ಅಂತ ಹೇಳ್ತಾ ಹೇಳ್ತಾನೇ ತನ್ನದೇ ಕಚೇರಿಯಲ್ಲಿ ತನಗೊಂದು ಬಾಳ ಸಂಗಾತಿಯನ್ನ ಹುಡುಕ್ಕೊಂಬಿಟ್ಲು... ಅವನೋ ಅವಳಪ್ಪನ ಕಲ್ಪನೆಯನ್ನ ಸಾಕಾರಗೊಳಿಸೋದಲ್ಲಾ, ನಮಗೂ ಈಕೆಗೆ ಸರಿಯಾದ ವರ ಅನ್ನಿಸ್ಲಿಲ್ಲಾ.. ನಾನಂತೂ ಅದನ್ನ ಬಾಯ್ಬಿಟ್ಟು ಹೇಳೇಬಿಟ್ಟಿದ್ದೆ..ಅದಕ್ಕವಳು ಮುನಿಸಿಕೊಂಡೂ ಆಗಿತ್ತು.. ಕಡೆಗೆ ಮನಸು ತಿಳಿಯಾದಾಗ ಮಾತಿಗಿಳಿದು ಹೀ ಈಸ್ ಪರ್ಪೆಕ್ಟ್ ಅಂತ ಮನದಟ್ಟು ಮಾಡೋ ಪ್ರಯತ್ನ ಮಾಡಿದ್ಲು.. ಎನಿ ಹೌ ಈ ನಂಬಿಕೆ  ಕೊನೆತನಕ ಹೀಗೇ ಇರ್ಲಿ ಅಂತ ಮನದಾಳದಿಂದ ಹರಸಿದ್ದೆ..

ಅಲ್ವಾ..? ಜಗತ್ತಲ್ಲಿ ಯಾರೂ  ಪರ್ಪೆಕ್ಟ್ ಅಂತ ಇರಲ್ಲಾ..ಆಕೆಗೆ ಅವನು, ಅವನಿಗೆ ಇವಳು ನನಗೋಸ್ಕರಾನೇ ಹುಟ್ಟಿರೋದು ಅಂತ ಅನ್ನಿಸಿಬಿಟ್ರೆ ಸಾಕು ಮದುವೆ ಆಗೋದಕ್ಕೆ... ಆದ್ರೆ ಗಂಡಾಹೆಂಡತಿ ಅಂತ ಆದ್ಮೇಲೂ ನನಗೆ ನೀನು ನಿನಗೆ ನಾನು ಅನ್ನೋ ಮಂತ್ರ ಜೀವಂತವಾಗಿರ್ಬೇಕು ಅಷ್ಟೆ... ಆ ಭರವಸೆಯಲ್ಲೇ ಈ ಬ್ರಾಹ್ಮಣರ ಮನೆಯ ಮುದ್ದಿನ ಹುಡುಗಿ ಲಿಂಗಾಯಿತರ ಮನೆಯ ಸೊಸೆಯಾಗೋ ನಿರ್ಧಾರಕ್ಕೆ ಬಂದ್ಲು..

ಜಾತಿ ಗೀತಿ ಎಲ್ಲಾ ಈಕೆಗೆ ಇಲ್ಲಾ..ಆದ್ರೆ ಮನೆಯಲ್ಲಿ ಅಪ್ಪಾ ? ದಿನ ಬೆಳಿಗ್ಗೆ ಸೂರ್ಯ ಮೂಡೋ ಮೊದ್ಲೇ ಎದ್ದು ತಣ್ಣೀರು ಸ್ನಾನ ಮಾಡಿ ಗಂಟೆಗಟ್ಲೆ ದೇವರ ಮುಂದೆ ಕೂರೋ ಖಟ್ಟಾರ್ ಬ್ರಾಹ್ಮಣನನ್ನ ಈ ಮದುವೆಗೆ ಒಪ್ಪಿಸೋದು ಹೇಗೆ..? ಲಿಂಗಾಯಿತರು ಅಂದ್ರೆ ಅವರಿಗೆ ಅಷ್ಟಕ್ಕಷ್ಟೆ.. ಅವರು ಮಡಿವಂತರು.. ಶಿವಭಕ್ತರು.. ಬ್ರಾಹ್ಮಣರಿಗೆ ಯಾವುದರಲ್ಲೂ ಕಡಿಮೆ ಇಲ್ಲದ ಥರಾ ದೇವರಲ್ಲಿ ನಡ್ಕೋತಾರೆ.. ಮಾಂಸಾ ತಿನ್ನಲ್ಲಾ.. ಎಲ್ಲಾ ಸರಿ ಆದ್ರೂ ಅವರನ್ನ ಒಪ್ಪಲ್ಲಾ.. ಆದ್ರೂ ಇವಳು ಅತ್ತೂಕರೆದು,ಅವನಿಲ್ಲದೆ ಬದುಕೇ ಇಲ್ಲಾ ಅಂತ ಊಟ ಬಿಟ್ಟಮೇಲೆ, ಪಾಪಾ ಆ ತಂದೆಯ ಹೃದಯ ಕರಗಿದೆ.. ಕಷ್ಟದಲ್ಲೇ ಒಪ್ಪಿಗೆ ಸೂಚಿಸಿದ್ರು..



ಕೆಲವೇ ತಿಂಗಳಲ್ಲಿ ಮದುವೆ ತಯಾರಿ  ನಡೀತು.. ಆದ್ರೆ ಅವರ ಮನಸಿನೊಳಗೆ ಮಗಳು ಈ ಥರಾ ಮಾಡಿದ್ಲಲ್ಲಾ ಅನ್ನೋ ಕೊರಗು ಇದ್ದೇ ಇತ್ತು.. ನಾನು ಮದುವೆ ಟೈಮಲ್ಲಿ ಮನೆಗೆ ಹೋದಾಗ್ಲೂ ಬೇಸರದಲ್ಲೇ ಹೇಳ್ಕೊಂಡಿದ್ರು..  "ಮಗಾ ನೀನೇ ಹೇಳು ಲಿಂಗಾಯಿತರು ಅಂದ್ರೆ ಬ್ರಾಹ್ಮಣರ ಥರಾನಾ..? ಈ ಜಾತಿ ಧರ್ಮದ ಬೇದ ಬೇಡಾ ಅಂತ ಬಸವಣ್ಣವರು ಎಲ್ಲರಿಗೂ ಲಿಂಗಾಹಾಕಿ ನಾವೆಲ್ಲರೂ ಒಂದೇ ಅಂದ್ರು.. ಅವತ್ತು ಅವರ ಹಿಂದೆ ನಿಷ್ಠಾವಂತ ಬ್ರಾಹ್ಮಣರ್ಯಾರೂ ಹೋಗಿಲ್ಲಾ.. ಹೋದವರಲ್ಲಿ ಹೆಚ್ಚುಪಾಲು ಜನಾ ತುಳಿತಕ್ಕೊಳಗಾದ ಕೆಳವರ್ಗದವರೇ ಅಲ್ವಾ..? ಅವರಿಗೇ ಈ ಜಾತಿ ಪದ್ಧತಿ ಬೇಡ ಅಂತ ಅನ್ನಿಸಿರತ್ತೆ.. ಎಲ್ಲೋ ಅಪವಾದ ಅನ್ನೋ ಥರಾ ಮೇಲ್ವರ್ಗದವರು ಕತ್ತುಬಗ್ಗಿಸಿರಬಹುದು ಅಷ್ಟೆ.. ಈ ಹುಡುಗ ಅಂತೂ ಕಡುಗಪ್ಪು.. ಹೇಗೋ ಏನೋ ಇವಳ ಜೀವನ " ..ಅಂತ ನಿಟ್ಟುಸಿರು ಬಿಟ್ಟಿದ್ರು.. ನಂಗೆ ಏನ್ ಹೇಳ್ಬೇಕು ತೋಚ್ಲಿಲ್ಲಾ.. ಆದ್ರೂ ಚನ್ನಾಗಿರ್ತಾರೆ ಬಿಡಿ.. ಜಾತಿ ಅನ್ನೋದು ಹುಟ್ಟಿನಿಂದ ಬರೋದಕ್ಕಿಂತ ಕ್ರಿಯೆಯಿಂದ ಸಂಸ್ಕಾರದಿಂದ ಬರಬೇಕು..ಅದರಲ್ಲಿ ಹುಡುಗ ಶುಭ್ರಬಿಳುಪು ಅಂತ ಅವಳೇ ಅಂತಿದ್ದಾಳಲ್ಲಾ.. ತುಂಬಾ ಯೋಚಿಸ್ಬೇಡಿ.. ಇಬ್ರೂ ಚನ್ನಾಗಿರ್ತಾರೆ ಅಂದಿದ್ದೆ.. ಸಂಸಾರದಲ್ಲಿ ಬರೋ ಚಿಕ್ಕಪುಟ್ಟ ಸಮಸ್ಯೆಗಳನ್ನ ಬಿಟ್ರೆ ಇಬ್ರೂ ಚನ್ನಾಗೂ ಇದ್ದಾರೆ.. ಆದ್ರೆ ಅಡ್ಜೆಸ್ಟ್ ಆಗೋದು..? ಹೇಗೇ ಇದ್ರೂ ಅದು ಅಷ್ಟು ಈಸಿ ಅಲ್ಲಾ..



ಮದುವೆಯಿಂದ ಶುರುವಾಗಿದೆ ಡಿಫರೆನ್ಸು... ಸಂಪ್ರದಾಯ ಆಚರಣೆ ಎಲ್ಲಾ ವಿಭಿನ್ನ.. ಕಡೆಗೆ ಬ್ರಾಹ್ಮಣರ ಮನೆಯ ಹುಡುಗಿ ಅಪ್ಪಟ ಲಿಂಗಾಯಿತ ಶೈಲಿಯಲ್ಲಿ ಲಗ್ನಾ ಮಾಡ್ಕೊಂಡ್ಲು.. ಮದುವೆ ದಿನ ಸಿಡಿ ಸಿಡಿ ಅಂತಾನೇ ಲಿಂಗಾನೂ ಹಾಕಿಸ್ಕೊಂಡ್ಲು.. ಕಡೆಗೆ ಒಂದು ದಿನ ಆ ಲಿಂಗ ಮೈ ಮೇಲಿಲ್ಲಾ.. ಅದಕ್ಕೇ ಈ ಹುಡುಗಿ ಅವರ ಮನೆಯಲ್ಲಿ ಯಾರಿಗೂ ಆಗ್ಬರಲ್ಲಾ... ಆಕೆ ಶಿವಮೆಚ್ಚೋ ಥರಾ ಬದುಕ್ತಾ ಇಲ್ಲಾ.. ದೇವರ ಪೂಜೆ ಮಾಡಲ್ಲಾ.. ಹಿರಿಯರಿಗೆ ನಮಿಸಲ್ಲಾ.. ಗಂಡನಿಗೂ ರಿಸ್ಪೆಕ್ಟ್ ಕೊಡಲ್ಲಾ... ಹೀಗೇ ಅವರ ಮನೆಗೆ ಹೋದ್ರೆ  ಆರೋಪಗಳ ಸುರಿಮಳೆ ಆಗತ್ತೆ.. ಅದನ್ನ ಕೇಳಿಸ್ಕೊಂಡು ಸುಮ್ಮನಿರೋದ್ಬಿಟ್ಟು ವಿಧಿ ಇಲ್ಲಾ.. ಈಕೆ ನಮ್ಮ ಮಾತು ಕೇಳಲ್ಲಾ..

ಅಷ್ಟಕ್ಕೂ ಯಾರೇ ಆದ್ರೂ ಯಾರದೋ ಲೈಫನ್ನ ಯಾಕೆ ತಮ್ಮ ಕಂಟ್ರೋಲೊಳಗೆ ತಗೋಬೇಕು..? ಅವರಿಚ್ಛೆಯಂತೆ ಅವರು ಬದುಕ್ಲಿ.. ಬದುಕೋದಕ್ಕೆ ಬಿಡ್ಲಿ.. ಸಮಾಜ ಏನ್ ಅಂದ್ಕೊಳ್ಳತ್ತೋ ಅನ್ನೋ ಜನಕ್ಕೆ ನಾವೂ ಆ ಸಮಾಜದ ಭಾಗ.. ನಾಳೆ ನಮ್ಮಂತೆನೇ ಸಮಾಜ ಆಗ್ಬಾದರ್ು ಅಂತೇನೂ ಇಲ್ಲಾ ಅಲ್ವಾ..? ಅನ್ನೋ ಯೋಚನೆ ಯಾಕೆ ಬರಲ್ಲಾ..? ಏನೋ ಒಟ್ಟಲ್ಲಿ ಈ ಹುಡುಗಿ ಬದಲಾಗಲ್ಲಾ.. ಈ ಶಿವರಾತ್ರ್ರಿಗೆ ಶಿವಲಿಂಗವನ್ನ ಮೈಗಂಟಿಸಿಕೊಳ್ಳಲ್ಲಾ ಅಂತ ಆಕೆ ಹೇಳಿದ್ಮೇಲೆ ಮುಗೀತು ಹಠಾ ಅಂದ್ರೆ ಹಠಾ.. ಇವತ್ತು ರಜೆ ತಗೊಂಡು ಮನೇಲೇ ಇದ್ದಾಳೆ.. ನಾಳೆ ಬಂದಾಗ ಆಕೆಯ ಮೂಡು ಯಾವ ಥರಾ ಇರತ್ತೋ ಗೊತ್ತಿಲ್ಲಾ... ಶಿವರಾತ್ರಿಯ ಜಾಗರಣೆ ಹೇಗಿರತ್ತೆ ನೋಡ್ಬೇಕು ಅಂದ್ಕೋತಾ ನನ್ನ ಪಾಡಿಗೆ ನಾನು ಕೆಲಸಾ ಮಾಡ್ತಾ ಇದ್ದೆ.. ಆಗ್ಲೇ ನನ್ನ ಮತ್ತೊಬ್ಬ ಲಿಂಗಾಯಿತ ಕಲೀಗ್ ಪಕ್ಕ ಬಂದು ಕೂತ್ಲು... ಮತ್ತದೇ ಲಿಂಗದ ಮಾತು.. ಆಕೆಯ ಮನೆಯಲ್ಲಿ ಅಪ್ಪಾ ಅಂಥಾ ದೈವ ಭಕ್ತರಲ್ವಂತೆ.. ಆದ್ರೆ ಅಮ್ಮಾ ಮಾತ್ರ ಒಂದು ದಿನಾನೂ ತಪ್ಪದೆ ಲಿಂಗದ ಪೂಜೆ ಮಾಡ್ತಾರೆ ಅಂದಿದ್ಲು.. ನಾನು ಸುಮ್ಮನೆ ನೀನು ಅಂದೆ.. ಓ..ಇಲ್ಲಪ್ಪಾ ನಂಗೆ ಆ ಲಿಂಗಾ ಹಾಕ್ಕೊಳ್ಳೋದೆಲ್ಲಾ ಆಗಲ್ಲಾ ಯು ನೋ ಅಂತ ಮುಖಾ ಕಿವುಚಿದ್ಲು...

ಶಿವ ಶಿವಾ .. ಹುಟ್ಟಾಲಿಂಗಾಯಿತರಿಗೂ ಲಿಂಗಾದಾರಣೆ ಬೇಡಾ ಅಂತ ಅನ್ನಿಸತ್ತಾ..? ಅಪ್ಕೋರ್ಸ್ ಬ್ರಾಹ್ಮಣರ ಮನೆಯಲ್ಲಿ ಎಷ್ಟು ಹುಡುಗರು ಸಂಧ್ಯಾವಂದನೆ ಮಾಡ್ತಾರೆ..? ಎಷ್ಟು ಹುಡುಗೀರು ಮಟ್ಟಸವಾಗಿ ಕೂತು ಸಹಸ್ರನಾಮ ಓದ್ತಾರೆ ಅಲ್ವಾ..? ಈ ಆಚರಣೆಗಳೆಲ್ಲಾ ಅಲ್ಲಿ ಇಲ್ಲಿ ಅಂತಲ್ಲಾ ಎಲ್ಲೂ ಉಳ್ಕೋತಿಲ್ಲಾ.. ಇದಕ್ಕೆ ಧರ್ಮ ಮತ್ತು ಆಚರಣೆಯ ವಿಶಯದಲ್ಲಿ ನಮಗಿರೋ ಫ್ರೀಡಮ್ಮೇ ಕಾರಣ ಅನ್ಸತ್ತೆ.. ಏನೇ ಆದ್ರೂ ಕೆಲ ಆಚರಣೆಗಳು ಕಟ್ಟುಪಾಡುಗಳು ಮೂಡನಂಬಿಕೆಗಳಂತ ಅನ್ನಿಸಿದ್ರೂ , ಅರ್ಥೈಸಿಕೊಂಡು ಸರಿಯಾದ ರೀತಿಯಲ್ಲಿ ಮಾಡಿದ್ರೆ ಲಾಭದಾಯಕ ಅನ್ನೋದು ನನ್ನ ಅಭಿಪ್ರಾಯ...

ಅಂದ್ಹಾಗೆ ಈ ಶಿವರಾತ್ರಿಯ ದಿನ ನನಗೆ ಅದ್ಯಾಕೋ ಥಟ್ ಅಂತ ಮನಸಿಗೆ ಬಂದಿದ್ದು ಶಿಪೂಜೆಯಲ್ಲಿ ಕರಡಿ  ಥರಾ ನುಗ್ಬೇಡಾ ಅನ್ನೋ ಮಾತು.. ಹುಡುಗಾ ಹುಡುಗೀರ ನಡುವೆ ಅಥವಾ ನವವಿವಾಹಿತರ ಮಧ್ಯೆ ಹೋದಾಗೆಲ್ಲಾ ಈ ರೀತಿ ಅನ್ಸಕೊಂಡಿದೀನಿ.. ಏಕಾಂತಕ್ಕೆ ಭಂಗ ತರಬಾರ್ದು ಅಂತ ಹೀಗ್ ಹೇಳ್ತಾರೆ ಅಂದ್ಕೋತಿನಿ.. ಆದ್ರೆ ಶಿವಪೂಜೆಗೇ ಯಾಕ್ ಹೋಲಿಸ್ತಾರೆ ? ಅನ್ನೋ ಪ್ರಶ್ನೆ ಮಾತ್ರ ಇಷ್ಟು ದಿನದ ಮೇಲೆ ಈಗ ಎದ್ದಿದೆ..  ಉತ್ತರ ಹುಡಕ್ತಿದೀನಿ.. ಸಹಾಯ ಮಾಡಿ ಪ್ಲೀಸ್...

 

Tuesday, February 15, 2011

ಪ್ರೀತಿಯೆ ನಿನ್ನ ವಿಳಾಸವನ್ನ...



ನೀನು ಇವತ್ತು ನಂಗೆ ಹೀಗೆ ಸಿಗ್ತೀಯಾ ಅಂತ ಅಂದ್ಕೊಂಡಿರ್ಲಿಲ್ಲಾ.. ಎಷ್ಟಂದ್ರೂ  ಮೊಟ್ಟಮೊದಲ ಕ್ರಶ್ ಅಲ್ವಾ.?:)) ಅಷ್ಟು ಬೇಗ ಮರೆಯಾಗಿಬಿಡ್ತೀಯಾ..? ಮನಸ ಮೂಲೆಯಲ್ಲೊಂದು ಮಧುರ ನೆನಪಿರೋದು ಬೇಡ್ವಾ..? ಪುಸ್ತಕದ ಪುಟಗಳಲ್ಲೆಲ್ಲೋ ಅಡಗಿ ಕುಂತಿದ್ದವು ಆ ಪುಟ್ಟ ಕೈಲಿ ಮೂಡಿದ್ದ ಅಪ್ಪಟ ಪ್ರೀತಿಯ ಎಳೆಗಳು..ಬಿಡಿಸಿ ನೋಡಿದರೆ ಸಂಭ್ರಮ.. ಪ್ರೇಮ ಸಂಭ್ರಮ..!



ಹೇಯ್,
     ನಾನು ನಿಂಜೊತೆ ತುಂಬಾ ತುಂಬಾ ಚಾಕಲೇಟ್ ತಿಂದಾಗ ಖುಶಿಯಾಗತ್ತಲ್ಲಾ ,ಅಷ್ಟು ಖುಶಿಯಾಗಿರ್ತೀನಿ.. ನಂಗೆ ನೀನು ಮನಕಟ್ಟೋದಿಷ್ಟಾ.. ಅದರಲ್ಲೂ ತೆಂಗಿನಗರಿಯನ್ನ ನಿಲ್ಲಿಸಿ ಕಟ್ತೀಯಲ್ಲಾ, ಅದಿಷ್ಟ.. ನಾನು ಗರಿ ತಂದ್ಕೊಡ್ತೀನಿ.. ನೀನು ಕಂಬಾ ನಿಲ್ಸು.. ದಿನಕ್ಕಿಂತ ಸ್ವಲ್ಪ ದೊಡ್ಡದಿರ್ಲಿ ಮನೆ.. ಹೊರಗೆ ಕೂತ್ಕೊಂಡು ಅಡುಗೆ ಮಾಡೋದು ಚನ್ನಾಗನ್ಸಲ್ಲಾ.. ನಿನಗೆ ಏನಿಷ್ಟಾ ಹೇಳು.. ಅದನ್ನೇ ಮಾಡ್ತೀನಿ.. ಎಲ್ರೂ ಚನ್ನಾಗ್ ತಿಂದ್ಕೊಂಡು ಮಲಗಿದ್ವಿ ಅಂದ್ರೆ, ಮತ್ತೆ ಆಡೋದೇ ನನಪಾಗ್ಬಾರ್ದು..ಆದ್ರೂ ಜೋಕಾಲಿ ಆಡದೇ ಇರೋದಕ್ಕೆ ನನ್ನತ್ರ ಆಗಲ್ಲಾ.. ನಂಗೆ ಅವಳಷ್ಟು ಚನ್ನಾಗಿ ಜೀಕೋದಕ್ಕೆ ಬರಲ್ವಲ್ಲೋ ..ಪ್ಲೀಸ್ ತೂಗ್ತೀಯಾ.. ? ನಾನು ಕೇಳೋದೇ ಬೇಡಾ, ಕಷ್ಟಾ ಪಡೋದನ್ನ ನೋಡಿ ಬಂದು ಕೇಳೋ ಮೊದ್ಲೇ ಸಹಾಯ ಮಾಡ್ತೀಯಲ್ಲಾ , ಅದೇ ನಂಗಿಷ್ಟಾ ?


ನಿಂಗೆ ಅಮ್ಮಾ ತೆಕ್ಕೊಟ್ಟ ಕಪ್ಪು ಗೆರೆ ಗೆರೆಯ ಶರ್ಟ್ ಇದೆಯಲ್ಲಾ ಅದನ್ನೇ ಹಾಕ್ಕೊಳೋ.. ಅದು ನಿಂಗೆ ತುಂಬಾ ಚನ್ನಾಗ್ ಕಾಣಿಸತ್ತೆ.. ನನ್ನ ದೃಷ್ಟಿನೇ ತಾಕ್ಬಿಡತ್ತೋ ಏನೋ.. ತಾಕಿದ್ರೂ ಚಿಂತೆ ಮಾಡ್ಬೇಡಾ.. ನಾನು ದೃಷ್ಟಿ ತೆಗೆಯೋದ್ ಕಲ್ಕೋತಿನಿ.. ಅದೇನ್ ಕಷ್ಟಾ ಇಲ್ಲಾ ಬಿಡು.. ನಂಗೆ ಹುಶಾರಿಲ್ಲಾ ಅಂದಾಗೆಲ್ಲಾ ಅಜ್ಜಿ ದೃಷ್ಟಿ ತೆಗೀತಾರೆ.. ಅದ್ಬಿಡು.. ನೀನು ಅದಹೆಂಗ್ ಕಲಿತ್ಯೋ ಚಿತ್ರಾ ಬಿಡಿಸೋದನ್ನಾ.. ? ಎಷ್ಟು ಚನ್ನಾಗ್ ಬಿಡಿಸ್ತೀಯಾ ಗೊತ್ತ..? ನಾನು ಮೊನ್ನೆ ಅಷ್ಟೊತ್ತಿಂದ ನೀನ್ ಕೈಯ್ಯನ್ನೇ ನೊಡ್ಕೊಂಡು ಕೂತಿದ್ನಲ್ಲೋ.. ಬಿಡಿಸೋದು ಏನೂ ಕಷ್ಟಾ ಇಲ್ಲಾ ಅನ್ನಿಸಿಬಿಟ್ಟಿತ್ತು.. ಮನೆಗೆ ಹೋಗಿ ಅದೆಷ್ಟು ಹಾಳೆ ಹರಿದಿದಿನಿ ಗೊತ್ತಾ..? ಬರ್ಲೇ ಇಲ್ಲಾ ಕಣೊ ಬಿಡಿಸಕೆ.. ನಂಗೂ ಹೇಳ್ಕೊಡ್ತೀಯಾ ಪ್ಲೀಸ್..? ನಂಗೆ ಕಲಿಸೋದಕ್ಕೋಗಿ  ನನ್ನ ಡ್ರಾಯಿಂಗ್ ಬುಕ್ ತುಂಬಾ ನೀನ್ ಬಿಡಿಸಿದ್ದೇ ಚಿತ್ರಗಳೇ ತುಂಬ್ಕೊಂಡಿವೆ.. ಅದೆಲ್ಲಾ ನಂಗಿಷ್ಟಾ..

ಆದ್ರೂ ನೀನು ಒಮ್ಮೊಮ್ಮೆ ಕೆಟ್ಟವನಾಗ್ಬಿಡ್ತೀಯಾ.. ಅವತ್ತು ಟೂರ್ಗೆ ಹೋದಾಗ ನನ್ನ ಬಿಟ್ಟು ಓಡ್ಹೋದ್ಯಲ್ವಾ..? ನಿಂಗೆ ನನ್ನ ಜೊತೆಗೆ ಇರ್ಬೇಕು ಅನ್ನಿಸ್ಲಿಲ್ವಾ ..? ನನ್ನ ಡ್ರೆಸ್ ನೋಡಿ ಎಲ್ರೂ ಹೊಗಳಿದ್ರು.. ನೀನೊಬ್ನು ಚನ್ನಾಗಿದೆ ಅಂತ ಹೇಳ್ಳಿಲ್ಲಾ.. ನಾನು ಚನ್ನಾಗನ್ಸಿಲ್ವೇನೋ ನಿಂಗೆ..? ಮತ್ಯಾಕೆ ನನ್ನ ಸುತ್ತಾ ಮುತ್ತಾ ಸುಳೀತೀಯಾ.. ನಾನ್ ತಗೊಂಡ ಐಸ್ ಕ್ರೀಮ್ ತಿಂತೀಯಾ..? ನನ್ನ ಕರ್ಚೀಪಲ್ಲೇ ಯಾಕ್ ಬಾಯ್ ಒರಸ್ಕೋಬೇಕು..? ನಾನು ನಿಂಗೆ ಏನೂ ಕೊಡಲ್ಲಾ.. ಉಹು, ಹಾಗ್ ಹೇಳೋದಕ್ಕೇ ನನ್ನತ್ರಾ ಆಗ್ಲೇ ಇಲ್ವಲ್ಲೋ.. ನೀನಂದ್ರೆ  ನಂಗಿಷ್ಟ ಕಣೊ.. ನೀನು ಹಯಸ್ಟ್ ಮಾರ್ಕ್ಸ್ ತೆಗೆದಾಗ ನಾನು ಹಬ್ಬಾ ಮಾಡ್ತೀನಿ ಗೊತ್ತಾ..? ಯಾರಾದ್ರೂ  ನಿನ್ನ ಹೊಗಳಿದ್ರೆ , ನಂಗೆ ತುಂಬಾ ಖುಶಿ ಆಗತ್ತೆ.. ಆದ್ರೂ ನೀನು ನಮ್ಮ ಕ್ಲಾಸೇ ಆಗ್ಬೇಕಿತ್ತು.. ಇಡೀ ದಿನ ಜೊತೆಗೇ ಇರಬಹುದಿತ್ತು.. ಹೊಗ್ಲಿ ಬಿಡು ನಿನಗೂ ನಾನಂದ್ರೆ ಇಷ್ಟಾ ಅಲ್ವಾ..? ನನ್ನ ಹುಡುಕ್ಕೊಂಡು ಬರ್ತೀಯಾ ಅಲ್ವಾ..? ಉಹು ಬರ್ಲೇ ಇಲ್ಲಾ.. ಯಾವಾಗ್ಲೂ ಬೇರೆಯವರನ್ನೇ ಮಾತಾಡಿಸ್ತಾ ಇದ್ದೆ.. ಆದ್ರೆ ನನ್ನನ್ನ ನೋಡದೇ ಇರ್ತಿರ್ಲಿಲ್ಲಾ.. ಅದಕ್ಕೂ ನಾನು ಖುಶಿಯಾಗ್ತಿದ್ದೆ ಬಿಡು.. ಕದ್ದುಮುಚ್ಚಿ ಪ್ರೀತ್ಸೋದು ಅಂದ್ರೆ ಇದೇನಾ..? ಗೊತ್ತಿಲ್ಲಾ ,ಕೇಳೋಣಾ ಅಂದ್ರೆ ನೀನಿರ್ಲಿಲ್ಲಾ. ಎಕ್ಸಾಮ್ ಬರೆದು ಹೊರಟೋಗಿದ್ದೆ..

 ರಿಸಲ್ಟ್ ದಿನ   ಮನೇಲಿದ್ದ ಬೆಲ್ಲದುಂಡೆಯನ್ನ ಕದ್ದು ತಂದಿದ್ದೆ ನಾನು.. ನಂಗೊತ್ತಿತ್ತು ನೀನ್ ಚನ್ನಾಗಿ ಮಾಡಿರ್ತೀಯಾ ಅಂತ..  ನೋಟೀಸ್ ಬೋರ್ಡಲ್ಲಿ ನಿನ್ನ ಹೆಸರಾಕಿ ಕಂಗ್ರಾಟ್ಸ್ ಅಂತ ಬರೆದಿದ್ರು.. ಅದನ್ನ ನೋಡಿ ಎಂಥಾ ಖುಶಿ ಗೊತ್ತಾ..? ನೀನು ಅದನ್ನ ನೋಡಿದ ತಕ್ಷಣ ಸಿಹಿ ತಿನ್ನಿಸಬೇಕು ಅಂದ್ಕೊಂಡಿದ್ದೆ.. ಎಲ್ರೂ ಹೋದ್ರು.. ನಾನು ಆ ಕಡೆ ಕಂಬದ ಮರೆಯಲ್ಲಿ ಕೂತೇ ಇದ್ದೆ.. ಯಾಕೋ ಬರ್ಲಿಲ್ಲಾ ನೀನು..? ನಿನ್ನ ತಂಗಿ ಮಧ್ಯಾನ್ಹಾ ಆಟಾ ಆಡ್ಕೊ0ಡು ಹೋಗ್ತಾ ಇದ್ದಾಗ್ಲೇ ಗೊತ್ತಾಗಿದ್ದು ನಿಂಗೆ ಜ್ವರ ಅಂತ.. ಅದಕ್ಕೂ ಈಗೇ ಬರ್ಬೇಕಿತ್ತಾ..? ಓಡ್ಕೊಂಡು ನಿಮ್ಮನೆ ತನಕ ಬಂದ್ಬಿಡ್ಬೇಕು ಅನ್ಸಿತ್ತು.. ಉಹು ಧೈರ್ಯಾ ಸಾಕಾಗ್ಲಿಲ್ಲಾ.. ಮನೆಕಡೆ ಹೊಗೋರೆಲ್ಲಾ ಹೊರಟು ಬಿಟ್ಟಿದ್ರು.. ದೂರದಲ್ಲಿ ವೆಹಿಕಲ್ ಸೌಂಡ್ ಬೇರೆ ಆಗ್ತಾ ಇತ್ತು.. ನಿಂಗೊತ್ತಲ್ವಾ ನಾನೆಷ್ಟು ಭಯಾ ಪಡ್ತೀನಿ ಅದಕ್ಕೆ ಅಂತ..ಹಂಗಾಗಿ ನಿನ್ನ ನೊಡೋದಕ್ಕೆ ಬರ್ಲಿಲ್ಲಾ.. ನೀನು ಅರ್ಥಮಾಡ್ಕೋತೀಯಾ ಅಂದ್ಕೊಂಡಿದ್ದೆ.. ಆದ್ರೆ ನಿಂಗೆ ಗೊತ್ತಾಗ್ಲೇ ಇಲ್ಲಾ ಹೊರಟೋದೆ.. ಮತ್ತೆ ಸಿಗಲಿಲ್ಲಾ..

ಎಷ್ಟೋ ವರುಷಗಳು ಕಳೆದುಹೋಗಿದ್ವು.. ನೀನು ಇವತ್ತು ನನ್ನ ಡಿಯೋದ ಪಕ್ಕಾ ಬೈಕ್ ತಂದು ನಿಲ್ಲಿಸ್ತೀಯಾ ಅಂತ ಖಂಡಿತಾ ಅಂದ್ಕೊ0ಡಿರ್ಲಿಲ್ಲಾ.. ಅಷ್ಟಕ್ಕೂ ನೀನೂ ಇಲ್ಲೇ ಇದೀಯಾ ಅನ್ನೋದೇ ಗೊತ್ತಿರ್ಲಿಲ್ಲಾ ನಂಗೆ.. ಇವತ್ತು ನಿನ್ನ ನೋಡಿ ಸಕ್ಕತ್ ಖುಶಿ ಆಯ್ತು.. ಆದ್ರೆ ನನ್ನಿಷ್ಟದ ಫೇಸ್ಟ್ರಿ ತಿಂದಾಂಗ್ ಆಗ್ಲಿಲ್ಲಾ ನೋಡು.. :)) ಅವತ್ತು ಹೇಳಲಾಗದಿದ್ದನ್ನೆಲ್ಲಾ ಇವತ್ತು ಹೇಳಿಬಿಡಬೇಕು ಅನ್ನಿಸ್ಲೇ ಇಲ್ಲಾ .. ನೀನು ಮದೊಲಿನ ಥರಾ ಇರ್ಲೇ ಇಲ್ಲಾ ಅಲ್ವಾ.. ? ಅಷ್ಟಕ್ಕೂ ನನ್ನ ಇಷ್ಟಾನೂ ತುಂಬಾನೇ ಬದಲಾಗಿದೆ.. ಈಗ ನೀನು ಅಂದ್ರೆ ನಂಗಿಷ್ಟಾ ಕಣೊ ಅಂತ ನಾನಂತೂ ಹೇಳಲ್ಲಾ.. ಹಂಗೆ ಹೇಳೋ ಹಾಗಿದ್ರೆ ಇಷ್ಟು ದಿನದಲ್ಲಿ ಎಷ್ಟೊಂದು ಜನರಿಗೆ ಹೇಳ್ಬೇಕಿತ್ತು ಗೊತ್ತಾ..?!:)


ನಾನು ಪ್ರೇಮ ಪತ್ರ ಬರೆದಿದ್ದು ನಿನಗೊಬ್ಬನಿಗೇ ಅಲ್ಲಾ.. ನನ್ನ ಕಪಾಟಿನಲ್ಲಿ ಕಟ್ಟಿದೆ.. ಬಿಚ್ಚಿದ್ರೆ ಎಷ್ಟೊಂದು ಕ್ಯಾರೆಕ್ಟರ್ಗಳು..! ಬಣ್ಣ ಬಣ್ಣದ ಕಥೆಗಳು.. ಬಟ್ ನೋ ಯೂಸ್.. ಯಾರಿಗೂ ಕೊಟ್ಟಿಲ್ಲಾ.. ಎಲ್ಲರೂ ಜಸ್ಟ್ ಮಿಸ್. ಬಟ್ ಸ್ವಲ್ಪ ದಿನಗಳ ನಂತ್ರಾ ಕೊಡದೇ ಇದ್ದದ್ದೇ ಒಳ್ಳೇದು ಅನ್ಸಿದೆ.. :) ಈಗ ಬರೆದಿಟ್ಟಿರೋ ಲವ್ ಲೆಟರ್ಗಳನ್ನ ಯಾರ ಅಡ್ರೆಸ್ಸಿಗೆ ಹಾಕ್ಬೇಕು ಗೊತ್ತಾಗ್ತಾ ಇಲ್ಲಾ.. ಹಾಗೇ ಇಟ್ಟಿರ್ತೀನಿ.. ಒಂದಲ್ಲಾ ಒಂದು ದಿನ ಆ ಅಕ್ಷರಗಳಿಗೆ ಜೀವ ಬರತ್ತೆ.. ಮಗುವಾಗಿ ಪ್ರೀತಿಸೋದ್ರಲ್ಲಿ ನಿಜಕ್ಕೂ ಮಜಾ ಇದೆ.. ಆದ್ರೆ ಅದನ್ನೂ ಮೀರಿದ ಜೀವಂತಿಕೆ ಈಗ ನನ್ನಲ್ಲಿದೆ.. ಪ್ರೀತಿಯ ವಿಳಾಸವನ್ನ ಹುಡುಕ್ಕೊ0ಡು ಎಲ್ಲಿಗೂ ಹೋಗಬೇಕಾಗಿಲ್ಲಾ..  ಅದು ನನ್ನೊಳಗಿದೆ .. ನನ್ನವರಲ್ಲಿದೆ.. ನನ್ನ ಸುತ್ತಲೂ ಇದೆ.. ಪ್ರೀತಿಯನ್ನ ಹಂಚೋದ್ರಲ್ಲಿ ಖುಶಿ ಇದೆ.. ಒಂದು ಅರ್ಥವತ್ತಾದ ಪ್ರೀತಿ ಎಲ್ಲರಬದುಕಲ್ಲೂ ಬದುಕಾಗಿರ್ಲಿ.. ಸದಾ ಜೀವಂತವಾಗಿರ್ಲಿ.. ಜೀವನದಿಯಾಗಿ ಹರೀಲಿ..