Saturday, December 22, 2012

ಸಭ್ಯ ಸಮಾಜ ಇದನ್ನ ಒಪ್ಪಲ್ವಾ..?



                                                                         ಹೆಣ್ಣು ಅಂದರೆ ಸಹನೆ, ಹೆಣ್ಣು ಅಂದರೆ ಧರಿತ್ರಿ, ಹೆಣ್ಣು ಅಂದರೆ, ತಾಯಿ ಹೆಣ್ಣು ಅಂದರೆ ಸೋದರಿ  ಹೆಣ್ಣು ಅಂದ್ರೆ ಗೆಳತಿ ಹೆಣ್ಣು ಅಂದರೆ ಒಡತಿ .. ಎಲ್ಲವೂ ನೀನು.. ಸೃಷ್ಟಿ ನೀನು.. ವೃಷ್ಟಿ ನೀನು .. ನಿನಗೆ ಗೊತ್ತಾ ಮುಷ್ಟಿಯೊಳಗಿಟ್ಟು ಕಷ್ಟಕೊಟ್ಟವರನ್ನೂ ಪ್ರೀತಿಸಿದವಳು ನೀನು.. ಹೆಣ್ಣು ಅಂದ್ರೆ  ಹರಿದು ಹಂಚಿ ತಿನ್ನೋ ಹಣ್ಣು ಅಂತ ಅಂದರೂ ಸಹಿಸ್ಕೋತೀಯಾ ತಾಯಿ.. ಬೇಡ ಈ ಸಹನೆ.. ನನಗನ್ನಿಸತ್ತೆ ಆಕೆಗೆ ಕೊಟ್ಟ ಬಿರುದುಗಳೇ ಅವಳನ್ನ ಅಸಹಾಯಕಳನ್ನಾಗಿ ಮಾಡಿಸಿದ್ದು.. ಅವಳಿಗೊಂದು ಸೀಮಿತ ರೂಪವನ್ನ ಕೊಟ್ಟಿದ್ದು..

                                                                       ಅವಳು ಸಹನಾಮಯಿ ಅಂದ್ರು.. ಆಕೆ ಬದುಕಿನ ಕಷ್ಟಗಳನ್ನೆಲ್ಲಾ ಅವಡುಗಚ್ಚಿಕೊಂಡು ಸಹಿಸಿಕೊಂಡ್ಲು.. ಭೂಮಿಯ ತೂಕ ನೋಡಿ  ಆಕೆಗೆ ಯಾರೂ ಭಾರವಾಗಲಿಲ್ಲಾ.. ದಣಿದವರಿಗೆ ಮಡಿಲಲ್ಲಿ ಮಲಗಿಸಿ ಜೋಗುಳ ಹಾಡಿದ್ಲು .. ಹಸಿದವರಿಗೆ ತುತ್ತಿಟ್ಟು ತಾಯಿಯಾದಳು.. ಸೋತು ಕೂತವರಲ್ಲಿ ಭರವಸೆ ತುಂಬುವ ಸಾಥಿಯಾದ್ಲು... ಇದ್ಯಾವುದೂ ಅವಳ ಬದುಕಿನ ದೊಡ್ಡ ಸಮಸ್ಯೆ ಆಗ್ತಿರ್ಲಿಲ್ಲ.. ಯಾಕಂದ್ರೆ ಅಲ್ಲೆಲ್ಲಾ ಮನಸು ಮಾತಾಡೋದು.. ಆದ್ರೆ ಯಾವಾಗ ದೇಹದ ಮಾತಿಗೆ ಹೂಂ ಗುಟ್ಟಿ ಪುರುಷನ ದೈಹಿಕ ವಾಂಛೆಗಳನ್ನ ತೀರಿಸಲು ದಾರಿಯಾದಳು ನೋಡಿ ಅಲ್ಲಿಂದ ಶುರುವಾಯ್ತು ಸಮಸ್ಯೆ..!

                                                                      ಹೆಣ್ಣಾಗಿ ಹುಟ್ಟೋದು ಸೌಭಾಗ್ಯಾನಾ? ನನ್ನ ಬದುಕನ್ನ ಅವಲೋಕಿಸಿಬಿಟ್ರೆ ನನಗೆ ಹೌದು ಪುಣ್ಯ ಮಾಡಿದವರಿಗೆ ಮಾತ್ರ ಪ್ರಕೃತಿಯಾಗೋ ಅವಕಾಶ ಸಿಗತ್ತೆ ಅನ್ನಿಸುತ್ತೆ.. ಆದ್ರೆ ಸಮಾಜವನ್ನ ನೋಡಿದ್ರೆ ಹೆಣ್ಣು ಶಾಪಗ್ರಸ್ಥ ಸೃಷ್ಟಿ ಅನ್ನಿಸಿಬಿಡೋದು ಸುಳ್ಳಲ್ಲಾ.. ಹುಟ್ಟಿನಿಂದ ಶುರುವಾಗತ್ತೆ ತಾರತಮ್ಯ.. ಹೆಣ್ಣಾದರೆ ಮಾತ್ರ ಕಣ್ಬಿಡುವ ಮುನ್ನವೇ ಭ್ರೂಣ ಹತ್ಯೆಯ ಹೆಸರಲ್ಲಿ ಸಾಯುವ ಸಂಕಷ್ಟ.. ಎಲ್ಲರಿಗೂ ವಂಶೋದ್ಧಾರಕ ಬೇಕು, ಮುಕ್ತಿ ಮಂತ್ರ ಪಠಿಸುವವ ಬೇಕು.. ಅಂಥವರಿಗಂತೂ ಹುಟ್ಟಿದ ಮಗು ಹೆಣ್ಣಾದ್ರೆ ಹೆತ್ತವಳನ್ನೂ ಬಲಿಕೊಟ್ಟುಬಿಡೋ ಮನಸಾಗತ್ತೆ.. ಆ ಕ್ರೂರ ಮನೋಭಾವ ಈಗ ನಿಧಾನಗತಿಯಲ್ಲಾದರೂ ಸರಿ ದೂರ ಹೋಗ್ತಿದೆ.. ಅಲ್ಲಿ ಇಲ್ಲಿ ನಡೆಯೋ ಒಂದೊಂದು ಪ್ರಕರಣಗಳಿಗೆ ಕಾನೂನು ಕಠಿಣ ಶಿಕ್ಷೆಯನ್ನ ಕೊಟ್ಟು ದಾರಿಗೆ ತರುವ ಪ್ರಯತ್ನ ಮಾಡ್ತಿದೆ.. ಒಟ್ಟಲ್ಲಿ ಗಂಡು ಮಗುನೇ ಬೇಕು ಅಂತ ನಿಲ್ಲೋರ ಸಂಖ್ಯೆ ಕಡಿಮೆ ಆಗ್ತಿದೆ.. ಇದರಿಂದ ಪ್ರಕೃತಿಯಲ್ಲಿ ಮತ್ತೆ ಬ್ಯಾಲೆನ್ಸ್ ಆಗಬಹುದು ಅನ್ನೋದು  ಒಂದು ಆಶಾ ಭಾವ.  ಆದ್ರೆ ಇವತ್ತಿನ ಪರಿಸ್ಥಿತಿಯಲ್ಲಿ ಹುಟ್ಟೋ ಮಗು ಹೆಣ್ಣೋ ಗಂಡೋ ಯಾವುದಾದರೂ ಒಂದೇ ಅಂತ ಅಂದ್ಕೊಳ್ಳೋರ ಮನಸಲ್ಲೂ ಹೆಣ್ಣುಮಗು ಹಿಟ್ಟಿದಾಗ ಆಗೋ ಖುಷಿನೇ ಬೇರೆ, ಗಂಡು ಹುಟ್ಟಿದಾಗ ಆಗೋದೇ ಬೇರೆ.. ಹೆಣ್ಣಿನ ವಿಷಯಕ್ಕೆ ಬಂದಾಗ ಆಕೆಯ ಸೇಫ್ಟಿ ಭಯ ಹುಟ್ಟಿಸಿಬಿಡುತ್ತೆ..  ಈ ಸಮಾಜದಲ್ಲಿ ಹೆಣ್ಣುಮಗಳನ್ನ ಕಾಪಾಡಿಕೊಳ್ಳೋದು ಅದೆಂಥಾ ಕಷ್ಟ ಅನ್ನೋದು ಹೆಣ್ಣು ಹೆತ್ತವರಿಗಷ್ಟೇ ಅಲ್ಲಾ , ಪ್ರತಿಯೊಬ್ಬ ಪುರುಷನ ಪೌರುಷತ್ವಕ್ಕೂ ಗೊತ್ತು.. ಹೆರುವ ತಾಯಿಯ ಹೃದಯಕ್ಕೆ ಗೊತ್ತು...

                                                                      ಹೆಣ್ಣಾಗಿ ಹುಟ್ಟಿ ಹುಣ್ಣಾಗುವುದಕ್ಕಿಂತ ಗಿಡದ ಮೇಲಿನ ಹಣ್ಣೇ ವಾಸಿ.. ಹಣ್ಣಾದರು ತಿನ್ನೋದಕ್ಕೆ ಮಾಗಬೇಕು.. ಆದರೆ ಹೆಣ್ಣು ... ಹುಟ್ಟಿದರೆ ಸಾಕು.. ಭೋಗಿಸುವವರಿಗದೆಷ್ಟು ಬಾಗಿಲುಗಳು ಅಂತೀರಾ , ಒಬ್ಬಳು ತಾಯಿ ಅದ್ಯಾವ ಬಾಗಿಲನ್ನ  ಅಂತ ಹಾಕಿಕೊಂಡು  ಬರ್ತಾಳೆ.. ಮಲಗಿಸಿಟ್ಟ ಮಗುವನ್ನ ಮುದ್ದಿಸೋ ನಿರ್ಮಲ ಪ್ರೀತಿಯಲ್ಲೂ ಮೋಸವೇನಾದ್ರೂ ಇದ್ಯಾ ಅಂತ ಹುಡುಕಬೇಕು. ಯಾಕಂದ್ರೆ ಅಪರಿಚಿತರನ್ನ ಬಿಟ್ಟುಬಿಡಿ, ಸ್ನೇಹಿತರು ಸಂಬಂಧಿಕರು ಕೊನೆಗೆ ಸ್ವತಃ ಜನ್ಮ ಕೊಟ್ಟ ತಂದೆ ಕೂಡಾ ಮಾಗದ ಮೊಗ್ಗಿನಂತಾ ಮಗುವಿನ ಮೇಲೆ ಮದವೇರಿಸಿಕೊಂಡು ಮುಗಿಬಿದ್ದ ಉದಾಹರಣೆ ಇದೆ.. ಇವತ್ತಿನ ದಿನ ಇದು ಎಲ್ಲೋ ತೀರಾ ಅಪರೂಪಕ್ಕೊಂದು ದುರ್ಘಟನೆಯಾಗಿ ಉಳಿದಿಲ್ಲ.. ಇದಕ್ಕೆ ಕಾರಣ ಏನು..? ಅರ್ಥವಾಗದೇ ಅಳ್ತಾ ಇರೋರು ನಾವು..!

                          ಹೆಣ್ಣು ಮಗುವಿಗೇ ಈ ಪರಿಸ್ಥಿತಿ ,ಅದೇ ಸ್ಕೂಲು ಕಾಲೇಜು ಅಂತ ಕಳಿಸೋವಾಗ ಇನ್ನೆಷ್ಟು ಕಷ್ಟ ಅನುಭವಿಸಬೇಕು..ಯಾವ ಗಲ್ಲಿಯಿಂದ ಯಾವ ಪೊದೆಯಿಂದ ಇನ್ಯಾವ ವೆಹಿಕಲ್ಲಿಂದ ಕಾಮಾಪಿಶಾಚಿಯ ವಕ್ರ ದೃಷ್ಟಿ ಬೀರತ್ತೆ ಅನ್ನೋದನ್ನ ಹೇಳೋದಾದರೂ ಹೇಗೆ..? ಹೊಸಕಿಹಾಕಿಬಿಡ್ತಾರೆ ಅವಳ ಕನಸುಗಳನ್ನ.. ಮಾಗದ ಮನಸನ್ನ..

                        ಇನ್ನು ಹರಯದಲ್ಲಿ ಹೃದಯ ಸಹಜವಾಗೇ ಹೊಸತನದ ಹುಡುಕಾಟಕ್ಕೆ ನಿಲ್ಲತ್ತೆ.. ಹೃದಯಕ್ಕೆ ಹತ್ತಿರವಾಗುವವರ ಸಂಖ್ಯೆ ದೊಡ್ಡದು.. ಅದು ಸ್ನೇಹಾನಾ ಪ್ರೀತಿನಾ ಅಥವಾ ಅದೆಲ್ಲವನ್ನೂ ಮೆಟ್ಟಿ ನಿಲ್ಲುವ ಕಾಮವಾಗಿಬಿಡುತ್ತಾ ? ಯೋಚನೆಯನ್ನೇ ಮಾಡದ ವಯಸ್ಸು ಅದು.. ಆಗ ಪಾರಿಜಾತದಂತಾ ಪೋರಿಯನ್ನ ಆಸ್ವಾದಿಸಿ ಅಡಗಸಿಬಿಡೋ ಅದೆಷ್ಟು ಘಟನೆಗಳು ನಡೆದಿಲ್ಲಾ..? ಹೇಗೆ ಆಕೆ ಈ ದೌರ್ಜನ್ಯದಿಂದ ಬಚಾವ್ ಆಗೋದು.

                                                                ಈಗ ಹುಡುಗಿ ಮನೆಯೊಳಗೆ ಸೆರಗೊದ್ದು ಗಂಡನ ಪಾದಕ್ಕೆ ಹಣೆ ಹಚ್ಚಿ ಅಪ್ಪಟ ಪತಿವೃತ ಗೃಹಿಣಿಯಂತೆ ತನ್ನನ್ನ ತಾನು ಬಿಂಬಿಸಿಕೊಳ್ಲೋದಕ್ಕೆ ಇಷ್ಟಾಪಡಲ್ಲಾ. ತಾನು ಪುರುಷನಿಗೆ ಸರಿಸಮಾನಳು ಅಂತಾಳೆ.. ಭಟ್ಟೆಯಷ್ಟೇ ಬದಲಾಗೋದಲ್ಲ.. ಆಕೆಯ ವ್ಯಕ್ತಿತ್ವವೇ ಬದಲಾಗತ್ತೆ.. ಯಶಸ್ಸಿನ ಹಾದಿ ದಿಕ್ಕು ನೋಟ ಎಲ್ಲವೂ ಬದಲಾಗತ್ತೆ. ಮನೆಯಿಂದ ಹೊರಬರ್ತಾಳೆ.. ಗಗನದೆತ್ತರಕ್ಕೆ ಹಾರ್ತಾಳೆ.. ಕಬ್ಬಿಣದ ಕಡಲೆಯನ್ನೂ ಜಗಿದು ತೋರಿಸ್ತಾಳೆ.. ಬದುಕಿನ ಭಾರವನ್ನ ಬುಜದ ಮೇಲೆ ಹೊತ್ತು ನಿಂತು ಗೆಲುವಿನ ನಗೆ ಬೀರ್ತಾಳೆ.. ಎಲ್ಲದರಲ್ಲೂ ಹುಡುಗಿ ಗೆಲ್ಲಬಲ್ಲಳು.. ಮನೆಯ ಹೊರಗೆ ಒಳಗೆ.. ಆದ್ರೆ ಸೆಕ್ಸ್ ವಿಷಯದಿಂದ ಸಮಾಜದಲ್ಲಿ  ಅವಳ ಮೇಲೆ ಆಗೋ ದೌರ್ಜನ್ಯವನ್ನ ಆಕೆಯಿಂದ ಗೆಲ್ಲೋದಕ್ಕೆ ಆಗುತ್ತಾ.. ? ಹುಡುಗಿ ಅನ್ನೋ ಕಾರಣಕ್ಕೆ ಅವಳು ಅವಕಾಶ ವಂಚಿತಳಾಗಲ್ವಾ..?  ಆಕೆಯ ಮೇಲೆ ನಡೆಯೋ ದೈಹಿಕ ಮತ್ತು ಮಾನಸಿಕ ದೌರ್ಜನ್ಯಗಳು ಕಡಿಮೆ ಅಲ್ಲಾ.

                                                                ಹೆಣ್ಣನ್ನ ಭೋಗದ ವಸ್ತು ಅಂದುಕೊಳ್ಳದಿದ್ದರೆ ಕಾಮ ಅನ್ನೋದು ಕೆಟ್ಟದ್ದಲ್ಲಾ..ಆದ್ರೆ ಸಮಾಜ ಅದನ್ನ ಕೆಟ್ಟದ್ದನ್ನಾಗಿ ಮಾಡ್ತಿದೆ.. ಜನ ಅದನ್ನ ಕೆಟ್ಟ ದೃಷ್ಟಿಯಲ್ಲಿ ನೋಡ್ತಿದ್ದಾರೆ..   ನಿದ್ದೆ ಊಟ ಎಲ್ಲಾ ಇದ್ದಹಾಗೆ ಸೆಕ್ಸ್ ಕೂಡಾ.. ಅದು ಮಹಿಳೆಗಿಂತ ಪುರುಷನಿಗೆ ಒಂದು ಹಂತಕ್ಕೆ ಅನಿವಾರ್ಯ.. ಆ ಅನಿವಾರ್ಯತೆಯನ್ನ ಮಹಿಳೆ ದಾಳವಾಗಿಟ್ಟುಕೊಂಡು ಆಡೋಹಾಗೆ ಇದ್ದುಬಿಟ್ಟಿದ್ರೆ ಇಷ್ಟೊತ್ತಿಗೆ ಪುರುಷ ಪ್ರಧಾನತೆ ಹೋಗಿ ಮಹಿಳೆಯ ಪ್ರಾಭಲ್ಯ ನೆಲೆಸಿಬಿಟ್ಟಿರೋದು.. ಆದ್ರೆ ಇಲ್ಲಿ ಪ್ರಧಾನತೆ ಅಲ್ಲಾ ಇಂಪಾಟರ್ೆಂಟು.. ಮನಸ್ಥಿತಿ.. ಪರಸ್ಪರ ಗೌರವದ ಭಾವ.. ಬೆರೆವ ಪ್ರೀತಿ.. ಎಲ್ಲಿ ದೇಹಗಳಲ್ಲದೆ ಮನಸುಗಳ ಮಿಲನವಾಗತ್ತೋ ಅಲ್ಲಿ ನಿಜವಾದ ಸುಖದ ಅನುಭೂತಿಯಾಗುತ್ತೆ.. ಅಂಥಾ ಕಾಮವನ್ನ ದೇವರನ್ನ ತೋರಿಸೋ ದಾರಿ ಅಂದಿದ್ದ ಓಶೊ.. ಅದನ್ನ ಅರ್ಥಮಾಡ್ಕೊಂಡವರು ಕಡಿಮೆ.. ಹಂಗಾಗಿ ಇವತ್ತಿಗೂ ಸಮಾಜದ ದೃಷ್ಟಿಯಲ್ಲಿ ಅದು ಕೆಟ್ಟದ್ದು. ಕಾಮ ಅನ್ನೋದು ಯಾವಾಗ ಕೆಟ್ಟದ್ದಾಗತ್ತೆ ಅನ್ನೋ ಬಗ್ಗೆ ಯೋಚಿಸೋರು ಕಡಿಮೆ.

                                                                ಹೆಂಡತಿ ಕಂಪ್ಲೆಂಟ್ ಕೊಡೋದಕ್ಕೆ ಬರ್ತಾಳೆ .. ಗಂಡನಿಂದಲೇ ರೇಪ್ ಆಗಿದೆ ಅಂತ.. ಆದ್ರೆ ಅದನ್ನ ತಗೋಬೇಕು ಅಂತ ಪೊಲೀಸರಿಗೆ ಅನ್ನಿಸಲ್ಲಾ.. ಇದೆಂಥಾ ಮಾತಾಡ್ತಾಳಪ್ಪಾ ಇವಳು ಅಂತ ನಕ್ಕುಬಿಡ್ತಾರೆ.. ಹಾಗಾದ್ರೆ ಮದುವೆಯ ಚೌಕಟ್ಟಲ್ಲಿ ಒಂದಾಗಿಬಿಟ್ಟ ಮಾತ್ರಕ್ಕೆ ಬಲಾತ್ಕಾರ ನಡೆಯಲ್ಲಾ ಅಂತಾನಾ..? ಪರಸ್ಪರ ಒಪ್ಪಿಗೆ ಇಲ್ಲದೆ ಸೇರೋದೆಲ್ಲಾ ಬಲಾತ್ಕಾರ ಅನ್ನೋದು ತುಂಬಾ ಜನರಿಗೆ ಇವತ್ತಿಗೂ ಅರ್ಥವಾಗಿಲ್ಲ.. ಇನ್ನು ವಿವಾಹೇತರ ಸಂಬಂಧ ಇಟ್ಟುಕೊಂಡ ಹೆಣ್ಣುಮಗಳೊಬ್ಬಳು ಒಂದು ಸಂದರ್ಭದಲ್ಲಿ ಯಾವುದೋ ಕಾರಣಕ್ಕೆ ಬೇರೆಯಾದವನ ವಿರುದ್ಧ ರೇಪ್ ಕೇಸ್ ಕೊಡ್ತಾಳೆ.. ಅದನ್ನ ಮರು ಮಾತಾಡದೇ ತಗೊತಾರೆ.. ಅದ್ಹ್ಯಾಗೆ ರೇಪ್ ಆಗುತ್ತೆ ಹೇಳಿ.. ನಂಬಿಕೆ ದ್ರೋಹ ಅಷ್ಟೆ. ಅದೇ ಮನಸು ಮಾಗದ ಹುಡುಗಿಯೊಬ್ಬಳಿಗೆ ಪುಸಲಾಯಿಸಿ ಅನುಭವಿಸಿ ಅವಳು ಒಪ್ಪಿದ್ಲು ಅಂದ್ರೆ ತಪ್ಪಾಗತ್ತೆ. ಆದ್ರೆ ಒಂದು ನೆನಪಿರಲಿ ಒಪ್ಪಿ ಒಂದಾಗಲಿ ಒಪ್ಪದೇ ಒಂದಾಗ್ಲಿ ತಪ್ಪು ನಡೆದಾಗ ಅದರಲ್ಲಿ ನಷ್ಠವಾಗೋದು ಹೆಣ್ಣಿಗೆ.. ಪೆಟ್ಟು ಬೀಳೋದು ಹೆಣ್ಣಿಗೆ .. ಸಮಾಜದ ದೃಷ್ಟಿಯಿಂದ ಕುಸಿದು ಬೀಳುವವಳು ಹೆಣ್ಣು.. ಹಾಗಿದ್ದಾಗ ಮಾಡಿದ ತಪ್ಪುಗಳನ್ನೆಲ್ಲಾ ಮೀರಿ ಬರೋ ಯೋಚನೆ ಹೆಣ್ಣಾಗಿ ಹುಟ್ಟಿದ್ದೇ ತಪ್ಪು ಅಂತ.!

                                                                ಮಗಳನ್ನ ಜೋಪಾನ ಮಾಡೋದಕ್ಕಾಗದೆ ಕಣ್ಣೀರಿಡೋ ತಂದೆಯನ್ನ ನೋಡಿದಾಗ ಗಂಡಸರು ಕೂಡಾ ಅಸಹಾಯಕರು ಅಂತ ನನಗೆ ಅನ್ನಿಸಿರ್ಲಿಲ್ಲ.. ಹೆಣ್ಣು ಹೆತ್ತವರ ಕಷ್ಟ ಇದು ಅನ್ಸಿತ್ತು.. ಆದ್ರೆ ಯಾವಾಗ ತನ್ನ ಗೆಳತಿಯನ್ನ ರಕ್ಷಿಸೋದಕ್ಕಾಗದೆ ಹುಡುಗನೊಬ್ಬ ಕುಸಿದು ಕೂರ್ತಾನೋ ಆಗ ಇಡೀ ಸಮಾಜವೇ ಅಸಹಾಯಕವಾಗಿದೆ ಅನ್ನಿಸಿಬಿಟ್ತು.. ದೆಹಲಿಯಲ್ಲಿ ನಡೆದ ಕೇಸು ಪುರುಷರು ತಲೆತಗ್ಗಿಸೋದೊಂದೇ ಅಲ್ಲಾ ಸಿಡಿದೇಳೋ ಹಾಂಗ್ ಮಾಡ್ತು. ಇನ್ನಾದ್ರೂ ಇದಕ್ಕೆ ಕಡಿವಾಣ ಬೀಳದೇ ಇದ್ರೆ ಹೇಗೆ..?


                                  ನ್ಯಾಯಕ್ಕಾಗಿ ಹೋರಾಟ ಶುರುವಾಗಿದೆ.. ಲಿಂಗ ಬೇಧವಿಲ್ಲದೆ ಜನ ಬೀದಿಗಿಳಿದಿದ್ದಾರೆ.. ತಪ್ಪಿತಸ್ಥರಿಗೆ  ತಕ್ಷಣ ಶಿಕ್ಷೆ ಆಗ್ಬೇಕು ಅನ್ನೋದೇ ಬೇಡಿಕೆ.. ಗಲ್ಲಿಗೇರಿಸಿ ಅಂತ ಕೇಳ್ಕೋತಿರೋರು ತುಂಬಾ ಜನ.. ಆದ್ರೆ ಅವರಿಗೆಲ್ಲಾ ನನ್ನದೊಂದು ಪ್ರಶ್ನೆ ಆ ರೇಪಿಸ್ಟ್ ಗಳನ್ನ ಸಾಯಿಸಿದ್ರೆ ಆ ಹುಡುಗಿಗೆ ನ್ಯಾಯ ಸಿಕ್ಕಂಗಾಗತ್ತಾ..? ಅವಳು ಬದುಕಿನುದ್ದಕ್ಕೂ ಅನುಭವಿಸೋ ಯಾಥನೆಯನ್ನ ಇವರು ಅನುಭವಿಸ್ತಾರಾ..? ಅನುಭವಿಸಬೇಕು.. ಸಮಾಜದಲ್ಲಿ ತಲೆ ಎತ್ತಿ ನಡೆಯಲಾಗದ ಪರಿಸ್ಥಿತಿ ಅವರಿಗೆ ಎದುರಾಗಬೇಕು.. ಅಂಥವರ ಬದುಕಲ್ಲಿ ಮುಂದೆ ಯಾವತ್ತೂ ಹೆಣ್ಣಿನ ಛಾಯೆಕೂಡಾ ಬೀಳದಂತಾಗ್ಬೇಕು.. ಮದುವೆ ಆದವರಾದ್ರೆ  ಸ್ವಂತ ಹೆಂಡತಿಯ ಜೊತೆಗೂ ಇನ್ಯಾವತ್ತೂ ಸುಖಪಡಬಾರದು.. ಯಾವ ಪುರುಷತ್ವವನ್ನ ಅವರು ದುರುಪಯೋಗ ಪಡಿಸಿಕೊಂಡಿದ್ದಾರೋ ಅದನ್ನೇ ಬೇರುಸಹಿತ ಕೀಳಬೇಕು... ಅಷ್ಟಾದರೆ , ಅವರಷ್ಟೇ ಅಲ್ಲಾ ಇಡೀ ಕಾಮುಕ ಸಮಾಜ ಪಾಠಾ ಕಲಿಯುತ್ತೆ.. ಹೆಣ್ಣುಮಕ್ಕಳನ್ನ ಕೆಟ್ಟ ದೃಷ್ಟಿಯಿಂದ ನೊಡೋರ ಕಣ್ಣಿಗೆ ಕಡಿವಾಣ ಬಿದ್ದಂಗಾಗತ್ತೆ.. ಇದಲ್ವಾ ನಿಜವಾಗಿಯೂ ನಮಗೆ ಬೇಕಾಗಿರೋದು... ಆದ್ರೆ ನಮ್ಮ ಕಾನೂನು ಇದಕ್ಕೆ ಒಪ್ಪತ್ತಾ..?

                                                      ಸಂಸ್ಕೃತಿ ಬದಲಾಗತ್ತೆ... ಸಂಪ್ರದಾಯ ಬದಲಾಗುತ್ತೆ.. ಯೊಚನಾ ಶೈಲಿ ಬದಲಾಗುತ್ತೆ.. ಒಟ್ಟಾರೆ ಬದುಕುವ ರೀತಿಯೇ ಬದಲಾಗುತ್ತೆ.. ಆದ್ರೆ ನಮ್ಮ ಕಾನೂನು ಬದಲಾಗಲ್ಲಾ.. ಅದರಲ್ಲಿ ಅಮೆಂಡ್ಮೆಂಟ್ ತರೋ ಮಾತೇ ಇಲ್ಲಾ.. ಕಾಲಕ್ಕೆ ತಕ್ಕ ಹಾಗೆ , ಸಮಾಜದ ಉನ್ನತಿಗೆ ಬೇಕಾದ ಹಾಗೆ ಯಾಕೆ ಅದು ಬದಲಾಗ್ಬಾದರ್ು..? ಹಾಗಂತ ಬದಲಾವಣೆ ಬರೋದೇ ಇಲ್ಲಾ ಅಂತಲ್ಲಾ.. ಚಿತ್ರ ವಿಚಿತ್ರ ಅನ್ನಿಸೋ ಬದಲಾವಣೆಗಳೂ ನಮ್ಮಲ್ಲಿ ಬರುತ್ವೆ.. ಒಮ್ಮೆ ಅಧಿಕಾರದಲ್ಲಿರೋರು ಆದೇಶಿಸಿಬಿಟ್ರೆ ಮರು ಮಾತನಾಡೋ ಹಕ್ಕು ನಮಗಿಲ್ಲ..  ಒಂದ್ವೇಳೆ ಕಾನೂನಿನ ಆದೇಶವನ್ನ ರಸ್ತೆಯಲ್ಲಿ ನಿಂತು ಧಿಕ್ಕರಿಸೋ ಹಕ್ಕು ,  ಜನಸಾಮಾನ್ಯನಿಗಿದ್ರೆ ಇವತ್ತು ಕಾರ್ಗಳಲ್ಲಿ ಕೂಲಿಂಗ್ ಪೇಪರ್ ತೆಗೀಬೇಕು ಅನ್ನೋದನ್ನ ಜನ ಒಪ್ಕೋತಿದ್ರಾ..?  ಪಾಪಾ ಅವರಾದ್ರೂ ಅನಿವಾರ್ಯವಾಗಿ ಕಾನೂನಿನ ಕಣ್ಣಿಗೆ ಬಟ್ಟೆ ಕಟ್ತಾರೆ.. ಕಾರುಗಳಿಗೆ ಕರ್ಟನ್ ಹಾಕ್ತಾರೆ.. ಅಲ್ಲಿಗೆ ಕಾರಿನೊಳಗೆ ಅದೇನ್ ಅಕ್ರಮ ನಡೆದ್ರೂ ಖಾಕಿಗಳು ಕಣ್ಣು ಹಚ್ಚಿ ನೊಡೋಕಾಗಲ್ಲಾ.. ಅಲ್ಲಿಗೆ ಇದೊಂದು ಕಾನೂನು ಬಂದು ಏನ್ ಪ್ರಯೋಜನ.. ಜನರ ಕಷ್ಟ ಸುಖಗಳನ್ನೂ ಅರ್ಥ ಮಾಡ್ಕೊಂಡು ಆರ್ಡರ್ ಮಾಡ್ಬೇಕು.. ಅದೇನೂ ಇಲ್ಲದೆ ವಿಚಿತ್ರ  ಬದಲಾವಣೆಗಳು ಯಾವ ಸದ್ದಿಲ್ಲದೆ ಬಂದು ಸೇರ್ಕೊಂಬಿಡುತ್ವೆ.. ಆದ್ರೆ ಇಡೀ ಸಮಾಜದ ಸ್ವಾಸ್ತ್ಯ ಕಾಪಾಡಬಹುದಾದ , ದೇವತಾರೂಪಿ ಹೆಣ್ಣಿಗೆ ನಿಜಕ್ಕೂ ರಕ್ಷಣೆ ಕೊಡಬಹುದಾದ ಒಂದು ಮಹತ್ವದ ತೀಪರ್ು ಕಾನೂನಿನ ಪುಠದೊಳಗೆ ಯಾಕೆ ಸೇರ್ಪಡೆ ಆಗಲ್ಲಾ..? ಈ ನಿಟ್ಟಿನಲ್ಲೂ ಒಂದು ಹೋರಾಟ ನಡೆದರೆ ಸೂಕ್ತ..

                                                           ಅಂದ್ಹಾಗೆ ಇದು ಪುರುಷ ವಿರೋಧಿ ನೀತಿ ಅಲ್ಲಾ..ಸ್ತ್ರೀ ವಾದವೂ ಅಲ್ಲಾ..  ಕಣ್ಣಿಗೆ ಕಾಣುವ ಸಮಾಜದ ಕರಾಳ ಮುಖದ ಅವಲೋಕನ.. ಬದಲಾವಣೆ ಕಾಣದ ಅಸಮಾಧಾನ.. ಅಸಹಾಯಕತೆಯ ಬೇಸರ.. ಕೊನೆಯದಾಗಿ ಕಾಮುಕರ ಕೈಗೆ ಸಿಕ್ಕಿ ನರಳಾಡಿದ ಹುಡುಗಿಯರಿಗೆ ಮುಂದೊಂದು ದಿನ ನೆಮ್ಮದಿಯ ನಿಟ್ಟುಸಿರು ಬಿಡುವ ಸಮಯ ಬರಬಹುದು ಅನ್ನೋ ಭರವಸೆಯ ಸಾಂತ್ವನ ಅಷ್ಟೆ.. 

Friday, January 6, 2012

ನಾನು- ನನ್ನ ಲೋಕ..!





ಆ ಪುಟ್ಟ ಲೋಕ ಸಂದರವಾಗಿತ್ತು.. ಅಲ್ಲಿ ನಾನೊಬ್ಬಳೇ ಇದ್ದೆ.. ನನಗಿಷ್ಟವಾಗಿದ್ದನ್ನೇ ನನಗೆ ಕೊಡ್ತಾ ಇದ್ರು.. ಇಲ್ಲಾ ಅಂದ್ರೆ ನಾನು ಸುಮ್ಮನಿರ್ತಾ ಇದ್ನಾ ? ಅರಚಾಡಿ ,ಉಳ್ಳಾಡಿಬಿಡ್ತಿದ್ದೆ.. ನನ್ನ ಮೇಲಿನ ಭಯಕ್ಕೇ ಇರಬೇಕು ನನಗೆ ಹಿತ ಅನ್ನಿಸೋ ಥರಾನೇ ಇರ್ತಾ ಇದ್ರು.. ನನಗೆ ಸರಿಹೊಗೋ ಥರಾ ಮಲಗಿಕೊಳ್ತಾ ಇದ್ರು.. ನನಗೆ ಚಳಿ ಆಗದ ತರ ನೋಡ್ಕೋತಿದ್ರು.. ಹಸಿವು ಕಾಡದಂತೆ ಕಾಳಜಿವಹಿಸ್ತಾ ಇದ್ರು.. ಒಟ್ಟಲ್ಲಿ ನಾನು ಅಲ್ಲಿ ರಾಣಿ.. ಆ ಅನುಭವದ ಉತ್ತುಂಗದ ಸಂಭ್ರಮದಲ್ಲಿ ನಾನಿದ್ದಾಗಲೇ ಅದೇನೋ ಒತ್ತಡ.. ತಲೆತಿರುಗಿದಂತಾಗಿತ್ತು.. ನನಗೆ ಹೊರಳಾಡೋದಕ್ಕೇ ಆಗಲಿಲ್ಲ.. ಇದ್ದ ಜಾಗಾ ಜಾರುತ್ತಿತ್ತು.. ಜೋರಾಗಿ ಕೂಗಿಕೊಂಡರೂ ಪ್ರಯೋಜನ ಆಗಲಿಲ್ಲ.. ನಾನು ದೊಡ್ಡದ್ಯಾವುದೋ ಸಂಕಷ್ಟದಲ್ಲಿ ಸಿಲುಕಿದ್ದೆ.. ನಿಂತಜಾಗ ಕುಸಿದಂತಾಗಿತ್ತು.. ನಾನು ನನ್ನಲೋಕದಿಂದ ಅಷ್ಟಷ್ಟಾಗಿ ಹೊರಹೋಗ್ತಾ ಇದ್ದೆ.. ಕೊನೆಗೆ ಒಮ್ಮೆಲೇ ನಾನು ಕಂಡುಕೇಳರಿಯದ ಬೇರೆಯದೇ ಲೋಕ ನನ್ನ ಕಣ್ಣಮುಂದಿತ್ತು.. ಭಯಾ ಆಗಿ ಚೀರಿಕೊಂಡೆ..

ನಾನು ಎಲ್ಲಿದ್ದೀನಿ, ನನಗೆ ಏನ್ ಮಾಡ್ತಾ ಇದ್ದಾರೆ  ಒಂದೂ ಅರ್ಥವಾಗ್ತಾ ಇರಲಿಲ್ಲ.. ಈ ವಿಚಿತ್ರಲೋಕದಲ್ಲಿ ಕಣ್ಣು ಬಿಡೋದಕ್ಕೂ ನನಗೆ ಭಯ.. ಯಾವುದೋ ದೊಡ್ಡ ಜೀವಿ ನನ್ನನ್ನ ಒರಟೊರಟಾಗಿ ಮೇಲೆತ್ತಿದಾಗ, ಉಸಿರೇ ನಿಂತ್ಹೋದಾಂಗ್ ಆಗಿತ್ತು.. ನಾನು ಇಲ್ಲಿ ಜಾಸ್ತಿ ಹೊತ್ತು ಇರಬಾರದು ಅನ್ನೋ ಯೋಚನೆ ಬಂದು ,ಏಳೋದಕ್ಕೆ ನೋಡಿದೆ.. ಕೈ ಕಾಲು ಯಾವುದರಲ್ಲೂ ಭಲ ಇರಲಿಲ್ಲ.. ಎಲ್ಲವೂ ಗಾಳಿಯಲ್ಲಿ ತೇಲಿದಂತಾಗತೊಡಗಿತ್ತು.. ಕಷ್ಟಾಪಡ್ತಾ ಇದ್ದೆ.. ಆಗಲೇ ನನ್ನನ್ನ ಪರಿಚಿತವಾದದ್ದೇನೋ ಸೋಕಿತ್ತು.. ಅದೇನು ಗೊತ್ತಾಗಲಿಲ್ಲ.. ನಂತ್ರ ಅದರ ಸ್ಪರ್ಷ ಹಿತ ಅನ್ನಿಸೋದಕ್ಕೆ ಶುರುವಾಯ್ತು.. ಮತ್ತೆ ಬೆಚ್ಚನೆಯ ಅನುಭವ.. ಮತ್ತದೇ ಹಿತ.. ಹಸಿವು ಕಾಡಲಿಲ್ಲ.. ಆ ಕಾಳಜಿ .. ಮಮತೆ .. ಪ್ರೀತಿ ಹಳೆಯದೆಲ್ಲವನ್ನೂ ಮರೆಸಿಬಿಟ್ಟಿತ್ತು.. ನಾನು ಅವಳಿಂದಾಗಿ ಈ ಪರಿಸರವನ್ನ ಒಪ್ಪಿಕೊಂಡುಬಿಟ್ಟೆ.. ಆಕೆ ನನಗೆ ಮುದವಾದ ಅನುಭವ ಕೊಟ್ಟವಳು .. ಅವಳು ನನ್ನ ಅಮ್ಮ..

 ಅಮ್ಮನ ಪ್ರಪಂಚದಲ್ಲಿ ನಾನಿದ್ದೆ.. ಆಕೆ ನನ್ನನ್ನ ನೋಡಿ ಏನೋ ಅಂತಿದ್ಲು.. ಅದು ನನಗೆ ಅರ್ಥವಾಗ್ಲಿಲ್ಲ.. ಆದ್ರೆ ಅವಳು ಏನೋ ಹೇಳ್ತಾಳೆ , ಆಗ ನಾನು ಸ್ಪಂಧಿಸಬೇಕು ಅನ್ನೋದು ಗೊತ್ತಾಯ್ತು.. ಅದು ನನ್ನ ಹೆಸರಂತೆ.. ಅವಳೇ ಹೇಳಿದ್ದು.. ಅವಳು ನನಗೆ ತುಂಬಾ ಜನರನ್ನ ಪರಿಚಯಿಸಿದಳು.. ಅಪ್ಪ ಅಜ್ಜ ಅಜ್ಜಿ , ಅಣ್ಣ , ಅಕ್ಕ ಚಿಕ್ಕಪ್ಪ, ಚಿಕ್ಕಯ್ಯ, ಚಿಕ್ಕಮ್ಮ , ಆಂಟಿ , ಅತ್ತೆ ಮಾವ ಅಬ್ಬಬ್ಬಾ ಎಷ್ಟೊಂದು ಜನ ನನ್ನನ್ನ ಅಮ್ಮನ ಥರಾನೇ ಪ್ರೀತಿಸ್ತಾ ಇದ್ರು.. ಅವರೆಲ್ಲರೂ ಇಷ್ಟವಾಗತೊಡಗಿದ್ರು.. ನಾನು ಒಬ್ಬೊಬ್ಬರನ್ನೇ ನೋಡಿದಾಗಲೂ ಹೊಗಳಿ ಅಟ್ಟಕ್ಕೇರಿಸ್ತಾ ಇದ್ರು.. ಹಾಗಾಗೇ ನಾನು ನನ್ನ ಈ ಪ್ರಪಂಚವನ್ನ ಪ್ರೀತಿಸ್ತಾ ಇದ್ದೆ. ಅದಕ್ಕೇ ನನ್ನ ಮುಖದಲ್ಲಿ ನಗು ಮೂಡಿದ್ದು.

ನನಗೆ ಯಾಕೆ ಖುಶಿ ಆಗತ್ತೆ ಅನ್ನೋದು ಮೊದಮೊದಲು ನನಗೇ ಅರ್ತವಾಗ್ತಾ ಇರಲಿಲ್ಲ.. ನಿದ್ದೆಯಲ್ಲೂ ನಗ್ತಾ ಇದ್ನಂತೆ..ಅಮ್ಮಾ ಹೇಳ್ತಿದ್ಲು.. ಆಕೆ ಅದನ್ನ ಹೇಳಿದಾಗಲೂ ನಕ್ಕಿದ್ದೆ.. ಎಲ್ಲರೂ ಕೇಕೆ ಹಾಕಿದ್ರು.. ಆಗ ಗೊತ್ತಾಯ್ತು ನಾನು ಆಗಾಗ ನಗಬೇಕು ಅಂತ.. ಸದಾನಗುನಗುತಾ ಇರೋದು ರೂಡಿ ಆಗಿಹೋಯ್ತು.. ಖುಶಿನೋ ಖುಶಿ.. ಕಾಲು ಕೈ ಎಲ್ಲದರ ಜೊತೆಗೂ ಆಡಿ ನನ್ನದೇ ಭಾಷೆಯಲ್ಲಿ ಮಾತಾಡಿ ಮನಸಿಗೆ ಹತ್ತಿರವಾಗಿಸಿಕೊಂಡೆ.. ದಿನಕಳೆದಹಾಗೆ ನಾನೊಬ್ಬಳೇ ಮಲಗಿದ್ದಲ್ಲಿ ಮಲಗಿರೋದು, ಎಲ್ಲರೂ ನನ್ನನ್ನ ಮತಾಡಿಸಿ ಮಾತಾಡಿಸಿ ಅಲ್ಲಿಂದ ಹೊರಟೋಗ್ತಾರೆ ಅನ್ನಿಸ್ತು.. ಹಾಗಾಗಿ ಜೊತೆಗೆ ಹೊಗೋ ಪ್ರಯತ್ನ ಶುರುಮಾಡಿದೆ.. ಮಲಗಿದ್ದಲ್ಲೇ ಜಾರಿದೆ.. ಮಗ್ಗಲು ಬದಲಿಸಿದೆ.. ಅಮ್ಮಾ ಓಡಿಬಂದು ನೋಡಿ ಎಲ್ಲರನ್ನೂ ಕರೆದು ತೋರಿಸಿದ್ಲು.. ಎಲ್ಲರೂ ಖುಶಿಯಾದ್ರು.. ಅದನ್ನ ನೋಡಿ ನಾನೇನೋ ಸಾಧಿಸಿದ್ದೇನೆ ಅಂತ ಅಂದ್ಕೊಂಡು ಮತ್ತೆ ಮತ್ತೆ ಹಾಗೇ ಮಾಡಿದೆ.. ಯಾವಾಗ ಎಲ್ಲರಿಗೂ ನನ್ನ ಆ ಹೊಸ ಪ್ರಯತ್ನದಲ್ಲಿ ಇಂಟ್ರಸ್ಟ್ ಕಡಿಮೆ ಆಯ್ತು ಅನ್ನಿಸ್ತೋ ಮತ್ತೇನೋ ಮಾಡಿದೆ.. ಮತ್ತೆ  ಖುಶಿ.. ಮುಂದೆ ಹೋದೆ , ಹಿಂದೆ ಬಂದೆ.. ಎಲ್ಲರೂ ನನ್ನನ್ನ ಗುರುತಿಸೋವರೆಗೂ ನಾನು ಮಾಡಿದ್ದನ್ನೇ ಮಾಡಿದೆ.. ಹೊಸತೇನೋ ಮಾಡಿದೆ..!
ಮೊದಲು ಅಪ್ಪನ ಬೆರಳು ಹಿಡಿದು ನಿಂತ ಕ್ಷಣ, ಹೆಜ್ಜೆಯನಿಟ್ಟು ನಡೆದ ದಿನ, ಅಮ್ಮಾ ಅಂದಾಗ ಆದ ಸಂಭ್ರಮ ಎಲ್ಲವೂ ಹಿತವಾಗಿತ್ತು.. ಜೊತೆಗೆ ನಿಂತಷ್ಟೂ ದಿನ ನಿಲ್ಲೋದಕ್ಕೆ ಖುಶಿ ಇತ್ತು.. ಜೊತೆಯಾಗಿ ನಡೆವಾಗ ನಡೆಯೋದರಲ್ಲೇ ಸಡಗರ.. ಮಾತು ಮಾತು ಬೆರೆತಾಗ ಆದ ಸಂಭ್ರಮ ಅಷ್ಟಿಷ್ಟಲ್ಲ.. ನನ್ನ ಆ ಪ್ರಪಂಚದಲ್ಲಿ ನಾನು ತೃಪ್ತಳಾಗಿದ್ದೆ..

ಮತ್ತೆ ದಿನಗಳು ಉರುಳಿದವು.. ಮೊದಲು ನನ್ನ ಒಂದೊಂದು ಹಾವ ಭಾವಗಳನ್ನೂ ಗುರುತಿಸ್ತಾ ಇದ್ದ ಹಾಗೆ, ನಂತರ ಯಾರೂ ಗುರುತಿಸೋರು ಇರಲಿಲ್ಲ.. ಮಾತುಗಳಿಗೆ ನಕ್ಕವರಿಲ್ಲ.. ಹಂಗಾಗೇ ಅಮ್ಮನ ಕೈ ಬಿಟ್ಟು ಗೆಳತಿಯರೆಡೆಗೆ ಓಡಿದೆ.. ಶಾಲೆ ಪಾಠ ಓದು , ಎಲ್ಲಾ ಕಡೆ ನನ್ನನ್ನ ಹೇಗೋ ಗುರುತಿಸಬೇಕು.. ಅದೇ ನನ್ನ ಬದುಕು.. ಗುರುತಿಸಿದಷ್ಟೂ ಸಂಭ್ರಮ.. ಇಲ್ಲವಾದರೆ ಅಲ್ಲಿಂದ ಓಡು.. ಮತ್ತೇನೋ ನನ್ನನ್ನ ಹೆಮ್ಮೆಯಿಂದ ಕೈ ಮಾಡಿ ತೋರಿಸೋ ಥರ ಮಾಡು..

ನನ್ನ ಪ್ರಪಂಚ ಬದಲಾಗುತ್ತಾ ಬಂದಿತ್ತು.. ಹೀಗೆ ನಾನು ಬದುಕಿದ ಅಷ್ಟೂ ದಿನ ನಾನು ಕಡೆಗಣಿಸಿದ್ದು ನನ್ನೊಳಗಿನ ಮಾತನ್ನ.. ನನ್ನ ಭಾವನೆಗಳನ್ನ.. ಆ ಯೋಚನೆ ಬಂದಾಗ ಕನಸುಕಾಣ ತೊಡಗಿದ್ದೆ.. ಒಂಟಿಯಾಗಿ ನಿಂತು ಬಾನಂಗಳವನ್ನ ದಿಟ್ಟಿಸತೊಡಗಿದ್ದೆ.. ಮನಸಿನ ಮಾತುಗಳನ್ನ ಮೌನವಾಗಿ ಆಲಿಸತೊಡಗಿದ್ದೆ.. ಎಲ್ಲವನ್ನೂ ಅವನು ನೋಡ್ತಾ ಇದ್ದ.. ನೋಡಿ ನಕ್ಕಿದ ಥರಾ ಅನ್ನಿಸಿತ್ತು.. ಅವನಿಗೆ ನನ್ನಮನಸನ್ನ ಇಣುಕಿ ನೋಡಿ ಖುಶಿಪಡ್ತಾ ಇದ್ದಾನೆ ಅನ್ನಿಸ್ತು.. ಹಂಗಾಗಿ ಮತ್ತೆ ನನ್ನೊಳಗಿನ ಮಾತುಗಳನ್ನ ಹಂಚಿಕೊಳ್ಳೋ ತವಕ.. ಭಾವನೆಗಳನು ಶಬ್ದವಾಗಿ ಪೋಣಿಸಿದ್ದೆ.. ಮಾತಿನ ಹಾರವನು ಅವನಕೊರಳಿಗೆ ಹಾಕಿದ್ದೆ.. ಅವನ ಕಣ್ ಹೊಳಪಿನಲಿ ಚಿತ್ತಾರಬಿಡಿಸಿದ್ದೆ.. ಆಲಂಗಿಸಿ ಅನುಭವಿಸಿ ಆನಂದವಾಗೋದಕ್ಕೆ ಅವನದಾರಿ ಕಾಯ್ತಿದ್ದೆ.. ಅವನ ನಗುಮುಗವನ್ನ ನೋಡೋದಕ್ಕೆ ತಿಂಗಳು ಕಾಯಲೇಬೇಕು.. ಹುಣ್ಣಿಮೆಯ ವರೆಗೆ...! ಅವನು ಬಾನಂಗಳದಲ್ಲಿ ಬೆಳಕಿನ ರಂಗವಲ್ಲಿ ಬರೆದು ನನಗಾಗಿ ನಿಂತಿರ್ತಾ ಇದ್ದ.. ಐ ಲವ್ ಚಂದಮಾಮ..!

ಚಂದಿರನಂತೆ ನನ್ನ ಪ್ರೀತಿಸಿದವರು.. ಮನಸಿನ ಮಾತುಗಳನ್ನ ಅಲಿಸಿದವರು , ನನ್ನೊಳಗೆ ಬಂದು ಉತ್ತರಿಸಿದವರು ಯಾರೂ ಇರಲಿಲ್ಲ.. ಎಲ್ಲರಿಂದಲೂ ನಾನು ದೂರವಾಗುತ್ತ ಸಾಗಿದ್ದೆ.. ಮನಸಿನಮಾತುಗಳನ್ನ ಹಂಚಿಕೊಳ್ಳೋದಕ್ಕೆ ಯಾರೂ ಇರಲಿಲ್ಲ.. ಅಪ್ಪನದು ಕಾಳಜಿ.. ಅಮ್ಮನದು ಮಮಕಾರ.. ಅಕ್ಕ ಸ್ನೇಹಿತೆಯಾದರೂ ಅವಳೊಂದಿಗೆ ಮನಸನ್ನಬಿಚ್ಚಿಡೋದಕ್ಕೆ ಭಯ..ಅವಳು ನನ್ನ ಭಾವನೆಗಳಿಗೆ ಬಣ್ಣಹಚ್ಚದಿದ್ದರೆ ಅನ್ನೋ ಆತಂಕ.. ಇನ್ನು ಅಣ್ಣ, ಅವನೊಂದಿಗೆ ಕೆಲ ವಿಷಯಗಳನ್ನ ಹೇಳೋದಕ್ಕೇ ಆಗಲ್ಲ.. ಅವನು ನನ್ನಂಥವನಲ್ಲ.. ನನ್ನಂತೆ ಖುಷಿಪಡದಿದ್ದರೆ ನನಗೆ ಇರಸುಮರಸು.. ತಮ್ಮ ಚಿಕ್ಕವನು.. ಸಂಬಂಧಿಕರೆಲ್ಲಾ ದೂರ ದೂರ.. ಆಗ ಹತ್ತಿರವಾಗುವವರು ಸ್ನೇಹಿತೆಯರು .. ಆದ್ರೆ ಅಲ್ಲೂ ಹೃದಯದ ಮಾತುಗಳು ಮಾತ್ರ ನನ್ನೊಳಗೇ ಉಳಿದವು.. ನಾನಾಡದ ಮಾತುಗಳನ್ನ ಅರಿಯೋ, ಅಡಗಿರೋ ಕನಸಿಗೆ ಬಣ್ಣ ಬಳಿಯೋ , ಅರಿವಿಲ್ಲದೇ ಮನಸಿಗೆ ಹತ್ತಿರವಾಗೋ ಒಂದೇ ಒಂದು ಜೀವ ಹತ್ತಿರ ಸುಳಿಯಲಿಲ್ಲ..  ನನ್ನ ಪ್ರಪಂಚ ಬದಲಾಗತೊಡಗಿತ್ತು..!

ಇಷ್ಟು ದಿನ ನಾನು ಈ ಪ್ರಪಂಚವನ್ನ ಪ್ರೀತಿಸಿದ್ದೇ ಸುತ್ತಲಿನ ಪರಿಸರವನ್ನ ನೋಡಿ.. ಜನರನ್ನ ನೋಡಿ.. ಅವರು ನನ್ನನ್ನ ನೋಡಿ ಖುಶಿಪಡೋ ರೀತಿಯನ್ನ ನೋಡಿ.. ನನಗೆ ಸಂಭ್ರಮಿಸೋದಕ್ಕೆ ಇದ್ದ ಕಾರಣಗಳನ್ನ ನೋಡಿ.. ಈಗ ಅದ್ಯಾವುದೂ ಕಾಣಿಸುತ್ತಲೇ ಇಲ್ಲ..! ಯಾಕೆ ಹೀಗೆ ?

ಈಗ ಅರ್ಥವಾಗಿದೆ.. ಇದು ನನ್ನ ಬದುಕಲ್ಲ.. ನನ್ನನ್ನ ಸುತ್ತಲಿನ ಸಮಾಜ ಸೃಷ್ಟಿಸಿದೆ.. ಅದು ಮಾಯಾ ಸೃಷ್ಟಿ.. ಅದು ನಡೆಸಿದಷ್ಟು ದಿನ ನಾನು ನಡೆಯುತ್ತೇನೆ.. ಸಂಭ್ರಮಿಸಿದಷ್ಟು ದಿನ ಸಂಭ್ರಮಿಸುತ್ತೇನೆ.. ಬೆಳೆಸಿದಷ್ಟು ದಿನ ಬೆಳೆಯುತ್ತೇನೆ.. ಉಳಿಸಿದಷ್ಟು ದಿನ ಉಳಿಯುತ್ತೇನೆ.. ಮುಗಿಸಿದ ದಿನ ಮುಗಿಯುತ್ತೇನೆ..!

ಮತ್ತೆ ಅಮ್ಮನ ಉದರದೊಳಗಿನ ಅಪರೂಪದ ಬದುಕು ನೆನಪಾಗುತ್ತಿದೆ.. ಒಳಗೆ ಸೇರಿಕೊಂಡು ಆ ಹಿತವನ್ನ  ಅನುಭವಿಸೋ ಬಯಕೆ.. ಬೆಚ್ಚನೆಯ ಲೋಕದಲ್ಲಿ ವಿಹರಿಸೋ ಬಯಕೆ.. ಸೃಷ್ಟಿಸಿಕೊಳ್ಳಬೇಕು ಅದನ್ನೇ.. ಬದುಕಬೇಕು ಆ ಬದುಕನ್ನೇ.. ನಾನು ಮತ್ತು ನನ್ನ ಬಯಕೆಗಳಷ್ಟೇ ಇರೋ ಆ ಅದ್ಭುತ ಲೋಕ ಮತ್ತೆ ಕಾಣಿಸೋದೇ ಇಲ್ಲವಾ ? ಹುಡುಕುತ್ತಿದ್ದೇನೆ..

 

Saturday, December 31, 2011

ಲವ್ ಯು 2012..


ನೆನ್ನೆ ಸುಂದರವಾಗಿತ್ತಾ ? ಉಹು ಯಾಕೋ ಚನ್ನಾಗೇ ಇಲ್ಲ ಅನ್ನಿಸಿತ್ತು .. ಆದ್ರೆ ಯಾಕೆ ? ಅಕ್ಕ ಹೇಳಿದ್ದಳು ನೀನು ರೀಸನ್ ರಾಣಿ ಅಂತ..ಅದು ನಿಜ.. ನನಗೆ ಪ್ರತಿಯೊಂದಕ್ಕೂ ಕಾರಣ ಕಾಣತ್ತೆ.. ನೆನ್ನೆಯ ದಿನ ಚನ್ನಾಗಿಲ್ಲದಿರೋದಕ್ಕೆ ನನಗಿದ್ದ ತಲೆನೋವು ಕಾರಣ.. ಆ ತಲೆನೋವಿಗೆ ಸಾವಿರ ಕಾರಣಗಳಿದ್ವು.. ಎಲ್ಲವನ್ನೂ ಮೆಟ್ಟಿನಿಂತು ಮೋಡ ಬಿಡದೇ ಕಾಡ್ತಾ ಇರೋ ಜಿಟಿ ಜಿಟಿ ಮಳೆ , ಚಳಿ ಎಲ್ಲವೂ ಕಾರಣ ಅಂತ ನಿರ್ಧರಿಸಿಕೊಂಡೆ.. ಯಾಕೋ ಆಪೀಸ್ಗೆ ಹೊಗೋದಕ್ಕೆ ಆಗಲ್ಲ ಅನ್ನೋಷ್ಟು ನಿತ್ರಾಣವಾಗಿದ್ದರಿಂದ ಒಂದು ಕ್ರೋಸಿನ್ ಹಾಕ್ಕೊಂಡೆ.. ಮತ್ತೆ ಅದೇ ತಯಾರಿ.. ಅದೇ ಕಚೇರಿ... ಅದೇ ಜನ ,ಅದೇ ಕೆಲಸ.. ಅದೇ ಮನೆ, ಅದೇ ನಿದ್ದೆ ಹೀಗೆ ಮುಗಿದುಹೋಗತ್ತೆ ವರುಷ.. ನೋವಿನಲ್ಲೇ ಕಣ್ಮುಚ್ಚಿದ್ದೆ..

 ಥಟ್ ಅಂತ ಎಲ್ಲಿಂದಲೋ ಬಂದು ಸೇರಿಕೊಂಡಿದ್ದು ಖುಶಿ ಅನ್ನೋದು ಎಲ್ಲಿದೆ ಅನ್ನೋ ಪ್ರಶ್ನೆ.. ತಕ್ಷಣ ಎದ್ದು ಕೂತೆ.. ನೋವು ಬೇಸರ ಯಾವುದೂ ನೆನಪಿಲ್ಲ.. ಬೆಳಿಗ್ಗೆ ಕಣ್ಬಿಟ್ಟಾಗ ಕಿಟಕಿಯಿಂದ ನನ್ನ ಶುಭ್ರ ನಿದ್ದೆಯನ್ನೇ ಕದ್ದು ಕದ್ದು ನೋಡಿ ಕಣ್ಮಿಟುಕಿಸ್ತಾ ಇದ್ದ ಬೀದಿ ದೀಪ ಕಾಣಿಸಿತ್ತು.. ನೋಡಿ ನಕ್ಕಿದ್ದೆ.. ಯಾಕೆ ಬಂತೋ ನಗು ಗೊತ್ತಿಲ್ಲ.. ಆ ನಗುವಿನಲಿ ಒಲವಿನ ಭಾವ ಬೀರಿ ಬಂದು ತಾಕಿದ್ದು ತಂಗಾಳಿ.. ಅದು ಮಿಲನದ ಸಂಭ್ರಮದಲ್ಲಿ ಸೃಷ್ಟಿಯಾದ ಸೊಬಗು ಅನ್ನೋದು ಗೊತ್ತಾಗೋದಕ್ಕೆ ಜಾಸ್ತಿ ಸಮಯ ಹಿಡಿಯಲಿಲ್ಲ.. ಸೂಕ್ಷ್ಮವಾಗಿ ಗೃಹಿಸಿದರೆ ಆ ಮಿಲನದಲ್ಲಿ ಸಂಭ್ರಮ ಕಾಣಿಸುತ್ತೆ.. ಸ್ಪರ್ಷದಲ್ಲೊಂದು ನವಿರಾದ ಭಾವವಿದೆ.. ಆ ಭಾವಕ್ಕೆ ಜೀವವಿದೆ.. ನೆಮ್ಮದಿ ಇದೆ.. ಸುಖವಿದೆ.. ಸಂತಸವಿದೆ ಜೊತೆಗೆ ತಂಗಾಳಿಯಲ್ಲಿ ಸುವಾಸನೆ ಇದೆ.. ಅದೊಂದು ಸ್ಮೆಲ್ ಎಲ್ಲವನ್ನೂ  ತೆರೆದಿಟ್ಟುಬಿಡತ್ತೆ.. ಅದನ್ನ ಅನುಭವಿಸಿದರೆ ಹಾಸಿಗೆಯಿಂದೆದ್ದು ಹೊರನಡೆಯದೇ ಇರೋದಕ್ಕೆ ಸಾಧ್ಯಾನೇ ಇಲ್ಲ..


ಪೃಕೃತಿ ಅದೆಷ್ಟು ಸುಂದರ ಅಲ್ವಾ ? ಅಲ್ಲಿ ಎಲ್ಲದಕ್ಕೂ ಅರ್ಥವಿದೆ.. ಸಂಬಂಧವಿದೆ ಸಂಸ್ಕಾರವಿದೆ.. ಒಲವಿದೆ ಬಲವಿದೆ ಒಗ್ಗಟ್ಟಿದೆ.. ಅರಿವಿದೆ.. ಅರಿಯದ ಅನುಭೂತಿ ಇದೆ , ಆಕರ್ಷಣೆ ಇದೆ.. ಅಪಾರ ಪ್ರೇಮವಿದೆ.. ಮೌನವಿದೆ.. ಮೋಹವಿದೆ .. ನಗುವಿದೆ.. ನಲಿವಿದೆ.. ಅಬ್ಬಾ ಎಲ್ಲವೂ ಸುಂದರ..

ಯಾರು ಜೀವವೇ... ಯಾರು ಬಂದವರು
ಭಾವನೆಗಳನೇರಿ..
ಒಣಗಿದೆನ್ನೆದೆಗೆ ತಂಪತಂದವರು... ಅಂತ ಹಾಡ್ತಾ ಇದ್ದದ್ದು ಬಿರಿದ ನೆಲಾನಾ ?


ನೀನಿಲ್ಲದೇ ನನಗೇನಿದೆ
ನಿನ್ನಂದ ನನ್ನಲ್ಲಿ ನೆಲೆಯಾಗಿದೆ ಅಂತ ನುಲಿದದ್ದು ನಲಿವ ಜಲಾನಾ ?


ನಿಜಕ್ಕೂ ಮಳೆಗೂ ಮಣ್ಣಿಗೂ ಅದ್ಯಾವ ಜನ್ಮದ ಮೈತ್ರಿ ಇದೆಯೋ ಏನೋ.. ಕರೆವ ರೀತಿಗೆ .. ಬೆರೆವ ಪ್ರೀತಿಗೆ ಸಾಟಿನೇ ಇಲ್ಲ.. ಎದೆಯೊಡ್ಡಿ ನಿಲ್ಲೋ ಭೂಮಿ , ಓಡಿಬಂದು ತಬ್ಬಿಕೊಳ್ಳುವ ಮಳೆಬಿಲ್ಲಿನ ಹನಿ.. ಒಂದಕ್ಕೊಂದು ಅದೆಷ್ಟು ಅದ್ಭುತವಾಗಿ ಬೆರೆತುಹೋಗತ್ತೆ ಅಲ್ವಾ ? ನಿಜವಾದ ಪ್ರೀತಿಗೆ ನೆಲಜಲಕ್ಕಿಂತ ಆದರ್ಷ ಬೇಡವೇನೋ.. ಒಂದಕ್ಕೊಂದು ಬೇರೆ ಮಾಡಲು ಸಾಧ್ಯವೇ ಇಲ್ಲದ ರೀತಿ ಬೆರೆಯುತ್ತೆ.. ಬೆಳೆಯುತ್ತೆ.. ಬದುಕನೀಡತ್ತೆ..ಆದರೆ ಅದಕ್ಕಿರೋ  ಅದರದೇ ಆದ ರೂಪ ಗುಣ ಜೀವ ಭಾವ ಎಲ್ಲವೂ ಹಾಗೇ ಇರತ್ತೆ.. ಅಲ್ಲಿ ಯಾವುದರ ಅಸ್ತಿತ್ವವೂ ಕಳೆದುಹೋಗಲ್ಲ.. ಅದಕ್ಕೇ ಏನೋ ಕವಿ ನೀನು ನೆಲ ನಾನು ಜಲ ಅಂತ ಪ್ರೇಮದ ಕಡಲಲ್ಲಿ ತೇಲಿದ್ದು..

ಆ ಮಧುರ ಪ್ರೇಮದ ದಿವ್ಯ ಆಲಿಂಗನವನ್ನ ಮನಸಾರೆ ಅನುಭವಿಸಿ ಆರಂಭಿಸಿದ ದಿನ ಅದ್ಭುತವಾಗಿರದೇ ಇರತ್ತಾ? ಆ ಖುಶಿಯಲ್ಲೇ ಅಡುಗೆ ಮನೆಯೊಳಗೆ ಅಡಿ ಇಟ್ಟವಳಿಗೆ ಬಿಸಿ ಬಿಸಿ ನೀರುಕುಡಿಯೋ ಮನಸಾಗಿತ್ತು.. ಒಂದು ಉದ್ದನೆಯ ಸ್ಟೀಲ್ ಕಪ್ಪನ್ನ ಒಂದೋಂದೇ ಸಿಪ್ಪಾಗಿ ಅನುಭವಿಸುತ್ತಾ ಕುಡಿದಿದ್ದೆ.. ನಮ್ಮನೆಯ ನೀರಿಗೂ ಒಂದು ಅದ್ಭುತವಾದ ರುಚಿ ಇದೆ ಅನ್ನೋದು ಗೊತ್ತಿರಲೇ ಇಲ್ಲ.. ಅದೇ ಖುಶಿಯಲ್ಲಿ ಮಧ್ಯಾನ್ಹದ ಊಟದ ಡಬ್ಬಿ ರೆಡಿ ಆಯ್ತು..ಅದೂ ಅಷ್ಟೇ ಘಮ ಘಮ ಅಂತಿತ್ತು.. ನಂತ್ರಾ ಬಿಸಿ ಬಿಸಿ ನೀರಲ್ಲಿ ಸುದೀರ್ಘ ಹದಿನೈದು ನಿಮಿಷಗಳ ಕಾಲ ಸ್ನಾನ ಮಾಡೋವಾಗ ಅದೆಷ್ಟು ಖುಶಿಪಟ್ಟೆ ಅನ್ನೋದನ್ನ ಹೇಳೋದಕ್ಕೇ ಸಾಧ್ಯಾ ಇಲ್ಲ.. ಆಹಾ ಛುಮು ಛುಮು ಚಳಿಯಲ್ಲಿ, ಜಿಟಿ ಜಿಟಿ ಮಳೆಯಲಿ ಬಿಸಿನೀರಿನ ಸ್ನಾನ ಕೊಡೋ ಖುಶಿ ಇದೆಯಲ್ಲಾ ಅದನ್ನ ಇನ್ನೇನೂ ಕೊಡಲ್ಲ.. ಆ ಅದ್ಭುತ ಸ್ನಾನದ ನಂತ್ರ ನನ್ನ ಪ್ರೀತಿಯ ಕಪ್ಪು ಮಿಶ್ರಿತ ಕೆಂಪು ಬಣ್ಣದ ಟಾಪನ್ನ ಹಾಕಿಕೊಳ್ಳೋದಕ್ಕೆ ಹೊರಟಿದ್ದೆ.. ಅದಕ್ಕೆ ಐರನ್ ಬೇಡ.. ಹಂಗಾಗಿ ಅದು ಅಂದ್ರೆ ನಂಗಿಷ್ಟ.. ಯಾಕೋ ಅವತ್ತು ಪಾರ್ ಅ ಚೇಂಜ್ ಆ ಟಾಪನ್ನೂ ಪ್ರೆಸ್ ಮಾಡಿದೆ.. ಯಾವತ್ತೂ ಐರನ್ ಬಾಕ್ಸ್ ನೋಡಿರದ ಆ ಬಟ್ಟೆಗೆ ಅದೆಷ್ಟು ಖುಶಿಯಾಗಿತ್ತೋ.. ಅದು ಬೆಚ್ಚಗೆ ನಗನಗ್ತಾ ಇದ್ದಾಗ್ಲೇ ನಾನೂ ಮೈಗೇರಿಸಿಕೊಂಡೆ.. ಈ ಚಳಿಯಲ್ಲಿ ಇಸ್ತ್ರಿ ಹಾಕಿದ ತಕ್ಷಣ ಬಟ್ಟೆಯನ್ನ ಹಾಕಿಕೊಳ್ಳೋ ಸುಖ ಇದೆಯಲ್ಲ, ಅದು ಅನುಭವಿಸಿದವರಿಗೆ ಮಾತ್ರ ಗೊತ್ತು..

ಇಕ್ ಲಡಕಿಕೋ ದೇಖಾತೋ ಏಸಾ ಲಗಾ ಅಂತ ಸಣ್ಣಗೆ ಗುನುಗುತ್ತಾ, ದೋಸೆಯ ಬಂಡಿ ಹಾಕಿ ಎರಡು ಬಿಸಿ ಬಿಸಿ ಬಾಳೆಹಣ್ಣಿನ ಸಿಹಿ ದೋಸೆ ಮಾಡ್ಕೊಂಡು ಬಟ್ಟಲಿಗೆ ಹಾಕಿದ್ದೆ.. ಇನ್ನೂ ಹೊಗೆ ಬರ್ತಾ ಇತ್ತು.. ಅಮ್ಮ ಮನೆಯಿಂದ ಕಳಿಸಿದ ಗಟ್ಟಿ ತುಪ್ಪದ ಜೊತೆ ಅದನ್ನ ತಿಂತಾ ಇದ್ರೆ ಹೊಟ್ಟೆತುಂಬಿದ್ದೇ ಗೊತ್ತಾಗಲ್ಲ.. ನಾಲಿಗೆಯ ಮೇಲೆ ತೇಲೋ ನೀರು ಆರೋದೇ ಇಲ್ಲ.. ಅಂಥ ಸಂಭ್ರಮದಲ್ಲಿ ತಿಂಡಿ ತಿಂದು ರೆಡಿಯಾಗಿ ಆಪೀಸಿಗೆ ಹೊರಟರೆ , ಕಿವಿಗೆ ತುರುಕಿಕೊಂಡ ಇಯರ್ಫೋನ್ನಲ್ಲೂ ಎಂಥೆಂಥಾ ಹಾಡುಗಳು ಅಂತೀರಾ.. ಹಳೆಯ ಹಾಡುಗಳು ಮತ್ತು ಭಾವಗೀತೆ ಅಂದ್ರೆ ಹೆಚ್ಚು ಪ್ರೀತಿ ಆದ್ರೂ , ಹೊಸಹಾಡುಗಳಿಗೂ ಒಮ್ಮೊಮ್ಮೆ ಮೈ ಮರೀತಿನಿ..ಅವತ್ತು ನನ್ನ ಮನಸಿಗೆ ಹಿತ ಅನ್ನಿಸೋ ಅಷ್ಟೂ ಗೀತೆಗಳೂ ಒಟ್ಟಿಗೆ ಬಂದಿದ್ವು.. ಎಷ್ಟು ಖುಶಿಪಟ್ಟಿದ್ದೆ ಗೊತ್ತಾ ?

ಇನ್ನು ಕಚೇರಿಯಲ್ಲಿ, ಅವತ್ತು ನನಗೆ ಬಿಗ್ ರೆಸ್ಟ್..! ಸಾಮಾನ್ಯವಾಗಿ ಕೈ ತುಂಬಾ ಕೆಲಸ ಇಲ್ಲದಿದ್ರೆ ನನಗೆ ಕಿರಿ ಕಿರಿ.. ಚಿಕ್ಕ ಚಿಕ್ಕ ವಿಷಯಕ್ಕೂ ಸಿಟ್ಟು ಬರತ್ತೆ.. ಎಲ್ಲರಿಗೂ ಬೈಯ್ಯೋಣ ಅನ್ಸತ್ತೆ.. ಜಗಳ ಕೂಡ ಮಾಡಿದ್ದಿದೆ.. ಇನ್ನು ಕೈ ತುಂಬಾ ಕೆಲಸಾ ಇರೋವಾಗ ಫೇಸ್ಬುಕ್ಕು ಸುಂದರವಾಗಿ ಕಂಡಷ್ಟು ಖಾಲಿ ಕೂತಾಗ ಕಾಣಿಸಲ್ಲ.. ಚ್ಯಾಟ್ ಮಾಡೋ ಮನಸಾಗಲ್ಲ.. ಆಫೀಸಲ್ಲಿ ಕೂತು ಮನಸಿಗೆ ಅನ್ನಿಸಿದ್ದನ್ನ ಲಹರಿಯಲ್ಲಿ ತೇಲಿಬಿಡೋದಕ್ಕೂ ಸರಿ ಅನ್ನಿಸಲ್ಲ.. ಅಷ್ಟಕ್ಕೂ ನಮ್ಮ ಕಚೇರಿಯಲ್ಲಿ ನನ್ನ ಮನದಾಳದ ಮೋಹನಮುರಳಿ ಓಪನ್ನೇ ಆಗಲ್ಲ.. ಬ್ಲೋಕ್ ಆಗಿರೋ ಸೈಟು ಯು ನೋ.ನಾನೇನು ಬರೀಬಾರದ್ದು ಬರೀತಿನಾ.. ಬಟ್  ಐ ಆಮ್ ಹ್ಯಾಪಿ.. ಬ್ಲಾಗ್ ಬರಕೊಂಡು ಕೂತುಬಿಟ್ಟಿದ್ರೆ ಏನನ್ನೂ ಓದುತ್ತಾ ಇರಲಿಲ್ಲ.. ಈಗ ಗೂಗಲ್ ಅನ್ನೋ ಗಾಳಿಜಗತ್ತಲ್ಲಿ ಇಣುಕಿ ಏನೇನೋ ಪ್ರಶ್ನೆಗಳನ್ನ ಹಾಕಿ ಎಷ್ಟೆಲ್ಲಾ ವಿಷಯಗಳನ್ನ ತಿಳ್ಕೊಂಡೆ ಗೊತ್ತಾ..? ಖುಶಿ ಆಗಿತ್ತು.. ಎಷ್ಟು ಬೇಗ ಟೈಮ್ ಆಗ್ಬಿಡ್ತು.. ಆಫೀಸಲ್ಲಿ ಹೊಸವರ್ಷದ ಸ್ವಾಗತಕ್ಕೆ ಸಂಭ್ರಮದ ತಯಾರಿ ನಡೆದಿತ್ತು.. ಆದ್ರೆ ಅಲ್ಲಿರೋದಕ್ಕೆ ಮನಸಾಗ್ಲಿಲ್ಲ.. ನನ್ನೊಳಗೆ ನಾನಿದ್ದು , ನನ್ನವರೊಂದಿಗೆ ಬೆರೆತು ಅರಿತು , ನಮ್ಮಿಚ್ಛೆಯಂತೆ ಸಂಬ್ರಮಿಸೋದರಲ್ಲೇ ಹೆಚ್ಚು ಖುಶಿ ನನಗೆ..

 ಇಷ್ಟೆಲ್ಲಾ ಖುಶಿಯ ಕ್ಷಣಗಳು ಒಂದೊಂದಾಗಿ ಬಂದು ಹೋಗಿವೆ, ಆದ್ರೂ ಯಾಕೋ ದಿನ ಸರಿ ಇರಲಿಲ್ಲ ಅನ್ನಿಸಿತ್ತಲ್ಲಾ, ಯಾಕೆ ? ಅದು ನನಗೆ ಅರ್ಥವಾಗಿತ್ತು...  ಅಷ್ಟೊತ್ತೂ ನಾನು ಇಡೀ ದಿನ ಅನುಭವಿಸಿದ ಖುಶಿಯ ಕ್ಷಣಗಳನ್ನ ಗಣನೆಗೇ ತಗೊಂಡಿರಲಿಲ್ಲ.. ದುಃಖ ಅನ್ನೋದು ಕಾರಣಾನೇ ಇಲ್ಲದೆ ಆವರಿಸಿಕೊಂಡುಬಿಡತ್ತೆ.. ಆದ್ರೆ ಕಾರಣ ಇದ್ರೂ ಖುಶಿಪಡೋದಕ್ಕೆ ನಮಗೆ ಬರಲ್ಲ.. ಅದನ್ನ ಕಲ್ತ್ಕೋಬೇಕಲ್ವಾ ? ಜ್ಞಾನೋದಯವಾಗಿತ್ತು..!

 ಈ ವರ್ಷ ಖುಶಿಯನ್ನ ಹುಡುಕೋ ರೆಸಲ್ಯೂಶನ್ ಮಾಡಿದ್ದೀನಿ.. ಪ್ರತಿ ದಿನ ನಾನು ಖುಶಿಪಡೋ ಹತ್ತು ಸಂಗತಿಗಳನ್ನಾದ್ರೂ ಕಂಡ್ಕೋತಿನಿ.. ಇಂಥದ್ದೊಂದು ನಿರ್ಧಾರಕ್ಕೆ ನಾನು ಬರೋದಕ್ಕೆ ನನ್ನ ಗೆಳತಿಯಂತಾ ಸೋದರಿಯೇ ಸ್ಪೂರ್ತಿ.. ಅವಳು ಸಮಸ್ಯೆಗಳನ್ನ ಚೂಯಿಂಗಮ್ ಥರಾ ಎಳೆದುಕೊಂಡುಹೊಗೋಳೇ ಅಲ್ಲ.. ಸದಾ ಖುಶಿಯಾಗಿದ್ದು ಖುಶಿಯನ್ನ ಹಂಚೋದನ್ನ ನಾನು ಅವಳಿಂದ ಇಷ್ಟು ವರ್ಷ ಜೊತೆಗಿದ್ರೂ ಕಲಿತಿಲ್ಲ.. ಅವಳ ದಾರಿಯಲ್ಲಿ ನಡೆಯೋದಕ್ಕೆ ಆರಂಭಿಸ್ತಾ ಹೊಸವರ್ಷಕ್ಕೆ ಕಾಲಿಟ್ಟಿದ್ದೀನಿ.. ಐ ಲವ್ ಯು 2012 ಅಂತ ಕಟ್ಟಕಡೆಯ ದಿನ ಗಟ್ಟಿಯಾಗಿ ಹೇಳಬೇಕು ನನಗೆ.. ಅದಕ್ಕೆ ಪ್ರಿಪರೇಶನ್ನಾಗಿ ದಿನಕ್ಕೊಮ್ಮೆ ಅವತ್ತಿನ ದಿನಕ್ಕೆ ನನ್ನ ಪ್ರೀತಿಯನ್ನ ಕನ್ವೇ ಮಾಡ್ತೀನಿ.. ಚನ್ನಾಗಿರತ್ತೆ.. ಇದು ನನ್ನ ಹ(ವ)ರುಷ ಆಗತ್ತೆ ಅಲ್ವಾ ? 

Tuesday, December 27, 2011

ಅವಳು ಕರಗುವ ಸಮಯ..!

ಹಲೋ ಹನಿ
ಹಾ ಹೇಳಿ
ಯಾಕೆ ನಾನ್ ಕಾಲ್ ಮಾಡಬಾರದಿತ್ತಾ ?
ಹಂಗೇನಿಲ್ಲ, ಎಲ್ರೂ ಇದ್ದಾರೆ
ಹೊರಗೆ ಬಾ..

ಹೀಗೆ ಶುರುವಾಗಿತ್ತು ಮಾತು.. ಪ್ರೀತಿಯಲ್ಲಿ ಇದೆಲ್ಲ ಸಹಜ..ಆದ್ರೆ ಅಸಹಜ ಅನ್ನಿಸಿದ್ದೂ ಅದರಲ್ಲಿತ್ತು.. ಎರಡೇ ಎರಡು ಶಬ್ದ ಮುಂದೆ ಕೇಳೋದಕ್ಕೆ ಆಗಲಿಲ್ಲ.. ಅದೆಷ್ಟು ನರಳಿಬಿಟ್ಟಳೋ ಅವಳು.. ಆಕೆಯ ಕಣ್ಣಲ್ಲಿ ಕಂಬನಿ ಇರಲಿಲ್ಲ.. ನನ್ನ ಮನಸು ಒದ್ದೆಯಾಗಿತ್ತು.. ಅವಳ ಮಾತು ಮುಗಿದ ಮೇಲೆ ಒಬ್ಬಳೇ ಅತ್ತಿದ್ದೆ.. ನನ್ನದಲ್ಲದ ಅನುಭವ ನನ್ನನ್ನ ಬೆಚ್ಚಿಬೀಳಿಸಿತ್ತು.. ಹುಡುಗೀರಿಗೆ ಯಾಕೆ ಈ ಶಿಕ್ಷೆ ?

ವೈಟ್ ಶರ್ಟ್  ಬ್ಲೂ ಜೀನ್ಸ್.. ಎತ್ತರಕ್ಕೆ ಸರಿಯಾದ ಮೈಕಟ್ಟು .. ಮುಖದಲ್ಲಿ ಮಂದಹಾಸ.. ಎಷ್ಟು ಚನ್ನಾಗಿ ಕಾಣಿಸ್ತಾ ಇದ್ದಾ ಗೊತ್ತಾ..? ಮಾತೂ ಅಷ್ಟೇ ತೇಲುವ ಮೋಡದ ಹಾಗೆ.. ತಂಗಾಳಿ ಬೀಸಿದ ಹಾಗೆ.. ಮುಂಗುರುಳ ಲಾಸ್ಯದಹಾಗೆ.. ಉಹು ಆಗಲ್ಲ ವರ್ಣಿಸೋದಕ್ಕೆ ಸಾಧ್ಯಾನೇ ಇಲ್ಲ.. ಅದ್ಭುತ ಮಾತುಗಾರ ಅನ್ನೋದಕ್ಕಿಂತ ಹುಡುಗಿಯರ ಹೃದಯವನ್ನ ಇಣುಕಿ ನೋಡಿದಂತಾ ಮಾತು.. ಅವನೇನಾ ಇವನು.. ಫೋನಿನಲ್ಲಿ ಮೆ ಶಾಯರ್ ತೊ ನಹಿ.. ಲೇಕಿನ್ ವೊ ಹಸಿ.. ಅಂತ ಬಂದಾಗಲೇ ಅನ್ನಿಸಿತ್ತು.. ಇವನು ಅವನಲ್ಲ ಅಂತ ಮೂರೇ ಮೂರು ದಿನಗಳ ಹಿಂದೆ ನಿನಗೆ ಮೋಸ ಮಾಡೋದಕ್ಕೆ ನನಗೆ ಇಷ್ಟ ಇಲ್ಲ.. ಐ ಎಮ್ ಇನ ಡಿಪ್ರೇಶನ್ ಅಂತ ಅತ್ತೇಬಿಟ್ಟಿದ್ದ.. ಯಾಕೋ ಕಥೆ ಕೇಳದೇ ಇರೋದಕ್ಕೆ ಆಗಿರಲಿಲ್ಲ.. ಅದೇ ನಾನು ಮಾಡಿದ ದೊಡ್ಡ ತಪ್ಪು..

ನಾನು ಅವಳನ್ನೇ ದಿಟ್ಟಿಸಿದ್ದೆ , ಆ ದನಿಯಲ್ಲಿ ಏರಿಳಿತಗಳಿರಲಿಲ್ಲ.. ಕೊನೇಪಕ್ಷ ಗಂಟಲ ನರಗಳಾದ್ರೂ ಉಬ್ಬಿವೆಯಾ..? ಉಹು ..ಅವಳದು ಸಹಜ ದಾಟಿಯ ಅಸಹಜ ಮಾತು.

ಅವನು ಪ್ರೀತಿಗೆ ಬಿದ್ದಿದ್ದನಂತೆ.. ಅವಳು ಬೆಳದಿಂಗಳಿನಂತಾ ಹುಡುಗಿ.. ಚೆಲುವೆ.. ಚಂಚಲೆ ..ಕೋಮಲೆ.. ಕವಿ ಕಲ್ಪನೆಯ ಕೆತ್ತನೆಯ ಥರಾ ಅನ್ನಿಸಿತ್ತು.. ಪ್ರಾಣಕ್ಕಿಂತಾ ಹೆಚ್ಚಾಗಿ ಪ್ರೀತಿಸಿದ್ದೆ ಅಂದಾ.. ಅಳ್ತಾ ಇದ್ದಾ ಅನ್ನಿಸತ್ತೆ.. ಧ್ವನಿ ಮಾತ್ರ ಗದ್ಘದಿತವಾಗಿತ್ತು.. ಅವಳು ಈಗ ಎಲ್ಲಿದ್ದಾಳೋ ? ಯಾರ ಜೊತೆಗೆ ಜೀವನ ಮಾಡ್ಕೊಂಡಿದ್ದಾಳೋ.. ? ಜಾತಿಯ ಕಾರಣಕ್ಕೆ ನಾವಿಬ್ಬರೂ ಬೇರೆಯಾಗಬೇಕಾಯ್ತು.. ಹಿರಿಯರ ಒತ್ತಾಯದಿಂದ ದೂರಾದ್ವಿ.. ಎಲ್ಲಿದ್ದರೂ ಚನ್ನಾಗಿರಲಿ.. ನೂರುಕಾಲ ಬಾಳಲಿ.. ಆದ್ರೆ ನನಗೆ ಅವಳನ್ನ ಮರೆಯೋದಕ್ಕೇ ಆಗ್ತಿಲ್ಲ.. ಆ ನೋವಿನಿಂದ ನಾನು ಹೊರಬರೋದಕ್ಕೆ ಟೈಮ್ ಬೇಕು.. ಈಗ್ಲೇ ಅಪ್ಪ ಅಮ್ಮ ಮದುವೆಗೆ ಒತ್ತಾಯಿಸ್ತಾ ಇದ್ದಾರೆ.. ಹಾಗಂತ ಈಗ ನಿನ್ನನ್ನ ಮದುವೆ ಮಾಡ್ಕೊಂಡ್ರೆ ತಪ್ಪಾಗತ್ತೆ.. ಮನಸೆಲ್ಲಾ ಅವಳೇ ತುಂಬಿದ್ದಾಳೆ.. ಆದಿನ್ಯಾವತ್ತೂ  ಅವಳು ನನ್ನವಳಾಗಲ್ಲ ಅನ್ನೋ ಸತ್ಯ ಗೊತ್ತಿದೆ.. ನಂತ್ರ ನಾನೂ ಮತ್ತೊಬ್ಬಳನ್ನ ಮದುವೆ ಆಗಲೇ ಬೇಕು.. ಅದು ನೀವೇ ಆಗಬಾರದು ಅಂತಿಲ್ಲ..ಆದ್ರೆ ನಿಮಗೆ ಅಡ್ಜೆಸ್ಟ್ ಆಗೋದಕ್ಕೆ , ನನ್ನ ಹೊಸ ಬದುಕನ್ನ ಒಪ್ಪಿಕೊಳ್ಳೋದಕ್ಕೆ ನನಗೆ ಟೈಮ್ ಬೇಕು.. ಅದನ್ನ ನಿಮ್ಮಿಂದ ಕೊಡೋದಕ್ಕಾಗತ್ತಾ..? ನಾನು ಹಿಂದೆ ಒಬ್ಬಳಿಗೆ ಮನಸು ಕೊಟ್ಟಿದ್ದೆ ಅನ್ನೋ ಸತ್ಯವನ್ನ ಒಪ್ಪಿಕೊಂಡು ನನ್ನನ್ನ ಮದುವೆಯಾಗೋ ಮನಸಿದ್ಯಾ ? ಉಹು ಇರಲ್ಲಾ, ಅಂತಾ ಅಳ್ತಾನೇ ಫೋನ್ ಇಟ್ಟಿದ್ದ..

ಕಣ್ಣೀರ್ ಹಾಕೋ ಹುಡುಗರನ್ನ ನಂಬಬಾರದು ಅಂತಾರಲ್ಲ ಅದು ನಿಜ ಅಂತ ನನಗನ್ನಿಸಿತು.. ಆದ್ರೆ ಅವನ ಹತ್ರಾ ನಾನೂ ಮಾತಾಡಿದ್ದೆ.. ಅವನ ಕಣ್ಣಲ್ಲಿ ಕಣ್ಣಿಟ್ಟು ಪ್ರಶ್ನಿಸಿದ್ದೆ.. ಉಹು ಅರ್ಥವಾಗಿರಲಿಲ್ಲ.. ಮೊದಲಬಾರಿಗೆ ಯಾರನ್ನೋ ಅಳೆಯೋದರಲ್ಲಿ ನಾನು ಸೋತಿದ್ದೆ.. ಅವಳೂ ಸೋತಿದ್ದಳು..

ಅದೊಂದು ಫೋನ್ ಕಾಲ್ ನನ್ನನ್ನ ತುಂಬಾ ಯೋಚಿಸೋ ಥರ ಮಾಡಿಬಿಟ್ಟಿತ್ತು.. ಕೂತಲ್ಲಿ ನಿಂತಲ್ಲಿ ಯೋಚಿಸಿದ್ದೆ, ಅವನಿಗೆ ಏನ್ ಹೇಳಲಿ.. ಒಂದು ಮನಸು ಯಾಕೋ ಮುಂದುವರೆಯೋದು ಬೇಡ ಅಂತ ಹೇಳ್ತಾ ಇತ್ತು.. ಆದ್ರೂ ಮನದ ಮೂಲೆಯಲ್ಲಿ ಎಲ್ಲೋ ಹೃದಯ ಕಲ್ಲಾಗಬಾರದು ಅನ್ನೋ ಧ್ವನಿ.. ಪ್ರೀತಿ ಸಿಗದವರು ಎಷ್ಟು ಜನ ಇಲ್ಲಾ.. ಅವರೆಲ್ಲಾ ಬದುಕನ್ನ ಪ್ರೀತಿಸಿಲ್ವಾ ?  ಹಳೆ ನೀರನ್ನ ಕೊಚ್ಚಿಕೊಂಡು ಹೊಗೋ ಹೊಸ ನೀರಿನ ಥರ ನಾನ್ಯಾಕ್ ಆಗಬಾರದು..? ನನ್ನ ಪ್ರೀತಿಗೆ ಎಲ್ಲವನ್ನೂ ಮರೆಸೋ ಶಕ್ತಿ ಇದೆ ಅನ್ನಿಸಿಬಿಟ್ಟಿತ್ತು..

ಎಲ್ಲಾ ಹುಡುಗಿಯರೂ ತಪ್ಪುಮಾಡೋದೇ ಅಲ್ಲಿ.. ನಾನು ನನ್ನ ಪ್ರೀತಿ ನನ್ನ ನಡುವಳಿಕೆ ನನ್ನ ಶಕ್ತಿಯಿಂದ ನನ್ನದಲ್ಲದ ಮನಸನ್ನ ಹತೋಟಿಗೆ ತಗೊಂಡು ಬತರ್ಿನಿ, ನನ್ನದಾಗಿಸಿಕೊಂಡುಬಿಡ್ತೀನಿ ಅಂದ್ಕೋತಾರೆ.. ಆದ್ರೆ ಅದು ಆಗದ ಕೆಲಸ.. ಅವಳು ಅವಳೇ ನಾನು ನಾನೇ.. ಅರಿಯಲು ತಡವಾದರೆ ನಂತರ ಮುಗಿಯದ ಬೇನೆ.

ಮೆಸೇಜ್ ಮೇಲೆ ಮೆಸೇಜ್ ಮಾಡಿದ್ದೆ.. ಉತ್ತರಗಳೆಲ್ಲ ಚಿಕ್ಕ ಮತ್ತು ಚೊಕ್ಕವಾಗಿದ್ವು.. ಮಗುವಿನ ಮನಸು ಅನ್ನಿಸಿಬಿಟ್ಟಿತ್ತು.. ನಾನು ಅವನನ್ನ ಒಪ್ಪಿಕೊಂಡೆ.. ಆದ್ರೆ ನಿಜ ಹೇಳ್ತೀನಿ, ನಾನು ಅವನನ್ನ ಒಪ್ಪಿಕೊಳ್ಳೋದಕ್ಕೆ ಕಾರಣ ಆತನ ಮಾತು ಮನಸು ನಡುವಳಿಕೆ ಅಷ್ಟೇ ಆಗಿರಲಿಲ್ಲ.. ಆತನ ರೂಪ ಕೆಲಸ ಗೌರವ ಘನತೆ ಎಲ್ಲವೂ ನನ್ನನ್ನ ಕರಗುವಂತೆ ಮಾಡಿದ್ದವು.. ಮದುವೆಗೆ ಒಪ್ಪಿಕೊಂಡಿದ್ದೆ.. ಅಷ್ಟಾಗಿ ವಾರಾಕೂಡ ಕಳೆದಿಲ್ಲ.. ಡಿಪ್ರೇಶನ್ನಿನ ಮಾತುಗಳು ಮೆಸೇಜ್ಗಳು ಬರೋದೂ ಕಡಿಮೆ ಆಗಿರಲಿಲ್ಲ.. ಅವತ್ತು ನಾನು ಅವನನ್ನ ಮೀಟ್ ಮಾಡೋಣ ಅಂದಿದ್ದೆ.. ಎದೆಯ ತುಂಬ ನೋವಿಟ್ಕೊಂಡು ಬತರ್ಾನೆ, ನಾನಾಗ ಅವನ ತಲೆಯನ್ನ ನನ್ನ ಎದೆಯ ಮೇಲಿಟ್ಟು ತಾಯಿಯಂತೆ ಸಮಾಧಾನ ಮಾಡಬೇಕು.. ಮನಸಿನ ಭಾರಗಳನ್ನೆಲ್ಲಾ ಹೊರಹಾಕೋದಕ್ಕೆ ಪ್ರಯತ್ನಿಸಬೇಕು ಅಂದುಕೊಂಡಿದ್ದೆ.. ಆದ್ರೆ ಆಗಿದ್ದೇ ಬೇರೆ.

ಹೆಣ್ಣುಮಕ್ಕಳಿಗೆ ಅದೆಲ್ಲಿಂದ ಬಂದುಬಿಡತ್ತೋ ತಾಯಿಯ ಹೃದಯ.. ಯಾರದೋ ನೋವು ಹತಾಶೆಗಳಿಗೂ ಇವಳ ಹೃದಯ ಮಿಡಿಯತ್ತೆ .. ಅದು ತಪ್ಪಾ ?


ಕಾರಿನಿಂದ ವೈಟ್ ಶರ್ಟ್ ಬ್ಲೂ ಪ್ಯಾಂಟ್ ತೊಟ್ಟಿದ್ದ ಹ್ಯಾಂಡ್ಸಮ್ ಹುಡುಗ ಕೆಳಗಿಳಿದಿದ್ದ..ಆತನ ಮುಖದಲ್ಲಿ ನೋವು ಕಾಣಿಸಲಿಲ್ಲ..ನನಗೆ ಗೊಂದಲ.. ಮಾತಲ್ಲೂ ಹಳೇ ಹುಡುಗಿ ಇಣುಕಲಿಲ್ಲ.. ದುಃಖದ ಗಾಳಿ ಬೀಸಲಿಲ್ಲ.. ಕಟ್ಟಕಡೆಯದಾಗಿ ನಾನು ನಿನ್ನನ್ನ ಚನ್ನಾಗಿ ನೋಡ್ಕೋತೀನಿ ಅಲ್ವಾ ? ಅಂತ ಅಮಾಯಕನಂತೆ ಕೇಳಿದ್ದೇ ಕೇಳಿದ್ದು ಹಳ್ಳಕ್ಕೆ ಬಿದ್ದೆ.. ಮದುವೆಯಾದರೂ ಏಳೋದಕ್ಕೆ ಆಗಲೇ ಇಲ್ಲ..

ಅವನೂ ಅದನ್ನೇ ಹೇಳಿದ್ದ.. ಮದುವೆಯಾದ್ರೂ ಅವಳನ್ನ ಮರೆಯೋದಕ್ಕಾಗಿರಲಿಲ್ಲ.. ಮೊದಲರಾತ್ರಿ ನಾವಿಬ್ಬರೂ ಮಾತಲ್ಲೇ ಮುಗಿಸಿದ್ವಿ.. ನಾನು ಅವಳನ್ನ ತುಂಬಾನೇ ಪ್ರೀತಿಸ್ತಾ ಇದ್ದೆ.. ಆದ್ರೆ ಅವಳಿಗೆ ಅನುಮಾನ.. ಒಂದೇ ಒಂದು ದಿನ ಹಳೆ ಹುಡುಗಿಯ ಹೆಸರು ತೆಗೆಯದೇ ಸಂಸಾರ ಮಾಡಲಿಲ್ಲ.. ಮಂಚದಲ್ಲೂ ಅವಳದೇ ಧ್ಯಾನ.. ಮೌನ.. ಕಳೆದುಹೋಗ್ತಾ ಇತ್ತು ಯವ್ವನ.

ಅವನ ಮಾತುಗಳು ಕಿವಿಯಲ್ಲಿ ಗುಯ್ಗುಡ್ತಾ ಇದ್ವು. ಮೈಯ್ಯೆಲ್ಲಾ ಉರಿ.. ಇಂಥಾ ನೀಚನ ಮಾತಿಗೆ ನಾನು ಅಯ್ಯೋ ಅಂದನಾ ? ತರ್ಕಕ್ಕಿಳಿಯದೇ ನಂಬಿಬಿಟ್ಟಿದ್ದೆ. ಅದು ನನ್ನ ದಡ್ಡತನ

ಅವನಿಗೆ ಊಟ ಬೇಡ , ನಿದ್ದೆ ಬೇಡ.. ಬರೀ ಹಾಸಿಗೆ ಹಾಸಿಗೆ ಹಾಸಿಗೆ.. ಅದು ನನಗೆ ಹೇಸಿಗೆ ಅಂದವಳ ಮುಖದಲ್ಲಿ ಅಸಹ್ಯದ ಭಾವ ಮೂಡಿದ್ದು ಮಾತ್ರ ನನಗೆ ಕಂಡಿತ್ತು.. ಗಂಡಸು ಅವಳನ್ನ ಅಷ್ಟರಮಟ್ಟಿಗೆ ಕಾಡಿಬಿಟ್ಟಿದ್ದ.. ಅವನಂಥ ಮನುಶ್ಯ ಮತ್ತೊಬ್ಬ ಇರೋದಕ್ಕೆ ಸಾಧ್ಯ ಇಲ್ವೇನೋ.. ಯಾವ ಹುಡುಗಿಗೂ ಅಂಥ ಗಂಡ ಸಿಗಬಾರದು ಅಂತ ಅಂದವಳ ಕಣ್ಣಲ್ಲಿ ಸಿಟ್ಟಿತ್ತು.

ಅವನು ಕಾಡಬಾರದ ರೀತಿ ಎಲ್ಲಾ ಕಾಡಿದ್ದ.. ಮೊದಮೊದಲು ಅವಳಿಗೆ ಎಲ್ಲವೂ ಹಳೆಯದನ್ನ ಮರೆಯೋ ತವಕ ಅನ್ನಿಸಿತ್ತು.. ಅವನಿಚ್ಛೆಯಂತೆ ಎಲ್ಲವೂ ನಡೆದವು.. ಅವನಿಲ್ಲದ ಸಮಯದಲ್ಲಿ ಅವಳಿಗೇ ಅರಿವಿಲ್ಲದಂತೆ  ಆಕೆ ಅತ್ತಿದ್ದಳು.. ವಿದ್ಯಾವಂತೆ ಬುದ್ಧಿವಂತೆ ದಿಟ್ಟ ಹೆಣ್ಣುಮಗಳೊಬ್ಬಳಿಗೆ ಮದುವೆ ಬಂಧನವಾಗಿತ್ತು.. ಆಕೆ ನರಳಿ ನರಳಿ ನಡುಗಿಹೋಗಿದ್ದಳು.. ಆಕೆಯ ಆ ನರಳಾಟ ನನಗೆ ಅರ್ಥವಾಗೋದಲ್ಲ.. ಹಾಗಾಗಿ ಅವಳ ಕಥೆ ಕೇಳಿದಾಗ ಕಣ್ಣುತುಂಬಿಬರಲಿಲ್ಲ.. ಆದ್ರೆ ಅವಳು ನನ್ನ ಕೈಲಿಟ್ಟ ಆಡಿಯೋ ಟ್ರಾಕ್ ಅಳುಬರಿಸಿಬಿಟ್ಟಿತ್ತು.. ನಾನರಿಯದ ಅದೆಷ್ಟೋ ಸಂಘತಿಗಳು ಅದರಲ್ಲಿದ್ದವು.. ಅವಳು ಇವನಿಗೆ ಹೆದರೇ ಓಡಿಹೋಗಿರಬೇಕು.. ಅವನೊಬ್ಬ ಸೈಕೋ.. 
 ಅವನ ಇಡೀ ಕಥೆ ಇನ್ಯಾವತ್ತಾದ್ರೂ ಸಮಯ ಕೂಡಿ ಬಂದಾಗ ಹೇಳ್ತೀನಿ..  


Thursday, December 8, 2011

ಬಿಗ್ ಬಾಸ್ ಅನ್ನೋ ಹಿಂಸೆ..!


"ಬಿಗ್ ಬಾಸ್ ಕೆ ಘರ್ ಮೆ ಹಿಂಸಾ ಕೇಲಿಯೇ ಜಗಾ ನಹೀ ಹೆ"  ನಾನ್ಸೆನ್ಸ್ ಅಂತ ನಕ್ಕುಬಿಟ್ಟೆ.. ಅವತ್ತು ಪೂಜಾ ಮಿಶ್ರಾ ಅನ್ನೋ ಕೋಪಿಷ್ಠೆಯೊಬ್ಬಳನ್ನ ಬಿಗ್ ಬಾಸ್ ಮನೆಯಿಂದ ಹೊರಗಾಕಿದ್ರು.. ಅದೂ ಸಿದ್ಧರ್ಥ ಅನ್ನೋ ಹುಡುಗನನ್ನ ತಳ್ಳಿದ್ಲು ಅನ್ನೋ ಕಾರಣಕ್ಕೆ  ಬಿಗ್ ಬಾಸ್ ಮನೆಯಲ್ಲಿ ಹಿಂಸೆಗೆ ಅವಕಾಶ ಇಲ್ಲ ಅಂದ್ರು..  ಆಗ್ಲೇ ನಾನು ಹಿಂಸೆಯ ಬಗ್ಗೆ ಯೋಚಿಸೋದಕ್ಕೆ ಶುರು ಮಾಡಿದ್ದು.. ಹೆಸರಲ್ಲೇನಿಲ್ಲ ಅನ್ನೋದು ಅರ್ಥವಾಗಿದ್ದು..

 ಬಿಗ್ ಬಾಸ್ ಅಂದ ತಕ್ಷಣ ಏನೋ ಒಂದು ಥರದ ಗೌರವ ಬರತ್ತೆ.. ಬಿಗ್ ಬಾಸ್ ಅಂತ ಯಾರನ್ನ ಕರೀತಾರೆ ಅಂತ ಆ ಕಾರ್ಯಕ್ರಮವನ್ನ ನೋಡೋ ಜನ  ಮೊದಮೊದಲು ಯೋಚಿಸ್ತಾ ಇದ್ರಾದ್ರೂ ಈಗ ಎಲ್ಲರೂ ರೂಪವಿಲ್ಲದ ವ್ಯಕ್ತಿಯನ್ನ ಒಪ್ಪಿಕೊಂಡಿದ್ದಾರೆ.. ಯಾರು ಬಿಗ್ ಬಾಸ್ಗೆ ಒಂದು ವ್ಯಕ್ತಿತ್ವ ಕೊಟ್ಟಿದ್ರೋ ಇಲ್ವೋ, ಆದ್ರೆ ಆಗೊಮ್ಮೆ ಈಗೊಮ್ಮೆ ಅದನ್ನ ನೋಡಿದ್ರೂ ನಾನು ಮಾತ್ರ ಆ ದನಿಗೊಂದು ವ್ಯಕ್ತಿತ್ವ ಕೊಟ್ಟಿದ್ದೆ.. ಮೋಸ್ಟ್ಲಿ ಕಾರ್ಯಕ್ರಮದ ನಿಮರ್ಾತ್ರರು ಬಿಗ್ಬಾಸ್ ಅಂದ್ರೆ ಒಬ್ಬ ಗೌರವಾನ್ವಿತ ವ್ಯಕ್ತಿ ಅಂತ ತೋರಿಸೋ ಪ್ರಯತ್ನ ಮಾಡಿದ್ದಾರೆ.. ಆತನ ಮನೆಯಲ್ಲಿ ಕಾಯ್ದೆ ಕಟ್ಟಳೆಗಳನ್ನ ಇಟ್ಟಿದ್ದಾರೆ.. ಎಲ್ಲವೂ ಜನರನ್ನ ಅಟ್ರಾಕ್ಟ್ ಮಾಡೋದಕ್ಕಾಗಿ.. ಅದು ಪಕ್ಕಾ ಕಮಷರ್ಿಯಲ್ ಓರಿಯೆಂಟೆಡ್ ರಿಯಾಲಿಟಿ ಶೋ ಅನ್ನೋದರಲ್ಲಿ ಎರಡು ಮಾತಿಲ್ಲ.. ಏನೇ ಆಗಿರಲಿ  ಕಾರ್ಯಕ್ರಮಕ್ಕೂ  ಒಂದು ಅದರದೇ ಆದ ಸುಂದರ ವ್ಯಕ್ತಿತ್ವ ಇದ್ರೆ ಅದು ಮನಸಿಗೆ ಹಿತವೆನಿಸತ್ತೆ...ಅದರಲ್ಲೂ ಮನೆ ಅಂತ ಕರೆಯೋವಾಗ ಅದಕ್ಕೆ ರೂಪ ಅಷ್ಟಿದ್ರೆ ಸಾಕಾಗಲ್ಲಾ , ಮನೆಯ ವಾತಾವರಣ ಕೂಡಾ ಇರಬೇಕಲ್ವಾ..?

 ಮಹಾರಾಷ್ಟ್ರದ ಪುಣೆ ಮತ್ತು ಮುಂಬೈ ಮಧ್ಯದ ಕರ್ಜತ್ ಅನ್ನೋ ಕಡೆ ನಿಮರ್ಾಣವಾದ ಬಿಗ್ ಬಾಸ್ನ ಐದನೇ ಕಂತಿನ ಮನೆ ನೊಡೋದಕ್ಕೇನೋ ಸುಂದರವಾಗಿದೆ.. ಅಳವಿಡಿಸಲಾಗಿರೋ ಐವತ್ತೈದು ಕೆಮರಾಗಳು ಹೇಗೆ ವಕರ್್ ಮಾಡುತ್ವೆ ? ಆನ್ಲೈನ್ ಎಡಿಟಿಂಗ್ ನಡೆಯುತ್ತಾ..? ಎಷ್ಟು ಜನ ಕೆಲಸ ಮಾಡ್ತಿದ್ದಾರೆ ? ಹೇಗೆ ಕೆಲಸ ನಡೆಯುತ್ತೆ ? ಅನ್ನೋದೆಲ್ಲಾ ನಿಗೂಢ.. ಅದು ಈ ಕಾರ್ಯಕ್ರಮದ ಬಗ್ಗೆ ಒಂದಿಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದ್ರೆ, ಇನ್ನಿಷ್ಟು ಕುತೂಹಲಕ್ಕೆ ಕಾರಣ ಬೇರೆ ಬೇರೆ ಥರದ ಜನರನ್ನ ಒಂದು ಕಡೆ ಅದೂ ಹೊರಪ್ರಪಂಚದ ಜೊತೆ ಕಾಂಟೆಕ್ಟೇ ಇಲ್ಲದೆ ತೊಂಬತ್ತಾರು ದಿನಗಳ ಕಾಲ ಇಡ್ತಾರಲ್ಲಾ, ಅವರು ಅಲ್ಲಿ ಹೇಗೆ ಬಿಹೇವ್ ಮಾಡಬಹುದು ಅನ್ನೋದು..

  ಒಬ್ಬ ವ್ಯಕ್ತಿಯನ್ನ ದೂರದಿಮದ ನೋಡಿದ್ರೆ, ಸ್ವಲ್ಪ ಹೊತ್ತು ಮಾತಾಡಿದ್ರೆ ಇಲ್ಲಾ ಇಷ್ಟಾನೇ ಪಟ್ಟು ಜೊತೆಯಾದ್ರೂ ಆತ ಏನು ಅನ್ನೋದು ಗೊತ್ತಾಗಲ್ಲ.. ಒಂದೇ ಮನೆಯಲ್ಲಿ ಒಟ್ಟಿಗೆ ಹಲವಾರುದಿನಗಳ ಕಾಲ ವಾಸವಾಗಿದ್ರೆ ಅವರ ನಿಜವಾದ ವ್ಯಕ್ತಿತ್ವ ಹೊರಬರತ್ತೆ ಅಂತಾರೆ.. ಹಾಗಾದ್ರೆ ಬಿಗ್ ಬಾಸ್ ಮನೆಯಲ್ಲಿ ಇರೋರ ನಿಜವಾದ ವ್ಯಕ್ತಿತ್ವ ನಮಗೆ ಕಾಣಿಸತ್ತಾ..? ಅಪ್ಕೋರ್ಸ್ ಹೊರಜಗತ್ತಿನ ಸಂಪಕರ್ಾನೇ ಇಲ್ಲದೆ ಯಾರೋ ಅಪರಿಚಿತರ ಜೊತೆ ಒಂದು ಮನೆಯಲ್ಲಿ ಇರಬೇಕಾಗಿಬಂದಾಗ ಪ್ರಸ್ಟ್ರೇಶನ್ ಆಗಬಹುದು, ಅಡ್ಜೆಸ್ಟ್ ಆಗೋದಕ್ಕೆ ಕಷ್ಟವಾಗಬಹುದು, ಅಂಥಾ ಸ್ಥಿತಿಯ ಔಟ್ಕಮ್ ಹೇಗಿರತ್ತೆ ? ಅನ್ನೋದನ್ನ ತೋರಿಸೋದಕ್ಕೆ ನಿಂತಿದ್ದ ಬಿಗ್ಬಾಸ್ನ ಬೇಸಿಕ್ ಕಾನ್ಸೆಪ್ಟ್ ಚನ್ನಾಗೇ ಇದೆ.. ನಂತ್ರಾ ಪಬ್ಲಿಸಿಟಿಗಾಗಿ ಕಾಂಟ್ರಾವಸರ್ಿ ಕ್ರಿಯೇಟ್ ಮಾಡೋ ಥರದ ಜನರನ್ನ ತರೋದು, ಡಾಲಿಬಿಂದ್ರಾರಂತ ಎಕ್ಟ್ರಾರ್ಡನರಿ ಹೆಂಗಸನ್ನ ಕರ್ಕೊಂಬರೋದು , ಪ್ರಾಯದ ಹುಡುಗ ಹುಡುಗಿಯರನ್ನ ಬಿಟ್ಟು ನಡುವೆ ಒಂದಿಷ್ಟು ರೊಮ್ಯಾನ್ಸ್ ಕಾಣಿಸೋದು.. ಟಾಸ್ಕ್ ಕೊಟ್ಟು ಮಸಾಲಾ ಸೇರಿಸೋದು ಎಲ್ಲವನ್ನೂ ಒಪ್ಕೊಳ್ಳೋಣಾ .. ಊಟದ ಜೊತೆಗೆ ಉಪ್ಪಿನ ಕಾಯಿಯ ಥರ ಸವಿಯೋಣ.. ಆದ್ರೆ ಒಂದು ರಿಯಾಲಿಟಿ ಶೋ ಅದರಲ್ಲೂ ಬಿಗ್ ಬಾಸ್ನಂತ ಕಾರ್ಯಕ್ರಮ ಮನೆ ಅಂದ್ರೆ ಕಾದಾಡೋ ಜಾಗ ಅಂತ ತೋರಿಸಿದ್ರೆ ಅದನ್ನ ನೋಡಿ ಖುಶಿಪಡೋದಕ್ಕಾಗತ್ತಾ? ಹೋಗ್ಲಿ ವೆರೈಟಿ ವೆರೈಟಿ ಬೈಗುಳ ಕಾದಾಟ ಜಗಳದ್ದೇ ಶೋ ಆಗಿದ್ರೆ ಆ ಕಾನ್ಸೆಪ್ಟನ್ನೂ ಎಕ್ಸೆಪ್ಟ್ ಮಾಡ್ಕೋಬಹುದಿತ್ತು..ಆದ್ರೆ ಬಿಗ್ ಬಾಸ್ ಅನ್ನೋದು ಬೈಗುಳದ ಕಾರ್ಯಕ್ರಮ ಅಂತ ಆಗಿದ್ದು ಬೇಸರ ತರಿಸತ್ತೆ..
 ಆರಂಭದಲ್ಲೇ ಬಿಗ್ ಬಾಸ್ ಐದರಲ್ಲಿ  ಕಾದಾಟ ಅನ್ನೋದು ಕಾರ್ಯಕ್ರಮ ಮಾಡಿದವರ ಕಾನ್ಸೆಪ್ಟ್ ಆಗಿತ್ತು ಅನ್ಸತ್ತೆ,, ಯಾಕಂದ್ರೆ ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಅಡಿ ಇಟ್ಟವರು ಒಬ್ಬರಿಗಿಂತ ಒಬ್ಬರು ಸ್ಟ್ರಾಂಗ್ ವ್ಯಕ್ತಿತ್ವದವರು..  ಯು ಟಿವಿ ಬಿಂದಾಸ್ ನಲ್ಲಿ ಬೆಂಕಿ ಅನ್ನಿಸಿಕೊಂಡ ಹುಡುಗಿ ಪೂಜಾ , ಚಾರ್ಲ್ಸ್ ಶೋಬ್ರಾಜ್ನಂಥಾ ಕ್ರಿಮಿನಲ್ನ ಹೆಂಡತಿ ನಿಹಿತಾ, ಡೇರ್ ಡೆವಿಲ್ ಪ್ರೋಥಿಮಾ ಬೇಡಿಯ ಮಗಳು ಪೂಜಾ ಬೇಡಿ, ದಿ ಗ್ರೇಟ್ ವೇಟ್ ಲಿಫ್ಟರ್ ಸೋನಿಕಾ, ಗಂಡನನ್ನ ತನ್ನ ಧರ್ಮಕ್ಕೆ ಕನ್ವಟರ್್ ಮಾಡೋ ತಾಕತ್ತಿದ್ದ ಗುಲಾಬೋ ಸಫೇರಾ, ಹೆಡ್ಲೈನ್ಸ್ ಟುಡೆಯಲ್ಲಿ ಶಾರ್ಪಶೂಟರ್ ಥರಾ ಇಂಟರ್ವ್ಯೂ ತಗೋತಿದ್ದ  ಆ್ಯಂಕರ್ ಮಂದೀಪ್ ಬೇವ್ಲಿ, ರಾಜಾ ಚೌದ್ರಿಯಂತ ಸ್ಟ್ರಾಂಗ್ ಅಟಿಟ್ಯೂಡ್ ಇರೋನ ಗಲರ್್ ಫ್ರೆಂಡ್ ಶೃದ್ಧಾ , ಅಫಗಾನ್ನಿಸ್ತಾನದಂತಾ ದೇಶದಿಂದ ಬ್ಯೂಟಿ ಕನ್ಸರ್ಟಲ್ಲಿ ಬಾಗವಹಿಸಿ ಗೆದ್ದ ವಿದಾ , ಸ್ಟ್ರೇಟ್ಪಾರ್ವರ್ಡ್ ಹೆಂಗಸು ಅಂತಾನೇ ಅನ್ನಿಸಿಕೊಂಡ ಜೂಹಿ ಪಮರ್ಾರ್ ಇವರ ಜೊತೆಗೆ ಹಿಜಡಾಗಳಿಗಾಗಿ ದನಿ ಎತ್ತಿ ಹೋರಾಡ್ತಿರೋ  ಟ್ರಾನ್ಜೆಂಡರ್ ಆಕ್ಟಿವಿಸ್ಟ್ ಲಕ್ಷ್ಮಿನಾರಾಯಣ ತ್ರಿಪಾಟಿ ಮತ್ತು ವಿಲನ್ ರೋಲ್ನಲ್ಲೇ ಹೆಚ್ಚಾಗಿ ಮಿಂಚಿದ್ದ ಶಕ್ತಿಕಪೂರ್ ಇವಿಷ್ಟು ಜನರ ಜೊತೆಗೆ ಒಳಬಂದಿದ್ದ ರಾಗೇಶ್ವರಿ ಮೆಹೆಕ್ ಮತ್ತು ಸೋನಾಲಿ ಸ್ವಲ್ಪ ಸಾಫ್ಟ್ ಇದ್ದಿರಬಹುದು ಅಂತ ಅನ್ನಿಸಿತ್ತು.. ನಂತ್ರ ಮೆಹೆಕ್ ಮತ್ತು ಶೊನಾಲಿ ಕೂಡ ನಾವ್ಯಾರಿಗೂ ಕಡಿಮೆ ಇಲ್ಲ ಅನ್ನೋದನ್ನ ತೋರಿಸಿಬಿಟ್ರು.. ದುರಂತ ಅಂದ್ರೆ ಈ ಬಾರಿ ಬಿಗ್ಬಾಸ್ ಮನೆಯಲ್ಲಿ ಕಚ್ಚಾಡೋರೇ ಇರೋದು ಅನ್ನೋ ಅಘೋಷಿತ ನಿಯಮ ಬಂದುಬಿಟ್ಟಿದೆ.. ಒಳಗಿದ್ದ ಒಳ್ಳೆಯ ಸ್ವಭಾವದ , ತನ್ನ ವ್ಯಕ್ತಿತ್ವವನ್ನೇ ತೋರಿಸೋ , ಪಾಸಿಟೀವ್ ವೈಬ್ರೇಟಿಂಗ್  ಹುಡುಗಿ ರಾಗೇಶ್ವರಿಯನ್ನ ಮೂರನೇ ವಾರದಲ್ಲೇ ಹೊರಹಾಕಿದ್ರು.. ಆಕೆಯ ವ್ಯಕ್ತಿತ್ವವನ್ನ ಯಾರಾದ್ರೂ ಇಷ್ಟಾಪಡದೇ ಇರೋ ಚಾನ್ಸಿದ್ಯಾ ಅಂತ ನನಗನ್ನಿಸ್ತು.! ಆಕೆ ನಿಜಕ್ಕೂ ಸಭ್ಯ ಸಂಭಾವಿತ ಹುಡುಗಿ.. ಆದ್ರೆ ಓಟ್ ಮಾಡೋರಿಗೆ ಜಗಳಾ ಆಡೋರು ಬೇಕು..! ಅದಕ್ಕಿಂತ ಹೆಚ್ಚಾಗಿ ಈ ಬಾರಿ ಬಿಗ್ಬಾಸ್ಗೂ ಬೆಂಕಿ ಹತ್ತಿಸೋರೇ ಬೇಕು.. ಮನೆಯಲ್ಲಿ ಹೊಗೆಯಾಡ್ತಾನೇ ಇರಬೇಕು..ಅದನ್ನೇ ಜನ ನೋಡ್ಬೇಕು.. ಅದೇ ಕಾನ್ಸೆಪ್ಟು.. ಹಂಗಾಗಿನೇ ನಂತ್ರ ಸ್ಪ್ಲಿಟ್ ವಿಲ್ಲಾದ ವಿನ್ನರ್ ಸಿದ್ಧಾರ್ಥನ್ನ ಕರ್ಕೊಂಬಂದ್ರು, ಬ್ಯಾಡ್ ಬಾಯ್ ಅಂತಾನೇ ಕರೆಸಿಕೊಂಡ ಇಸ್ ಜಂಗಲ್ಸೆ ಮುಜೆ ಬಚಾವೋ ಖ್ಯಾತಿಯ ಸಿಟ್ಟಿನ ಹುಡುಗ ಆಕಾಶ್ದೀಪ್ ಸೈಗಲ್ನ ಕರ್ಕೊಂಬಂದ್ರು.. ನಂತ್ರಾ ಬಿಂದಾಸ್ ಹುಡುಗಿ ಸನ್ನಿ ಅಲಿಯಾಸ್ ಕೆರೆನ್ ಮಲ್ಹೋತ್ರಾ ಬಂದ್ಲು.. ಈಗ ಕ್ರಿಕೇಟ್ ಜಗತ್ತಿನ ಕಿರಿಕ್ ಮಾಸ್ಟರ್ ಸೈಮಂಡ್ಸ್ ಕೂಡಾ ಬಂದಾಯ್ತು... ಇವರೆಲ್ಲರೂ ಸೇರ್ಕೊಂಡು ಮಾಡೋದು ಒಂದೇ ಕೆಲಸ ..ಅದು ಕಾದಾಟ.. ! 

 ಮುರು ತಿಂಗಳ ಕಾಲ ಹೊರಪ್ರಪಂಚದಿಂದ ದೂ
ರಾಗಿ ಒಂದು ಮನೆಯಲ್ಲಿರೋದ್ರಿಂದ ಪ್ರಸ್ಟ್ರೇಟ್ ಆಗ್ತಾರೆ, ಅವರು ಅದನ್ನ ಬೇರೆ ಬೇರೆ ಥರದಲ್ಲಿ ಹೊರಹಾಕ್ತಾರೆ ಅಂತ ಅಂದ್ಕೊಳ್ಳೋದ್ರಲ್ಲಿ ಅಥರ್ಾನೇ ಇಲ್ಲ.. ಇಲ್ಲಿ ಭಾವನೆಗಳು ಕೆಲಸ ಮಾಡಲ್ಲ.. ಯಾರೂ ಭಾವುಕರಾಗಲ್ಲ.. ಒಂದ್ವೇಳೆ ಭಾವುಕತೆ ಇದ್ರೆ  ಅವರು ಜಾಸ್ತಿ ದಿನ ಇರೋದೇ ಇಲ್ಲ.. ಇದು ಅಪ್ಪಟ ಗೇಮ್ ,ಅಳಿ ಉಳಿವಿನ ಆಟ.. ಓಟಿನ ಊಟ.. ಬಿಗ್ ಬಾಸ್ನ ಲೆಕ್ಕಾಚಾರದ ಮಾಟ ! ಯಾವಾಗ ಬಿಗ್ಬಾಸ್ ಮನೆಯ ಇಡೀ ವಾತಾವರಣವನ್ನೇ ಅಲ್ಲೋಲ ಕಲ್ಲೋಲ ಮಾಡಿದ ಪೂಜಾ ಓಟರ್ಸ್ ಫೆವರೆಟ್ ಅಂತ ಆಯ್ತೋ ಅವತ್ತಿನಿಂದ ಪ್ರತಿಯೊಬ್ಬರ ದನಿನೂ ದೊಡ್ಡದಾಯ್ತು.. ಮುಟ್ಟಿದರೆ ಮುನಿಯೋದು , ಮಾತೆತ್ತಿದರೆ ಕಾದಾಡೋದು ಶುರುವಾಗ್ಬಿಟ್ತು.. ಜಗಳ ಮಾಡದೇ ಇರೋರೇ ಯಾರೂ ಇಲ್ಲ ಅನ್ನೋ ಮಟ್ಟಕ್ಕೆ ಬಂತು.. ಜೊತೆಗೆ ನಾಮಿನೇಟ್ ಆದವರೇ ಹೆಚ್ಚಾಗಿ ಕಾದಾಡೋದನ್ನ ನೋಡಿದ್ರೆ , ಎಲ್ಲರೂ ರಗಳೆ ರಂಪಾಟಗಳೇ ಉಳಿವಿನ ದಾರಿ ಅಂದ್ಕೊಂಡಹಾಗಿದೆ.. ಅವಷ್ಟನ್ನೇ ಮಾಡ್ತಾರೆ.. ಅದೇ ಗೇಮ್ ಪ್ಲಾನ್.. ಅಲ್ಲಿಗೆ ಬಿಗ್ಬಾಸ್ ಮನೆಯಲ್ಲಿ ನಿಜವಾದ ವ್ಯಕ್ತಿತ್ವ ಹೊರಗೆ ಬರೋ ಚಾನ್ಸೇ ಇಲ್ಲ.. ಎಲ್ಲರೂ ಉಳಿವಿಗಾಗಿ ಜಗಳ ಮಾಡ್ತಾರೆ ಅಷ್ಟೆ !
ಇದೊಂದು ಗೇಮ್ ಶೋದಲ್ಲಿ ಭಾಗವಹಿಸಿದವರ ವ್ಯಕ್ತಿತ್ವದ ಮಾತು ಒತ್ತಟ್ಟಿಗಿರಲಿ, ಬಿಗ್ಬಾಸ್ಗಾದ್ರೂ ವ್ಯಕ್ತಿತ್ವ ಬೇಡ್ವಾ..? ಈಗ ಆ ಮನೆಯಲ್ಲಿ ಒಂದು ರೂಲ್ಸ್ ಇಲ್ಲ .. ರೂಲ್ಸ್ ಪಾಲೋ ಮಾಡೋರು ಯಾರೂ ಇಲ್ಲ.. ತಪ್ಪುಮಾಡಿದವರಿಗೆ ದಂಡಿಸೋರಿಲ್ಲ.. ಬಿಗ್ ಬಾಸ್ ಮನೆಯಲ್ಲಿ ಹಿಂಸೆಗೆ ಅವಕಾಶ ಇಲ್ಲಾ ಅಂತ ಹೇಳೋದೇ ನಿಜ ಆದ್ರೆ ಅಬ್ಯೂಸಿಂಗ್ ಶಬ್ದಗಳನ್ನ ಪ್ರಯೋಗಿಸಿ ಬೈದಾಡೋದು ಕೂಡಾ ಹಿಂಸೆ ಅಪರಾಧ ಅನ್ನೋದು ಬಿಗ್ ಬಾಸ್ಗೆ ಗೊತ್ತಿಲ್ವಾ..? ಪೂಜಾ ಮಿಶ್ರಾ ಸಿದ್ಧಾರ್ಥನ್ನ ದೂಡಿದ್ದು ಹಿಂಸೆ ಅನ್ನೋದಾದ್ರೆ ಶೊನಾಲಿಯ ಎದುರಿಗೆ ಕ್ಲೀನಿಂಗ್ ಸ್ಟಪ್ಅನ್ನ ಒಡೆದು ಚೂರ್ ಚೂರಾಗಿ ಮಾಡಿ ಆ ಚೂರುಗಳು ಸೊನಾಲಿಗೆ ಸಿಡಿದಿದ್ದು ಹಿಂಸೆ ಅಲ್ವಾ ? ಮೆಹೆಕ್ ಮಂದೀಪ್ಳನ್ನ ತಳ್ಳಿದ್ದು ಹಿಂಸೆ ಅಲ್ವಾ ? ಆಗೆಲ್ಲಾ ಯಾರಾದ್ರೂ ಒಬ್ಬರು ನಾವಿರಬೇಕು ಇಲ್ಲಾ ಅವರಿರಬೇಕು ಅಂತ ಪಟ್ಟು ಹಿಡಿದಿದ್ರೆ ಬಿಗ್ಬಾಸ್ ಕ್ರಮ ತಗೋತಾ ಇದ್ನೇನೋ.. ಆದ್ರೆ ಸಿದ್ಧಾರ್ಥ ಮಾತ್ರ ಆ ಇಶ್ಯೂವನ್ನ ದೊಡ್ಡದು ಮಾಡಿದ್ರಿಂದ ಪೂಜಾ ಮಿಶ್ರ ಹೊರಗೆ ಹೋದ್ಲು.. ಅಲ್ಲಿಗೆ ಬಿಗ್ ಬಾಸ್ಗೆ ನ್ಯಾಯ ನೀತಿ ಇಂಪಾಟರ್ೆಂಟ್ ಅಲ್ಲ, ದನಿ ಎತ್ತಿದವರಿಗೆ ನ್ಯಾಯ ಸಿಗತ್ತೆ ಅಷ್ಟೆ ಅಂದಾಂಗಾಯ್ತು.. ಅಂದ್ಹಾಗೆ ಪ್ರತಿನಿತ್ಯ ಬೆಳಗಾದ್ರೆ ಜಗಳ ರಾತ್ರಿಯಾದ್ರೆ ಜಗಳ ಅಂದ್ರೆ ನಿಮ್ಮಮನೆ ಹೇಗಿರತ್ತೆ ..? ನಿಮ್ಮ ಬದುಕು ಏನಾಗತ್ತೆ ? ಅಲ್ಲಿ  ಸ್ಕೈ ನ ಮಾತಿಗಿಂತ ದೊಡ್ಡ ಹಿಂಸೆ ಇದೆಯಾ..? ಈ ರಗಳೆಯನ್ನ ನುರು ಕೋಟಿಜನ ನೋಡ್ಬೇಕಾ..? ಅದಕ್ಕಿಂತ ದೊಡ್ಡ ಹಿಂಸೆ ಇನ್ನೊಂದಿದ್ಯಾ ? ಅಪ್ಕೋರ್ಸ್ ಯಾರೂ ಯಾರಿಗೂ ಈ ಶೊ ನೋಡಿ ಅಂತ ಬಲವಂತ ಮಾಡಲ್ಲ.. ಆದ್ರೆ ರಿಯಾಲಿಟಿಗೆ ಹತ್ತಿರವೇ ಅಲ್ಲದ ಪಕ್ಕಾ ಪ್ಲಾನ್ಡ್ ಶೋಗಳನ್ನ ರಿಯಾಲಿಟಿ ಶೋ ಅಂತ ಯಾಕೆ ಕರೀಬೇಕು ? ಹೀಗೇ ಆದ್ರೆ ಬಿಗ್ ಬಾಸ್ ತನ್ನ ಖ್ಯಾತಿಯನ್ನ ಕಳ್ಕೊಳ್ಳೋದ್ರಲ್ಲಿ ಸಂದೇಹನೇ ಇಲ್ಲ... 

ನಾನು ಇಷ್ಟೆಲ್ಲಾ ಯೋಚಿಸೋದಕ್ಕೆ ಕಾರಣವಾಗಿದ್ದು ಬಿಗ್ಬಾಸೂ ಅಲ್ಲ.. ಅದರಲ್ಲಿರೋ ವ್ಯಕ್ತಿಗಳೂ ಅಲ್ಲ.. ಅದರ ಖ್ಯಾತಿ ಅಪಖ್ಯಾತಿಗಳೂ ಅಲ್ಲ.. ನಾನು ಅಲ್ಲಿರೋ ಯಾರೊಬ್ಬರ ಫ್ಯಾನೂ ಅಲ್ಲ.. ಅಷ್ಟಕ್ಕೂ ಆಗೊಮ್ಮೆ ಈಗೊಮ್ಮೆ ಅದನ್ನ ನೋಡೋದ್ಬಿಟ್ರೆ ಪ್ರತಿದಿನ ನೋಡಿದ್ದೂ ಇಲ್ಲ.. ಆದ್ರೆ ಅದನ್ನ ನೋಡಿದಾಗಲೆಲ್ಲಾ ನನಗೆ ಹಿಂಸೆ ಅನ್ನಿಸಿದೆ.. ಆದ್ರೆ ಬಿಗ್ ಬಾಸ್ಗೆ ಹಿಂಸೆ ಅನ್ನಿಸಿಲ್ವಲ್ಲಾ ! ಹಾಗಾದ್ರೆ  ಕಾದಾಟ ಜಗಳ ಬೈದಾಟಗಳೆಲ್ಲಾ ಹಿಂಸೆ ಅಲ್ವಾ..?