Sunday, April 3, 2011

ಆದಿ ಅಂತ್ಯದ ನಡುವೆ..!




ಸುಂದರ ಮುಂಜಾವು
ಸಣ್ಣಗೆ ಚಳಿ
ಸರಿದಾಡಿದ ತಿಳಿ ಗಾಳಿ
ಮೂಡಣದಲಿ ರಂಗವಲ್ಲಿ
ಬಣ್ಣದೋಕುಳಿ ಚೆಲ್ಲಿ
ಬಂದಿದೆ ಅಂದದಲಿ
 ಚಂದವಿದೆ ಶ್ರೀಖರದಲ್ಲಿ

ಅಡಿಗಡಿಗೂ ಅರಿವಿರಲಿ
ನಡೆಯಲ್ಲಿ ನಲಿವಿರಲಿ
ನುಡಿಯ ನಗಾರಿಯಲಿ ನೈಜವಿರಲಿ
ಜೀವಜಾತೆಗೆ ನಮಿಸಿ
ಭಾವ ದೀವಿಗೆ ಇರಿಸಿ
ಕರಮುಗಿದು ಕರೆವ ಮನ ನಮಗಿರಲಿ

ಬೇವಿನೆಲೆಯನು ಜಗಿದು
ಜೀವೆಸೆಲೆಯನು ಬಗೆದು
ಬಂದಾಗ ಬದುಕಿನಲಿ
ಸಿಹಿಯ ಅಲೆಯು
ಹಸಿರ ಹಾಸಿಗೆ
ಮುಗಿವ ಬೇಸಿಗೆ
ಬದುಕ ಹಾದಿಯಲಿ ಬೆಸುಗೆ

ಚಿಮ್ಮಿದೆ ಜೀವ ಜಲ
ಬಂದಿದೆ ಭೀಮ ಬಲ
ಹೊತ್ತುಮುಳುಗುವ ಮುನ್ನ
ಹತ್ತಿ ಉರಯವುದೆನ್ನ
ಚಿತ್ತ ಚಾಂಚಲ್ಯದ ಚಂದ್ರಬಿಂಬ
ಕತ್ತೆತ್ತಿದರೆ ಕಲೆಯು
ಉತ್ತು ಬಿತ್ತಿದ ಛಲವು
ಚಿತ್ತಾರದಲಿ ಮೂಡಿದೆ ಬದುಕಿನಲೆಯು..

ಖರದಲಿದೆ ಗಡಸು
ಕಡಲಲಿದೆ ಮುನಿಸು
ಒಡಲಾಳದಲಿ ಕಡೆವ ಭಿರುಸು
ಮಾಡುವುದು ಮುಗಿದಿಲ್ಲ
ಆಡುವುದು ಅಡಗಿಲ್ಲ
ಕಣ್ಣಾಲೆಗಳಲಿ ಕನಸು ಬತ್ತದಿರಲಿ

ಬಂದಂತೆ ಬರಲಿ
ಆದಿ ಅಂತ್ಯವು ಇರಲಿ
ಉಶೆ ಸರಿದು ನಿಶೆ ಜಾರಿ
ಅಂದಗಾರನ ಕೊರಳೊಳಗೆ ಕುಣಿದಾಡಿ
ಕೆಂದಾವರೆಯ ಕರದಲಿ
ಅರಳಲಿ ಹರುಷ
ಮರಳಿ ಮರಳಿ ಬರಲಿ ವರುಷ

 

2 comments: